• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸುಳ್ಳು ಕೇಸು ರಾಘವೇಂದ್ರ!!

Hanumantha Kamath Posted On May 18, 2019
0


0
Shares
  • Share On Facebook
  • Tweet It

ಕಾಶೀಮಠದ ಪರಮಪೂಜ್ಯ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ಮೇಲೆ ಕಾಶೀಮಠದ ಪರಿತ್ಯಕ್ತ ಯತಿ ರಾಘವೇಂದ್ರರು ಹಾಕಿರುವ ಸುಳ್ಳು ದೂರನ್ನು ಕೇಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಜ್ಜನ ಬಂಧುಗಳಿಗೆ, ಅಪಾರ ಭಕ್ತಾದಿಗಳಿಗೆ ತುಂಬಾ ನೋವಾಗಿದೆ. ಪ್ರಾರಂಭದಲ್ಲಿಯೇ ಇದು ಅಪ್ಪಟ ಸುಳ್ಳು ದೂರು ಎನ್ನುವುದನ್ನು ನಾನು ಖಡಾಖಂಡಿತವಾಗಿ ಹೇಳಬಲ್ಲೆ.ಅದು ಹೇಗೆ ಎನ್ನುವುದನ್ನು ನಿನ್ನೆ ವಿವರಿಸಿದ್ದೇನೆ.

ಈಗ ಅದರ ಮುಂದಿನ ಹೆಜ್ಜೆಯಾಗಿ ನಾವು ಇದನ್ನು ಹೇಗೆ ಖಂಡಿಸುವುದು ಎನ್ನುವುದರ ಬಗ್ಗೆ ಚರ್ಚೆ ಆಗಲೇಬೇಕಿತ್ತು. ಅದು ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಕೇರಳ, ಮಹಾರಾಷ್ಟ್ರ ಸಹಿತ ಕರ್ನಾಟಕದ ವಿವಿಧ ಬಾಗಗಳಿಂದ ಭಕ್ತರು ಬಂದು ಈ ಧರ್ಮರಕ್ಷಾ ಸಭೆಯಲ್ಲಿ ಭಾಗವಹಿಸಿದರು. ನಾನು ಕೂಡ ಕಾಶೀಮಠದ ಭಕ್ತನಾಗಿ ಈ ಸಭೆಯಲ್ಲಿ ಭಾಗವಹಿಸಿದ್ದೇನೆ. ಆಲ್ ಇಂಡಿಯಾ ಟೆಂಪಲ್ ಎಸೋಸಿಯೇಶನ್ ಈ ಸಭೆಯ ಆಯೋಜನೆ ಮಾಡಿತ್ತು. ಏಕೆಂದರೆ ಜನರಿಗೆ ಸರಿಯಾದ ಮಾಹಿತಿ ಕೊಡಬೇಕಿತ್ತು. ನಮ್ಮ ಜಿಎಸ್ ಬಿ ಸಮಾಜದ ಜನರು ಪರಮಪೂಜ್ಯ ಕಾಶೀಮಠಾಧೀಶರ ಮೇಲೆ ಧರ್ಮದ್ರೋಹಿಗಳು ಹಾಕಿರುವ ಕೇಸಿನ ವಿಷಯ ಕೇಳಿ ತಮ್ಮ ಚಿತ್ತವನ್ನು ಚಂಚಲಗೊಳಿಸಬಾರದಾಗಿತ್ತು. ಅದಕ್ಕಾಗಿ ಸತ್ಯ ವಿವರವನ್ನು ಜನರ ಮುಂದೆ ಇಡಲಾಗಿದೆ. ಮೊದಲ ಆದ್ಯತೆ ಮುಂದೇನು ಎನ್ನುವುದೇ ಆಗಿತ್ತು. ಏಕೆಂದರೆ ಜಿಎಸ್ ಬಿಗಳು ಶಾಂತಿಪ್ರಿಯರು. ತಾಳ್ಮೆ ನಮ್ಮ ರಕ್ತದಲ್ಲಿಯೇ ಇದೆ. ಆದ್ದರಿಂದ ನಾವು ಎಲ್ಲವನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತೇವೆ. ಹಾಗಂತ ನಮಗೆ ಹೋರಾಟ ಮಾಡುವ ಶಕ್ತಿ ಇಲ್ಲ ಎಂದಲ್ಲ. ಆದರೆ ಆದಷ್ಟು ನೋವುಗಳನ್ನು ನುಂಗಿಕೊಳ್ಳುವ ತಾಕತ್ತು ಇದೆ. ಆದರೆ ಪ್ರತಿ ಬಾರಿ ಕಾಶೀಮಠಾಧೀಶರಾಗಿರುವ ಶ್ರೀಮದ್ ಸಂಯಂಮೀದ್ರ ತೀರ್ಥ ಸ್ವಾಮೀಜಿಯವರಿಗೆ ಅನಾವಶ್ಯಕವಾಗಿ ಹೀಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಒಂದು ಅಂತಿಮ ನಿರ್ಧಾರವನ್ನು ಕೈಗೊಳ್ಳಲೇಬೇಕಿತ್ತು.

Dharma Raksha Sabha

Dharma Raksha Sabha

ಆದರೆ ಹೇಗೆ?

ರಾಘವೇಂದ್ರ ನಮ್ಮ ಮೇಲೆ ಸುಳ್ಳು ಕೇಸು ಹಾಕಿದ ಹಾಗೆ ನಾವು ಕೂಡ ಆ ವ್ಯಕ್ತಿಯ ಮೇಲೆ ಸುಳ್ಳು ಕೇಸು ಹಾಕುವುದಾ? ನಮಗೆ ರಾಘವೇಂದ್ರರ ಮೇಲೆ ಕೇಸು ಹಾಕಲು ಯಾವುದೇ ಸುಳ್ಳು ಸಂಗತಿಯನ್ನು ಹುಡುಕುವ ಅವಶ್ಯಕತೆ ಇಲ್ಲ. ಯಾಕೆಂದರೆ ಆ ಮನುಷ್ಯನ ಮೇಲೆ ಕೇಸು ಹಾಕುವುದೇ ಆದರೆ ಒಂದು ಫೈಲ್ ಗೆ ಆಗುವಷ್ಟು ವಿಷಯಗಳು ಇವೆ. ಕಾಶೀಮಠಕ್ಕೆ ಸಂಬಂಧಪಟ್ಟ ಬಂಗಾರ, ಒಡವೆಗಳನ್ನು ಸಂಪೂರ್ಣವಾಗಿ ಹಿಂತಿರುಗಿಸಬೇಕು ಎಂದು ನ್ಯಾಯಾಲಯ ಹೇಳಿದ ಮೇಲೆಯೂ ಅದನ್ನು ಮುಚ್ಚಿಟ್ಟುಕೊಂಡಿರುವ ವ್ಯಕ್ತಿಗೆ ನೈತಿಕತೆ ಇದೆಯಾ? ಇನ್ನು ಮಠದಿಂದ ಹೊರಗೆ ಹಾಕಿದ ಮೇಲೆಯೂ ಹಿರಿಯ ಸ್ವಾಮೀಜಿಗಳಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಫೋಟೋ ಹಾಕಿ, ಮಠದ ಲಾಂಛನ ಬಳಸಿ, ಬ್ಯಾಂಕ್ ಅಕೌಂಟ್ ತೆರೆದು ಟ್ರಸ್ಟ್ ಸ್ಥಾಪಿಸಿ ಕುಳಿತಿರುವ ವ್ಯಕ್ತಿಗೆ ಹಾಗೆ ಮಾಡಬಾರದು ಎಂದು ಹೇಳಿದ ಮೇಲೆಯೂ ಇನ್ನು ಮುಂದುವರೆಸಿದರೆ ಯಾವ ಭಾಷೆ ಇದೆ ಎಂದು ಹೇಳುವುದು?

ನಾನು ಹೇಳುವುದು ಏನೆಂದರೆ…

ನಾವು ನಮ್ಮ ಸ್ವಾಮೀಜಿಗಳಿಗೆ ಸುಳ್ಳು ಕೇಸಿನ ಮೂಲಕ ಮಾನಸಿಕ ಕಿರಿಕಿರಿ ಮಾಡುವವರಿಗೆ ತಕ್ಕಪಾಠ ಕಲಿಸಬೇಕು. ಈಗ ಏನಾಗಿದೆ ಎಂದರೆ ರಾಘವೇಂದ್ರ ಸುಳ್ಳು ಕೇಸು ಹಾಕಿ ನಮ್ಮ ಚಿತ್ತಕ್ಕೆ ದಾಳಿ ಇಟ್ಟಾಗ ನಾವು ಒಟ್ಟು ಆಗಿ ಹೀಗೆ ಸಭೆ ಸೇರುವುದು ನಾಲ್ಕು ಮಾತುಗಳನ್ನು ಆಡುವುದು ನಂತರ ಅದನ್ನು ಇಲ್ಲಿಗೆ ಬಿಡುವುದು ಹೀಗೆ ಮಾಡಿರುವುದರಿಂದ ಈ ಸಮಸ್ಯೆ ಪರಿಹಾರವಾಗಲ್ಲ. ಅದಕ್ಕೆ ಒಂದೇ ದಾರಿ. ಒಂದು ಧೃಡ ನಿರ್ಧಾರ ತೆಗೆದುಕೊಂಡು ಕಾನೂನಾತ್ಮಕವಾಗಿ ಹೋರಾಡಲೇಬೇಕಿದೆ. ಅದು ಆಗದಿದ್ದರೆ ಈ ವೇದಿಕೆಯಲ್ಲಿರುವವರು ಜವಾಬ್ದಾರಿ ಎಂದು ಹೇಳಿ ಮೈಕ್ ಕೆಳಗಿಟ್ಟೆ. ನಾನು ಮಾತನಾಡಿದ ವಿಡಿಯೋ ಕ್ಲಿಪ್ ಅನ್ನು ಯಾರೋ ವೈರಲ್ ಮಾಡಿದ್ದಾರೆ. ತುಂಬಾ ಜನ ನೋಡಿ ಚೆನ್ನಾಗಿ ಮಾತನಾಡಿದ್ದಿರಿ ಎಂದು ಕಮೆಂಟ್ ಮಾಡಿದ್ದಾರೆ. ಚೆನ್ನಾಗಿ ಮಾತನಾಡುವುದು ಮುಖ್ಯವಲ್ಲ. ಸಮಸ್ಯೆ ಪರಿಹಾರವಾಗುವುದು ಮುಖ್ಯ. ಖಡಾಂಡಿತವಾಗಿ ಮಾತನಾಡದಿದ್ದರೆ ಯಾರೂ ಬಗ್ಗುವುದಿಲ್ಲ. ಅದಕ್ಕೆ ಧೃಡವಾದ ಸ್ವರದಲ್ಲಿ ಹೇಳಿದೆ, ನನ್ನದೇ ಶೈಲಿಯಲ್ಲಿ, ಇಷ್ಟವಾದವರಿಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಅನಿಸಿದರೆ ಸಾಕು. ಪ್ರಯತ್ನ ಸಾರ್ಥಕ!

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Hanumantha Kamath January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Hanumantha Kamath January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 3
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..

  • Privacy Policy
  • Contact
© Tulunadu Infomedia.

Press enter/return to begin your search