• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಸ್ಟೇಟ್ ಬ್ಯಾಂಕಿನಿಂದ ಲೇಡಿಹಿಲ್ ಗೆ ಬರಲು ಒಬ್ಬ ಅಧಿಕಾರಿಗೆ ಹಿಡಿಯಿತು ಒಂದೂವರೆ ತಿಂಗಳು!

TNN Correspondent Posted On July 29, 2017
0


0
Shares
  • Share On Facebook
  • Tweet It

ಜಿಲ್ಲಾಧಿಕಾರಿ ಕಚೇರಿಯಿಂದ ಲೇಡಿಹಿಲ್ ಗೆ ಬರಲು ಎಷ್ಟು ಹೊತ್ತಾಗುತ್ತದೆ? ಬಸ್ ಆದರೆ 20 ನಿಮಿಷ, ಬೈಕ್ ಆದರೆ 8 ನಿಮಿಷ, ಕಾರು ಆದರೆ 10 ನಿಮಿಷ, ಒಂದು ವೇಳೆ ರೋಡ್ ಬ್ಲಾಕ್ ಆದರೆ ಹತ್ತು ಅಥವಾ ಇಪ್ಪತ್ತು ನಿಮಿಷ ಆಚೀಚೆ. ಅದೇ ನಡೆದುಕೊಂಡು ಬರುವುದಾದರೆ ಹೆಚ್ಚೆಂದರೆ ಒಂದು ಗಂಟೆ ಹಿಡಿಯಬಹುದು. ತೆವಳಿಕೊಂಡು ಬರುವುದಾದರೆ ಸ್ಪಲ್ಪ ಹೆಚ್ಚು ಹೊತ್ತು ಬೇಕಾಗಬಹುದು, ಮಡಸ್ನಾನ ಹಾಕಿ ಬರುವುದಾದರೆ ಇನ್ನೊಂದಿಷ್ಟು ಹೊತ್ತು ಹಿಡಿಯಬಹುದು, ಓಡಿ ಬರುವುದಾದರೆ ಇನ್ನು ಸ್ವಲ್ಪ ಕಡಿಮೆ ಸಮಯ ಸಾಕಾಗಬಹುದು, ಇನ್ನು ಜಾಗಿಂಗ್ ಮಾಡಿ ಬರುವುದಾದರೆ ನನಗೆ ಕರೆಕ್ಟಾಗಿ ಗೊತ್ತಿಲ್ಲ, ಆದರೆ ಯಾವ ರೀತಿಯಲ್ಲಿ ಬಂದರೂ ಒಂದು ದಿನದ ಒಳಗೆ ತಲುಪಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರಿಗೆ ಬರೋಬ್ಬರಿ ಒಂದೂವರೆ ತಿಂಗಳು ಹಿಡಿದಿದೆ.

ಈ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ಕಾಮಗಾರಿಗಳು ಹುಚ್ಚು ಮುಂಡೆ ಮದುವೆ ತರಹವೇ ಆಗುವುದು. ಇಲ್ಲಿ ಉಂಡವನೇ ಜಾಣ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಕೆಲವರು ಉಂಡು ಕೈ ತೊಳೆಯುವಾಗ ಸಿಕ್ಕಿಬೀಳುತ್ತಾರೆ. ಅವರನ್ನು ಹಿಡಿದು, ಅವರ ಮುಖಕ್ಕೆ ಮೆತ್ತಿದ ಅನ್ನದ ಅಗುಳನ್ನು ಲೆಕ್ಕ ಹಾಕಿ, ಊದಿದ ಹೊಟ್ಟೆಯನ್ನು ನೋಡಿ ಇವನು ತಿಂದದ್ದು ಹೊಲಸು ಎಂದು ನನ್ನಂತಹ ಪೀನ ಮಸೂರದ ಕಣ್ಣಿನವರಿಗೆ ಗೊತ್ತೆ ಆಗುತ್ತದೆ. ಅದನ್ನು ಪಾಲಿಕೆಯಲ್ಲಿ ಕೇಳೋಣ ಎಂದು ಹೊರಟರೆ ಎಲ್ಲರೂ ಮುಖದ ಮೇಲೆ ಶಾಲು ಹಾಕಿ ತಿನ್ನುವ ಭರದಲ್ಲಿ ಮೇಲೆನೆ ನೋಡುವುದಿಲ್ಲ. ಅದಕ್ಕೆ ನಾನು ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್ ಅವರ ಮೊರೆ ಹೋಗಿದ್ದೆ. ಸರ್, ಲೇಡಿಹಿಲ್ ನಿಂದ ಪಬ್ಬಾಸ್ ವರೆಗಿನ ರಸ್ತೆ ಮತ್ತು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಎದುರು ಕಾಂಕ್ರೀಟ್ ರಸ್ತೆ ಬದಿ ಹೊಸದಾಗಿ ನಿರ್ಮಿಸಿರುವ ಕಾಂಕ್ರೀಟ್ ಚರಂಡಿ ಮತ್ತು ಫುಟ್ ಪಾತ್ ಕಾಮಗಾರಿಯ ಟೆಂಡರ್ ಕರೆಯದೇ ಕೆಲಸ ಒಟ್ರಾಶಿ ಆಗುತ್ತದೆ ಎಂದು ದೂರು ಕೊಟ್ಟೆ. ಪಾಲಿಕೆ ಸರಿಯಾಗಿ ನನ್ನ ಪ್ರಶ್ನೆಗೆ ಸ್ಪಂದಿಸಿದ್ದರೆ ನಾನು ಜಿಲ್ಲಾಧಿಕಾರಿ ಕಚೇರಿಯ ತನಕ ಹೋಗಬೇಕಾಗಿರಲಿಲ್ಲ. ನನ್ನ ಮಾತನ್ನು ಕೇಳಿದ ನಂತರ ಜಿಲ್ಲಾಧಿಕಾರಿಯವರು ತಮ್ಮ ಕಚೇರಿಯ ಭದ್ರತಾಕೋಶದ ಕೆಎಎಸ್ ಅಧಿಕಾರಿ ಪ್ರಸನ್ನ ಅವರನ್ನು ಕರೆದು ಈ ಬಗ್ಗೆ ತನಿಖೆ ಮಾಡಿ ವರದಿ ಕೊಡಲು ಹೇಳಿದ್ರು.

ನಾನು ಜಿಲ್ಲಾಧಿಕಾರಿಯವರೇ ಸೂಚನೆ ಕೊಟ್ಟ ಕಾರಣ ಅವರ ಅಧೀನ ಅಧಿಕಾರಿ ಆದಷ್ಟು ಬೇಗ ಬಂದು ಪರೀಕ್ಷಿಸಬಹುದು ಎಂದುಕೊಂಡೆ. ಆದರೆ ನನ್ನ ಊಹೆ ತಪ್ಪಾಗಿತ್ತು. ಪ್ರಸನ್ನ ಅವರು ಬರಲೇ ಇಲ್ಲ. ಒಂದು ವಾರ ಆಯಿತು, 15 ದಿನ ಆಯಿತು, ಒಂದು ತಿಂಗಳಾಯಿತು, ಕೊನೆಗೆ ಒಂದೂವರೆ ತಿಂಗಳು. ಈ ನಡುವೆ ನಾನು ಕಡಿಮೆ ಎಂದರೆ 25 ಸಲ ಅವರಿಗೆ ಫೋನ್ ಮಾಡಿರಬಹುದು. ನಾನೇನೂ ಶಿಮ್ಲಾ, ಡಾರ್ಜೆಲಿಂಗ್ ನ ಗುಡ್ಡಗಾಡಿನಲ್ಲಿಯೋ, ಕೋಲಾರದ ಗಣಿಯೊಳಗೆಯೊ ಅಥವಾ ಅಪಾಯಕಾರಿ ಪ್ರಾಣಿಗಳು ವಾಸಿಸುವಂತಹ ಅರಣ್ಯದೊಳಗೆ ಇವರನ್ನು ಕರೆದಿರಲಿಲ್ಲ. ಕರೆದಿದ್ದು ಡೊಂಗರಕೇರಿ ಮತ್ತು ಲೇಡಿಹಿಲ್ ಸ್ಥಳಕ್ಕೆ. ಆ ನಂತರ ಅಧಿಕಾರಿ ಒಂದು ದಿನ ಬಂದ್ರು. ನೋಡಿದರು, ಅದರ ನಂತರ 22 ದಿನಗಳಾಗಿವೆ. ಇನ್ನೂ ವರದಿ ಕೊಟ್ಟಿಲ್ಲ. ನನ್ನ ಬಳಿ ಇರುವ ಮಾಹಿತಿ ಹಕ್ಕಿನ ಅಡಿ ತೆಗೆದ ಮಾಹಿತಿಯ ಪ್ರಕಾರ ಪಾಲಿಕೆ ಟೆಂಡರ್ ಕರೆದಿಲ್ಲ ಎಂದು ಉತ್ತರ ಬಂದಿದೆ. ಇದರ ಅರ್ಥ ಸಿಂಪಲ್. ಇವರು ತಮಗೆ ಬೇಕಾದ ಗುತ್ತಿಗೆದಾರರ ಹತ್ತಿರ ಕೆಲಸ ಮಾಡಿಸುವುದು, ನಂತರ ಟೆಂಡರ್ ಕರೆದ ಹಾಗೆ ಮಾಡುವುದು, ನಂತರ ಈ ಗುತ್ತಿಗೆದಾರರ ಸಿಂಡಿಕೇಟ್ ನಲ್ಲಿ ಕೆಲಸ ಮಾಡಿದವರೇ ಹೆಚ್ಚು ಬೆಲೆಗೆ ಬಿಡ್ ಮಾಡುವುದು, ಬೇರೆಯವರು ಅದಕ್ಕಿಂತ ಹೆಚ್ಚು ಬಿಡ್ ಮಾಡುವುದು. ಕೊನೆಗೆ ಆ ಕೆಲಸ ಮಾಡಿದವನಿಗೆ ಹೆಚ್ಚು ಹಣಕ್ಕೆ ಕೆಲಸ ಕೊಡುವುದು. ಇದರಿಂದ ವೇಸ್ಟ್ ಆಗುವುದು ಜನರ ತೆರಿಗೆಯ ಹಣ.

ನನ್ನ ನಿರೀಕ್ಷೆ ಇಷ್ಟೇ, ಮೇಯರ್ ಕವಿತಾ ಸನಿಲ್ ಅಲ್ಲಲ್ಲಿ ಅತಿಕ್ರಮಣ ಮಾಡಿರುವ ಕಡೆ ದಾಳಿ ಮಾಡಿ ಅವುಗಳನ್ನು ತೆರವು ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ. ಹಾಗೆ ಈ ಟೆಂಡರ್ ಕರೆಯದೆ ಕೆಲಸ ಮಾಡಿಸುವ ಟ್ರೆಂಡನ್ನು ನಿಲ್ಲಿಸಿ, ಜನರ ತೆರಿಗೆಯ ಹಣವನ್ನು ಉಳಿಸಬೇಕಾಗಿ ನನ್ನ ವಿನಂತಿ ಮತ್ತು ಅಧಿಕಾರಿಗಳು ಬರಿ ನೋಡಲು ಬರುವುದಕ್ಕೆ ತಿಂಗಳುಗಟ್ಟಲೆ ತೆಗೆಯದಿರಲಿ.

0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Tulunadu News July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Tulunadu News July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search