• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

Hanumantha Kamath Posted On January 29, 2021


  • Share On Facebook
  • Tweet It

ಕೆಲವರನ್ನು ನೋಡಿದಾಗ ಜೀವನದಲ್ಲಿ ಪುಣ್ಯ ಮಾಡಿದವರು ಎಂದು ಹೇಳುತ್ತೇವೆ. ಕೆಲವರ ಅದೃಷ್ಟವನ್ನು ಹೊಗಳುವಾಗ ಅವರ ಪುಣ್ಯ ಚೆನ್ನಾಗಿದೆ ಎಂದು ಹೇಳುವುದು ವಾಡಿಕೆ. ನಾವು ಯಾಕೆ ಹಾಗೆ ಹೇಳುತ್ತೇವೆ. ಅಷ್ಟಕ್ಕೂ ನಾವು ತುಂಬಾ ಪುಣ್ಯ ಮಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿದಾಗ ನಾನು ನಮ್ಮ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ದಿವ್ಯ ಸಂದೇಶವನ್ನು ನೆನಪು ಮಾಡಿಕೊಳ್ಳುತ್ತೇನೆ. ಜೀವನದಲ್ಲಿ ಪುಣ್ಯ ಮಾಡಲು ಅಧಿಕ ಅವಕಾಶಗಳು ಬೇಕೆಂದು ಅನಿಸಿದರೆ, ಅದು ಕೇವಲ ದೇವರ ದಯೆಯಿಂದ ಮಾತ್ರ ಸಾಧ್ಯವಾಗಬಹುದು. ದೇವರನ್ನು ಬೇಡಬೇಕು. ಆಗ ಪುಣ್ಯವನ್ನು ಹೆಚ್ಚೆಚ್ಚು ಮಾಡಲು ಅವಕಾಶಗಳು ಬಂದಾಗ, ಪಾಪ ಮಾಡುವ ಅವಕಾಶಗಳೇ ಸಿಗುವುದಿಲ್ಲ. ಇದು ಜೀವನದ ಉದ್ದೇಶ ಆಗಬೇಕು. ಇದನ್ನು ಬುದ್ಧಿಯ ಮೂಲಕ ಮುಂದುವರೆಸಬೇಕು. ಇದು ನಮ್ಮ ಜೀವನದಲ್ಲಿ ನಾವು ಅನುಸರಿಸಿದರೆ ಯಾವ ಕಿರಿಕಿರಿ, ಸಂಕಟಗಳು ಇಲ್ಲದೆ ನಾವು ಉತ್ತಮ ಜೀವನ ನಡೆಸಬಹುದು. ಆದರೆ ಈ ಮಾತನ್ನು ಮಂಗಳೂರು ನಗರದ ಹೃದಯಭಾಗದಲ್ಲಿ ವ್ಯಾಪಾರ ಮಾಡುತ್ತಿರುವ ಕೆಲವು ವ್ಯಾಪಾರಿಗಳು ಕಿವಿಯ ಮೇಲೆ ಹಾಕಿಕೊಳ್ಳದೇ ಇರುವುದರಿಂದ ಅವರು ಕೂಡ ಒಳ್ಳೆಯ ಕೆಲಸ ಮಾಡುವುದಿಲ್ಲ ಮತ್ತು ಬೇರೆಯವರಿಗೆ ಕೂಡ ಒಳ್ಳೆಯದು ಮಾಡಲು ಬಿಡುತ್ತಿಲ್ಲ.

ನಿನ್ನೆ ಭವಂತಿಸ್ಟ್ರೀಟ್ ರಸ್ತೆಯ ಬಗ್ಗೆ ಬರೆದಿದ್ದೆ. ಆ ರಸ್ತೆಗೆ ಜಾಗ ಬಿಟ್ಟುಕೊಟ್ಟವರು ಮಂಗಳೂರು ಮಹಾನಗರ ಪಾಲಿಕೆಗೆ ಹಿಡಿಶಾಪ ಯಾಕೆ ಹಾಕುತ್ತಿದ್ದಾರೆ ಎಂದು ನಿಮ್ಮ ಮನಸ್ಸಿಗೆ ಹೋಗಿದೆ ಎಂದು ಅಂದುಕೊಂಡಿದ್ದೇನೆ. ಇವತ್ತು ಗಣಪತಿ ಹೈಸ್ಕೂಲ್ ರಸ್ತೆ ಎನ್ನುವ ಭವಂತಿ ಸ್ಟ್ರೀಟ್ ರಸ್ತೆಯ ಸಹೋದರ ಸಂಬಂಧದ ರಸ್ತೆಗೆ ಬರೋಣ.

ಈ ಜಿಎಚ್ ಎಸ್ ರಸ್ತೆಯ ಕಥೆಯನ್ನು ನಾನು ಬಿಡಿಬಿಡಿಯಾಗಿ ಹೇಳಿದರೂ ಅದು ಒಂದು ಸರಣೆಯಾಗುತ್ತದೆ. ಈ ರಸ್ತೆಯಲ್ಲಿ ಕಾಮತ್ ಅಂಡ್ ಕೋ ಎನ್ನುವ ಅಂಗಡಿಯ ಬಿಲ್ಡಿಂಗ್ ಇದೆ. ಅದರ ಕಥೆಯ ಮೊದಲು ಅಲ್ಲಿ ಪಕ್ಕದಲ್ಲಿ ಕೊಯಮೂತ್ತೂರು ಟೆಕ್ಸ್ ಟೈಲ್ ಎನ್ನುವ ಅಂಗಡಿ ಇದೆ. ಇದು ರಸ್ತೆಯ ಎಷ್ಟು ಬದಿಯಲ್ಲಿ ಎಷ್ಟು ತಾಗಿಕೊಂಡು ಇದೆ ಎಂದರೆ ಮನಪಾದವರು ನಾಳೆ ಬೆಳಿಗ್ಗೆ ಎದ್ದು ಹಲ್ಲುಜ್ಜಿಕೊಂಡವರೇ ಮೊದಲು ಆ ಕೊಯಮೂತ್ತೂರು ಟೆಕ್ಸ್ ಟೈಲ್ ಕೆಡವಿ ಬರೋಣ ಎಂದು decide ಮಾಡಿದರೂ ಅವರನ್ನು ಯಾರೂ ತಡೆಯುವಂತಿಲ್ಲ. ಯಾಕೆಂದರೆ ಆ ಅಂಗಡಿ ಸಂಪೂರ್ಣವಾಗಿ ಅಕ್ರಮವಾಗಿಯೇ ಇದೆ. ಹೆಂಗಸರ, ಗಂಡಸರ ಒಳ ಹೊರಗಿನ ಬಟ್ಟೆಗಳನ್ನು ಮಾರುವ ಆ ಅಂಗಡಿಯವರು ಅಷ್ಟು ಧೈರ್ಯದಲ್ಲಿ ಮುಖ್ಯರಸ್ತೆಗೆ ತಾಗಿ ಅಕ್ರಮವಾಗಿ ಅಂಗಡಿ ತೆರೆದು ಕುಳಿತುಕೊಳ್ಳುತ್ತಾರೆಂದರೆ ಅವರಿಗೆ ಪಾಲಿಕೆಯ ashirvada ಇದೆ. ಪಾಲಿಕೆ ಇವರಿಗೆ ashirvada ಮಾಡಿದ್ದಕ್ಕೆ ತಿಂಗಳಿಗೆ ಎಷ್ಟು ಚಡ್ಡಿ, ಬನಿಯನ್ ಗಳನ್ನು ಉಚಿತವಾಗಿ ತೆಗೆದುಕೊಳ್ಳುತ್ತದೆ, ಯಾರ್ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ತೆಗೆದುಕೊಳ್ಳುವವರೇ ಹೇಳಬೇಕು. ಇನ್ನೂ ಇಂತಹ ಅಂಗಡಿಗಳನ್ನೇ ಮುಟ್ಟದವರು ಅಲ್ಲಿಯೇ ಪಕ್ಕದಲ್ಲಿರುವ ಟೋಕಿಯೋ market,Akbar complex,kunil complex ನ ಅಕ್ರಮ parking ಮುಟ್ಟುತ್ತಾರೆ ಎಂದು ನೀವ್ಯಾರು ಈ ಕನಸು ಮನಸ್ಸಿನಲ್ಲಿ ಎನಿಸುವುದು ಬೇಡಾ. ಆದರೆ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ, ಅದನ್ನು ತಡೆಯಲು ನಾವೇನಾದರೂ ಕೆಲಸ ಮಾಡಬೇಕು ಎಂದು ಮಾಜಿ ಶಾಸಕರು ಒಮ್ಮ ಪುರಭವನದಲ್ಲಿ ಸಾರ್ವಜನಿಕರ ಸಭೆ ಮಾಡುತ್ತಾರೆ. ಪುರಭವನದಲ್ಲಿ ಜೋರು ಉಸಿರು ಬಿಟ್ಟರೂ ತಾಗುವಷ್ಟು ಹತ್ತಿರದಲ್ಲಿರುವ ಟೋಕಿಯೋ market,Akbar complex,Kunil complex ನಲ್ಲಿ ಅಕ್ರಮವಾಗಿ parking ಮಾಡಿರುವ ವಾಹನಗಳನ್ನು ತೆರವುಗೊಳಿಸಿ, parking ಜಾಗದಲ್ಲಿ ಬಿಲ್ಡಿಂಗ್ ನವರು ಅಕ್ರಮವಾಗಿ ತೆರೆದಿರುವ ಅಂಗಡಿಗಳನ್ನು ಇವರು ಮುಚ್ಚಿಸುವುದಿಲ್ಲ. ಅಲ್ಲಿ ಪುರಭವನದಲ್ಲಿ ಮೂವತ್ತು ಜನ ಕೂಡ ಸೇರುವುದಿಲ್ಲ. ಅದೇ ಈ ಅಕ್ರಮ parking ಜಾಗದಲ್ಲಿ ಲೆಕ್ಕ ಹಾಕಿದರೆ ಸಿಗದಷ್ಟು ವಾಹನಗಳು ಗುಡ್ಡೆ ಹಾಕಿ ನಿಂತಿರುತ್ತವೆ.ಕೆಲವರಿಗೆ ಮಂಗಳೂರಿನ ಟ್ರಾಫಿಕ್ ಸಮಸ್ಯೆ ಸರಿಯಾಗಬೇಕೆನ್ನುವ ಮನಸ್ಸಿದೆ. ಜಿ ಎಚ್ ಎಸ್ ರಸ್ತೆಯ ಕೊನೆಯಲ್ಲಿರುವ ಲಕ್ಷ್ಮಿ ಮಹಾಗಣಪತಿ ದೇವಸ್ಥಾನದವರು, ತಾರಾ ಕ್ಲಿನಿಕ್ ನವರು, ಗಣಪತಿ ಹೈಸ್ಕೂಲಿನವರು, ಜನತಾ ಬಜಾರಿನವರು ರಸ್ತೆ ಅಗಲ ಮಾಡಲು ಜಾಗ ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಮನಪಾದವರು ಅವರಣ ಗೋಡೆ ಕಟ್ಟಿಕೊಟ್ಟಿದ್ದಾರೆ.

ಆದರೆ ಅದರ ಮುಂದಿನ ಅಂಗಡಿಯವರು ಜಾಗ ಬಿಟ್ಟುಕೊಟ್ಟಿಲ್ಲದಿರುವುದರಿಂದ ಕೆಲಸ ಅರ್ಧಂಬರ್ಧ ಕ್ಕೆ ನಿಂತು ಹೋಗಿದೆ. ಆ ನಡುವೆ ಆ ರಸ್ತೆಯ ಮಧ್ಯದಲ್ಲಿರುವ ಶ್ರೀಕೃಷ್ಣ ಭವನದವರದ್ದು ಬೇರೆನೇ ಕಥೆ. ಇವರು ಮೊದಲಿಗೆ ಜಾಗ ಬಿಟ್ಟುಕೊಡಲು ಎಲ್ಲಾ ಒಪ್ಪಿಯಾಗಿತ್ತು. ಇವರು ಒಪ್ಪಿದರೂ ಅಂತ ಪಾಲಿಕೆ ಇವರು ಎಷ್ಟು ಜಾಗ ಬಿಟ್ಟುಕೊಡಬೇಕಿತ್ತೊ ಅಲ್ಲಿ ಗೋಡೆ ಕಟ್ಟಿಕೊಟ್ಟಿದ್ದರು. ಎಲ್ಲಾ ಸರಿಯಾಯಿತು ಎಂದ ಕೂಡಲೇ ಕೃಷ್ಣಭವನದ ಮಾಲೀಕರು ಬೇರೆಯದ್ದೇ ರಾಗ ತೆಗೆದರು. ಇವರು ಹಾಡಿದ ರಾಗಕ್ಕೆ ಶ್ರುತಿಯೂ ಇಲ್ಲ, ತಾಳವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಂಡಿಸಿರುವ ವಾದಕ್ಕೆ ತಳಬುಡವಿಲ್ಲ. ಯಾಕೋ ಅವರು ಹುತ್ತ ಬಡಿಯಲು ಹೋಗಿ ಮೈಮೇಲೆ ಇರುವೆ ಬಿಟ್ಟುಕೊಟ್ಟಂತಹ ಸ್ಥಿತಿಗೆ ಮುಟ್ಟಿದ್ದಾರೆ.

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search