• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಖಾದರ್ ಜ್ಞಾನೋದಯವಾಗಲು ಶ್ರೀಮಂತನೊಬ್ಬ ನೇತ್ರಾವತಿಗೆ ಹಾರಬೇಕಾಯಿತು!!

Hanumantha Kamath Posted On August 5, 2019


  • Share On Facebook
  • Tweet It

ಯುಟಿ ಖಾದರ್. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಮಂಗಳೂರು ಅಂದರೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರು. ಅವರು ನೇತ್ರಾವತಿ ಸೇತುವೆಯನ್ನು ಹುಟ್ಟಿನಿಂದ ನೋಡಿಕೊಂಡು ಬಂದವರು. ಬಹುಶ: ಅಂಬೆಗಾಲಿಡುವಾಗಿನಿಂದ ಹಿಡಿದು ಒಂದು ಸರಕಾರದಲ್ಲಿ ಪ್ರಭಾವಿ ವ್ಯಕ್ತಿಯಾಗುವ ತನಕ ಅಸಂಖ್ಯಾತ ಬಾರಿ ಖಾದರ್ ನೇತ್ರಾವತಿ ಸೇತುವೆಯ ಮೇಲೆ ಹೋಗಿರಬಹುದು. ನೇತ್ರಾವತಿ ಸೇತುವೆಯ ಇಂಚಿಂಚಿನ ಪರಿಚಯ ಅವರಿಗೆ ಇರಬಹುದು. ಅವರ ವಿಧಾನಸಭಾ ಕ್ಷೇತ್ರದಿಂದ ಮಂಗಳೂರಿನ ಸರ್ಕೂಟ್ ಹೌಸ್ ಅಥವಾ ವಿಮಾನ ನಿಲ್ದಾಣಕ್ಕೆ ಬರಬೇಕಾದರೆ ಈ ಸೇತುವೆಯೊಂದೇ ಅವರಿಗೆ ಸುಲಭದ ದಾರಿ. ಅಂತಹ ಸೇತುವೆಯಿಂದ ಖಾದರ್ ಅವರಿಗೆ ಗೊತ್ತಿರುವ ಹಾಗೆ ನೂರಾರು ಜನ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅಂತವರ ಹೆಣವನ್ನು ನೋಡಲು ಖಾದರ್ ಅವರೇ ಹೋಗಿರಬಹುದು. ತಮ್ಮ ಕ್ಷೇತ್ರದ ವ್ಯಕ್ತಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ಹೋಗಿ ಸಮಾಧಾನ ಹೇಳಿರಬಹುದು. ಆದ್ದರಿಂದ ಇಲ್ಲಿಯವರೆಗೆ ನೇತ್ರಾವತಿ ಸೇತುವೆ ಖಾದರ್ ಮನಸ್ಸಿನಲ್ಲಿ ಗೌಣವಾಗಿತ್ತು.

ಈಗ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಖಾದರ್ ಸಾಹೇಬ್ರಿಗೆ ಜ್ಞಾನೋದಯವಾಗಿದೆ. ನೇತ್ರಾವತಿ ಸೇತುವೆಯನ್ನು ಮತ್ತೊಮ್ಮೆ ಕಣ್ಣಿಟ್ಟು ನೋಡಿದ್ದಾರೆ. ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆಯ ಮೇಲಿನಿಂದ ಹಾರಲು ಸಾಕಷ್ಟು ಅವಕಾಶ ಇರುವುದೇ ಕಾರಣ ಎನ್ನುವುದು ಖಾದರ್ ಅವರಿಗೆ ಗೊತ್ತಾಗಿದೆ. ಅದಕ್ಕೆ ಅವರು ಒಂದು ಐಡಿಯಾ ನೀಡಿದ್ದಾರೆ. ಸೇತುವೆಯ ಎರಡೂ ಬದಿಗಳಲ್ಲಿ ಕನಿಷ್ಟ ಏಳು ಅಡಿ ಉದ್ದದ ಫೈಬರ್ ವಾಲ್ ಅಳವಡಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಮೂಲಕ ಯಾರು ಕೂಡ ಸೇತುವೆಯ ಮೇಲಿನಿಂದ ಹಾರದಂತೆ ಫೈಬರ್ ವಾಲ್ ಅಡ್ಡವಾಗಲಿದೆ. ಆದರೆ ಸೇತುವೆಯಿಂದ ನದಿಯ ಸೌಂದರ್ಯವನ್ನು ನೋಡಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಒಬ್ಬ ಶ್ರೀಮಂತ ಉದ್ಯಮಿಯ ಆತ್ಮಹತ್ಯೆಯಿಂದ ಯುಟಿ ಖಾದರ್ ಅವರ ಕಣ್ಣು ತೆರೆದಿದೆ.

ನಾನು ಸಿದ್ಧಾರ್ಥ ಅವರು ನೀರಿಗೆ ಹಾರಿದಾಗ ಜಿಲ್ಲಾಡಳಿತ ಹುಡುಕಲು ಖರ್ಚು ಮಾಡಿದ ಹಣದ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಶ್ರೀಮಂತರು ಸತ್ತಾಗ ಮಾತ್ರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಷ್ಟು ಶ್ರಮ ಹಾಕುತ್ತದೆ. ಪಾಪದವರು ಸತ್ತರೆ ಫೋಟೋ ಕೊಟ್ಟು ಹೋಗಿ ನಾಳೆ ಹೆಣ ಮೇಲೆ ಬಂದರೆ ಹೇಳಿ ಕಳುಹಿಸುತ್ತೇವೆ ಎನ್ನಲಾಗುತ್ತದೆ. ಅದು ಬೇರೆ ವಿಷಯ. ಆದರೆ ಫೈಬರ್ ಬೇಲಿ ಹಾಕುವ ಇವರಿಗೆ ಹೊಳೆಯಲು ಉದ್ಯಮಿಗಳು ಸಾಯಬೇಕಾಯಿತು. ಇನ್ನು ನೇತ್ರಾವತಿ ಸೇತುವೆಗೆ ಬೇಲಿ ಹಾಕಿದರೆ ಸಾಕಾ? ಉಳಿದ ನದಿಗಳ ಕಥೆ ಏನು? ಹೇಗೂ ತಮ್ಮ ಸರಕಾರ ಇಲ್ಲ. ಮುಂದಿನ ಉಸ್ತುವಾರಿ ಸಚಿವರಿಗೆ ಈಗಲೇ ಖಾದರ್ ಒಂದು ಯೋಜನೆ ಕೊಟ್ಟ ಹಾಗೆ ಇದೆ. ಫೈಬರ್ ಬೇಲಿ ಆದರೆ ನನ್ನ ಯೋಜನೆ ಎನ್ನುವುದು, ಇಲ್ಲದಿದ್ದರೆ ನಾನು ಹೇಳಿದ ಸಾಮಾಜಿಕ ಕಳಕಳಿಗೆ ಬಿಜೆಪಿ ಸರಕಾರ ಸ್ಪಂದಿಸಿಲ್ಲ ಎನ್ನುವ ಹೇಳುವ ಐಡಿಯಾ ಖಾದರ್ ಅವರದ್ದು ಇರಬಹುದು. ಒಟ್ಟಿನಲ್ಲಿ ಶ್ರೀಮಂತರ, ಪ್ರಭಾವಿಗಳ ಆತ್ಮಹತ್ಯೆಯಿಂದ ಜನಸಾಮಾನ್ಯರ ಜೀವದ ಬೆಲೆ ನಮ್ಮ ರಾಜಕಾರಣಿಗಳಿಗೆ ಗೊತ್ತಾಗಿದೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search