• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪಾಲಿಕೆಯಲ್ಲಿ ಗಂಡಸುತನದ ಕೊರತೆ ಇದೆ, ಖಾಸಗಿಯವರ ದರ್ಬಾರ್ ನಡೆಯುತ್ತಿದೆ!!

Hanumantha Kamath Posted On October 24, 2018
0


0
Shares
  • Share On Facebook
  • Tweet It

ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಹಣದಲ್ಲಿ ಮುಂದಿನ ಚುನಾವಣೆಯ ಬಳಿಕ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದರೆ ಎರಡು ರೀತಿಯ ಯೋಜನೆಗಳನ್ನು ಮಾಡಬೇಕಾಗುತ್ತದೆ. ಒಂದು ಜನರ ತೆರಿಗೆಯ ಹಣದಿಂದ ಸಾರ್ವಜನಿಕ ಕೆಲಸಗಳನ್ನು ಮಾಡುವುದು ಮತ್ತು ಇನ್ನೊಂದು ಅದೇ ತೆರಿಗೆ ಹಣದಿಂದ ಖಾಸಗಿ ವ್ಯಕ್ತಿಗಳ ಸ್ವಕಾರ್ಯಗಳನ್ನು ಮಾಡುವುದು. ಸರಕಾರದ ಕೆಲಸ ಎಂದರೆ ದೇವರ ಕೆಲಸ ಎನ್ನುವುದು ವಿಧಾನಸೌಧದ ಮೇಲೆ ಬರೆದಿರುವ ವಾಕ್ಯ. ಹಾಗೆ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮೇಲೆ ಒಂದು ವಾಕ್ಯ ಬರೆಸಲು ಹಿಂದಿನ ಶಾಸಕರು ಮತ್ತು ಅವರ ಪಾಲಿಕೆ ಸದಸ್ಯರು ಹೊರಟಿದ್ದಂತೆ ಕಾಣುತ್ತಿತ್ತು. ಅದೇನೆಂದರೆ ಪಾಲಿಕೆಯ ಕೆಲಸ ಪ್ರಭಾವಿಗಳ ಕೆಲಸ. ಪಾಲಿಕೆಯ ಕೆಲಸ ಎಂದರೆ ಶ್ರೀಮಂತರ ಕೆಲಸ. ಪಾಲಿಕೆಯ ಕೆಲಸ ಎಂದರೆ ಶ್ರೀಮಂತ ಉದ್ಯಮಿಗಳ ಕೆಲಸ. ಹೀಗೆ ಏನಾದರೊಂದು ವಾಕ್ಯ ಬರೆದು ಹಾಕಬಹುದಿತ್ತು. ಏಕೆಂದರೆ ಪಾಲಿಕೆಯ ಕೆಲವು ಸದಸ್ಯರಿಗೆ ಶ್ರೀಮಂತ ಉದ್ಯಮಿಗಳು ಎಂದರೆ ದೇವರು ಇದ್ದ ಹಾಗೆ. ಉದ್ಯಮಿಗಳ ಬ್ರೋಕರ್ ಗಳಂತೆ ಕೆಲಸ ಮಾಡುವ ಸದಸ್ಯರು ಇದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆಯನ್ನು ನಿಮಗೆ ಹೇಳಲೇಬೇಕು.
ಹತ್ತು ಲಕ್ಷದಲ್ಲಿ ಕಾಮಗಾರಿಗೆ ಸಿದ್ಧತೆ..
ಮಂಗಳೂರಿನ ಅಪ್ಪಟ ಹೃದಯಭಾಗದಂತೆ ಇರುವುದು ಕರಂಗಲಪಾಡಿ. ಅಲ್ಲಿ ಒಂದು ಕಟ್ಟಡ ಇದೆ. ಅದರ ಹೆಸರು ಮೆಡಿಫೇರ್ ಕಟ್ಟಡ. ಅದಕ್ಕೆ ಎಲ್ಲ ಕಟ್ಟಡಗಳಿಗೆ ಇದ್ದಂತೆ ಒಂದು ಕಾಟಾಚಾರದ ಡ್ರೈನೇಜ್ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಡ್ರೈನೇಜ್ ನಿಂದ ಶೌಚಾಲಯದ ತ್ಯಾಜ್ಯ ರಸ್ತೆಯ ಮೇಲೆ ಹರಿಯುತ್ತಿತ್ತು. ಅದನ್ನು ನೋಡಿದ ಮಂಗಳೂರು ನಗರ ದಕ್ಷಿಣದ ಹಿಂದಿನ ಶಾಸಕರಿಗೆ ಆ ಕಟ್ಟಡದ ಮಾಲೀಕರ ಮೇಲೆ ಪ್ರೀತಿ ಉಕ್ಕಿ ಹರಿಯಿತು. ಡ್ರೈನೇಜ್ ಉಕ್ಕಿ ರಸ್ತೆ ಮೇಲೆ ಹರಿಯುತ್ತಿರುವುದನ್ನು ನಿಲ್ಲಿಸಬೇಕು ಎಂದು ನಿರ್ಧಾರ ಮಾಡಿದರು. ಹೇಗೂ ಚುನಾವಣೆ ಹತ್ತಿರ ಇತ್ತಲ್ಲ. ತಮ್ಮ ಸಾಧನೆಯ ಹಾದಿಯ ಪುಟಗಳನ್ನು ತುಂಬಿಸಲು ಫೋಟೋಗಳು ಬೇಕಾಗಿತ್ತಲ್ಲ. ಅದಕ್ಕೆ ಅರ್ಜೆಂಟಾಗಿ ಮನೆಯಿಂದ ಪಿಕ್ಕಾಸು, ಹಾರೆ ತಂದವರೇ ಕರಂಗಲಪಾಡಿಯಲ್ಲಿ ಬಗ್ಗಿ ನಿಂತು ಫೋಟೋಗೆ ಫೋಸ್ ಕೊಟ್ಟು ಅದನ್ನು ಪುಸ್ತಕಕ್ಕೆ ಹಾಕಲು ಕಳುಹಿಸಿಕೊಟ್ಟರು. ಅವರಿಗೆ ಅದಕ್ಕಿಂತ ದೊಡ್ಡ ಉದ್ದೇಶ ಬೇರೆ ಇರಲಿಲ್ಲ. ಆ ಕಟ್ಟಡದವರು ಕೇಳಿದ್ದಕ್ಕೆ ರಾಜ್ಯ ಸರಕಾರದಿಂದ ವಿಶೇಷ ಅನುದಾನ ಹತ್ತು ಕೋಟಿ ಬರುತ್ತದೆ, ಅದರಲ್ಲಿ 10 ಲಕ್ಷ ರೂಪಾಯಿಗಳನ್ನು ಇದಕ್ಕೆ ಖರ್ಚು ಮಾಡುತ್ತೇವೆ ಎಂದು ಹೇಳಿದರು. ಆ ಕಟ್ಟಡದವರು ಕೂಡ ಶಾಸಕರು ಆಗಬಹುದು, ಸರಕಾರದ ಹಣದಲ್ಲಿ ಖಾಸಗಿ ಡ್ರೈನೇಜ್ ಮಾಡಿಸುತ್ತಾರಲ್ಲ, ಎಷ್ಟು ಪ್ರೀತಿ ನಮ್ಮ ಮೇಲೆ ಎಂದು ಖುಷಿ ಪಟ್ಟರು. ಆದರೆ ನಾನು ಮತ್ತು ಪಾಲಿಕೆಯ ಸದಸ್ಯ ನವೀನ್ ಚಂದ್ರ ಹೋಗಿ ಅಲ್ಲಿ ಕಾಮಗಾರಿ ಆರಂಭವಾಗುವುದನ್ನು ತಡೆಯುವ ನಿರ್ಧಾರ ಮಾಡಿದೆವು. ಆ ಬಳಿಕ ನಮ್ಮ ಮತ್ತು ಕೆಲವು ಸಹೃದಯಿಗಳ ಪ್ರತಿಭಟನೆಯಿಂದ ಅಲ್ಲಿ ಖಾಸಗಿಯವರ ಡ್ರೈನೇಜ್ ನಮ್ಮ ನಿಮ್ಮ ತೆರಿಗೆಯ ಹಣದಲ್ಲಿ ಆಗುವುದು ನಿಂತಿತು. ಆಗ ವಿಷಯ ಬಿಸಿ ಇದ್ದ ಕಾರಣ ಯಾರೂ ಕೂಡ ಕಾಮಗಾರಿ ಮತ್ತೆ ಆರಂಭಿಸುವ ಧೈರ್ಯ ಮಾಡಲಿಲ್ಲ.
ಕರಂಗಲಪಾಡಿಯ ಖಾಸಗಿ ಕಟ್ಟಡಕ್ಕೆ ನಮ್ಮ ತೆರಿಗೆಯ ಹಣದಿಂದ ಡ್ರೈನೇಜ್!!
ಈಗ ಎಲ್ಲವೂ ತಣ್ಣಗಾದ ನಂತರ ಬೇರೆ ರೂಪದಲ್ಲಿ ಅಲ್ಲಿ ಮತ್ತೆ ಖಾಸಗಿಯವರಿಗೆ ಸಹಾಯ ಮಾಡಲು ಪಾಲಿಕೆಯ ಸದಸ್ಯರು ಹೊರಟಿದ್ದಾರೆ. ಪಾಲಿಕೆಯ ಕಡೆಯಿಂದ ಅಲ್ಲಿ ಮ್ಯಾನ್ ಹೋಲ್ ನಿರ್ಮಿಸಿ ಕಟ್ಟಡದವರಿಗೆ ಉಪಕಾರ ಮಾಡುವ ಸಿದ್ಧತೆ ನಡೆಯುತ್ತಲೇ ಇದೆ. ಇಲ್ಲಿ ನನ್ನ ಮತ್ತು ನನ್ನಂತಹ ಕೆಲವರ ಪ್ರಶ್ನೆ ಏನೆಂದರೆ ” ಪಾಲಿಕೆಯ ಆಡಳಿತ ಪಕ್ಷದಲ್ಲಿ ಇರುವವರಿಗೆ ಗಟ್ಸ್ ಇಲ್ಲವೇ, ಧಮ್ ಇಲ್ಲವೇ? ಕಳೆದ ಏಳು ತಿಂಗಳುಗಳಿಂದ ಶೌಚಾಲಯದ ತ್ಯಾಜ್ಯ ರಸ್ತೆಯ ಮೇಲೆ ಹರಿಯುತ್ತಿದೆ. ನಿಮ್ಮ ಕಟ್ಟಡದಿಂದ ಅಲ್ಲಿ ಸಮಸ್ಯೆಯಾಗಿರುವುದು. ನಾವು ನಮ್ಮ ತೆರಿಗೆಯ ಹಣದಲ್ಲಿ ನಿಮ್ಮ ಡ್ರೈನೇಜ್ ಸರಿ ಮಾಡಲು ಆಗಲ್ಲ, ಕಟ್ಟಡದಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಬರಲ್ವಾ? ಸರಿ ಮಾಡಿ ಎಂದು ಜೋರು ಮಾಡುವಷ್ಟು ಗಂಡಸುತನ ಪಾಲಿಕೆಯಲ್ಲಿ ಯಾರಿಗೂ ಇಲ್ಲವೇ?”
ಅದೇ ಪಾಲಿಕೆಯಲ್ಲಿ ನೀವು ಹೋಗಿ ನಿಮ್ಮ ಮನೆಗೆ ಶೌಚಾಲಯ ನಿರ್ಮಿಸಲು ಡ್ರೈನೇಜ್ ಮಾಡಿ ಮ್ಯಾನ್ ಹೋಲ್ ಗೆ ಲಿಂಕ್ ಕೊಡಲು ರಸ್ತೆಯನ್ನು ಒಂದಿಷ್ಟು ಇಂಚು ಅಗೆಯಬೇಕು ಎಂದು ಮನವಿ ಮಾಡಿ ನೋಡಿ. ಮೊದಲಿಗೆ ನಿಮ್ಮನ್ನು ಮೇಲಿನಿಂದ ಕೆಳಗಿನ ತನಕ ನೋಡಿ ಎರಡೋ, ಮೂರೋ, ನಾಲ್ಕೋ ಸಾವಿರ ಕಟ್ಟಲು ಹೇಳುತ್ತಾರೆ. ಬಡ, ಮಧ್ಯಮ ವರ್ಗದವರಿಗೆ ಬರೆ ಅದೇ ಶ್ರೀಮಂತ ಉದ್ಯಮಿಗಳಿಗೆ ಬೇರೆ. ಹೀಗೆ ಮಾಡಿಯೇ ಇವರುಗಳು ನಮ್ಮ ತೆರಿಗೆಯ ಹಣವನ್ನು ಪೋಲು ಮಾಡುತ್ತಲೇ ಬರುತ್ತಿದ್ದಾರೆ. ಇವರನ್ನು ಪ್ರಶ್ನಿಸುವವರು ಯಾರೂ ಇಲ್ಲ ಎನ್ನುವುದು ಇವರಿಗೂ ಗೊತ್ತಿದೆ. ಯಾಕೆಂದರೆ ನಮ್ಮ ನಗರದಲ್ಲಿ ವಾಸಿಸುವ ಜನರು ಅದು ಅವರ ವಿಷಯ, ಇದು ಇವರ ವಿಷಯ. ನಮಗ್ಯಾಕೆ ಎನ್ನುವ ಮನಸ್ಥಿತಿ. ಅದಕ್ಕಾಗಿ ನಮ್ಮ ತೆರಿಗೆಯ ಹಣ ಪೋಲು ಮಾಡಲು ಇವರ್ಯಾರು ಹಿಂಜರಿಯುವುದಿಲ್ಲ!
0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search