• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಟಾಚಾರಕ್ಕೆ ಹೊಂಡ ಮುಚ್ಚುವ ಗುತ್ತಿಗೆದಾರರೇ ಪಾಲಿಕೆಯ ಮೊದಲ ವಿಲನ್!!

Hanumantha Kamath Posted On November 19, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಸಂಖ್ಯೆ ಗಮನಿಸಿದರೆ ಮೇಯರ್ ಆಯ್ಕೆಗೆ ಯಾವ ಮೀಸಲಾತಿ ಬಂದರೂ ಕನಿಷ್ಟ 2-3 ಜನ ಅದಕ್ಕೆ ಪೈಪೋಟಿ ನೀಡಲಿದ್ದಾರೆ. ಮೊದಲ ಅವಧಿಯಲ್ಲಿ ಮೇಯರ್ ಸ್ಥಾನ ಹಿಂದುಳಿದ ವರ್ಗ (ಎ) ಇದಕ್ಕೆ ಸಿಕ್ಕಿರುವುದರಿಂದ ಹಿರಿತನದ ಆಧಾರದ ಮೇಲೆ ನೋಡಿದರೆ ಇಬ್ಬರ ಹೆಸರು ಎದ್ದು ಕಾಣುತ್ತದೆ. ಸಿನಿಯಾರಿಟಿಯನ್ನೇ ತೆಗೆದುಕೊಳ್ಳುವುದಾದರೆ ದಿವಾಕರ್ ಪಾಂಡೇಶ್ವರ ಅವರು ಮೂರನೇ ಬಾರಿ ಗೆದ್ದಿರುವ ಕಾರ್ಪೋರೇಟರ್ ಆಗಿದ್ದಾರೆ. ಸದ್ಯ ಶುದ್ಧಹಸ್ತ ಕಾರ್ಪೋರೇಟರ್ ಆಗಿರುವುದರಿಂದ ಮಂಗಳೂರು ನಗರ ದಕ್ಷಿಣಕ್ಕೆ ಮೇಯರ್ ಸ್ಥಾನ ಹೋಗುವುದಾದರೆ ದಿವಾಕರ್ ಅವರಿಗೆ ಆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಂಗಳೂರು ಉತ್ತರಕ್ಕೆ ಮೇಯರ್ ಸ್ಥಾನ ಕೊಡುವುದಾದರೆ ಎರಡನೇ ಬಾರಿ ಗೆದ್ದಿರುವ ಜಯಾನಂದ ಅಂಚನ್ ಅವರಿಗೆ ಮೇಯರ್ ಸ್ಥಾನ ಕೊಡಬಹುದು. ಅವರು ಈ ಹಿಂದೆ ಒಮ್ಮೆ ಗೆದ್ದು, ಒಮ್ಮೆ ಸೋತಿದ್ದಾರೆ. ಹಾಗೆ ಮೊದಲ ಬಾರಿ ಗೆದ್ದಿರುವ ಕೆಲವು ಕಾರ್ಪೋರೇಟರ್ ಗಳು ಕೂಡ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಅಂತಿಮವಾಗಿ ಬಿಜೆಪಿಯ ಜಿಲ್ಲೆ ಮತ್ತು ರಾಜ್ಯದ ವರಿಷ್ಟರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ನೋಡಬೇಕು.

ಆದರೆ ನನಗೆ ಅದಕ್ಕಿಂತಲೂ ಮುಖ್ಯವಾಗಿರುವುದು ಈಗ ಗಡಿಬಿಡಿಯಲ್ಲಿ ಆಗುತ್ತಿರುವ ರಸ್ತೆಯ ಹೊಂಡಗುಂಡಿ ಮುಚ್ಚುವ ಕಾಮಗಾರಿ. ಪಾಲಿಕೆ ವ್ಯಾಪ್ತಿಯ ರಸ್ತೆಗಳ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭವಾಗಿದೆ. ಆದರೆ ಮುಚ್ಚುತ್ತಿರುವ ರೀತಿಯೇ ಅನುಮಾನಗಳಿಗೆ ಕಾರಣವಾಗಿದೆ. ತಾಂತ್ರಿಕವಾಗಿ ಹೊಂಡವನ್ನು ಮುಚ್ಚುವುದು ಹೇಗೆ ಎನ್ನುವುದನ್ನು ನಿಮಗೆ ಹೇಳಿಕೊಡುತ್ತೇನೆ. ಮೊದಲಿಗೆ ಹೊಂಡದಲ್ಲಿರುವ ಡಸ್ಟ್ ಅನ್ನು ತೆಗೆದು ಸ್ವಚ್ಚಮಾಡಬೇಕು. ನಂತರ ಡಸ್ಟ್ ತೆಗೆಯಲ್ಪಟ್ಟ ಹೊಂಡಕ್ಕೆ ಡಾಮರ್ ಸ್ಪ್ರೇ ಮಾಡಬೇಕು. ಆ ಬಳಿಕ ಜಲ್ಲಿ ಹಾಕಬೇಕು. ನಂತರ ಪುನ: ಡಾಮರ್ ಸ್ಪ್ರೇ ಮಾಡಬೇಕು. ನಂತರ ಸೀಲ್ ಕೋಟ್ ಮಾಡಬೇಕು. ಅದರ ಮೊದಲು ಒಮ್ಮೆ ರೋಲರ್ ಹಾಯಿಸಬೇಕು. ಆದರೆ ಕೆಲವು ಕಡೆ ಗುತ್ತಿಗೆದಾರರು ಡಸ್ಟ್ ತೆಗೆದ ಹೊಂಡಕ್ಕೆ ಡಾಮರ್ ಸ್ಪ್ರೇ ಮಾಡದೇ ನೇರವಾಗಿ ಜಲ್ಲಿ ಹಾಕುತ್ತಿದ್ದಾರೆ. ಇವರು ಹೀಗೆ ಮಾಡುವುದರಿಂದ ಒಂದೇ ವಾರದೊಳಗೆ ಆ ಭಾಗ ಮತ್ತೆ ಯಥಾಸ್ಥಿತಿಗೆ ಬಂದು ತಲುಪುತ್ತದೆ. ಇವತ್ತು ಗುತ್ತಿಗೆದಾರರು ಹಾಗೇ ಕಾಟಾಚಾರಕ್ಕೆ ಮಾಡಿರುವ ಕೆಲವು ತೇಪೆಕಾರ್ಯದಲ್ಲಿ ಒಂದರ ಫೋಟೋ ಹಾಕುತ್ತಿದ್ದೇನೆ.

ಇದು ಕಂಬ್ಳದ ವಾರ್ಡಿನ ಫೋಟೋ. ನನ್ನ ಗಮನಕ್ಕೆ ಬಂದ ಕೂಡಲೇ ನಾನು ಪಾಲಿಕೆಗೆ ಈ ಬಗ್ಗೆ ದೂರು ನೀಡಿದ್ದೇನೆ. ನಂತರ ಅವರು ಬಂದು ಅದನ್ನು ಸರಿ ಮಾಡಿದ್ದಾರೆ. ನೀವು ಕೂಡ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವವರಾದರೆ ಅಥವಾ ಕಲಿಕೆಗೋ, ಉದ್ಯೋಗಕ್ಕೋ, ವ್ಯಾಪಾರಕ್ಕೋ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೆ ನಿಮಗೆ ಹೊಂಡಗುಂಡಿ ಮುಚ್ಚಿದ ದೃಶ್ಯ ಕಂಡುಬಂದರೆ ಅಥವಾ ಮುಚ್ಚುವ ಕಾಮಗಾರಿ ಕಂಡುಬಂದರೆ ಅಲ್ಲಿ ಕೆಲವೇ ನಿಮಿಷ ನಿಂತು ಕಾಮಗಾರಿ ಗಮನಿಸಿ. ನೀವು ವಾಸಿಸುವ ಮನೆ ಇರುವ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದರೆ ಸ್ವಲ್ಪ ಎಚ್ಚರಿಕೆಯಿಂದಲೇ ಗಮನಿಸಿ. ನಾನು ಮೇಲಿದ ರೀತಿಯಲ್ಲಿ ಕೆಲಸ ಮಾಡದೇ ಇದ್ದರೆ ಕಾಮಗಾರಿ ಕಳಪೆ ಆಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ.  ಇನ್ನು ನೂತನವಾಗಿ ಗೆದ್ದಿರುವ ಕಾರ್ಪೋರೇಟರ್ ಗಳು ಇದನ್ನು ಖಂಡಿತ ಗಮನಿಸಲೇಬೇಕು. ಯಾಕೆಂದರೆ ಅದು ನಿಮ್ಮ ಕರ್ತವ್ಯ. ಕಳಪೆ ಕಾಮಗಾರಿಯ ಕಾರಣದಿಂದ ರಸ್ತೆ ಮತ್ತೆ ಹೊಂಡ ಬಿದ್ದರೆ ಶಾಪ ವಾರದೊಳಗೆ ಹಾಕಲು ಜನ ತಯಾರಾಗಿ ನಿಂತಿರುತ್ತಾರೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search