• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸುಳ್ಳು ಕೇಸು ರಾಘವೇಂದ್ರ!!

Hanumantha Kamath Posted On May 18, 2019
0


0
Shares
  • Share On Facebook
  • Tweet It

ಕಾಶೀಮಠದ ಪರಮಪೂಜ್ಯ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ಮೇಲೆ ಕಾಶೀಮಠದ ಪರಿತ್ಯಕ್ತ ಯತಿ ರಾಘವೇಂದ್ರರು ಹಾಕಿರುವ ಸುಳ್ಳು ದೂರನ್ನು ಕೇಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಜ್ಜನ ಬಂಧುಗಳಿಗೆ, ಅಪಾರ ಭಕ್ತಾದಿಗಳಿಗೆ ತುಂಬಾ ನೋವಾಗಿದೆ. ಪ್ರಾರಂಭದಲ್ಲಿಯೇ ಇದು ಅಪ್ಪಟ ಸುಳ್ಳು ದೂರು ಎನ್ನುವುದನ್ನು ನಾನು ಖಡಾಖಂಡಿತವಾಗಿ ಹೇಳಬಲ್ಲೆ.ಅದು ಹೇಗೆ ಎನ್ನುವುದನ್ನು ನಿನ್ನೆ ವಿವರಿಸಿದ್ದೇನೆ.

ಈಗ ಅದರ ಮುಂದಿನ ಹೆಜ್ಜೆಯಾಗಿ ನಾವು ಇದನ್ನು ಹೇಗೆ ಖಂಡಿಸುವುದು ಎನ್ನುವುದರ ಬಗ್ಗೆ ಚರ್ಚೆ ಆಗಲೇಬೇಕಿತ್ತು. ಅದು ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಕೇರಳ, ಮಹಾರಾಷ್ಟ್ರ ಸಹಿತ ಕರ್ನಾಟಕದ ವಿವಿಧ ಬಾಗಗಳಿಂದ ಭಕ್ತರು ಬಂದು ಈ ಧರ್ಮರಕ್ಷಾ ಸಭೆಯಲ್ಲಿ ಭಾಗವಹಿಸಿದರು. ನಾನು ಕೂಡ ಕಾಶೀಮಠದ ಭಕ್ತನಾಗಿ ಈ ಸಭೆಯಲ್ಲಿ ಭಾಗವಹಿಸಿದ್ದೇನೆ. ಆಲ್ ಇಂಡಿಯಾ ಟೆಂಪಲ್ ಎಸೋಸಿಯೇಶನ್ ಈ ಸಭೆಯ ಆಯೋಜನೆ ಮಾಡಿತ್ತು. ಏಕೆಂದರೆ ಜನರಿಗೆ ಸರಿಯಾದ ಮಾಹಿತಿ ಕೊಡಬೇಕಿತ್ತು. ನಮ್ಮ ಜಿಎಸ್ ಬಿ ಸಮಾಜದ ಜನರು ಪರಮಪೂಜ್ಯ ಕಾಶೀಮಠಾಧೀಶರ ಮೇಲೆ ಧರ್ಮದ್ರೋಹಿಗಳು ಹಾಕಿರುವ ಕೇಸಿನ ವಿಷಯ ಕೇಳಿ ತಮ್ಮ ಚಿತ್ತವನ್ನು ಚಂಚಲಗೊಳಿಸಬಾರದಾಗಿತ್ತು. ಅದಕ್ಕಾಗಿ ಸತ್ಯ ವಿವರವನ್ನು ಜನರ ಮುಂದೆ ಇಡಲಾಗಿದೆ. ಮೊದಲ ಆದ್ಯತೆ ಮುಂದೇನು ಎನ್ನುವುದೇ ಆಗಿತ್ತು. ಏಕೆಂದರೆ ಜಿಎಸ್ ಬಿಗಳು ಶಾಂತಿಪ್ರಿಯರು. ತಾಳ್ಮೆ ನಮ್ಮ ರಕ್ತದಲ್ಲಿಯೇ ಇದೆ. ಆದ್ದರಿಂದ ನಾವು ಎಲ್ಲವನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತೇವೆ. ಹಾಗಂತ ನಮಗೆ ಹೋರಾಟ ಮಾಡುವ ಶಕ್ತಿ ಇಲ್ಲ ಎಂದಲ್ಲ. ಆದರೆ ಆದಷ್ಟು ನೋವುಗಳನ್ನು ನುಂಗಿಕೊಳ್ಳುವ ತಾಕತ್ತು ಇದೆ. ಆದರೆ ಪ್ರತಿ ಬಾರಿ ಕಾಶೀಮಠಾಧೀಶರಾಗಿರುವ ಶ್ರೀಮದ್ ಸಂಯಂಮೀದ್ರ ತೀರ್ಥ ಸ್ವಾಮೀಜಿಯವರಿಗೆ ಅನಾವಶ್ಯಕವಾಗಿ ಹೀಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಒಂದು ಅಂತಿಮ ನಿರ್ಧಾರವನ್ನು ಕೈಗೊಳ್ಳಲೇಬೇಕಿತ್ತು.

Dharma Raksha Sabha

Dharma Raksha Sabha

ಆದರೆ ಹೇಗೆ?

ರಾಘವೇಂದ್ರ ನಮ್ಮ ಮೇಲೆ ಸುಳ್ಳು ಕೇಸು ಹಾಕಿದ ಹಾಗೆ ನಾವು ಕೂಡ ಆ ವ್ಯಕ್ತಿಯ ಮೇಲೆ ಸುಳ್ಳು ಕೇಸು ಹಾಕುವುದಾ? ನಮಗೆ ರಾಘವೇಂದ್ರರ ಮೇಲೆ ಕೇಸು ಹಾಕಲು ಯಾವುದೇ ಸುಳ್ಳು ಸಂಗತಿಯನ್ನು ಹುಡುಕುವ ಅವಶ್ಯಕತೆ ಇಲ್ಲ. ಯಾಕೆಂದರೆ ಆ ಮನುಷ್ಯನ ಮೇಲೆ ಕೇಸು ಹಾಕುವುದೇ ಆದರೆ ಒಂದು ಫೈಲ್ ಗೆ ಆಗುವಷ್ಟು ವಿಷಯಗಳು ಇವೆ. ಕಾಶೀಮಠಕ್ಕೆ ಸಂಬಂಧಪಟ್ಟ ಬಂಗಾರ, ಒಡವೆಗಳನ್ನು ಸಂಪೂರ್ಣವಾಗಿ ಹಿಂತಿರುಗಿಸಬೇಕು ಎಂದು ನ್ಯಾಯಾಲಯ ಹೇಳಿದ ಮೇಲೆಯೂ ಅದನ್ನು ಮುಚ್ಚಿಟ್ಟುಕೊಂಡಿರುವ ವ್ಯಕ್ತಿಗೆ ನೈತಿಕತೆ ಇದೆಯಾ? ಇನ್ನು ಮಠದಿಂದ ಹೊರಗೆ ಹಾಕಿದ ಮೇಲೆಯೂ ಹಿರಿಯ ಸ್ವಾಮೀಜಿಗಳಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಫೋಟೋ ಹಾಕಿ, ಮಠದ ಲಾಂಛನ ಬಳಸಿ, ಬ್ಯಾಂಕ್ ಅಕೌಂಟ್ ತೆರೆದು ಟ್ರಸ್ಟ್ ಸ್ಥಾಪಿಸಿ ಕುಳಿತಿರುವ ವ್ಯಕ್ತಿಗೆ ಹಾಗೆ ಮಾಡಬಾರದು ಎಂದು ಹೇಳಿದ ಮೇಲೆಯೂ ಇನ್ನು ಮುಂದುವರೆಸಿದರೆ ಯಾವ ಭಾಷೆ ಇದೆ ಎಂದು ಹೇಳುವುದು?

ನಾನು ಹೇಳುವುದು ಏನೆಂದರೆ…

ನಾವು ನಮ್ಮ ಸ್ವಾಮೀಜಿಗಳಿಗೆ ಸುಳ್ಳು ಕೇಸಿನ ಮೂಲಕ ಮಾನಸಿಕ ಕಿರಿಕಿರಿ ಮಾಡುವವರಿಗೆ ತಕ್ಕಪಾಠ ಕಲಿಸಬೇಕು. ಈಗ ಏನಾಗಿದೆ ಎಂದರೆ ರಾಘವೇಂದ್ರ ಸುಳ್ಳು ಕೇಸು ಹಾಕಿ ನಮ್ಮ ಚಿತ್ತಕ್ಕೆ ದಾಳಿ ಇಟ್ಟಾಗ ನಾವು ಒಟ್ಟು ಆಗಿ ಹೀಗೆ ಸಭೆ ಸೇರುವುದು ನಾಲ್ಕು ಮಾತುಗಳನ್ನು ಆಡುವುದು ನಂತರ ಅದನ್ನು ಇಲ್ಲಿಗೆ ಬಿಡುವುದು ಹೀಗೆ ಮಾಡಿರುವುದರಿಂದ ಈ ಸಮಸ್ಯೆ ಪರಿಹಾರವಾಗಲ್ಲ. ಅದಕ್ಕೆ ಒಂದೇ ದಾರಿ. ಒಂದು ಧೃಡ ನಿರ್ಧಾರ ತೆಗೆದುಕೊಂಡು ಕಾನೂನಾತ್ಮಕವಾಗಿ ಹೋರಾಡಲೇಬೇಕಿದೆ. ಅದು ಆಗದಿದ್ದರೆ ಈ ವೇದಿಕೆಯಲ್ಲಿರುವವರು ಜವಾಬ್ದಾರಿ ಎಂದು ಹೇಳಿ ಮೈಕ್ ಕೆಳಗಿಟ್ಟೆ. ನಾನು ಮಾತನಾಡಿದ ವಿಡಿಯೋ ಕ್ಲಿಪ್ ಅನ್ನು ಯಾರೋ ವೈರಲ್ ಮಾಡಿದ್ದಾರೆ. ತುಂಬಾ ಜನ ನೋಡಿ ಚೆನ್ನಾಗಿ ಮಾತನಾಡಿದ್ದಿರಿ ಎಂದು ಕಮೆಂಟ್ ಮಾಡಿದ್ದಾರೆ. ಚೆನ್ನಾಗಿ ಮಾತನಾಡುವುದು ಮುಖ್ಯವಲ್ಲ. ಸಮಸ್ಯೆ ಪರಿಹಾರವಾಗುವುದು ಮುಖ್ಯ. ಖಡಾಂಡಿತವಾಗಿ ಮಾತನಾಡದಿದ್ದರೆ ಯಾರೂ ಬಗ್ಗುವುದಿಲ್ಲ. ಅದಕ್ಕೆ ಧೃಡವಾದ ಸ್ವರದಲ್ಲಿ ಹೇಳಿದೆ, ನನ್ನದೇ ಶೈಲಿಯಲ್ಲಿ, ಇಷ್ಟವಾದವರಿಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಅನಿಸಿದರೆ ಸಾಕು. ಪ್ರಯತ್ನ ಸಾರ್ಥಕ!

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search