• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಮ ಮಂದಿರ ಶಿಲಾನ್ಯಾಸ ಆಯಿತು, ಇನ್ನು ಭವ್ಯ ಮಂದಿರದ ಜಪ!!

Hanumantha Kamath Posted On June 11, 2020
0


0
Shares
  • Share On Facebook
  • Tweet It

ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಸಾಧುಸಂತರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಶಿಲಾನ್ಯಾಸ ನಡೆಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನಡೆಸಬೇಕಿತ್ತು. ಆದರೆ ಅವರು ಬಿಝಿ ಇದ್ದ ಕಾರಣ ಭಾಗವಹಿಸಿಲ್ಲ. ಜುಲೈ 2 ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ನಡುವೆ ಬಹುಸಂಖ್ಯಾತ ಹಿಂದೂಗಳು ಶತಮಾನದಿಂದ ಕಾತರಿಸುತ್ತಿದ್ದ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ವಿರಾಜಮಾನವಾಗಿ ಪೂಜೆಯನ್ನು ಸ್ವೀಕರಿಸಿ ಭಕ್ತರನ್ನು ಆರ್ಶೀವದಿಸಲಿದ್ದಾನೆ. ಬ್ರಿಟಿಷರ ಕಾಲದಿಂದಲೂ ಈ ಪ್ರಕರಣ ಸುಪ್ರೀಂ ಅಂಗಳದಲ್ಲಿತ್ತು. ಕೊನೆಗೆ ಅದಕ್ಕೆ ಸೂಕ್ತ ಅಂತ್ಯ ಸಿಗಲು ಮೋದಿ ಸರಕಾರವೇ ಬರಬೇಕಾಯಿತು. ತೀರ್ಪು ಕೊಟ್ಟಿರುವುದು ನ್ಯಾಯಾಲಯವಾದರೂ ಅದರ ಹಿಂದೆ ಸೂಕ್ತ ದಾಖಲೆಗಳನ್ನು ಒದಗಿಸಿ ಕೇಸಿನ ಬಗ್ಗೆ ಕಾಂಗ್ರೆಸ್ಸಿನ ನಿರಾಸಕ್ತಿ ಮತ್ತು ಪ್ರತಿವಾದದ ನಡುವೆ ಈ ಕೇಸನ್ನು ದಡ ಮುಟ್ಟಿಸಿದವರು ಮೋದಿ. ಅದೆಲ್ಲವೂ ಆಗಿ ಅದಕ್ಕೆ ಸೂಕ್ತ ಸಮಿತಿಗಳನ್ನು ರಚಿಸಿ ಅದರಲ್ಲಿ ನಮ್ಮ ಉಡುಪಿಯ ಈಗಿನ ಪೇಜಾವರ ಶ್ರೀಗಳನ್ನು ಸೇರಿಸಿ ಅಂತಿಮ ಹಂತಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಮಾಡಿದ್ದು ಕೇಂದ್ರ ಸರಕಾರ. ಇನ್ನು ಮೂರು ವರ್ಷ ಕಳೆದರೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ಅಲ್ಲಿಯೇ ಸಮೀಪ ಇರುವ ಶಿವ ದೇವಸ್ಥಾನದಲ್ಲಿ ಲಿಂಗಾಭೀಷೇಕ ಮಾಡುವ ಮೂಲಕ ಶಿಲಾನ್ಯಾಸ ನೆರವೇರಿದೆ.

ಸದ್ಯ ಈಗ ಪ್ರಕರಣ ಇತ್ಯರ್ಥವಾಗಿರುವುದರಿಂದ ಇನ್ನು ಸಾಕ್ಷಿ ಏನಿದೆ ಎಂದು ಕೇಳುವ ವಿಷಯ ಬರುವುದಿಲ್ಲ. ಇದೆಲ್ಲವೂ ನಮ್ಮ ವಿಶ್ವಾಸದ ಪ್ರತೀಕ. ಮಗು ಬೆಳೆದು ನಿಂತಾಗ ತಾಯಿ ನಿನ್ನ ತಂದೆ ಇವರೇ ಎಂದು ಹೇಳಿದಾಗ ತಾಯಿ ಹೇಳಿದ ವಿಶ್ವಾಸದ ಮೇಲೆನೆ ಮಗು ಆ ವ್ಯಕ್ತಿಯನ್ನು ಅಪ್ಪ ಎಂದು ಕರೆಯುತ್ತದೆ. ಇದು ಕೂಡ ಅಪ್ಪಟ ವಿಶ್ವಾಸದ ಪ್ರಶ್ನೆ. ರಾಮನ ಜನ್ಮ ಅಯೋಧ್ಯೆಯಲ್ಲಿ ಆಯಿತು, ಶ್ರೀಕೃಷ್ಣನ ಜನ್ಮ ಮಥುರಾದಲ್ಲಿ ಆಯಿತು ಎನ್ನುವ ವಿಶ್ವಾಸದ ಮೇಲೆ ನಾವು ಆರಾಧಿಸಿಕೊಂಡು ಬಂದಿದ್ದೇವೆ. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವಂತದ್ದು. ಇದು ಹಿಂದೂಗಳಲ್ಲಿ ಮಾತ್ರವಲ್ಲ, ತಲೆತಲಾಂತರಗಳಿಂದ ಕ್ರೈಸ್ತರಲ್ಲಿ ಮತ್ತು ಮುಸಲ್ಮಾನರಲ್ಲಿಯೂ ಇದೇ ಪದ್ಧತಿ ನಡೆದುಕೊಂಡು ಬಂದಿದೆ. ಯಾರೂ ದೇವರನ್ನು ನೋಡಿಲ್ಲ. ಆದರೆ ಆ ವಿಶ್ವಾಸ ಮಾತ್ರ ಹಾಗೇ ಸುಲಭವಾಗಿ ಹೋಗುವುದಿಲ್ಲ.

ಈಗಾಗಲೇ ಅಯೋಧ್ಯೆಯಲ್ಲಿ 70% ನಿರ್ಮಾಣಕ್ಕೆ ಬೇಕಾದ ಕಂಬಗಳ ರಚನೆ ಆಗಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಲೋಹಗಳ ಬಳಕೆ ಇಲ್ಲ ಎನ್ನಲಾಗುತ್ತದೆ. ಮೂವತ್ತು ವರ್ಷಗಳಿಂದ ಅಯೋಧ್ಯೆಯಲ್ಲಿ ಮಂದಿರದ ಕೆಲಸಗಳು ನಡೆಯುತ್ತಿವೆ. ಈಗ ದೇವಸ್ಥಾನದ ಕಾಮಗಾರಿ ಆರಂಭವಾಗಲಿರುವುದರಿಂದ ಉಳಿದ 30% ಕಂಬಗಳ ಬಾಕಿ ಉಳಿದಿರುವ ಕೆಲಸ ಎರಡು ವರ್ಷಗಳಲ್ಲಿ ಮುಗಿಯಲಿದೆ. ನಂತರ ಭವ್ಯ ಮಂದಿರ ನಿರ್ಮಾಣವಾಗುತ್ತದೆ!

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Hanumantha Kamath February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search