ಅನ್ನಭಾಗ್ಯದ ಅಕ್ಕಿ ಕದಿಯುವ ಅಧಿಕಾರಿಗಳೇ ನಿಮಗೆ ಬಡವರ ಶಾಪ ತಟ್ಟಲ್ವಾ!!
Posted On August 31, 2020
![](https://tulunadunews.com/wp-content/uploads/2020/08/images-74.jpeg)
ಅನ್ನಭಾಗ್ಯದ ಅಕ್ಕಿಯನ್ನು ಕದಿಯುವವರ ವಿಷಯ ಆಗಾಗ ಮಾಧ್ಯಮಗಳಲ್ಲಿ ಬರುತ್ತದೆ. ಮೊನ್ನೆ ಕೂಡ ಕುಂದಾಪುರದಲ್ಲಿ ಇಂತಹ ಒಂದು ಪ್ರಕರಣ ದಾಖಲಾಗಿದೆ. ಆದರೆ ಯಾರಿಗೂ ಶಿಕ್ಷೆಯಾಗುವುದಿಲ್ಲವಾದ ಕಾರಣ ಇಂತಹುಗಳು ಹೀಗೆ ನಡೆಯುತ್ತಲೇ ಇರುತ್ತವೆ. ಪೊಲೀಸರು ಕೂಡ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲವಾದ ಕಾರಣ ಅನ್ನಭಾಗ್ಯ ಅಕ್ಕಿಯ ಮೂಟೆಗಳು ಲಾರಿಯಲ್ಲಿ ಬಿಂದಾಸ್ ಆಗಿ ಕಳ್ಳತನವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತವೆ. 2004 ರಲ್ಲಿ ಕೂಡ ಮಂಗಳೂರಿನ ಸರಕಾರಿ ಗೋಡೌನ್ ನಿಂದ ಲಾರಿಗಟ್ಟಲೆ ಅಕ್ಕಿ ಕದ್ದೊಯ್ದ ಕೇಸ್ ಆಗಿತ್ತು. ಏನೂ ಆಗಲಿಲ್ಲ. ಅದರ ನಂತರ ಈಗ ಮೇಯರ್ ಆಗಿರುವ ದಿವಾಕರ ಪಾಂಡೇಶ್ವರ್ ಹಾಗೂ ನಾವು ಬೊಂದೇಲ್ ನಲ್ಲಿ ಹೀಗೆ ಲಾರಿಯೊಂದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆವು. ಇದೇ ಸೆಪ್ಟೆಂಬರ್ 7 ಕ್ಕೆ ಅದಾಗಿ ಭರ್ತಿ ಎರಡು ವರ್ಷಾಗಳಾಗುತ್ತವೆ. ಏನು ಆಯಿತು ಗೊತ್ತಾ?
- Advertisement -
Trending Now
ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಯ ತಾಯಿ ನಿಧನ
July 20, 2024
ಶಾಸಕ ಡಾ. ಭರತ್ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
July 20, 2024
Leave A Reply