• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಮಂಗಳೂರಿನಲ್ಲಿ ಗಲಾಟೆ ಮಾಡಿಸಲು ಪ್ಲಾನ್ ಆಗುತ್ತಿದೆಯಾ?

Hanumantha Kamath Posted On September 26, 2018
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಮತ್ತೆ ಗಲಭೆ ನಡೆಸಲು ಪ್ಲಾನ್ ನಡೆಸಲಾಗಿದೆಯಾ ಎನ್ನುವ ಸಂಶಯ ಮೂಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವಿಶ್ವ ಹಿಂದೂ ಪರಿಷತ್ ಮುಖಂಡ ಹರೀಶ್ ಶೆಟ್ಟಿ ಮೇಲೆ ನಡೆದಿರುವ ದಾಳಿ. ಮಸೀದಿಯೊಂದರ ಪಕ್ಕದಲ್ಲಿ ಹಣ್ಣುಹಂಪಲು ಖರೀದಿಸಲು ನಿಂತಿದ್ದಾಗ ದಾಳಿ ನಡೆದಿದೆ. ಕೈಗೆ ತೀವ್ರತರವಾಗಿರುವ ಗಾಯವಾಗಿದೆ. ಆ ನೋವನ್ನು ಅವರು ಅದೇಗೆ ಸಹಿಸಿಕೊಂಡು ಇರುತ್ತಾರೋ. ಅವರ ಕೊಲೆನೆ ಮಾಡಬೇಕು ಎಂದು ದುಷ್ಕರ್ಮಿಗಳು ಪ್ಲಾನ್ ಮಾಡಿರಬಹುದು. ಆದರೆ ಅದೃಷ್ಟ ಚೆನ್ನಾಗಿತ್ತು. ಬದುಕಿ ಉಳಿದಿದ್ದಾರೆ. ಪೊಲೀಸ್ ಕಮೀಷನರ್ ಸುರೇಶ್ ಅವರು ಆದಷ್ಟು ಶೀಘ್ರದಲ್ಲಿ ನೈಜ ಆರೋಪಿಗಳನ್ನು ಬಂಧಿಸಲಿ ಎನ್ನುವುದು ಹಾರೈಕೆ.

ಮತ್ತೊಂದೆಡೆ ಮೂಡಬಿದ್ರೆಯ ಹಿಂದೂ ಮುಖಂಡ ಪ್ರಶಾಂತ ಪೂಜಾರಿಯ ಹತ್ಯಾ ಆರೋಪಿ ಇಮ್ತಿಯಾಜ್ ಮೇಲೆ ದಾಳಿ ನಡೆದಿದೆ. ಅಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಮಾಹಿತಿ ಬರುತ್ತಿದೆ. ಇದನ್ನೆಲ್ಲ ಗಮನಿಸಿದರೆ ಯಾರಿಗೋ ಈ ಎಲ್ಲಾ ಘಟನೆಗಳಿಂದ ಲಾಭ ಇದೆಯೋ ಎಂದು ಅನಿಸುತ್ತದೆ. ಮಂಗಳೂರು ಶಾಂತಿಯುತವಾಗಿ ಇರಬಾರದು ಎಂದು ಯಾರೋ ಎಲ್ಲಿಯೋ ಕುಳಿತುಕೊಂಡು ಸಂಚು ಹೂಡುತ್ತಿದ್ದಾರೋ ಎನ್ನುವ ಸಂಶಯ ಬರುತ್ತದೆ. ಕೇವಲ ಬಿಡಿಗಾಸಿಗೆ ಯಾರ ಮೇಲೆ ಬೇಕಾದರೂ ತಲವಾರು ಬೀಸಲು ತಯಾರಾಗಿ ಇರುವಂತಹ ಕೆಲವು ಯುವಕರು ಇರುತ್ತಾರೆ. ಇನ್ನು ಕೆಲವು ಬಿಡಿಗಾಸಿಗೆ ಸರೆಂಡರ್ ಆಗಿ ಜೈಲಿನಲ್ಲಿ ಕುಳಿತುಕೊಳ್ಳುವ ಯುವಕರು ಕೂಡ ಇರುತ್ತಾರೆ. ವಿದೇಶದಲ್ಲಿ ಕುಳಿತ ಕೆಲವು ಶ್ರೀಮಂತರಿಗೆ ಮಂಗಳೂರಿನಲ್ಲಿ ಗಲಾಟೆ ಮಾಡಿಸುವುದು ಖಯಾಲಿಯಾಗಿರಬಹುದು. ಸ್ವಲ್ಪ ಹಣ, ಬೈಕು, ಸೆಂಟ್, ಗಾಂಜಾ, ಮದ್ಯದ ಹೊಳೆ ಹರಿಸಿ ಅವರು ಇಲ್ಲಿ ಯಾರ ಮೇಲೆ ಹಲ್ಲೆ ಮಾಡಲು ಹೇಳುತ್ತಾರೋ ಅಂತವರಿಗೆ ಹೊಡೆಯಲು ತಯಾರಾಗಿರುವ ಯುವಕರು ಇರಬಹುದು. ಇದು ನಿಲ್ಲಬೇಕು.

ಹಣ, ಡ್ರಗ್ಸ್ ಗಾಗಿ ಏನನ್ನು ಬೇಕಾದರೂ ಮಾಡಲು ತಯಾರಾಗುವ ಯುವಕರು ಯಾರು ಎನ್ನುವುದು ಪೊಲೀಸರಿಗೆ ಗೊತ್ತೆ ಇರುತ್ತದೆ. ಪೊಲೀಸರು ಅಂತವರ ಪಟ್ಟಿ ತೆಗೆಯಬೇಕು. ಅಂತವರಿಗೆ ಚೆನ್ನಾಗಿ “ಬುದ್ಧಿ”ವಾದ ಹೇಳಬೇಕು. ಅವರು ಮುಂದೆ ಅಂತಹ ಕೆಲಸ ಮಾಡದೇ ಇರುವ ಹಾಗೆ ಮಾಡಿಬಿಡಬೇಕು. ಈ ಮೂಲಕ ಅಂತಹ ಕೆಟ್ಟ ತಳಿಗಳು ಚಿಗುರದ ಹಾಗೆ ನೋಡಿಕೊಳ್ಳಬೇಕು. ಹಾಗೆ ಮಾಡಿದಾಗ ಯಾರಿಗೂ ಕೈಯಲ್ಲಿ ತಲವಾರು ಹಿಡಿಯಲು ಮನಸ್ಸು ಬರುವುದಿಲ್ಲ.

ಇಲ್ಲದಿದ್ರೆ ಏನು ಆಗುತ್ತದೆ ಎಂದರೆ ಹಲ್ಲೆ, ಕೊಲೆ ಮತ್ತೆ ಶುರುವಾಗುತ್ತದೆ. ಮತ್ತೆ ಶಾಂತಿ ಕದಡುತ್ತದೆ. ಇದು ಮಂಗಳೂರಿಗೆ ಕೆಟ್ಟ ಹೆಸರು ತರುತ್ತದೆ. ಇಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತದೆ. ಯಾರೋ ಎಲ್ಲಿಯೋ ಕುಳಿತು ಮೈ ಕಾಯಿಸಿಕೊಳ್ಳುತ್ತಿರುತ್ತಾರೆ!

0
Shares
  • Share On Facebook
  • Tweet It




Trending Now
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Hanumantha Kamath July 18, 2025
ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
Hanumantha Kamath July 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
  • Popular Posts

    • 1
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 2
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 3
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 4
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 5
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

  • Privacy Policy
  • Contact
© Tulunadu Infomedia.

Press enter/return to begin your search