• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೆಲಸಕ್ಕೆ ಬಾರೋ ಮಲ್ಲ ಎಂದರೆ ಮೈಕೈ ನೋವು ಅಮ್ಮಾ ಎನ್ನುವ ಸ್ಥಿತಿ ಆಂಟೋನಿಯದ್ದು!!

Hanumantha Kamath Posted On October 9, 2019
0


0
Shares
  • Share On Facebook
  • Tweet It

ನಾವು ಚಿಕ್ಕದಿರುವಾಗ ಒಂದು ಪದ್ಯ ರೂಪದ ಗದ್ಯ ಇತ್ತು. ಕೆಲಸಕ್ಕೆ ಬಾರೋ ಮಲ್ಲ ಎಂದರೆ ಮೈಕೈ ನೋವು ಅಮ್ಮಾ, ಊಟಕ್ಕೆ ಬಾರೋ ಮಲ್ಲ ಎಂದರೆ ತಯಾರಾಗಿದ್ದೀನಿ ಅಮ್ಮ ಎನ್ನುವ ವಾಕ್ಯ ಅದು. ಅದನ್ನು ನೀವು ಕೇಳಿರಬಹುದು. ಅದನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸ್ವಚ್ಚತೆಯ ಗುತ್ತಿಗೆ ವಹಿಸಿಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ಸರಿಯಾಗಿ ಅನ್ವಯಿಸಬಹುದು.
ಕೆಲಸ ಮಾಡ್ರೋ ಎಂದರೆ ಅವರ ಬಳಿ ಸರಿಯಾಗಿ ಜನ ಇಲ್ಲ, ವಾಹನಗಳಿಲ್ಲ. ಅದೇ ತಿಂಗಳಿಗೆ ಎರಡು ಕೋಟಿ ತೆಗೆದುಕೊಂಡು ಹೋಗಿ ಎಂದರೆ ಬೇಕಾದರೆ ಉಟ್ಟ ಬಟ್ಟೆಯಲ್ಲಿಯೇ ಅದರ ಅಧಿಕಾರಿಗಳು ಓಡಿ ಬರುತ್ತಾರೆ. ಮಂಗಳಾ ಕ್ರೀಡಾಂಗಣದ ಪಾಶ್ವದಲ್ಲಿ ಕೆನರಾ ಹಿರಿಯ ಪ್ರಾರ್ಥಮಿಕ ಶಾಲೆ ಉರ್ವಾ ಇದೆ. ಮಂಗಳೂರಿನಲ್ಲಿ ಇರುವವರಿಗೆ ಗೊತ್ತೆ ಇದೆ. ಅಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಜಾಗೃತಿ ಉಂಟು ಮಾಡುವ ದೃಷ್ಟಿಯಿಂದ ಸ್ವಚ್ಚತೆಯ ಪರಿಪಾಲನೆಯ ಬಗ್ಗೆ ಶಿಕ್ಷಕರು ಒಳಗೆ ಭೋದಿಸುತ್ತಾ ಇದ್ದರೆ ಶಾಲೆಯ ಆವರಣ ಗೋಡೆಯ ಹೊರಗೆ ನಾಲ್ಕು ದಿಕ್ಕಿನಲ್ಲಿ ಕಸ ಸಾಕಷ್ಟು ಬಿದ್ದಿರುತ್ತದೆ. ಒಳಗೆ ಶಿಕ್ಷಕರಿಂದ ಸ್ವಚ್ಚತೆಯ ಪಾಠ ಹೇಳಿಸಿಕೊಳ್ಳುವ ಮಕ್ಕಳು ಹೊರಗೆ ಬಂದು ನೋಡಿದರೆ ಏನು ಅಂದುಕೊಳ್ಳಬೇಕು. ಹಾಗಂತ ಇದು ಶಾಲೆಯ ತಪ್ಪಲ್ಲ. ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಗುಡಿಸುವುದು ಶಾಲೆಯವರ ಕೆಲಸ ಅಲ್ಲವೇ ಅಲ್ಲ. ಅದನ್ನು ಮಾಡಬೇಕಿರುವುದು ನಮ್ಮ ನಗರದ ಸ್ವಚ್ಚತೆಯ ಗುತ್ತಿಗೆಯನ್ನು ಪಡೆದುಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು. ಈಗ ವಸಂತ ಮಾಸ. ಶಾಲೆಯ ಹೊರಭಾಗದಲ್ಲಿ ನಾಲ್ಕು ಕಡೆಗಳಲ್ಲಿಯೂ ದೊಡ್ಡ ದೊಡ್ಡ ಮರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಎಲೆಗಳು ಉದುರಿ ಬಿದ್ದು ರಾಶಿಗೊಂಡಿರುತ್ತವೆ. ಆದರೆ ಅದನ್ನು ತೆಗೆಯುವುದಕ್ಕೆ ಆಂಟೋನಿ ವೇಸ್ಟ್ ನವರಿಗೆ ಸೊಂಟ ಬಗ್ಗುವುದಿಲ್ಲ. ಯಾಕೆಂದರೆ ಅವರ ಬಳಿ ಷರತ್ತಿನ ಪ್ರಕಾರ ಎಷ್ಟು ಜನ ರಸ್ತೆ ಗುಡಿಸುವವರು ಇರಬೇಕೋ ಅಷ್ಟು ಜನ ಇಲ್ಲ. 200 ಜನ ಗುಡಿಸುವವರು ಇರಬೇಕು ಎಂದು ಷರತ್ತು ಇದ್ದರೆ ಇವರ ಬಳಿ ಇರುವವರು ಕೆಲವೇ ಕೆಲವು ಜನ ಮಾತ್ರ.
ಇವತ್ತು ನೋಡಿ. ಎಂಜಿ ರಸ್ತೆಯಲ್ಲಿ ಸಾಕಷ್ಟು ತ್ಯಾಜ್ಯ ಇತ್ತು. ಯಾಕೆಂದರೆ ನಿನ್ನೆ ಆ ರಸ್ತೆಯಲ್ಲಿ ಕುದ್ರೋಳಿ ಶಾರದಾ ಮಾತೆಯ ಶೋಭಾಯಾತ್ರೆ ಹೋಗಿತ್ತು. ಸಹಜವಾಗಿ ಅಸಂಖ್ಯಾತ ಜನ ನಿನ್ನೆ ಸಂಜೆಯಿಂದ ಬೆಳಗ್ಗಿನ ಜಾವದ ತನಕ ಆ ರಸ್ತೆಯಲ್ಲಿ ಹೋಗಿದ್ದಾರೆ. ಚರುಂಬುರಿಯಿಂದ ಹಿಡಿದು ಐಸ್ ಕ್ರೀಂ ತನಕ ಅಲ್ಲಿ ಕಸದ ರಾಶಿ ಬಿದ್ದಿದೆ. ಬೆಳಿಗ್ಗೆ ಅದನ್ನು ಆಂಟೋನಿ ವೇಸ್ಟ್ ನ ಕೆಲವರು ಗುಡಿಸಿ ಒಂದು ಕಡೆ ಒಟ್ಟು ಮಾಡಿ ಹೋಗಿದ್ದಾರೆ. ಆದರೆ ಕಸ ಅಲ್ಲಿಂದ ಎತ್ತಿಕೊಂಡು ಹೋಗಲು ಇವರ ಡಂಪರ್ ಫ್ಲೆಜರ್ ಎನ್ನುವ ವಾಹನವೇ ಇಲ್ಲ. ಅದಿಲ್ಲದಿದ್ದರೆ ಇವರು ಕಸವನ್ನು ತೆಗೆದುಕೊಂಡು ಹೋಗಲು ಲಾರಿಗಳನ್ನು ತರುತ್ತಾರೆ. ಅದಕ್ಕೆ ಜಿಪಿಎಸ್ ಇರುವುದಿಲ್ಲ. ಅಷ್ಟರಲ್ಲಿ ಆ ಒಟ್ಟು ಮಾಡಿದ ಕಸ ಗಾಳಿಯಲ್ಲಿ ಹಾರಿ ಪಕ್ಕದ ಚರಂಡಿಗಳನ್ನು ಸೇರುತ್ತದೆ. ಇವರು ಎಂಜಿ ರಸ್ತೆಯನ್ನು ಹೇಗೋ ಅನಿವಾರ್ಯವಾಗಿ ಇವತ್ತು ಗುಡಿಸಿದರು. ಲೆಕ್ಕ ಪ್ರಕಾರ ಮಣ್ಣಗುಡ್ಡೆಯಂತೆ ಈ ರಸ್ತೆಯನ್ನು ಕೂಡ ನಿತ್ಯ ಗುಡಿಸಬೇಕು. ಆದರೆ ಗುಡಿಸಲು ಇವರ ಬಳಿ ಜನ ಬೇಕಲ್ಲ. ಇವತ್ತು ಎಂಜಿ ರಸ್ತೆ ಗುಡಿಸುವ ಗಡಿಬಿಡಿಯಲ್ಲಿ ಇವರ ಗುಡಿಸುವವರು ರಥಬೀದಿಯನ್ನು ಇವತ್ತು ಗುಡಿಸಿಲ್ಲ. ಆ ದಾರಿಯಲ್ಲಿ ಇವತ್ತು ವೆಂಕಟರಮಣ ದೇವಸ್ಥಾನದ ಶಾರದಾ ಮಾತೆಯ ಶೋಭಾ ಯಾತ್ರೆ ಬರುತ್ತದೆ. ಇವರು ಗುಡಿಸದೇ ಇರುವುದರಿಂದ ಯಾವ ಸಂದೇಶ ಹೋಗುತ್ತದೆ ನಾಗರಿಕರಿಗೆ? ಜನ ಏನು ಯೋಚಿಸುತ್ತಾರೆ ಎಂದು ಆಂಟೋನಿಯವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಒಂದು ವೇಳೆ ಅವರಿಗೆ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಅಷ್ಟು ಪ್ರೀತಿ ಇದ್ದರೆ ರಥಬೀದಿ ಹೂವಿನ ಮಾರುಕಟ್ಟೆಯ ಹಿಂದಿರುವ ದೊಡ್ಡ ಕಸದ ಡಬ್ಬಿಯಿಂದ ಐದು ದಿನ ತನಕ ಕಸ ತೆಗೆದುಕೊಂಡು ಹೋಗದೇ ಇರುತ್ತಿರಲಿಲ್ಲ. ಇವತ್ತು ಅದರ ಫೋಟೋ ಪೋಸ್ಟ್ ಮಾಡಿದ್ದೇನೆ. ಕಣ್ತುಂಬಿಕೊಳ್ಳುವ ಭಾಗ್ಯ ಕರುಣಿಸಿದ್ದು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್!
0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Hanumantha Kamath July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Hanumantha Kamath July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search