• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾಟಾಚಾರಕ್ಕೆ ಹೊಂಡ ಮುಚ್ಚುವ ಗುತ್ತಿಗೆದಾರರೇ ಪಾಲಿಕೆಯ ಮೊದಲ ವಿಲನ್!!

Hanumantha Kamath Posted On November 19, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಸಂಖ್ಯೆ ಗಮನಿಸಿದರೆ ಮೇಯರ್ ಆಯ್ಕೆಗೆ ಯಾವ ಮೀಸಲಾತಿ ಬಂದರೂ ಕನಿಷ್ಟ 2-3 ಜನ ಅದಕ್ಕೆ ಪೈಪೋಟಿ ನೀಡಲಿದ್ದಾರೆ. ಮೊದಲ ಅವಧಿಯಲ್ಲಿ ಮೇಯರ್ ಸ್ಥಾನ ಹಿಂದುಳಿದ ವರ್ಗ (ಎ) ಇದಕ್ಕೆ ಸಿಕ್ಕಿರುವುದರಿಂದ ಹಿರಿತನದ ಆಧಾರದ ಮೇಲೆ ನೋಡಿದರೆ ಇಬ್ಬರ ಹೆಸರು ಎದ್ದು ಕಾಣುತ್ತದೆ. ಸಿನಿಯಾರಿಟಿಯನ್ನೇ ತೆಗೆದುಕೊಳ್ಳುವುದಾದರೆ ದಿವಾಕರ್ ಪಾಂಡೇಶ್ವರ ಅವರು ಮೂರನೇ ಬಾರಿ ಗೆದ್ದಿರುವ ಕಾರ್ಪೋರೇಟರ್ ಆಗಿದ್ದಾರೆ. ಸದ್ಯ ಶುದ್ಧಹಸ್ತ ಕಾರ್ಪೋರೇಟರ್ ಆಗಿರುವುದರಿಂದ ಮಂಗಳೂರು ನಗರ ದಕ್ಷಿಣಕ್ಕೆ ಮೇಯರ್ ಸ್ಥಾನ ಹೋಗುವುದಾದರೆ ದಿವಾಕರ್ ಅವರಿಗೆ ಆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಂಗಳೂರು ಉತ್ತರಕ್ಕೆ ಮೇಯರ್ ಸ್ಥಾನ ಕೊಡುವುದಾದರೆ ಎರಡನೇ ಬಾರಿ ಗೆದ್ದಿರುವ ಜಯಾನಂದ ಅಂಚನ್ ಅವರಿಗೆ ಮೇಯರ್ ಸ್ಥಾನ ಕೊಡಬಹುದು. ಅವರು ಈ ಹಿಂದೆ ಒಮ್ಮೆ ಗೆದ್ದು, ಒಮ್ಮೆ ಸೋತಿದ್ದಾರೆ. ಹಾಗೆ ಮೊದಲ ಬಾರಿ ಗೆದ್ದಿರುವ ಕೆಲವು ಕಾರ್ಪೋರೇಟರ್ ಗಳು ಕೂಡ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಅಂತಿಮವಾಗಿ ಬಿಜೆಪಿಯ ಜಿಲ್ಲೆ ಮತ್ತು ರಾಜ್ಯದ ವರಿಷ್ಟರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ನೋಡಬೇಕು.

ಆದರೆ ನನಗೆ ಅದಕ್ಕಿಂತಲೂ ಮುಖ್ಯವಾಗಿರುವುದು ಈಗ ಗಡಿಬಿಡಿಯಲ್ಲಿ ಆಗುತ್ತಿರುವ ರಸ್ತೆಯ ಹೊಂಡಗುಂಡಿ ಮುಚ್ಚುವ ಕಾಮಗಾರಿ. ಪಾಲಿಕೆ ವ್ಯಾಪ್ತಿಯ ರಸ್ತೆಗಳ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭವಾಗಿದೆ. ಆದರೆ ಮುಚ್ಚುತ್ತಿರುವ ರೀತಿಯೇ ಅನುಮಾನಗಳಿಗೆ ಕಾರಣವಾಗಿದೆ. ತಾಂತ್ರಿಕವಾಗಿ ಹೊಂಡವನ್ನು ಮುಚ್ಚುವುದು ಹೇಗೆ ಎನ್ನುವುದನ್ನು ನಿಮಗೆ ಹೇಳಿಕೊಡುತ್ತೇನೆ. ಮೊದಲಿಗೆ ಹೊಂಡದಲ್ಲಿರುವ ಡಸ್ಟ್ ಅನ್ನು ತೆಗೆದು ಸ್ವಚ್ಚಮಾಡಬೇಕು. ನಂತರ ಡಸ್ಟ್ ತೆಗೆಯಲ್ಪಟ್ಟ ಹೊಂಡಕ್ಕೆ ಡಾಮರ್ ಸ್ಪ್ರೇ ಮಾಡಬೇಕು. ಆ ಬಳಿಕ ಜಲ್ಲಿ ಹಾಕಬೇಕು. ನಂತರ ಪುನ: ಡಾಮರ್ ಸ್ಪ್ರೇ ಮಾಡಬೇಕು. ನಂತರ ಸೀಲ್ ಕೋಟ್ ಮಾಡಬೇಕು. ಅದರ ಮೊದಲು ಒಮ್ಮೆ ರೋಲರ್ ಹಾಯಿಸಬೇಕು. ಆದರೆ ಕೆಲವು ಕಡೆ ಗುತ್ತಿಗೆದಾರರು ಡಸ್ಟ್ ತೆಗೆದ ಹೊಂಡಕ್ಕೆ ಡಾಮರ್ ಸ್ಪ್ರೇ ಮಾಡದೇ ನೇರವಾಗಿ ಜಲ್ಲಿ ಹಾಕುತ್ತಿದ್ದಾರೆ. ಇವರು ಹೀಗೆ ಮಾಡುವುದರಿಂದ ಒಂದೇ ವಾರದೊಳಗೆ ಆ ಭಾಗ ಮತ್ತೆ ಯಥಾಸ್ಥಿತಿಗೆ ಬಂದು ತಲುಪುತ್ತದೆ. ಇವತ್ತು ಗುತ್ತಿಗೆದಾರರು ಹಾಗೇ ಕಾಟಾಚಾರಕ್ಕೆ ಮಾಡಿರುವ ಕೆಲವು ತೇಪೆಕಾರ್ಯದಲ್ಲಿ ಒಂದರ ಫೋಟೋ ಹಾಕುತ್ತಿದ್ದೇನೆ.

ಇದು ಕಂಬ್ಳದ ವಾರ್ಡಿನ ಫೋಟೋ. ನನ್ನ ಗಮನಕ್ಕೆ ಬಂದ ಕೂಡಲೇ ನಾನು ಪಾಲಿಕೆಗೆ ಈ ಬಗ್ಗೆ ದೂರು ನೀಡಿದ್ದೇನೆ. ನಂತರ ಅವರು ಬಂದು ಅದನ್ನು ಸರಿ ಮಾಡಿದ್ದಾರೆ. ನೀವು ಕೂಡ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವವರಾದರೆ ಅಥವಾ ಕಲಿಕೆಗೋ, ಉದ್ಯೋಗಕ್ಕೋ, ವ್ಯಾಪಾರಕ್ಕೋ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೆ ನಿಮಗೆ ಹೊಂಡಗುಂಡಿ ಮುಚ್ಚಿದ ದೃಶ್ಯ ಕಂಡುಬಂದರೆ ಅಥವಾ ಮುಚ್ಚುವ ಕಾಮಗಾರಿ ಕಂಡುಬಂದರೆ ಅಲ್ಲಿ ಕೆಲವೇ ನಿಮಿಷ ನಿಂತು ಕಾಮಗಾರಿ ಗಮನಿಸಿ. ನೀವು ವಾಸಿಸುವ ಮನೆ ಇರುವ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದರೆ ಸ್ವಲ್ಪ ಎಚ್ಚರಿಕೆಯಿಂದಲೇ ಗಮನಿಸಿ. ನಾನು ಮೇಲಿದ ರೀತಿಯಲ್ಲಿ ಕೆಲಸ ಮಾಡದೇ ಇದ್ದರೆ ಕಾಮಗಾರಿ ಕಳಪೆ ಆಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ.  ಇನ್ನು ನೂತನವಾಗಿ ಗೆದ್ದಿರುವ ಕಾರ್ಪೋರೇಟರ್ ಗಳು ಇದನ್ನು ಖಂಡಿತ ಗಮನಿಸಲೇಬೇಕು. ಯಾಕೆಂದರೆ ಅದು ನಿಮ್ಮ ಕರ್ತವ್ಯ. ಕಳಪೆ ಕಾಮಗಾರಿಯ ಕಾರಣದಿಂದ ರಸ್ತೆ ಮತ್ತೆ ಹೊಂಡ ಬಿದ್ದರೆ ಶಾಪ ವಾರದೊಳಗೆ ಹಾಕಲು ಜನ ತಯಾರಾಗಿ ನಿಂತಿರುತ್ತಾರೆ!!

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Hanumantha Kamath July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Hanumantha Kamath July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search