• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅನಧಿಕೃತ ನಿರ್ಮಾಣಗಳಿಗೆ ಗತಿಕಾಣಿಸಲಿರುವ ಅಕ್ಷಯ್ ಶ್ರೀಧರ್!!

Tulunadu News Posted On November 7, 2020


  • Share On Facebook
  • Tweet It


ಒಬ್ಬ ಅಧಿಕಾರಿ ಒಂದೇ ಸರಕಾರಿ ಕಚೇರಿಯಲ್ಲಿ 30 ವರ್ಷಗಳಿಂದ ಗೂಟ ಹೊಡೆದು ಕೂತಿದ್ದರೆ ಅಂತವರ ಬೇರುಗಳು ನೆಲದ ಆಳಕ್ಕೆ ಇಳಿದು ಅದರ ರೆಂಬೆ ಕೊಂಬೆಗಳಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಳ್ಳುತ್ತವೆ. ಹಾವುಗಳು ಹುತ್ತ ಕಟ್ಟಿ ಬಿಲ ಸೇರಿಕೊಂಡಿರುತ್ತವೆ. ಇರುವೆಗಳು ಗೆದ್ದಲು ಮಾಡಿಕೊಂಡಿರುತ್ತವೆ. ಆದ್ದರಿಂದ ಒಂದೇ ಅಧಿಕಾರಿಯನ್ನು ಹೆಚ್ಚು ವರ್ಷ ಒಂದೇ ಕಡೆಯಲ್ಲಿ ಬಿಟ್ಟರೆ ಅವರು ತಾವು ಹಾಳಾಗುವುದಲ್ಲದೆ ಸುತ್ತಲಿನ ಪರಿಸರ ಮತ್ತು ಜನರನ್ನು ಕೂಡ ಹಾಳು ಮಾಡಿಬಿಡುತ್ತಾರೆ. ಸದ್ಯಕ್ಕೆ ಇದಕ್ಕೆ ಜೀವಂತ ಉದಾಹರಣೆ ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ಅಧಿಕಾರಿ ಬಾಲಕೃಷ್ಣ ಗೌಡ. ಯಾವ ಸರಕಾರ ಬೇಕಾದರೂ ಬರಲಿ, ದೇಶವೇ ಅಲ್ಲೋಲ ಕಲ್ಲೋಲ ಆಗಲಿ ಇವರು ಪಾಲಿಕೆಯ ಒಳಗಿನಿಂದ ವರ್ಗಾವಣೆ ಆಗಿಲ್ಲ.

ಯಾವಾಗ ಒಬ್ಬ ಅಧಿಕಾರಿ ಮೂರು ದಶಕಗಳಿಗಿಂತಲೂ ಹೆಚ್ಚು ವರ್ಷದಿಂದ ಒಂದೇ ಕಡೆ ಜಿಡ್ಡುಗಟ್ಟಿದ್ದಂತೆ ಇರುತ್ತಾರೋ ನಂತರ ಅವರನ್ನು ತಿಕ್ಕಲು ಯಾರೂ ಹೋಗಲ್ಲ. ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಎಲ್ಲಾ ಬಿಲ್ಡರ್ಸ್, ಉದ್ದಿಮೆದಾರರು ಅವರೊಂದಿಗೆ ಚೆನ್ನಾಗಿ ಇದ್ದು ಬಿಡುತ್ತಾರೆ. ರಾಜಕಾರಣಿಗಳು ಕೂಡ ಅಡ್ಜೆಸ್ಟ್ ಆಗಿ ಹೋಗುತ್ತಾರೆ. ಯಾರೂ ಅಲುಗಾಡಿಸಲಾಗದವರನ್ನು ನಾವು ಕೂಡ ಏನೂ ಮಾಡಲಾಗುವುದಿಲ್ಲ ಎಂದು ಹೆದರಿ ಕೈಲಾಗದವರಂತೆ ಅಂತಹ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರೆಯಲು ಬಿಡುತ್ತಾರೆ. ಇದರಿಂದ ಜನರಿಗೆ ತೊಂದರೆ ಏನು ಎಂದು ನಿಮಗೆ ಅನಿಸಬಹುದು. ನೀವು ಈಗ ಅನುಭವಿಸುತ್ತಿರುವ ನಗರದ ಬಹುತೇಕ ತೊಂದರೆಗಳಿಗೆ ಇಂತಹ ಅಧಿಕಾರಿಗಳೇ ಕಾರಣ. ಅದು ಹೇಗೆ?
ಮೊದಲನೇಯದಾಗಿ ಪಾರ್ಕಿಂಗ್ ಇಲ್ಲದ ಕಟ್ಟಡಗಳು. ಒಂದು ನಗರ ವೈಜ್ಞಾನಿಕವಾಗಿ ಬೆಳೆಯಬೇಕಾದರೆ ಉತ್ತಮ ಪಾರ್ಕಿಂಗ್ ಇರುವ ಕಟ್ಟಡಗಳು, ರಸ್ತೆ ಅಗಲೀಕರಣಕ್ಕೆ ಸ್ಥಳಾವಕಾಶ ಬಿಟ್ಟಿರುವ ನಿರ್ಮಾಣಗಳು, ಫುಟ್ ಪಾತ್ ಮೇಲೆ ಅನಧಿಕೃತವಾಗಿ ಕಟ್ಟದ ಅಂಗಡಿಗಳು ಇರಬೇಕು. ಆದರೆ ಯಾವಾಗ ಬುಡದಲ್ಲಿ ಅಂಟು ಹಾಕಿ ಕುಳಿತಿರುವ ಅಧಿಕಾರಿಗಳು ಇದ್ದಾಗ ನಗರ ಅವೈಜ್ಞಾನಿಕವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಬಹುತೇಕ ಕಡೆ ಯಾವುದೇ ಹೊಸ ಕಟ್ಟಡದಲ್ಲಿ ಪಾರ್ಕಿಂಗ್ ಇರುವುದೇ ಇಲ್ಲ. ಇದ್ದರೂ ತಿಮಿಂಗಿಲದಂತಹ ಕಟ್ಟಡಕ್ಕೆ ಬೆಂಕಿಪೆಟ್ಟಿಗೆಯಂತಹ ಜಾಗ ಪಾರ್ಕಿಂಗ್ ಗೆ ಬಿಟ್ಟಿರುತ್ತಾರೆ. ಇದರಿಂದ ಏನಾಗುತ್ತದೆ? ಆ ಕಟ್ಟಡಕ್ಕೆ ಬರುವಂತಹ ವಾಹನಗಳು ರಸ್ತೆಬದಿಯಲ್ಲಿಯೇ ನಿಂತಿರುತ್ತವೆ. ಎಲ್ಲರೂ ನಮ್ಮದು ಒಂದೇ ಕಾರು ಅಲ್ವಾ, ಅಂತಹುದು ಏನೂ ಆಗುವುದಿಲ್ಲ ಎಂದುಕೊಂಡೇ ರಸ್ತೆಬದಿಯಲ್ಲಿ ಬಿಟ್ಟು ಒಳಗೆ ಹೋಗಿರುತ್ತಾರೆ. ಹೀಗೆ ಅಂದುಕೊಂಡ ಹತ್ತನೆ ಕಾರಿನವನು ಒಳಗೆ ಹೋದ ನಂತರ ಆ ರಸ್ತೆಯಲ್ಲಿ ಒಂದು ಬೈಕ್ ಕೂಡ ಆರಾಮವಾಗಿ ಹೋಗಲು ಕಷ್ಟವಾಗುತ್ತದೆ. ನಗರದೊಳಗೆ ಅನೇಕ ರಸ್ತೆಗಳ ಪರಿಸ್ಥಿತಿ ಇವತ್ತು ಹೀಗೆ ಇದೆ. ಯಾವ ಕಟ್ಟಡ ಕಟ್ಟುವ ಮೊದಲು ಪೇಪರ್ ನಲ್ಲಿ ಸ್ಕೆಚ್ ತೋರಿಸುವಾಗ ಹೇಗಿರುತ್ತೋ, ಕಟ್ಟಡ ಕಟ್ಟಿ ಮುಗಿದ ನಂತರ ಅದು ಒಂಭತ್ತು ತಿಂಗಳ ಬಸುರಿಯ ಲೆವೆಲ್ಲಿಗೆ ಬಂದು ಬಿಡುತ್ತದೆ. ನಂತರ ಏನೂ ಮಾಡಲು ಆಗುವುದಿಲ್ಲ. ಇನ್ನು ಹಲವು ಕಡೆ ಫುಟ್ ಪಾತ್ ಮೇಲೆ ಅನಧಿಕೃತ ನಿರ್ಮಾಣಗಳಿವೆ. ಆ ಫುಟ್ ಪಾತ್ ಮೇಲೆ ನಡೆಯುವ ಪಾದಚಾರಿ ಅಂತಹ ಅಂಗಡಿ ಬಂದಾಗ ಫುಟ್ ಪಾತ್ ನಿಂದ ಇಳಿದು ರಸ್ತೆಯಲ್ಲಿ ನಡೆಯಬೇಕು. ರಸ್ತೆಯಲ್ಲಿ ಆ ಅಂಗಡಿದ್ದೇ ನಾಲ್ಕೈದು ಬೈಕ್, ಸ್ಕೂಟರ್ ನಿಂತಿರುತ್ತದೆ. ಪೀಕ್ ಹವರ್ ನಲ್ಲಿ ವಯಸ್ಸಾದವರು ಇಂತಹ ಫುಟ್ ಪಾತ್ ನಲ್ಲಿ ಸಿಲುಕಿಕೊಂಡು ಸುರಕ್ಷಿತವಾಗಿ ಮನೆಗೆ ಬಂದರೆ ದೇವರ ದಯೆಯಿಂದ ಆಯುಷ್ಯ ಗಟ್ಟಿ ಇದೆ ಎಂದೇ ಅರ್ಥ. ಅಲ್ಲಿಯೇ ಫೆಕ್ಸ್, ಅನಧಿಕೃತ ಹೋರ್ಡಿಂಗ್ಸ್ ಇದ್ದರೆ ಅಂತು ಮುಗಿಯಿತು. ಅವು ಜೋರು ಮಳೆಗೆ ಯಾವಾಗ ರಸ್ತೆಗೆ ಅಡ್ಡಲಾಗಿ ಬೀಳುತ್ತೆ ಎನ್ನುವುದು ವರುಣದೇವನಿಗೆ ಮಾತ್ರ ಗೊತ್ತು.
ಇನ್ನು ಕೆಲವು ಬಿಲ್ಡರ್ ಗಳು ಒಂದು ಹೆಜ್ಜೆ ಮುಂದೆ ಹೋಗಿ ಮಾಡುವ ಅವಾಂತರಗಳದ್ದೇ ಇನ್ನೊಂದು ಕಥೆ. ಹೊಸ ಕಟ್ಟಡ ಕಟ್ಟುವಾಗ ಕಾನೂನು ಪ್ರಕಾರ ರಸ್ತೆಗೆ ಜಾಗ ಬಿಡಬೇಕು. ಕಟ್ಟಡ ಕಟ್ಟಲು ಲೈಸೆನ್ಸ್ ಫೀಸ್ ಕಟ್ಟಬೇಕು. ಇದೆಲ್ಲ ಯಾಕೆ ಎಂದುಕೊಂಡು ಜಾಗ ಬಿಡದೆ ಅಥವಾ ನಿರ್ದಿಷ್ಟವಾಗಿ ಎಷ್ಟು ಬಿಡಬೇಕೋ ಅಷ್ಟು ಬಿಡದೆ ಕ್ಯಾರಂ ಬೋರ್ಡಿನಷ್ಟು ಜಾಗ ಬಿಟ್ಟು ದೊಡ್ಡ ಬಿಲ್ಡಿಂಗ್ ಎಬ್ಬಿಸಿರುತ್ತಾರೆ. ಇದೆಲ್ಲ ನೋಡಬೇಕಾದ ನಗರ ಯೋಜನಾ ಅಧಿಕಾರಿಗಳ ಕಿಸೆ ಯಾವತ್ತೂ ಭಾರವಾಗಿಯೇ ಇರುವುದರಿಂದ ಹೊರಗೆ ಇಣುಕಿ ನೋಡುವಷ್ಟು ಕೆಲಸವನ್ನು ಕೂಡ ಮಾಡುವುದಿಲ್ಲ. ಇಂತಹ ಅವ್ಯವಸ್ಥೆ ಇರುವ ನಮ್ಮ ಪಾಲಿಕೆಗೆ ಐಎಎಸ್ ಆಯುಕ್ತರು ಬಂದಿದ್ದಾರೆ. ಐಎಎಸ್ ಗಳಿಗೆ ಇಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವ ಐಡಿಯಾ ಇರುವುದಿಲ್ಲ. ಯಾರ ಹಂಗೂ ಮೊದಲೇ ಇಲ್ಲ. ಹೀಗಿರುವಾಗ ಅವರು ಇದ್ದಷ್ಟು ದಿನ ರಫ್ ಅಂಡ್ ಟಫ್ ಆಗಿ ಇರುತ್ತಾರೆ. ದಕ್ಷ ಆಯುಕ್ತ ಅಕ್ಷಯ್ ಶ್ರೀಧರ್ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಪಾಲಿಕೆ ವ್ಯಾಪ್ತಿಯೊಳಗೆ ರಸ್ತೆ ಫುಟ್ ಪಾತ್ ಗಳನ್ನು ಅತಿಕ್ರಮಿಸಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದಾರೆ. ಬಹಳ ಉತ್ತಮ ಕಾರ್ಯ. ಅವರು ಇದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಕೆ. ಆದರೆ ನಮ್ಮ ಪಾಲಿಕೆಯ ಒಳಗಿರುವ ಹೆಗ್ಗಣಗಳ ಬಗ್ಗೆ ಇವರಿಗೆ ಅರಿವಿಲ್ಲ. ಹೆಪ್ಸಿಬಾ ಕೊರ್ಲಪಾಟಿ ಎನ್ನುವ ಐಎಎಸ್ ಆಯುಕ್ತರು ಹೀಗೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕೆ ಪಕ್ಷಾತೀತವಾಗಿ ಒಟ್ಟಾಗಿ ಅವರನ್ನು ಇಲ್ಲಿಂದ ಓಡಿಸಿದ ಹೆಗ್ಗಳಿಗೆ ಪಾಲಿಕೆಗೆ ಇದೆ. ಆದರೆ ಆಗ ಕಾಂಗ್ರೆಸ್ ಆಡಳಿತದಲ್ಲಿತ್ತು. ಈಗ ಬಿಜೆಪಿ ಆಡಳಿತದಲ್ಲಿದೆ. ಇಂತಹ ದಕ್ಷ ಅಧಿಕಾರಿಗಳು ಕೆಲವು ವರ್ಷಗಳು ಇಲ್ಲಿಯೇ ಇದ್ದರೆ ಎಲ್ಲವೂ ಸರಿಯಾಗುತ್ತದೆ. ಬಿಜೆಪಿಯವರು ಇಂತಹ ದಕ್ಷ ಆಯುಕ್ತರನ್ನು ಇಲ್ಲಿಯೇ ಉಳಿಸುತ್ತಾರೆ ಎಂದು ಅಂದುಕೊಂಡಿದ್ದೇನೆ!
  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search