• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮ್ಯೂಸಿಯಂನಲ್ಲಿ ಇಡಬಹುದಾದ ಪಾಲಿಕೆಯ ಇಂಜಿನಿಯರ್ ಗಳ ಮೆದುಳು!!

Hanumantha Kamath Posted On May 10, 2019


  • Share On Facebook
  • Tweet It

ಕೆಲವು ಕಾಮಗಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್ಸ್ ಗಳೇ ಮಾಡಿರಬೇಕು ಎಂದು ಎಷ್ಟು ದೂರದಿಂದ ಬೇಕಾದರೂ ಅಥವಾ ಎಷ್ಟು ಮೇಲೆಯಿಂದಲೂ ನೋಡಿ ಹೇಳಿಬಿಡಬಹುದು. ಅಷ್ಟು ಖರಾಬಾಗಿರುತ್ತದೆ. ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ ಎನ್ನುವ ಕಾರಣಕ್ಕೆ ಆದಷ್ಟು ರಸ್ತೆ ಅಗಲ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದು ನಗರದಲ್ಲಿ ವಾಸಿಸುವ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಾಗಿ ಸಾಕಷ್ಟು ಜನ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಮಂಗಳೂರಿನ ಶ್ವಾಸಕೋಶದಂತಿರುವ ಪ್ರಮುಖ ಭಾಗವೊಂದರಲ್ಲಿ ಇರುವ ಜಾಗವನ್ನು ಪಾಲಿಕೆಯ ಇಂಜಿನಿಯರ್ಸ್ ಹೇಗೆ ವೇಸ್ಟ್ ಮಾಡಿದ್ದಾರೆ ಎಂದರೆ ವೇಸ್ಟ್ ಆಗಿರುವ ಜಾಗದಲ್ಲಿ ಒಂದು ಮಳಿಗೆಯನ್ನು ಕಟ್ಟಬಹುದು. ಭವಿಷ್ಯದಲ್ಲಿ ಆ ಖಾಲಿ ಜಾಗದಲ್ಲಿ ಯಾವುದೋ ಮಾಲ್ ನ ವಾಹನಗಳು ನಿಲ್ಲಲಿವೆ. ನಾಲ್ಕು ಗೂಡಂಗಡಿಗಳು ತಲೆ ಎತ್ತಲಿವೆ. ಅದರೊಂದಿಗೆ ಆ ರಸ್ತೆ ಬ್ಲಾಕ್ ಆಗಲಿದೆ. ವಾಹನ ಚಾಲಕರು ತಮ್ಮ ಪಾಡಿಗೆ ತಾವು ಯಾರನ್ನೋ ಶಪಿಸಲಿದ್ದಾರೆ. ಕೆಲವರು ಇದೆಲ್ಲಾ ಶಾಸಕರ ತಪ್ಪು ಎನ್ನಬಹುದು. ಕೆಲವರು ಸಂಸದರ ತಪ್ಪು ಎನ್ನಬಹುದು. ಒಟ್ಟಿನಲ್ಲಿ ಪಾಲಿಕೆಯ ಇಂಜಿನಿಯರ್ಸ್ ಗಳು ಮಾಡುವ ಹುಚ್ಚಾಟಕ್ಕೆ ಜನರು ಯಾರನ್ನೋ ಬೈಯಲಿದ್ದಾರೆ.

ಹೌದು, ಜನರ ದೂರುಗಳು ಈಗಾಗಲೇ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಕಚೇರಿಗೆ ಬಂದು ತಲುಪಿದೆ. ನಾಗರಿಕರು ಶಾಸಕರಿಗೆ ಫೋನ್ ಮಾಡಿ ತೊಂದರೆಯನ್ನು ವಿವರಿಸುತ್ತಿದ್ದಾರೆ. ಇದರ ಗಂಭೀರತೆ ಜನರಿಗೆ ಹೆಚ್ಚು ತಟ್ಟುವ ಮೊದಲೇ ಶಾಸಕರು ಆ ಪ್ರದೇಶಕ್ಕೆ ಧಾವಿಸಿ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಷ್ಟಕ್ಕೂ ನಾನು ಹೇಳುತ್ತಿರುವ ಪ್ರದೇಶ ಯಾವುದು ಎಂದು ಗೊತ್ತಾಯಿತಾ? ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮೂಗಿನ ನೇರಕ್ಕೆ ಇರುವ ಗಾಂಧಿ ಪ್ರತಿಮೆಯ ಪಾಶ್ವದಲ್ಲಿರುವ ಚರಂಡಿ ಕಾಮಗಾರಿ. ನೀವು ಆ ಭಾಗಕ್ಕೆ ಇತ್ತೀಚೆಗೆ ಯಾವತ್ತಾದರೂ ಹೋಗಿದ್ದಿರಾದರೆ ನಿಮಗೆ ಅದು ಗಮನಕ್ಕೆ ಬಂದಿರಬಹುದು. ಲಾಲ್ ಭಾಗ್ ನಿಂದ ಸರಕಾರಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಮಹಿಳಾ ಹಾಸ್ಟೆಲ್ ನ ಗೇಟ್ ಎದುರಿಗೆ ಈ ಅವ್ಯವಸ್ಥೆ ಕಾಣಬಹುದು. ಪಾಲಿಕೆ ಅಲ್ಲೊಂದು ಉದ್ಯಾನವನ ಮಾಡುತ್ತಿದೆಯೇನೋ ಎಂದು ಅನಿಸುವಂತೆ ಸಾಕಷ್ಟು ಜಾಗ ಬಿಟ್ಟಿದೆ. ರಸ್ತೆಗೆ ತಾಗಿ ಅಂದಾಜು ಐದು ಮೀಟರ್ ಅಗಲದ ಚರಂಡಿ ನಿರ್ಮಾಣವಾಗಿದೆ. ಅದರ ಮೇಲೆ ಚಪ್ಪಡಿ ಎಳೆದರೆ ವಾಹನಗಳು ಅತ್ತ ಪಾರ್ಕ್ ಮಾಡಿಬಿಡಬಹುದು. ಇದರಿಂದ ಲೇಡಿಹಿಲ್ ನಿಂದ ಬಿಜೈ ಕಡೆಗೆ ಹೋಗುವವರಿಗೆ ಈ ಭಾಗದಲ್ಲಿ ಅದು ಸಿಂಗಲ್ ರೋಡ್ ಆಗಲಿದೆ. ನಟ್ಟ ನಡುಭಾಗದಲ್ಲಿ ಸಿಂಗಲ್ ರೋಡ್ ಆದರೆ ವಾಹನಗಳ ಗತಿ ಏನು?

ಇಂತಹ ಒಂದು ಕೆಟ್ಟ ಪ್ರಯತ್ನವನ್ನು ಆರ್ ಟಿಒ ವೃತ್ತದ ಬಳಿ ಮಾಡಲಾಗಿತ್ತು. ಅಲ್ಲಿ ಅಗ್ನಿಶಾಮಕ ದಳದ ಕಚೇರಿ ಕಡೆ ಹೋಗುವ ಫ್ರೀ ಲೆಪ್ಟ್ ತೆಗೆದು ಹಾಕಲಾಗಿತ್ತು. ಅದರಿಂದ ಆಗಿರುವ ತೊಂದರೆ ಒಂದೆರಡಲ್ಲ. ಆ ಸಮಸ್ಯೆ ಗೊತ್ತಿದ್ದು ಲಾಲ್ ಭಾಗ್ ನಲ್ಲಿ ಅದನ್ನು ಪುನರಾವರ್ತಿಸಲಾಗಿದೆ. ಪಾಲಿಕೆಯ ಇಂಜಿನಿಯರ್ಸ್ ಗಳ ತಲೆಯನ್ನು ಯಾವ ಮ್ಯೂಸಿಯಂನಲ್ಲಿ ಇಡಬಹುದು ಎಂದು ಯೋಚಿಸುತ್ತಿದ್ದೇನೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search