• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮುಂಬೈ ಪಾಲಿಕೆ 24 ಗಂಟೆಯೊಳಗೆ ಮಾಡಿದ್ದು ಮಂಗಳೂರಿಗೆ ಯಾಕಾಗಲ್ಲ!!

Hanumantha Kamath Posted On September 10, 2020
0


0
Shares
  • Share On Facebook
  • Tweet It

ಕಂಗನಾ ರಾಣಾವತ್ ಬಗ್ಗೆ ನಾನು ಡಿಟೇಲ್ಸ್ ಆಗಿ ಹೋಗಲ್ಲ. ಅದನ್ನು ನೀವು ವಾರದಿಂದ ನಿತ್ಯ ಮಾಧ್ಯಮಗಳಲ್ಲಿ ನೋಡಿದ್ದೀರಿ. ನನಗೆ ಆಶ್ಚರ್ಯವಾಗುವುದು ಇಚ್ಚಾಶಕ್ತಿಯ ಬಗ್ಗೆ. ಕಂಗನಾ ಎನ್ನುವ ಓರ್ವ ನಟಿಯ ವಿರುದ್ಧ ತನ್ನ ಸರಕಾರದ ಅಷ್ಟು ಅಸ್ತ್ರಗಳನ್ನು ಓರೆಗೆ ಹಚ್ಚಿದರಲ್ಲ ಉದ್ಭವ್ ಠಾಕ್ರೆ, ಅದರ ಬಗ್ಗೆ ಆಶ್ಚರ್ಯ ಮತ್ತು ಅಸಹ್ಯ ಎರಡೂ ಆಗುತ್ತದೆ. ಕಂಗನಾರ ಸಿನೆಮಾ ನಿರ್ಮಾಣ ಕಂಪೆನಿಯ ಕಚೇರಿಯನ್ನು ಧೂಳೀಪಟ ಮಾಡಲು ಮುಂಬೈ ಪಾಲಿಕೆ ತೆಗೆದುಕೊಂಡದ್ದು ಬರೇ 24 ಗಂಟೆ ಮಾತ್ರ. ಆ ಕಚೇರಿಯ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಲಾಗಿದೆ, ಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಂಬೈ ಪಾಲಿಕೆಗೆ ಗೊತ್ತಾದದ್ದು ಕಂಗನಾ ಶಿವಸೇನೆಯ ವಿರುದ್ಧ ವಾಕ್ದಾಳಿ ಮಾಡಿದ ಬಳಿಕ. ಅಲ್ಲಿಯ ವರೆಗೆ ಆ ಕಟ್ಟಡ ಸರಿಯಾಗಿಯೇ ಇತ್ತು. ಯಾವಾಗ ರಾಣಾವತ್ ಶಿವಸೇನೆಯ ವಿರುದ್ಧ ಹೇಳಿಕೆ ಕೊಟ್ಟಳೋ ಅವಳ ಕಚೇರಿ ಅನಧಿಕೃತ ಎನಿಸಿತು. 24 ಗಂಟೆಯ ನೋಟಿಸು ನಂತರ ಧ್ವಂಸ. ಇಲ್ಲಿ ಕಟ್ಟಡದ ಮಾಲೀಕರಿಗೆ ತನ್ನ ಪರ ವಾದ ಮಂಡಿಸಲು ಅವಕಾಶವೇ ನೀಡಲಿಲ್ಲ. ಅಷ್ಟಕ್ಕೂ ಕಟ್ಟಡ ಮಾಲಕಿ ರಾಜ್ಯದಲ್ಲಿಯೇ ಇರಲಿಲ್ಲ. ಆಕೆ ಬಂದು ವಾದಿಸುವಷ್ಟು ಸಮಯವನ್ನು ಮುಂಬೈ ಪಾಲಿಕೆ ನೀಡಲಿಲ್ಲ. ಮಾಲಕಿ ಕೋರ್ಟಿಗೆ ಹೋಗಿ ತಡೆಯಾಜ್ಞೆ ತರುತ್ತಾರೆ ಎಂದು ಗೊತ್ತಿಲ್ಲದಷ್ಟು ಅಮಾಯಕರಲ್ಲ ಠಾಕ್ರೆ. ಅದಕ್ಕಾಗಿ ಕಂಗನಾ ಹರ್ಯಾಣದಲ್ಲಿ ವಿಮಾನದಲ್ಲಿ ಕುಳಿತು ಮುಂಬೈನಲ್ಲಿ ಇಳಿಯುವ ಮೊದಲೇ ಆಕೆಯ ಕಚೇರಿ ಈ ನೆಲದ ಮೇಲೆ ಇರಲೇಬಾರದು ಎಂದು ಶಿವಸೇನೆ ಎನ್ನುವ ಪುಟ್ಟ ಪ್ರಾದೇಶಿಕ ಪಕ್ಷ ನಿರ್ಧರಿಸಿಯಾಗಿತ್ತು. ನಾನು ಯಾಕೆ ಈ ವಿಷಯವನ್ನು ಬರೆಯುತ್ತಿದ್ದೇನೆ ಎಂದರೆ ಖಂಡಿತವಾಗಿ ಇಲ್ಲಿ ಮುಂಬೈ ಮೇಯರ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ನಿಜ. ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಏನು ಆಗಿದೆ.

ಮಂಗಳೂರಿನಲ್ಲಿ ಹರೀಶ್ ಕುಮಾರ್ ಪಾಲಿಕೆಯ ಆಯುಕ್ತರಾಗಿದ್ದಾಗ ಅನಧಿಕೃತ ಕಟ್ಟಡಗಳು ಎನ್ನುವ ದೊಡ್ಡ ಪಟ್ಟಿಯನ್ನೇ ಮಾಡಿದ್ರು. ಇನ್ನೇನೂ ಅವರು ಅದನ್ನು ಕೆಡವಲು ಹೊರಟಾಗ ಆ ಕಟ್ಟಡದ ಮಾಲೀಕರಲ್ಲಿ ಅನೇಕರು ಕೋರ್ಟಿಗೆ ಹೋದರು. ಆದರೆ ಸುಮಾರು 56 ಕಟ್ಟಡಗಳ ಮಾಲೀಕರು ಕೋರ್ಟಿಗೆ ಹೋಗಲೇ ಇಲ್ಲ. ಇನ್ನು ಕೆಲವರು ಅಕ್ರಮ- ಸಕ್ರಮಕ್ಕೆ ಅರ್ಜಿ ಹಾಕಿದರು. ಆದರೆ ಅನೇಕವು ಈಗಲೂ ತಡೆಯಾಜ್ಞೆಯೂ ಇಲ್ಲದೆ, ಕೋರ್ಟಿಗೆ ಹೋಗದೆ, ಅಕ್ರಮ-ಸಕ್ರಮದಲ್ಲಿ ಏನೂ ಮಾಡದೇ ಹಾಗೆ ಉಳಿದಿವೆ. ಅದನ್ನು ಕಣ್ಣುಮುಚ್ಚಿ ಕೆಡವುದು ಎಷ್ಟು ಹೊತ್ತಿನ ಮಾತು. ಮುಂಬೈ ಪಾಲಿಕೆ ಎಲ್ಲಾ ಗೊತ್ತಿದ್ದೂ, ಧ್ವಂಸ ಮಾಡಿಲ್ವಾ? ಕಂಗನಾ ಅತಿಕ್ರಮಣ ಮಾಡಿ ಕಟ್ಟಿದ್ದಾರಾ, ಇಲ್ವಾ ಅದು ಬೇರೆ ವಿಷಯ. ಒಂದು ವೇಳೆ ಅತಿಕ್ರಮಣವಾಗಿ ಕಟ್ಟಿದ್ದರೂ ಅವರಿಗೆ ನ್ಯಾಯಯುತವಾಗಿ ಒಂದಿಷ್ಟು ಸಮಯ ಕೊಡಬಹುದಿತ್ತು. ಇಷ್ಟು ಗಡಿಬಿಡಿಯಲ್ಲಿ ಕೆಡವುಹ ಅಗತ್ಯವೇ ಇರಲಿಲ್ಲ. ಆದರೂ ಕೆಡವಿದ್ದಾರೆ. ಅತಿಕ್ರಮಣ ಕಟ್ಟಡವಾಗಿದ್ದರೆ ಪಾಲಿಕೆ ಗೆದ್ದ ಹಾಗೆ. ಸಕ್ರಮವಾಗಿದ್ದರೆ, ಕಂಗನಾ ಗೆದ್ದು ಬಿಟ್ಟರೆ ಉದ್ಭವ್ ಮತ್ತೆಂದೂ ಸಿಎಂ ಆಗುವ ಕನಸನ್ನು ಕಾಣುವಂತಿಲ್ಲ. ಯಾಕೆಂದರೆ ಉದ್ಭವ್ ದ್ವೇಷ ರಾಜಕಾರಣ ಮಾಡಿರುವುದು ಸ್ಪಷ್ಟ. ಆಗ ಸಂಜಯ್ ರಾಹುತ್ ಎಂಬ ಎಂಪಿ ಸಾಮ್ನಾದ ಸಂಪಾದಕರಾಗಿಯೂ ಶಿವಸೇನೆಯನ್ನು ಕನಿಷ್ಟ ಗೌರವಯುತ ವಿಪಕ್ಷಕ್ಕೂ ತರಲು ಕಷ್ಟವಾದೀತು.

ನಾನು ಮಂಗಳೂರಿನಲ್ಲಿ ದ್ವೇಷದ ರಾಜಕಾರಣ ಮಾಡಿ ಎನ್ನಲ್ಲ. ಅದು ಮಾಡುವಂತಹ ಧೈರ್ಯ ಯಾವ ಪಕ್ಷದ ಮುಖಂಡರಲ್ಲಿಯೂ ಇಲ್ಲ. ಯಾಕೆಂದರೆ ಜನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುತ್ತಾರೆ. ಆದರೆ ಅತಿಕ್ರಮಣ ಮಾಡಿ ಕಟ್ಟಿದ್ದ ಅನಧಿಕೃತ ಕಟ್ಟಡಗಳು ಹಲವು ಇವೆ. ಅವುಗಳಿಗೆ ಒಂದು ಗತಿ ಕಾಣಿಸಬಹುದಲ್ಲ. ಅದರಲ್ಲಿ ತಪ್ಪೇನಿದೆ. ಹೇಗೂ ಪಾಲಿಕೆಗೆ ಯುವ ಆಯುಕ್ತರು ಬಂದಿದ್ದಾರೆ. ಐಎಎಸ್ ಎಂಬ ಪದವಿ ಮತ್ತು ಸಾಮರ್ತ್ಯ ಎರಡೂ ಇದೆ. ಹೇಗೂ ಪಾಲಿಕೆಯಲ್ಲಿ ಗಂಡುಮಗನಾಗಿ ಮೇಯರ್ ದಿವಾಕರ್ ಪಾಂಡೇಶ್ವರ್ ಇದ್ದಾರೆ. ಇಬ್ಬರೂ ಉತ್ಸಾಹಿ ಶಾಸಕರಿದ್ದಾರೆ. ಎಲ್ಲರೂ ಮನಸ್ಸು ಮಾಡಿದರೆ ಈ ಬಾರಿ ನವರಾತ್ರಿಯ ಮೊದಲೇ ಅನಧಿಕೃತ ಕಟ್ಟಡಗಳು ಮಾಯವಾಗಬಹುದು. ಹೇಗೂ ಕೆಡವುಹ ಅಧಿಕಾರ ಮತ್ತು ಅವಕಾಶ ದಾಖಲೆಯಲ್ಲಿದೆ. ಇಚ್ಚಾಶಕ್ತಿ ಬೇಕು ಅಷ್ಟೇ. ಬೇಕಾದರೆ ನನ್ನನ್ನು ಕರೆದರೆ ನಾನು ಆ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬಲ್ಲೆ. ಯಾವ ಕಟ್ಟಡ, ಕೆಡವಿದರೆ ಯಾಕೆ ಯಾರಿಗೂ ಕೋರ್ಟಿನಿಂದ ಛೀಮಾರಿ ಬೀಳಲ್ಲ. ಎಲ್ಲವೂ ನನ್ನ ಬಳಿ ಅಂಕಿಅಂಶ ಇದೆ. ಹನುಮಂತ ಕಾಮತ್ ಅವರನ್ನು ಕರೆದರೆ ನಾವು ಚಿಕ್ಕವರಾಗುತ್ತೇವೆ ಎಂದು ಮನಸ್ಸಿನಲ್ಲಿ ಇದ್ದರೆ ನಿಮ್ಮ ಇಷ್ಟ. ಅಷ್ಟಕ್ಕೂ ಮುಂಬೈ ಪಾಲಿಕೆಯಂತೆ ಭಂಡ ಧೈರ್ಯ ಮಾಡಲು ಎದೆಗುಂಡಿಗೆ ಗಟ್ಟಿ ಇರಬೇಕು. ಕೆಡವಿದರೆ ಅವನು ಬೇಸರ ಮಾಡುತ್ತಾನೆ, ಇವನಿಗೆ ಲಾಸ್ ಆಗುತ್ತದೆ ಎಂದು ಅಂದುಕೊಂಡರೆ ಏನೂ ಪ್ರಯೋಜನವಿಲ್ಲ. ಬೇಕಾದರೆ ಅನಧಿಕೃತ ಕಟ್ಟಡ ಕೆಡವಿದವರು ನಾವೇ ಎಂದು ನಾಲ್ಕು ಫ್ಲೆಕ್ಸ್ ಹಾಕಲಿ. ಅದರಿಂದ ನಾಲ್ಕು ವೋಟ್ ಜಾಸ್ತಿ ಬೀಳುತ್ತದೆ. ಧಮ್ ಇದೆಯಾ!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Hanumantha Kamath October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search