• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೇಶಪಾಂಡೆ ನಾಟಕದ ಅಂಕದ ಪರದೆ ಎತ್ತಲು ನಿಂತವರು ಖಾದರ್, ಐವನ್!!

Tulunadu News Posted On June 19, 2019


  • Share On Facebook
  • Tweet It

ಒಂದೋ ಅವರೇ ಸರಿ ಮಾಡಬೇಕು ಅಥವಾ ಸರಿ ಮಾಡುವವರ ಬಳಿ ಕೇಳಬೇಕು. ಎರಡೂ ಇಲ್ಲದಿದ್ದರೆ ಜನ ಅನುಭವಿಸುವುದು ತಪ್ಪುವುದಿಲ್ಲ. ಸಾಮಾನ್ಯವಾಗಿ ನಮ್ಮ ರಾಜ್ಯದ ಸಚಿವರುಗಳು ಯಾವುದಾದರೂ ಜಿಲ್ಲೆಗೆ ಪ್ರಗತಿ(!)ಪರಿಶೀಲನಾ ಸಭೆ ಎಂದು ಹೋಗುತ್ತಾರೆ. ಅಲ್ಲಿ ಅಧಿಕಾರಿಗಳು ಕೊಟ್ಟಿರುವುದನ್ನು ನೋಡುತ್ತಾರೆ. ಅದನ್ನೇ ಓದುತ್ತಾರೆ. ಅದು ಮರುದಿನದ ಪತ್ರಿಕೆಗಳಲ್ಲಿ ಬರುತ್ತದೆ. ಸಚಿವರಿಗೆ ಡಿಎ, ಟಿಎ ಸಿಗುತ್ತದೆ. ಆ ಊರಿನ ಅವರ ಪಕ್ಷದವರು ಕರೆದು ಮಧ್ಯಾಹ್ನ ಭರ್ಜರಿ ಮೀನು ತಿನ್ನುವವರಾದರೆ ತರಹೇವಾರಿ ಮೀನುಗಳನ್ನು ತಂದು ಗುಡ್ಡೆ ಹಾಕಿ ತಿನ್ನಿಸುತ್ತಾರೆ. ತಮ್ಮ ಯಾವುದಾದರೂ ಕಡತಗಳಿಗೆ ಸಹಿ ಹಾಕಿಸುತ್ತಾರೆ. ಅದೇ ಕ್ಷೇತ್ರದಲ್ಲಿ ರಾತ್ರಿ ಸಚಿವರು ಉಳಿಯುವುದಾದರೆ ಇನ್ನೇನೋ ರೆಡಿ ಮಾಡಿರುತ್ತಾರೆ. ಸಚಿವರು ಅಲ್ಲಿರುವ ತಮ್ಮ ಪಕ್ಷದ ಶಾಸಕರ(ಇದ್ದರೆ) ಜೊತೆ ಹರಟೆ ಹೊಡೆದು ಟೈಂಪಾಸ್ ಮಾಡಿ ಹೋಗುತ್ತಾರೆ. ಮಂಗಳವಾರ ಕಂದಾಯ ಸಚಿವ ಆರ್ ವಿ ದೇಶಪಾಂಡೆಯವರು ಮಂಗಳೂರಿಗೆ ಬರುವಾಗ ಅದೇ ಅಧಿಕಾರಿಗಳು ಕೊಡುವ ಸಣಕಲು, ಸುಳ್ಳು, ಪೊಳ್ಳು ಅಂಕಿಸಂಖ್ಯೆಗಳನ್ನು ಓದುತ್ತಾರೆ ಎನ್ನುವುದು ನನಗೆ ಗೊತ್ತಿತ್ತು. ಅದಕ್ಕೆ ನಾನೊಂದು ಪ್ರತಿ ಬಾಣವನ್ನು ತಯಾರು ಮಾಡಿಟ್ಟುಕೊಂಡಿದ್ದೆ.

ದೇಶಪಾಂಡೆಯವರು ತಾಳ್ಮೆ ಕಳೆದುಕೊಂಡರೆ…

ದೇಶಪಾಂಡೆಯವರು ಅಧಿಕಾರಿಗಳು ಕೊಟ್ಟ ಸುಳ್ಳು ಅಂಕಿಅಂಶ ಓದಿದ ಕೂಡಲೇ ಅದು ತಪ್ಪು ಲೆಕ್ಕ ಎಂದು ಸಾಬೀತುಪಡಿಸುವುದು ನನ್ನ ಪ್ಲಾನ್ ಆಗಿತ್ತು. ಆದರೆ ಆರ್ ವಿ ದೇಶಪಾಡೆ ರಾಜಕೀಯದ ಹಳೆಹುಲಿ. ಅವರು ಕೊನೆಯ ಕ್ಷಣದಲ್ಲಿ ಸಾರ್ವಜನಿಕರೊಂದಿಗಿನ ಸಂವಾದವನ್ನು ರದ್ದುಗೊಳಿಸಿದರು. ಸುಮ್ಮನೆ ಮರ್ಯಾದೆ ಕಳೆದುಕೊಳ್ಳುವುದು ಯಾಕೆ? ಮೊದಲೇ ಮಾಧ್ಯಮದವರು ಇಂತಹ ವಿಷಯಗಳಿಗೆ ಕಾಯುತ್ತಿರುತ್ತಾರೆ. ಹಾಗಿರುವಾಗ ಸಾರ್ವಜನಿಕರಿಗೆ ಮಾತಿಗೆ ಅವಕಾಶ ಕೊಟ್ಟರೆ ಚಪ್ಪಲಿ ಕೊಟ್ಟು ಪೆಟ್ಟು ತಿನ್ನುವ ರಿಸ್ಕ್ ಬೇಡಾ ಎಂದು “ನಿಮ್ಮ ನಿಮ್ಮ ಮನವಿ ಪತ್ರಗಳನ್ನು ಕೊಟ್ಟು ಹೋಗಿ” ಎಂದು ಹೇಳಿಬಿಟ್ಟರು. ಅದನ್ನೇ ಕಾಯುತ್ತಿದ್ದ ಖಾದರ್ ಸಾಹೇಬ್ರು ಎಲ್ಲರ ಲಿಖಿತ ಪತ್ರಗಳನ್ನು ತೆಗೆದುಕೊಳ್ಳಲು ನಿಂತುಬಿಟ್ಟರು. ನನಗೆ ಗೊತ್ತಿದೆ, ಖಾದರ್ ಕೈಯಲ್ಲಿ ಕೊಡುವುದೂ ಒಂದೇ, ಹೊರಗೆ ಜಿಲ್ಲಾಧಿಕಾರಿ ಕಚೇರಿಯ ಕಸದ ಡಬ್ಬಿಯಲ್ಲಿ ಹಾಕುವುದು ಒಂದೇ. ತಕ್ಷಣ ನಾನು ಖಾದರ್ ಸನಿಹದಿಂದ ತಪ್ಪಿಸಿಕೊಂಡು ದೇಶಪಾಂಡೆ ಬಳಿಗೆ ಹೋದೆ. ಸ್ವಭಾವತ: ದೇಶಪಾಂಡೆ ಕೆಟ್ಟವರಲ್ಲ. ಒಂದು ವೇಳೆ ಕುಮಾರಸ್ವಾಮಿಯವರನ್ನು ಬದಲಿಸುವುದಾದರೆ ದೇಶಪಾಂಡೆಯನ್ನು ಮುಖ್ಯಮಂತ್ರಿ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ ಎನ್ನುವ ವದಂತಿ ಇದೆ. ಯಾಕೆಂದರೆ ಮೂಲತ: ಜೆಡಿಎಸ್ ನ ದೇಶಪಾಂಡೆ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾದರೆ ಎರಡೂ ಕಡೆ ಬ್ಯಾಲೆನ್ಸ್ ಇರುತ್ತದೆ ಎಂದು ದೇವೇಗೌಡರಿಗೆ ಅನಿಸಿರಬಹುದು. ಆದರೆ ರಾಜಕೀಯವನ್ನು ತುಂಬಾ ಹತ್ತಿರದಿಂದ ನೋಡಿದ ಪರಿಣಾಮವೋ, ವಯಸ್ಸಿನ ಕಾರಣವೋ ಅಥವಾ ಇಂತಹ ಸಭೆಗಳು ಕಾಟಾಚಾರಕ್ಕೆ ನಡೆಯುವುದು ಎಂದು ಮೊದಲೇ ಗೊತ್ತಿದ್ದದ್ದರಿಂದ ನಾನು ಮನವಿ ಪತ್ರ ಹಿಡಿದು ಅವರ ಬಳಿ ಹೋಗಿ ವಿವರಿಸುತ್ತಿದ್ದಂತೆ ದೇಶಪಾಂಡೆ ತಾಳ್ಮೆ ಕಳೆದುಕೊಂಡರು. ತಮ್ಮ ಆಪ್ತ ಸಹಾಯಕರ ಬಳಿ ಪತ್ರ ಕೊಟ್ಟು ಹೊರಡಿ ಎಂದು ಸೂಚ್ಯವಾಗಿ ಹೇಳಿಬಿಟ್ಟರು. ದೇಶಪಾಂಡೆಯವರಿಗೆ ಇದು ಹತ್ತರಲ್ಲಿ ಹನ್ನೊಂದು ಎನ್ನುವಂತಹ ಸಭೆ ಇರಬಹುದು. ಆದರೆ ನನ್ನ ಊರಿನವರಿಗೆ ಪಾಪರ್ಟಿ ಕಾರ್ಡ್ ಸಮಸ್ಯೆಯೇ ದೊಡ್ಡದು. ಅಷ್ಟಕ್ಕೂ ನಾನು ನನಗಾಗಿ ದೇಶಪಾಂಡೆಯವರ ಬಳಿ ಹೋಗುವುದಾ? ಎಲ್ಲರಂತೆ ನಾನು ಕೂಡ ಬೇರೆಯವರಿಗೆ ಏನು ಆಗುತ್ತದೆಯೋ ಅದೇ ನನಗೆ ಆಗುತ್ತದೆ ಎಂದುಕೊಂಡು ಸುಮ್ಮನೆ ಕೂರಬಹುದಿತ್ತು. ಆದರೆ ಕಂದಾಯ ಸಚಿವ ದೇಶಪಾಂಡೆಯವರು ಆಡಿದ ರೀತಿ ನೋಡಿ ನನಗೆ ಒಂದು ಸ್ಪಷ್ಟವಾಯಿತು, ಇದು ಅಪ್ಪಟ ನಾಟಕ.

ಸಮಸ್ಯೆ ಕಂಟಿನ್ಯೂ…

ಈ ನಾಟಕದ ಅಂಕದ ಪರದೆ ಎತ್ತಲು ಒಂದು ಕಡೆ ಖಾದರ್ ನಿಂತಿದ್ದರೆ ಮತ್ತೊಂದು ಕಡೆ ದೇಶಪಾಂಡೆಯ ಗರಡಿಯಲ್ಲಿ ಪಳಗಿದ ದೇಶಪಾಂಡೆಯವರ ಮಾತೃಪಕ್ಷದ ಐವನ್ ಡಿಸೋಜಾ ನಿಂತಿದ್ದರು. ಇಬ್ಬರೂ ಪೈಪೋಟಿಗೆ ಬಿದ್ದವರಂತೆ ದೇಶಪಾಂಡೆಯವರನ್ನು ತಮ್ಮ ಸೋದರಸಂಬಂಧಿಯೇ ಎನ್ನುವಂತೆ ರಕ್ಷಿಸುತ್ತಿದ್ದರು. ಕೊನೆಗೂ ಯಾವುದೇ ಪರಿಹಾರ ಕಾಣದೇ ಪ್ರಾಪರ್ಟಿ ಕಾರ್ಡ್ ಸಮಸ್ಯೆ ಹಾಗೆಯೇ ಉಳಿಯಿತು. ದೇಶಪಾಂಡೆಯವರು ಮುಂದಿನ ಊರಿಗೆ ಹೋದರು. ಖಾದರ್, ಐವನ್ ರಂಗಸ್ಥಳದಲ್ಲಿ ನಲಿದು ಸುಸ್ತಾದವರಂತೆ ವೇಷ ಕಳಚಲು ತಮ್ಮ ಚೇಂಬರ್ ಗಳಿಗೆ ಹಿಂತಿರುಗಿದರು. ಜಿಲ್ಲೆಯ ಏಳು ಜನ ಶಾಸಕರು ಬಂದ ದಾರಿಗೆ ಸುಂಕವಿಲ್ಲದೇ ವಾಪಾಸಾದರು. ಮಿನಿ ವಿಧಾನಸೌಧದ ಹೊರಗೆ ಬ್ರೋಕರ್ ಗಳು, ಒಳಗೆ ಸರ್ವೇಯರ್ ಗಳು ವೇಷ ಹಾಕಿ ನಾಳಿನ ಆಟಕ್ಕೆ ರೆಡಿಯಾಗುತ್ತಿದ್ದರು!

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search