• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನಲ್ಲಿ ಗಲಾಟೆ ಮಾಡಿಸಲು ಪ್ಲಾನ್ ಆಗುತ್ತಿದೆಯಾ?

Hanumantha Kamath Posted On September 26, 2018


  • Share On Facebook
  • Tweet It

ಮಂಗಳೂರಿನಲ್ಲಿ ಮತ್ತೆ ಗಲಭೆ ನಡೆಸಲು ಪ್ಲಾನ್ ನಡೆಸಲಾಗಿದೆಯಾ ಎನ್ನುವ ಸಂಶಯ ಮೂಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವಿಶ್ವ ಹಿಂದೂ ಪರಿಷತ್ ಮುಖಂಡ ಹರೀಶ್ ಶೆಟ್ಟಿ ಮೇಲೆ ನಡೆದಿರುವ ದಾಳಿ. ಮಸೀದಿಯೊಂದರ ಪಕ್ಕದಲ್ಲಿ ಹಣ್ಣುಹಂಪಲು ಖರೀದಿಸಲು ನಿಂತಿದ್ದಾಗ ದಾಳಿ ನಡೆದಿದೆ. ಕೈಗೆ ತೀವ್ರತರವಾಗಿರುವ ಗಾಯವಾಗಿದೆ. ಆ ನೋವನ್ನು ಅವರು ಅದೇಗೆ ಸಹಿಸಿಕೊಂಡು ಇರುತ್ತಾರೋ. ಅವರ ಕೊಲೆನೆ ಮಾಡಬೇಕು ಎಂದು ದುಷ್ಕರ್ಮಿಗಳು ಪ್ಲಾನ್ ಮಾಡಿರಬಹುದು. ಆದರೆ ಅದೃಷ್ಟ ಚೆನ್ನಾಗಿತ್ತು. ಬದುಕಿ ಉಳಿದಿದ್ದಾರೆ. ಪೊಲೀಸ್ ಕಮೀಷನರ್ ಸುರೇಶ್ ಅವರು ಆದಷ್ಟು ಶೀಘ್ರದಲ್ಲಿ ನೈಜ ಆರೋಪಿಗಳನ್ನು ಬಂಧಿಸಲಿ ಎನ್ನುವುದು ಹಾರೈಕೆ.

ಮತ್ತೊಂದೆಡೆ ಮೂಡಬಿದ್ರೆಯ ಹಿಂದೂ ಮುಖಂಡ ಪ್ರಶಾಂತ ಪೂಜಾರಿಯ ಹತ್ಯಾ ಆರೋಪಿ ಇಮ್ತಿಯಾಜ್ ಮೇಲೆ ದಾಳಿ ನಡೆದಿದೆ. ಅಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಮಾಹಿತಿ ಬರುತ್ತಿದೆ. ಇದನ್ನೆಲ್ಲ ಗಮನಿಸಿದರೆ ಯಾರಿಗೋ ಈ ಎಲ್ಲಾ ಘಟನೆಗಳಿಂದ ಲಾಭ ಇದೆಯೋ ಎಂದು ಅನಿಸುತ್ತದೆ. ಮಂಗಳೂರು ಶಾಂತಿಯುತವಾಗಿ ಇರಬಾರದು ಎಂದು ಯಾರೋ ಎಲ್ಲಿಯೋ ಕುಳಿತುಕೊಂಡು ಸಂಚು ಹೂಡುತ್ತಿದ್ದಾರೋ ಎನ್ನುವ ಸಂಶಯ ಬರುತ್ತದೆ. ಕೇವಲ ಬಿಡಿಗಾಸಿಗೆ ಯಾರ ಮೇಲೆ ಬೇಕಾದರೂ ತಲವಾರು ಬೀಸಲು ತಯಾರಾಗಿ ಇರುವಂತಹ ಕೆಲವು ಯುವಕರು ಇರುತ್ತಾರೆ. ಇನ್ನು ಕೆಲವು ಬಿಡಿಗಾಸಿಗೆ ಸರೆಂಡರ್ ಆಗಿ ಜೈಲಿನಲ್ಲಿ ಕುಳಿತುಕೊಳ್ಳುವ ಯುವಕರು ಕೂಡ ಇರುತ್ತಾರೆ. ವಿದೇಶದಲ್ಲಿ ಕುಳಿತ ಕೆಲವು ಶ್ರೀಮಂತರಿಗೆ ಮಂಗಳೂರಿನಲ್ಲಿ ಗಲಾಟೆ ಮಾಡಿಸುವುದು ಖಯಾಲಿಯಾಗಿರಬಹುದು. ಸ್ವಲ್ಪ ಹಣ, ಬೈಕು, ಸೆಂಟ್, ಗಾಂಜಾ, ಮದ್ಯದ ಹೊಳೆ ಹರಿಸಿ ಅವರು ಇಲ್ಲಿ ಯಾರ ಮೇಲೆ ಹಲ್ಲೆ ಮಾಡಲು ಹೇಳುತ್ತಾರೋ ಅಂತವರಿಗೆ ಹೊಡೆಯಲು ತಯಾರಾಗಿರುವ ಯುವಕರು ಇರಬಹುದು. ಇದು ನಿಲ್ಲಬೇಕು.

ಹಣ, ಡ್ರಗ್ಸ್ ಗಾಗಿ ಏನನ್ನು ಬೇಕಾದರೂ ಮಾಡಲು ತಯಾರಾಗುವ ಯುವಕರು ಯಾರು ಎನ್ನುವುದು ಪೊಲೀಸರಿಗೆ ಗೊತ್ತೆ ಇರುತ್ತದೆ. ಪೊಲೀಸರು ಅಂತವರ ಪಟ್ಟಿ ತೆಗೆಯಬೇಕು. ಅಂತವರಿಗೆ ಚೆನ್ನಾಗಿ “ಬುದ್ಧಿ”ವಾದ ಹೇಳಬೇಕು. ಅವರು ಮುಂದೆ ಅಂತಹ ಕೆಲಸ ಮಾಡದೇ ಇರುವ ಹಾಗೆ ಮಾಡಿಬಿಡಬೇಕು. ಈ ಮೂಲಕ ಅಂತಹ ಕೆಟ್ಟ ತಳಿಗಳು ಚಿಗುರದ ಹಾಗೆ ನೋಡಿಕೊಳ್ಳಬೇಕು. ಹಾಗೆ ಮಾಡಿದಾಗ ಯಾರಿಗೂ ಕೈಯಲ್ಲಿ ತಲವಾರು ಹಿಡಿಯಲು ಮನಸ್ಸು ಬರುವುದಿಲ್ಲ.

ಇಲ್ಲದಿದ್ರೆ ಏನು ಆಗುತ್ತದೆ ಎಂದರೆ ಹಲ್ಲೆ, ಕೊಲೆ ಮತ್ತೆ ಶುರುವಾಗುತ್ತದೆ. ಮತ್ತೆ ಶಾಂತಿ ಕದಡುತ್ತದೆ. ಇದು ಮಂಗಳೂರಿಗೆ ಕೆಟ್ಟ ಹೆಸರು ತರುತ್ತದೆ. ಇಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತದೆ. ಯಾರೋ ಎಲ್ಲಿಯೋ ಕುಳಿತು ಮೈ ಕಾಯಿಸಿಕೊಳ್ಳುತ್ತಿರುತ್ತಾರೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search