• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ದೇವೆಗೌಡರ ಮೊಮ್ಮೊಗನ ಮದುವೆಗೆ 45 ವಾಹನಗಳಿಗೆ ಪಾಸ್?

Hanumantha Kamath Posted On April 18, 2020
0


0
Shares
  • Share On Facebook
  • Tweet It

ದೆಹಲಿಯಲ್ಲಿ ಫಿಜ್ಜಾ ಹೊಂ ಡೆಲಿವರಿ ಮಾಡುತ್ತಿದ್ದ ಯುವಕನಲ್ಲಿ ಕೋವಿಡ್ 19 ಪತ್ತೆಯಾಗಿದೆ. ಅವನಿಂದ ಪಾರ್ಸೆಲ್ ಪಡೆದುಕೊಳ್ಳುತ್ತಿದ್ದವರಲ್ಲಿ ಸಣ್ಣಗೆ ನಡುಕ ಶುರುವಾಗಿದೆ. ತಮಗೆ ಏನಾದರೂ ಆ ಸೊಂಕು ತಗಲಿದೆಯೋ ಎನ್ನುವ ಆತಂಕ ಹಲವರಲ್ಲಿ ಮನೆ ಮಾಡಿದೆ. ಆ ಯುವಕನಿಂದ ಆಹಾರದ ಪೊಟ್ಟಣ ಖರೀದಿಸಿದ ಸುಮಾರು 72 ಜನರಿಗೆ ಈಗ ಕ್ವಾರಂಟೈನ್ ವಿಧಿಸಲಾಗಿದೆ. ನಾನು ಹೇಳುವುದು ನಮ್ಮಲ್ಲಿ ಈ ಕುರಿತು ಯಾವ ಮಟ್ಟದಲ್ಲಿ ಜಾಗೃತಿ ಇದೆ.

ನಿತ್ಯ ಎಷ್ಟೋ ಜನ ಹೊಂ ಡೆಲಿವರಿ ಯುವಕರು ಮಂಗಳೂರಿನ ಬೀದಿಗಳಲ್ಲಿ ಓಡಾಡುತ್ತಾ ಇರುತ್ತಾರೆ. ಅವರಿಗೆ ಪಾಸ್ ನೀಡಲಾಗಿದೆ. ಆದರೆ ಯಾರನ್ನಾದರೂ ಪರೀಕ್ಷೆಗೆ ಒಳಪಡಿಸಲಾಗಿದೆಯಾ? ಮೊದಲು ಪರೀಕ್ಷೆ ಮಾಡಬೇಕಾಗಿರುವುದು ಅವರನ್ನ. ದೆಹಲಿ ಮಾತ್ರವಲ್ಲ, ಇಟಲಿಯಲ್ಲಿಯೂ ಹೊಂ ಡೆಲಿವರಿ ಯುವಕನಿಂದಲೇ ಕೋವಿಡ್ 19 ಹರಡಿತ್ತು ಎಂದು ವರದಿ ಹೇಳುತ್ತದೆ. ನಾನು ಈ ಯುವಕರನ್ನು ಆಗಲಿ ಅಥವಾ ಅವರಿಂದ ಆಹಾರವನ್ನು ಪಡೆದುಕೊಳ್ಳುವ ಜನರನ್ನು ಹೆದರಿಸುತ್ತಿಲ್ಲ. ಆದರೆ ನಮ್ಮ ಸುರಕ್ಷೆಯಲ್ಲಿ ನಾವಿರಬೇಕಲ್ವಾ? ಮಂಗಳೂರಿನ ಸಂಘನಿಕೇತನದ ಹತ್ತಿರದ ಅಪಾರ್ಟ್ ಮೆಂಟಿನಿಂದ ನನಗೆ ಒಬ್ಬರು ಕಾಲ್ ಮಾಡಿದ್ರು. ಅವರ ವಸತಿ ಸಮುಚ್ಚಯದ ಎದುರು ಒಂದು ಮನೆ ಇದೆ. ಅದಕ್ಕೆ ಆಹಾರ ಪೂರೈಕೆಯ ಹೋಟೇಲ್ ಲೈಸೆನ್ಸ್ ನೀಡಲಾಗಿದೆ. ಅಲ್ಲಿ ದಿನಾಲೂ ಅದರಲ್ಲಿಯೂ ಮುಖ್ಯವಾಗಿ ರಾತ್ರಿಯ ಊಟದ ಪಾರ್ಸೆಲ್ ತೆಗೆದುಕೊಳ್ಳಲು ಕನಿಷ್ಟ 40-50 ರ ತನಕ ಡೆಲಿವರಿ ಯುವಕರು ಒಟ್ಟೊಟ್ಟಿಗೆ ಗುಂಪು ಸೇರಿ ನಿಲ್ಲುತ್ತಾರೆ ಎಂದು ಅವರ ದೂರು. ಪಾಸುಗಳನ್ನು ಕಡ್ಲೆಕಾಯಿ ಬೀಜದ ಹಾಗೆ ಹಚ್ಚಿರುವ ಸಹಾಯಕ ಕಮೀಷನರ್ ಅವರು ಇದನ್ನೆಲ್ಲ ನೋಡಬೇಕು ಎನ್ನುವುದು ನನ್ನ ಕಳಕಳಿ.
ಇನ್ನು ನಿನ್ನೆ ಕುಮಾರಸ್ವಾಮಿಯವರ ಹಿರಿಯ (!) ಮಗನ ಮದುವೆ ನಡೆಯಿತು. ಸಾಮಾಜಿಕ ಅಂತರ ಎನ್ನುವುದು ಇರಲೇಇಲ್ಲ ಎನ್ನುವುದನ್ನು ರಾಷ್ಟ್ರೀಯ ವಾಹಿನಿಗಳು ಸುದ್ದಿ ಮಾಡಿದ್ದವು. ಫೋಟೋ ಮತ್ತು ವಿಡಿಯೋಗ್ರಾಫರ್ ಗಳೇ 30 ಜನ ಇದ್ದರು ಎನ್ನುವುದು ಮಾಹಿತಿ. ತಪ್ಪಿಲ್ಲ ಬಿಡಿ, ಮಾಜಿ ಪ್ರಧಾನಿಯೊಬ್ಬರ, ಮಾಜಿ ಮುಖ್ಯಮಂತ್ರಿಯೊಬ್ಬರ ಮತ್ತು ಮಾಜಿ ಸಚಿವರೊಬ್ಬರ ಕುಟುಂಬದ ಮದುವೆ. ಸಾಮಾನ್ಯ ದಿನಗಳಾದರೆ ಒಕೆ. ಆದರೆ ಇದು ಮದುವೆ ಮಾಡುವ ಸಂದರ್ಭ ಅಲ್ಲವೇ ಅಲ್ಲ. ನಮಗಿಂತ ಅವರಿಗೆ ಇದು ಚೆನ್ನಾಗಿ ಗೊತ್ತಿರಬೇಕಿತ್ತು. ಮೊದಲು ಮದುವೆ ಬೆಂಗಳೂರಿನಲ್ಲಿ ಎಂದೇ ನಿರ್ಧರಿತವಾಗಿತ್ತು. ಹಿಂದಿನ ದಿನ ಮಧ್ಯಾಹ್ನದ ತನಕ ಮದುವೆಯ ತೋರಣ ಬೆಂಗಳೂರಿನಲ್ಲಿ ಕಟ್ಟುತ್ತಿರುವ ದೃಶ್ಯಗಳನ್ನು ತೋರಿಸಲಾಗುತ್ತಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಮದುವೆ ರಾಮನಗರದಲ್ಲಿ ಎಂದು ಬದಲಾಗಿದೆ. 45 ವಾಹನಗಳಲ್ಲಿ ದೇವೆಗೌಡರ ಕುಟುಂಬ ರಾಮನಗರಕ್ಕೆ ಹೊರಟಿತ್ತು. ಅವರಿಗೆ 45 ಪಾಸುಗಳನ್ನು ಕೆಲವೇ ಗಂಟೆಗಳಲ್ಲಿ ಒದಗಿಸಿದ ಮಹಾನುಭಾವ ಯಾರು? ಹಾಗಾದರೆ ತಾವು ಅಧಿಕಾರದಲ್ಲಿ ಇರಲಿ, ಬಿಡಲಿ ರಾಜ್ಯದಲ್ಲಿ ತಮ್ಮ ಮಾತೇ ನಡೆಯುವುದು ಎಂದು ಗೌಡರ ಕುಟುಂಬ ತೋರಿಸಿಕೊಟ್ಟಿದೆ. ಹಾಗಾದರೆ ಲಾಕ್ ಡೌನ್ ಶ್ರೀಮಂತರಿಗೆ ಇಲ್ಲವೇ ಎನ್ನುವ ಮಾತು ಮತ್ತೊಮ್ಮೆ ಚಾಲ್ತಿಯಲ್ಲಿ ಬರುತ್ತಿದೆ.

ಇತ್ತ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿ ವಾಹನವನ್ನು ಏನೂ ಜೀವನಾವಶ್ಯಕ ವಸ್ತು ಸಾಗಿಸುತ್ತಿದ್ದಿರಾ ಎಂದು ಎರಡೆರಡು ಬಾರಿ ಕೇಳಿ ನೋಡಿ ಬಿಡುತ್ತಿದ್ದಾರೆ. ದೇವೆಗೌಡರ ಮೊಮ್ಮೊಗನ ಮದುವೆ ಯಾವ ಜೀವನಾವಶ್ಯಕ ಕಾರ್ಯ. ಮದುವೆ ಜೀವನಕ್ಕೆ ಅವಶ್ಯಕ ಇರಬಹುದು. ಆತ ಮದುವೆ ಆಗಿದ್ದು ತಪ್ಪು ಎಂದಲ್ಲ. ಆದರೆ ಈಗ ಅದು ಬೇಕಿತ್ತಾ? ಒಂದು ವೇಳೆ ಕುಮಾರಸ್ವಾಮಿಯವರ 45 ವಾಹನಗಳಿಗೆ ಬೆಂಗಳೂರು ಜಿಲ್ಲೆಯಿಂದ ರಾಮನಗರ ಜಿಲ್ಲೆಗೆ ಹೋಗಲು ಅವಕಾಶ ಸಿಗುತ್ತದೆ ಎಂದರೆ ಮುಂಬೈಯಿಂದ ಬೆಳಗಾವಿಯ ತನಕ ಬಂದು ಸಿಲುಕಿ ಬಿದ್ದವರು, ಗೋವಾದ ಗಡಿಯಲ್ಲಿ ಸಿಲುಕಿಕೊಂಡವರು, ಚಾಮರಾಜನಗರದಲ್ಲಿ ಸಿಲುಕಿಕೊಂಡ ಕರಾವಳಿಯವರಿಗೆ ಯಾಕೆ ಅವಕಾಶ ಸಿಗುತ್ತಿಲ್ಲ!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search