• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚೌಕಿದಾರ್ ಕೋ ಚೋರ್ ಬೋಲೆ ತೋ ಶೇರ್ ಜಾಗ್ ಗಯಾ!!

Hanumantha Kamath Posted On April 11, 2019
0


0
Shares
  • Share On Facebook
  • Tweet It

ಈ ಬಾರಿಯ ಲೋಕಸಭಾ ಚುನಾವಣೆಯ ಘೋಷವಾಕ್ಯ ಮೇ ಬಿ ಚೌಕಿದಾರ್ ಎನ್ನುವುದು ಖಾತ್ರಿಯಾಗಿದೆ. ಅಷ್ಟಕ್ಕೂ ಚೌಕೀದಾರ್ ಎನ್ನುವ ಶಬ್ದ ಈ ಬಾರಿ ಆಕಸ್ಮಿಕವಾಗಿ ಹುಟ್ಟಿದ್ದು ಎನ್ನುವುದರಲ್ಲಿ ಸಂಶಯವಿಲ್ಲ. ದೇಶದ ಸಂಪತ್ತನ್ನು ಲೂಟಿ ಮಾಡುವವರನ್ನು ಬಿಡುವುದಿಲ್ಲ. ರಾಷ್ಟ್ರದ ಸಂಪತ್ತನ್ನು ರಕ್ಷಿಸುವ ಚೌಕೀದಾರ್ ಆಗಿ ನಾನು ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಅದರ ನಂತರ ಮೋದಿಯವರಿಗೆ ಟಾಂಗ್ ಕೊಡಬೇಕು ಎನ್ನುವ ದೂರದೃಷ್ಟಿಯಿಂದ ರಾಹುಲ್ ಗಾಂಧಿ ರಫೇಲ್ ಡೀಲ್ ವಿಷಯದಲ್ಲಿ ಚೌಕಿದಾರ್ ಚೋರ್ ಹೇ ಎನ್ನುವ ವಾಕ್ಯ ಬಳಸಿದರು. ಮೋದಿ ಸಾಮರ್ತ್ಯ ಏನು ಎಂದರೆ ಅವರು ವಿರೋಧಿಗಳು ಬಿಸಾಡುವ ಕಲ್ಲುಗಳಿಂದಲೇ ಗೋಡೆ ಕಟ್ಟಿಕೊಳ್ಳುತ್ತಾರೆ. ಟೀಕೆಗಳನ್ನೇ ಆಭರಣವನ್ನಾಗಿಸಿಕೊಳ್ಳುತ್ತಾರೆ. ಅದರಿಂದ ಅಲೆ ಎಬ್ಬಿಸುತ್ತಾರೆ. ಯಾವಾಗ ಚೌಕೀದಾರ್ ಚೋರ್ ಹೇ ಎನ್ನುವ ಮಾತನ್ನು ರಾಹುಲ್ ಆದಿಯಾಗಿ ಕಾಂಗ್ರೆಸ್ಸಿಗರು ಎಲ್ಲಾ ಕಡೆ ಹೇಳುತ್ತಾ ಬಂದರೋ ಮೋದಿ ದೃತಿಗುಂದಲಿಲ್ಲ. ತನ್ನ ಘೋಷಣೆಯನ್ನು ಹೀಯಾಳಿಸಿದರು ಎಂದು ಟೆನ್ಷನ್ ಮಾಡಿಕೊಳ್ಳಲಿಲ್ಲ. ಚೌಕೀದಾರ್ ಶಬ್ದವನ್ನೇ ಸರವನ್ನಾಗಿ ಮಾಡಿಕೊಂಡರು. ಮೇ ಚೌಕೀದಾರ್ ಎಂದರು. ನೀವು ನನಗೆ ಏನು ಬೇಕಾದ್ರೂ ತಮಾಷೆ ಮಾಡಿ, ಭಾರತದ ನೂರು ಕೋಟಿ ಜನರ ಸಂಪತ್ತಿನ ಚೌಕಿದಾರ್ ತಾನು ಎಂದು ಎದೆತಟ್ಟಿ ಹೇಳಿದರು. ಅದಕ್ಕೆ ಸರಿಯಾಗಿ ಸೋರಿಕೆಯಾಗುತ್ತಿದ್ದ ಸಾವಿರಾರು ಕೋಟಿಯನ್ನು ಹೇಗೆಲ್ಲ ಉಳಿಸಿದೆ ಎನ್ನುವುದನ್ನು ಅಂಕಿಸಂಖ್ಯೆಗಳ ಮೂಲಕ ತಿಳಿಸಿದರು. ಸಬ್ಸಿಡಿ ಹೇಗೆ ದಲ್ಲಾಳಿಗಳ ಪಾಲಾಗುತ್ತಿತ್ತು ಎನ್ನುವುದನ್ನು ವಿವರಿಸಿ ಡೈರೆಕ್ಟ್ ಟ್ರಾನ್ಸಫರ್ ಟು ಬ್ಯಾಂಕ್ ವ್ಯವಸ್ಥೆ ತಂದರು. ಗ್ಯಾಸ್ ಸಬ್ಸಿಡಿ ಅವರವರ ಬ್ಯಾಂಕ್ ಖಾತೆಗೆ ಹೋಗುವಂತೆ ನೋಡಿಕೊಂಡರು. ಅವರ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ಮಧ್ಯವರ್ತಿ ಹೆಗ್ಗಣಗಳಿಗೆ ತಿನ್ನಲು ಸಿಗುವುದು ತಪ್ಪಿಹೋಯಿತು.

ಯಾರೋ ದೇಶದ್ರೋಹಿ ಕೆಲಸ ಮಾಡಿದ್ದಕ್ಕೆ….

ಅದಕ್ಕೆ ಸರಿಯಾಗಿ ಯಾರೋ ಮಧ್ಯದಲ್ಲಿ ಆಡಿಬಿಟ್ಟ. ರಕ್ಷಣಾ ಇಲಾಖೆಯ ಕಚೇರಿಯಿಂದ ರಫೇಲ್ ಒಪ್ಪಂದಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಲ್ಲಿಯೇ ಝೆರಾಕ್ಸ್ ಮಾಡಿ ಕದ್ದು ಸಾಗಿಸಿಬಿಟ್ಟ. ಅದು ದಕ್ಷಿಣ ಭಾರತದ ಪ್ರಖ್ಯಾತ ಇಂಗ್ಲೀಷ್ ಪತ್ರಿಕೆಯ ಪಾಲಾಯಿತು. ಅವರು ಸರಣಿಯಲ್ಲಿ ಲೇಖನಗಳನ್ನು ಪ್ರಕಟಿಸಲು ಶುರು ಮಾಡಿದರು. ಅದನ್ನು ಹಿಡಿದುಕೊಂಡು ಕಾಂಗ್ರೆಸ್ ಥಿಂಕ್ ಟ್ಯಾಂಕ್ ಗಳು ವಿಷಯವನ್ನು ಸ್ಟಡಿ ಮಾಡಿದವು. ಏನು ಮಾಡಿದರೂ ಹುಳುಕು ತೆಗೆಯಲು ಆಗಲಿಲ್ಲ. ಆದರೆ ಸತ್ಯದ ಮೇಲೆ ಸುಳ್ಳಿನ ಪರದೆಯನ್ನು ಎಳೆದು ಆಟವಾಡೋಣ ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದರು. ರಾಹುಲ್ ಗಾಂಧಿಯನ್ನು ಯಾವುದೋ ಮಧ್ಯಾಹ್ನದ ಸವಿನಿದ್ರೆಯಲ್ಲಿ ಇದ್ದವರಿಗೆ ಎಬ್ಬಿಸಿ ಚಾ ಕುಡಿಸಿ ಚಾಯ್ ವಾಲಾನ ಘೋಟಾಲಾ ಎಂದು ಕಿವಿಯೂದಿದರು. ನೀವು ಸರಿಯಾಗಿ ಅಧ್ಯಯನ ಮಾಡಿದ್ದಿರಲ್ಲ ಎಂದು ರಾಹುಲ್ ಎರಡೆರಡು ಸಲ ಕೇಳಿದರು. ವಿಷಯ ತುಂಬಾ ಡೀಪ್ ಹೋಗುವುದು ಬೇಡಾ. 550 ಕೋಟಿಯ ಯುದ್ಧ ವಿಮಾನವನ್ನು 1650ಕ್ಕೆ ಯಾಕೆ ಖರೀದಿಸಿದ್ದಿರಿ ಎಂದು ಕೇಳಿ. ಅಷ್ಟೇ ಸಾಕು, ಜನ ನಂಬುತ್ತಾರೆ ಎಂದು ರಾಹುಲ್ ಅವರಲ್ಲಿ ಧೈರ್ಯ ತುಂಬಿದರು. ಅದನ್ನೇ ಹಿಡಿದು ರಾಹುಲ್ ತಮ್ಮ ಮಾತುಗಾರಿಕೆಯನ್ನು ತೀಕ್ಣಗೊಳಿಸಿದರು.

ಮೋದಿಗೆ ತಿರುಮಂತ್ರ ಮಾಡಲು ಹೋದ ರಾಹುಲ್…

ರಾಹುಲ್ ಗಾಂಧಿಯನ್ನು ಮೋದಿ ಯಾವಾಗಲೂ ಶಹಜಾದಾ ಎಂದೋ, ನಾಮಧಾರ್ ಎಂದೋ ಕರೆದು ಛೇಡಿಸಿದ್ದಾರೆ ವಿನ: ರಾಹುಲ್ ಗಾಂಧಿ ಎನ್ನುವ ಹೆಸರಿನಿಂದ ಕರೆದದ್ದು ಕಡಿಮೆ. ಅದೇ ಶೈಲಿಯನ್ನು ಈ ಬಾರಿ ರಾಹುಲ್ ಅನಿಸಿದರು. ಮೋದಿ ಚೋರ್ ಹೇ ಎಂದರೆ ಸಿಂಪಥಿ ಮೋದಿ ಕಡೆ ಹುಟ್ಟುತ್ತದೆ ಎಂದು ಹೆದರಿ ಚೌಕಿದಾರ್ ಚೋರ್ ಹೇ ಎಂದು ಪರೋಕ್ಷವಾಗಿ ಕುಟುಕಿದರು. ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ರಾಹುಲ್ ಅಂದುಕೊಂಡಿದ್ದರು. ಆದರೆ ಅದು ಉಲ್ಟಾ ಆಯಿತು.
ಚೌಕಿದಾರ್ ಶೇರ್ ಹೇ ಎನ್ನುವ ಘೋಷವಾಕ್ಯ ತನ್ನಿಂದತಾನೆ ಹುಟ್ಟಿಕೊಂಡಿತು. ಮೇ ಬೀ ಚೌಕಿದಾರ್ ಎನ್ನುವ ಸ್ಟಿಕರ್ ಪ್ರಿಂಟ್ ಆದವು. ಅದು ಕಾರಿನ ಹಿಂದೆ ಅಂಟಿಸಲ್ಪಟ್ಟವು. ಅದು ವ್ಯಾಪಕವಾಗಿ ಪ್ರಚಾರವಾಗುತ್ತಿದ್ದ ಹಾಗೆ ಕಾಂಗ್ರೆಸ್ಸಿನವರು ಚೌಕಿದಾರ್ ಚೋರ್ ಹೇ ಎನ್ನುವ ಸ್ಟಿಕರ್ ಮಾಡಿ ತಯಾರು ಮಾಡಿ ಇಟ್ಟುಕೊಂಡರು. ಮೊದಲಿಗೆ ಯಾರಾದರೂ ಒಬ್ಬರು ಅಂಟಿಸಲಿ, ನಂತರ ಪ್ರತಿಕ್ರಿಯೆ ನೋಡಿ ನಾವು ಅಂಟಿಸೋಣ ಎಂದು ಅಂದುಕೊಂಡರು. ಹೇಳಿಕೇಳಿ ಕರಾವಳಿ ಬಿಜೆಪಿಯ ಭದ್ರಕೋಟೆ. ಇಲ್ಲಿ ಚೋರ್ ಎನ್ನುವ ಶಬ್ದ ಅವಮಾನಕರ ಪದವಾಗಿದೆ. ನೀನು ಕಳ್ಳ ಎಂದು ಯಾರಾದರೂ ಯಾರಿಗಾದರೂ ಹೇಳಿದರೆ ಅದು ದೊಡ್ಡ ಅವಮಾನ ಎನ್ನುವ ದೃಷ್ಟಿಯಲ್ಲಿ ನೋಡಲಾಗತ್ತದೆ. ಯಾವಾಗ ಚೌಕಿದಾರ್ ಚೋರ್ ಎಂದು ಉಡುಪಿಯ ಯುವ ಕಾಂಗ್ರೆಸ್ಸಿಗ ಒಬ್ಬರು ತಮ್ಮ ಕಾರಿನ ಹಿಂದೆ ಅಂಟಿಸಿಕೊಂಡರೋ ಅವರ ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್, ಡಿಸೀಲ್ ಯಾರೂ ಹಾಕಿಸಬಾರದು ಎನ್ನುವ ಮೇಸೆಜ್ ಹರಿಯಲಾರಂಭಿಸಿತು. ಅವರು ತಮ್ಮ ವ್ಯಾಪಾರಕ್ಕೆ ಪೆಟ್ಟು ಬೀಳುತ್ತೆ ಎನ್ನುವ ಹೆದರಿಕೆಯಿಂದ ತೆಗೆಸಿಬಿಟ್ಟರು. ನಂತರ ಉಳಿದ ಯಾರೂ ಹಾಗೆ ಧೈರ್ಯ ಮಾಡಲಿಲ್ಲ!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search