• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ವಾರದಲ್ಲಿ ಶುಕ್ರವಾರ ಮಾತ್ರ ಒಣಕಸ, ಉಳಿದ ದಿನಗಳಲ್ಲಿ ಬರೀ ಹಸಿಕಸ, ಮನಪಾ ಮಾತ್ರ ಎಲ್ಲವನ್ನು ಒಟ್ಟಿಗೆ ನುಂಗುತ್ತದೆ!

Tulunadu News Posted On November 21, 2020
0


0
Shares
  • Share On Facebook
  • Tweet It

ಮನಪಾ ವ್ಯಾಪ್ತಿಯಲ್ಲಿ ನಿಮ್ಮ ಮನೆಯ ಕಸವನ್ನು ಯಾರು ಸಂಗ್ರಹ ಮಾಡುವುದು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಎಷ್ಟೋ ಸಲ ನಾನೇ ಈ ಅಂಕಣಗಳಲ್ಲಿ ಆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇನ್ನೂ ಧ್ವನಿಮುದ್ರಿತ ವ್ಯವಸ್ಥೆಯ ಮೂಲಕ ನಿಮ್ಮ ಮನೆಬಾಗಿಲಿಗೆ ಒಂದು ವಾಹನ ಬರುತ್ತದಲ್ಲ, ಅದರ ಪರಿಚಯ ನಿಮಗೆ ಆಗಿರುತ್ತದೆ. ಆ ತ್ಯಾಜ್ಯ ಸಂಗ್ರಹಿಸುವ ಹೊಣೆ ಹೊತ್ತಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರೊಂದಿಗೆ ಪಾಲಿಕೆ ಮಾಡಿರುವ ಒಡಂಬಡಿಕೆ ಎನು? ಜನರಿಂದ ಆರು ದಿನ ಹಸಿಕಸ ಮತ್ತು ಒಂದು ದಿನ ಒಣಕಸ ಸಂಗ್ರಹ ಮಾಡಬೇಕು. ಆದರೆ ಜನ ಈಗ ಏನು ಮಾಡುತ್ತಿದ್ದಾರೆ? ಎಲ್ಲವನ್ನು ಒಟ್ಟಿಗೆ ಹಾಕಿ ತಮ್ಮ ಮನೆಯ ಕಂಪೌಂಡಿನ ಹೊರಗೆ ಇಡುತ್ತಾರೆ. ಲಾರಿಯವರು ಅದನ್ನು ಹಾಗೆ ತೆಗೆದುಕೊಂಡು ಹೋಗುತ್ತಾರೆ. ಇದರ ಬದಲಿಗೆ ಪಾಲಿಕೆ ಪ್ರತಿಮನೆಗೆ ಎರಡು ಸಣ್ಣಪ್ರಮಾಣದ ಬಾಕ್ಸ್ ನೀಡಬೇಕು. ಒಂದು ಬಣ್ಣದ ಒಂದು ಬಾಕ್ಸ್ ಹಸಿಕಸಕ್ಕಾಗಿ ಮತ್ತು ಇನ್ನೊಂದು ಬಣ್ಣದ ಬಾಕ್ಸ್ ಒಣಕಸಕ್ಕಾಗಿ ನಿಗದಿಗೊಳಿಸಬೇಕು. ಶುಕ್ರವಾರ ಮಾತ್ರ ಒಣಕಸ, ಶುಕ್ರವಾರ ಸೇರಿ ಉಳಿದ ದಿನಗಳಲ್ಲಿ ಎಲ್ಲ ಹಸಿಕಸ. ಇದರಿಂದ ವಾರದಲ್ಲಿ ಆರು ದಿನ ಒಂದು ಬಣ್ಣದ ಬಾಕ್ಸ್ ಮಾತ್ರ ಮನೆಗಳ ಹೊರಗೆ ಕಂಡುಬರುತ್ತದೆ. ಯಾರಾದರೂ ಇನ್ನೊಂದು ಬಣ್ಣದ ಬಾಕ್ಸಿನಲ್ಲಿ ಕಸ ತಂದರೆ ಅದು ಗೊತ್ತಾಗುತ್ತದೆ. ಆದರೆ ಪಾಲಿಕೆ ಹಣ ಉಳಿಸುವುದರಲ್ಲಿ ಬಝಿಯಾಗಿದೆ ವಿನ: ಅದನ್ನು ಸದ್ವಿನಿಯೋಗ ಮಾಡುವುದರಲ್ಲಿ ಅಲ್ಲ ಎಂದು ನಾನು ಪುನ: ಮೊದಲಿನಿಂದ ಹೇಳಬೇಕಾಗಿಲ್ಲ,

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search