• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವರ್ಷದಿಂದ ವರ್ಷಕ್ಕೆ ಬೆಳೆಯುತ್ತೆ ಮರದ ಕುದುರೆ…!!!

udupi reporter Posted On October 9, 2018


  • Share On Facebook
  • Tweet It

ಉಡುಪಿ- ಮನಷ್ಯರು ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುವುದನ್ನು ನಾವು ನೀವು ನೋಡಿದ್ದೇವೆ. ಆದರೆ ನಿರ್ಜೀವ ವಸ್ತುಗಳು ಯಾವತ್ತಾದ್ರೂ ಬೆಳೆಯೋದನ್ನು ನೀವು ಕಂಡಿದ್ದೀರಾ.. ಯಾವತ್ತಿಗೂ ಕೂಡ ಅದು ನಂಬಲು ಕಷ್ಟ ಸಾದ್ಯವಾದ ಮಾತು.ಆದ್ರೆ ಉಡುಪಿಯಲ್ಲೊಂದು ಮರದಿಂದ ಕೆತ್ತಿರೋ ಪುರಾತನ ಕುದುರೆಯೊಂದಿದೆ.. ಈ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಲೇ ಬಂದಿದೆ. ಅದು ಎಲ್ಲಿ ಗೊತ್ತೆ..!?

ನೀವು ಇದನ್ನ ಅಚ್ಚರಿ ಅಂತೀರೋ ಅಥವಾ ಪವಾಡ ಅಂತೀರೋ. ಆದ್ರೆ ಇಲ್ಲಿ ಕಾಣುತ್ತಿರೋ ಈ ಮರದಿಂದ ರಚಿಸಲ್ಪಟ್ಟ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಿರುವುದು ಮಾತ್ರ ಸತ್ಯ. ಈ ರೀತಿ ಇಂಚಿಂಚಾಗಿ ಬೆಳೆಯುತ್ತಿರುವ ಕುದುರೆ ಉಡುಪಿ ಕಾಪುವಿನ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರಡಿಯಲ್ಲಿಯಲ್ಲಿದೆ. ಅಂದಹಾಗೆ ಈ ಗರಡಿಯಲ್ಲಿ ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯ್ಯರನ್ನು ಆರಾಧಿಸುತ್ತಾ ಬರಲಾಗಿದೆ.. ಗರೋಡಿಯಲ್ಲಿ ಕೋಟಿ ಚೆನ್ನಯ್ಯರಿಗೆ ಇರುವಷ್ಟೇ ಪ್ರಾಧಾನ್ಯತೆ ಮರದ ಕುದುರೆಗೂ ಇದೆ ಅಂದ್ರೆ ತಪ್ಪಾಗಲಾರದು.. ಯಾಕೆಂದ್ರೆ ಗರಡಿಗೆ ಆಗಮಿಸೋ ಭಕ್ತರು ಕುದುರೆಗೂ ಭಕ್ತಿಯಿಂದ ಕೈ ಮುಗಿಯುತ್ತಾರೆ.. ಅಂದಹಾಗೆ ಈ ಕುದುರೆಗೂ ಹಲವು ವರುಷಗಳ ಪುರಾಣ ಇತಿಹಾಸವಿದೆ.. ಹಲವಾರು ವರುಷಗಳ ಹಿಂದೆ ಈ ಊರಿನ ಮಂದಿ ಅದೆಲ್ಲೋ ವ್ಯಾಪಾರಕ್ಕೆ ತೆರಳಿದ್ದ ವೇಳೆ ಈ ಮರದ ಕುದುರೆಯನ್ನು ಸಂತೆಯಲ್ಲಿ ಕಾಣುತ್ತಾರೆ.. ಅದನ್ನು ಪೊಯ್ಯ ಪೊಡಿಕಲ್ಲ ಗರಡಿಯಲ್ಲಿ ಇಡಲೆಂದು ಖರೀದಿಸೋದಕ್ಕೂ ಮುಂದಾಗ್ತಾರೆ.. ಆದ್ರೆ ಅದಾಗಲೇ ಆ ಮರದ ಕುದುರೆಯನ್ನು ಆ ಊರಿನ ಅರಸ ಖರೀದಿಸಿದ ವಿಷ್ಯ ತಿಳಿದು ವಾಪಾಸು ಹಿಂತಿರುಗಿ ಬರುತ್ತಾರೆ.. ಬಳಿಕ ಆ ಊರಲ್ಲಿ ಅರಸನ ಪಾಲಿಗೆ ಎಲ್ಲವೂ ಕೈ ಕೊಟ್ಟು ರಾಜ್ಯವೇ ದಿವಾಳಿಯಾಗುತ್ತಾ ಸಾಗುತ್ತವೆ.. ಈ ವೇಳೆ ಆ ಅರಸ ಜ್ಯೋತಿಷಿಯರಲ್ಲಿ ಪ್ರಶ್ನೆಯನ್ನಿಟ್ಟಾಗ ನೀನು ಖರೀದಿಸಿದ ಕುದುರೆ ಗರಡಿಯೊಂದಕ್ಕೆ ಸೇರಬೇಕಾದದ್ದು ಎಂದು ತಿಳಿಸುತ್ತಾರೆ.. ಆದ್ರೆ ಅದನ್ನು ಖರೀದಿಸಲು ಬಂದವರಾಗಲೀ, ಗರಡಿ ಎಲ್ಲಿದ್ದಾಗಲೀ ತಿಳಿಯದೇ ಹೋದಾಗ ಅರಸ ಜ್ಯೋತಿಷಿಗಳ ಸಲಹೆಯಂತೆ ಸಮುದ್ರದಲ್ಲಿ ಬಿಡುತ್ತಾನೆ.. ಈ ರೀತಿ ಬಿಟ್ಟ ಮರದ ಕುದುರೆ ಕಾಪು ಕಡಲ ಕಿನಾರೆಗೆ ಬಂದು ಮೀನುಗಾರರ ಕೈ ಸೇರಿ ಬಳಿಕ ಬ್ರಹ್ಮ ಬೈದರ್ಕಳ ಗರಡಿಗೆ ಬಂದು ಸೇರುತ್ತೆ.

ಆದ್ರೆ ಸಮುದ್ರದಲ್ಲಿ ಬಂದ ಈ ಕುದುರೆಯನ್ನು ಗರಡಿ ಒಳಗಿಡುವುದು ಕಷ್ಟವಾಯಿತು. ಕಾರಣ ಆ ಸಮಯದಲ್ಲಿ ಗರಡಿಯ ಬಾಗಿಲು ಕಿರಿದಾಗಿದ್ದು ಕುದುರೆಯನ್ನು ಒಳಗೆ ಕೊಂಡೊಯ್ಯಲಾಗಲಿಲ್ಲ. ಹಾಗಂತ ಹೊರಗಿಟ್ಟು ಹೋದ ಕುದುರೆ ಮರುದಿನ ಮತ್ತೊಂದು ಅಚ್ಚರಿ ನೀಡಿತ್ತು.. ಹೊರಗಿದ್ದ ಕುದುರೆ ತಾನಾಗಿಯೇ ಗರಡಿಯನ್ನು ಸೇರಿತ್ತು.ಇದ್ರಿಂದಾಗಿ ಜನ ಕುದುರೆಯನ್ನು ಭಕ್ತಿಯಿಂದ ಆರಾದಿಸತೊಡಗಿದ್ರು. ಇಂದಿಗೂ ಆ ಕುದುರೆಯನ್ನು ಬೆಳೆಯುವ ಕುದುರೆ ಎಂದು ಜನ ನಂಬಿದ್ದಾರೆ. ಈಗಿರುವ ಗುರಿಕಾರರ ಹಿರಿಯರ ಪ್ರಕಾರ ಅಂದು ಇದ್ದ ಕುದುರೆಗೂ ಇಂದು ಇರುವ ಕುದುರೆಗೂ ಬಹಳ ವ್ಯತ್ಯಾಸವಿದೆ ಎನ್ನುತ್ತಾರೆ. ಇಂದಿಗೂ ಪ್ರತಿ ಪರ್ವ ಸಂದರ್ಭದಲ್ಲಿ ಕುದುರೆಗೆ ಪೂಜೆ ಸಲ್ಲುತ್ತದೆ.

ದೈವಾರಾಧನೆ ಎನ್ನುವಂತದ್ದು ತುಳುನಾಡಿನ ಮೂಲಸೆಲೆ.. ದೈವಗಳ ಆರಾಧನೆ ಇಂದಿಗೂ ತುಳುನಾಡಿನಾದ್ಯಂತ ಹಾಸು ಹೊಕ್ಕಾಗಿದೆ.. ಈ ಭಾಗದ ಮಂದಿ ಸಂಕಟ ಬಂದಾಗ ವೆಂಕಟ ರಮಣ ಅನ್ನೋ ಹಾಗೆ ಕಷ್ಟಕಾಲದಲ್ಲಿ ದೈವದ ಮೊರೆ ಹೋಗುವುದು ಮಾಮೂಲು.. ಅದ್ರ ಜೊತೆಗೆ ವೀರಪುರುಷರಾದ ಕೋಟಿ ಚೆನ್ನಯ್ಯರನ್ನೂ ತುಳುನಾಡಿನ ಮಂದಿ ಆರಾಧಿಸುತ್ತಲೇ ಬಂದಿದ್ದಾರೆ.. ಅದ್ರ ನಡುವೆ ಬೆಳೆಯುವ ಕುದುರೆಯೂ ತನ್ನ ದೈವಬಲದಿಂದ ಜನರ ನಂಬಿಕೆ ಪಾತ್ರವಾಗಿರುವುದು ವಿಶೇಷ.

  • Share On Facebook
  • Tweet It


- Advertisement -
udupi


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
udupi reporter May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
udupi reporter May 5, 2025
You may also like
ಉರಿ ದಾಳಿ ಥರದ ಸಂಚು ರೂಪಿಸಿದ್ದ ಉಗ್ರರು ಖತಂ
September 25, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search