• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನಾನೊಬ್ಬ ಹಿಂದೂ, ಕ್ರಾಂತಿಕಾರಕ ಬದಲಾವಣೆ ತರಲು ಸರಕಾರವನ್ನು ಒತ್ತಾಯಿಸುತ್ತೇನೆ!

Hanumantha Kamath Posted On September 5, 2020
0


0
Shares
  • Share On Facebook
  • Tweet It

ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಹಣ ಹಾಕಿದರೆ ಅದು ಸರಕಾರಕ್ಕೆ, ಅದೇ ತಟ್ಟೆಯಲ್ಲಿ ಹಾಕಿದರೆ ಅರ್ಚಕರಿಗೆ ಎನ್ನುವ ವಾಕ್ಯವನ್ನು ಹಿಂದೆಲ್ಲೋ ಸಾಮಾಜಿಕ ತಾಣಗಳಲ್ಲಿ ಓದಿದ ನೆನಪು. ನಾವು ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಹಾಕುವ ಹಣವನ್ನು ಸರಕಾರ ಮಸೀದಿಗಳಿಗೆ, ಹಜ್ ಯಾತ್ರೆಗೆ ಕೊಡುತ್ತದೆ, ಆದ್ದರಿಂದ ಡಬ್ಬಿಗೆ ಹಾಕಬೇಡಿ ಎಂದು ಕೆಲವರು ಹೇಳುತ್ತಿದ್ದರು. ಇದನ್ನು ಹೀಗೆ ಪ್ರಚಾರ ಮಾಡುತ್ತಿದ್ದವರು ಯಾವ ಧರ್ಮದವರು ಎಂದು ಮತ್ತೆ ಹೇಳಬೇಕಾಗಿಲ್ಲ.

ನಾನೊಬ್ಬ ಹಿಂದೂ ಧರ್ಮದವನಾಗಿ ಹೇಳುವುದಾದರೆ ನಾವು ಕೊಡುವ ಹಣ ಆ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಬಯಸುವುದು ತಪ್ಪಲ್ಲ. ಈಗ ಉದಾಹರಣೆಗೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ದೇವಸ್ಥಾನಗಳಲ್ಲಿ ದೇವಳದ ನಿತ್ಯ ಖರ್ಚು ಹೋಗಿ ಕೋಟಿಗಟ್ಟಲೆ ಹಣ ಇಡೀ ವರ್ಷ ಉಳಿಯುತ್ತದೆ. ಅಂತಹ ಹಣ ದೇವಸ್ಥಾನದ ಹೊರಗೆ ಕೂಡ ಪ್ರಯೋಜನವಾಗಬೇಕು. ಅದು ಹೇಗೆಂದರೆ ಮೊದಲು ಆ ದೇವಸ್ಥಾನಕ್ಕೆ ಬರುವ ರಸ್ತೆಗಳು ಸರಿಯಾಗಬೇಕು. ಹೌದು,ನಿಜ,ದೇವಸ್ಥಾನದ ಸುತ್ತಳತೆಯಲ್ಲಿ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಮೊದಲ ಹಂತದಲ್ಲಿ ಸರಿ ಮಾಡುವ ಕ್ರಮಕ್ಕೆ ಮುಂದಾಗಬೇಕು. ಆ ರಸ್ತೆಗಳನ್ನು ಚತುಷ್ಪಥ ಮಾಡಿ ಕಾಂಕ್ರೀಟ್ ಹಾಕುವ ಮೂಲಕ ಅಲ್ಲಿ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ನೆಮ್ಮದಿಯ ವಾತಾವರಣ ನೀಡಬಹುದು.ಇನ್ನೊಂದು ಏನು ಮಾಡಬಹುದು ಎಂದರೆ ಆ ದೇವಸ್ಥಾನದ ಹತ್ತು ಕಿಲೋ ಮೀಟರ್ ಸುತ್ತಳತೆಯಲ್ಲಿ ಇರುವ ಸರಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಊಟ, ಎರಡು ಜೊತೆ ಸಮವಸ್ತ್ರ, ಪಾದರಕ್ಷೆ, ಪುಸ್ತಕ, ಬ್ಯಾಗ್ ಮತ್ತು ಆ ಶಾಲೆಯ ಪೀಠೋಪಕರಣಗಳನ್ನು ಒಳ್ಳೆಯ ಗುಣಮಟ್ಟದಲ್ಲಿ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಬೇಕು. ನಮಗೆ ಗೊತ್ತಿದೆ, ಒಂದು ಶಾಲೆಯನ್ನು ದೂರದಿಂದಲೇ ಅದು ಸರಕಾರಿಯೋ, ಖಾಸಗಿಯೋ ಎಂದು ನಾವು ಹೇಳುವ ಪರಿಸ್ಥಿತಿ ಇದೆ. ಅದರ ಬದಲು ಇದೇ ಹಣದಲ್ಲಿ ಸರಕಾರಿ ಶಾಲೆಯಲ್ಲಿ ಯಾಕೆ ಗುಣಮಟ್ಟದ ವ್ಯವಸ್ಥೆ ಮಾಡಬಾರದು. ಇದರಿಂದ ಆ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು ಕೂಡ ಮುಂದೆ ಬರುತ್ತಾರೆ. ಶಾಲೆಗಳು ಕೇವಲ ಗೋಡೆಯ ಮೇಲೆ “ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ” ಎಂದು ಬರೆದರೆ ಸಾಕಾಗುವುದಿಲ್ಲ.ಸರಕಾರ ಶಾಲೆಯ ವಿದ್ಯಾರ್ಥಿಗಳ ಲೆಕ್ಕದಲ್ಲಿ ಅಧ್ಯಾಪಕ ರನ್ನು ಕೊಡುತ್ತಾರೆ 7 ತರಗತಿಗಳಿಗೆ 3 ಅದ್ಯಾಪಕರಿರುತ್ತಾರೆ ಕಡಿಮೆ ಇರುವ ಮುರೊ ನಾಲ್ಕೊ ಅಧ್ಯಾಪಕ ರನ್ನು ದೇವಸ್ಥಾನದ ವತಿಯಿಂದ ನೇಮಿಸಬೇಕು.ಸರಕಾರಿ ಶಾಲೆಗಳು ನೋಡುವುದರಲ್ಲಿಯೂ ಮಾದರಿಯಾಗಬೇಕು. ಅದಕ್ಕಾಗಿ ಈ ಹಣ ಬಳಕೆಯಾಗಬೇಕು.ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟೋ ದೇವಸ್ಥಾನಗಳಲ್ಲಿ ನಿತ್ಯ ವಿನಿಯೋಗಕ್ಕೆ ಆರ್ಥಿಕ ತೊಂದರೆ ಇದೆ. ಈ ಶ್ರೀಮಂತ ದೇವಸ್ಥಾನದಿಂದ ಬೇರೆ ದೇವಸ್ಥಾನಗಳಿಗೆ ಎಣ್ಣೆ, ಬತ್ತಿ, ಹೂನಿಂದ ಹಿಡಿದು ಪುರೋಹಿತರ ಸಂಬಳದ ತನಕ ಅಗತ್ಯ ಕಾರ್ಯಗಳನ್ನು ಮಾಡಬಹುದು. ಇಷ್ಟೆಲ್ಲಾ ಮಾಡಲು ಆಗುತ್ತಾ? ಖಂಡಿತ ಸಾಧ್ಯವಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಲ್ಲಿ ಇದಕ್ಕೊಂದು ಕಾನೂನುಬದ್ಧ ಬದಲಾವಣೆ ಮಾಡಬೇಕು. ಆಗ ಮುಂದೆ ಯಾರೂ ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಹಾಗೆ ಮುಂದುವರೆಯುತ್ತದೆ. ಅದು ಬಿಟ್ಟು ಹಿಂದೂಗಳ ಹಣ ಸರಕಾರ ಮಸೀದಿಗಳಿಗೆ ಕೊಡುತ್ತದೆ ಎಂದು ಫೇಸ್ ಬುಕ್ಕಿನಲ್ಲಿ ಬೊಬ್ಬೆ ಹೊಡೆದರೆ ಆಗಲ್ಲ. ಅಷ್ಟಕ್ಕೂ ಹೀಗೆ ಬರೆಯುವ ಬಿಜೆಪಿ ಪರ ನಿಲುವಿನ ವ್ಯಕ್ತಿಗಳೇ ನಿಮ್ಮ ಸರಕಾರಕ್ಕೆ ಇನ್ನು ಮೂರು ವರ್ಷ ಇದೆಯಲ್ಲ, ಈಗ ಈ ನಿಯಮ ಮಾಡಬಹುದಲ್ಲ.ಅದುಬಿಟ್ಟುಕಾಂಗ್ರೆಸ್ ಮಾಡಲಿ ಎಂದು ನಿರೀಕ್ಷೆ ಇಡುವುದು ಸರಿಯಾ? ಹೋಗಲಿ, ಆದದ್ದು ಆಗಿ ಹೋಯಿತು.ಈಗ ಬಿಜೆಪಿ ಸರಕಾರ ಇದೆಯಲ್ಲ ಮಾಡಿಸಿಕೊಳ್ಳಿ ಬೀಡಬೇಡಿ ಯ್ಯಾಡಿಯುರಪ್ಪರನ್ನು ಅಥವಾ ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗೆ ಹೆದರಿ ಮಾಡದೇ ಕೂರುತ್ತೀರಾ. ನನ್ನ ಯೋಜನೆ ಮುಸ್ಲಿಮರಿಗೂ ಹಿಡಿಸುತ್ತದೆ.

0
Shares
  • Share On Facebook
  • Tweet It




Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Hanumantha Kamath January 23, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
  • Popular Posts

    • 1
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • 2
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು

  • Privacy Policy
  • Contact
© Tulunadu Infomedia.

Press enter/return to begin your search