• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕುಂಬಳಕಾಯಿ ಕಳ್ಳ ಎಂದರೆ ಸಚಿವರು ಹೆಗಲುಮುಟ್ಟಿ ನೋಡಬೇಕಾ?

Tulunadu News Posted On March 8, 2021
0


0
Shares
  • Share On Facebook
  • Tweet It

ಜಾರಕಿಹೊಳಿ ಸಿಡಿಯ ಕುರಿತು ದಿನಕ್ಕೊಂದು ಕಥೆ ಹುಟ್ಟಿಕೊಳ್ಳುತ್ತಿದೆ. ಓರ್ವ ಹೆಣ್ಣು ತಾನು ಇಂತಿಂತಹ ವ್ಯಕ್ತಿಯಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ, ನಂಬಿಸಿ ಮೋಸ ಮಾಡಿಬಿಟ್ಟ ಎಂದು ಹೇಳಿ ಪೊಲೀಸರಿಗೆ ದೂರು ಕೊಟ್ಟು ಅದಕ್ಕೆ ಸಾಕ್ಷ್ಯ ಎನ್ನುವಂತೆ ಈ ಸಿಡಿಗಳನ್ನು ಕೊಟ್ಟರೆ ಆಗ ಪ್ರಕರಣ ಸ್ಟ್ರಾಂಗ್ ಆಗುತ್ತದೆ. ಬೇರೆಯವರ ಮೂಲಕ ಕಳುಹಿಸಿಕೊಟ್ಟು ನಂತರ ಪೊಲೀಸ್ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದರೆ, ವಿಡಿಯೋ ಕಾಲ್ ಮಾಡಿ ಮಾಹಿತಿ ನೀಡಿದರೂ ಅಲ್ಲಿ ಆಕೆ ವಂಚನೆಗೆ ಒಳಗಾಗಿದ್ದಾಳೆ ಎಂದೇ ಆ ಕ್ಷಣ ನಂಬಬಹುದು. ಆದರೆ ಮೂರನೇ ವ್ಯಕ್ತಿಯೊಬ್ಬ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ಅವಳು ಯಾರೆಂದೇ ಗೊತ್ತಿಲ್ಲದೆ ಹೋರಾಡುವುದಿದೆಯಲ್ಲ ಅದೇ ಈ ಬಾರಿಯ ಸಿಡಿ ಕುತೂಹಲ.
ಈ ಒಟ್ಟು ಪ್ರಕರಣದಲ್ಲಿ ಅಲ್ಲಿ ಅವಳು ಸಂತ್ರಸ್ತೆ ಹೇಗೆ ಆಗುತ್ತಾಳೆ ಎನ್ನುವುದು ಪ್ರಶ್ನೆ. ಇಲ್ಲಿ ರಮೇಶ್ ಒಂದು ವೇಳೆ ವಿಡಿಯೋ ನಿಜವೇ ಆಗಿದ್ದರೆ (ಎದುರಿಗೆ ಕಾಣುತ್ತಿರುವ ಎಲ್ಲಾ ಸಾಕ್ಷ್ಯಗಳು ನೈಜ ಎಂದೇ ಬಿಂಬಿತವಾಗುವಂತಿದೆ) ಅವರು ತಮ್ಮ ಪತ್ನಿಗೆ ಮೋಸ ಮಾಡಿದ್ದಾರೆ ವಿನ: ಆ ವಿಡಿಯೋದಲ್ಲಿರುವ ಹೆಣ್ಣಿಗೆ ಮೋಸ ಆಗಿದೆ ಎನ್ನುವಂತೆ ಕಾಣುತ್ತಿಲ್ಲ. ಏಕೆಂದರೆ ಆ ಯುವತಿ ಯಾರು, ಎಲ್ಲಿದ್ದಾಳೆ, ನಿಜವಾಗಿಯೂ ಅನ್ಯಾಯಕ್ಕೆ ಒಳಗಾಗಿದ್ದಾಳೋ ಎಂದು ಹೇಳಲು ಅವಳೇ ಪೊಲೀಸರ ಮುಂದೆ ಬಂದಿಲ್ಲ. ಆದರೆ ಆಶ್ಚರ್ಯ ಎಂದರೆ ರಮೇಶ್ ಸಿಡಿ ಬರುತ್ತಿದ್ದಂತೆ ಸದ್ಯ 12 ಸಚಿವರು ಕೋರ್ಟಿಗೆ ಹೋಗಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನಾರ್ಥಕ ಚಿನ್ನೆ ಹಾಕಿ ವರದಿ ಮಾಡುತ್ತಿವೆ. ಅವರಲ್ಲಿ ಆರು ಸಚಿವರು ತಾವು ಕೋರ್ಟಿಗೆ ಹೋಗಿರುವುದು ಹೌದೆಂದು ಒಪ್ಪಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಸಚಿವರು ಹೆಗಲು ಮುಟ್ಟಿ ನೋಡುತ್ತಿರುವುದೇಕೆ ಎಂದು ಜನ ಕೇಳುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಆಪರೇಶನ್ ಗೆ ಒಳಗಾಗಿ ಭಾರತೀಯ ಜನತಾ ಪಾರ್ಟಿಗೆ ಬರುವ ಸಮಯದಲ್ಲಿ ಬೆರಳೆಣಿಕೆಯ ತಿಂಗಳುಗಳ ಕಾಲ ಆ ಬಂಡಾಯ ಶಾಸಕರು ವಿವಿಧ ರೆಸಾರ್ಟ್ ಗಳಲ್ಲಿಯೇ ಬೀಡುಬಿಟ್ಟಿದ್ದರು.
ತಿಂಗಳುಗಳ ಕಾಲ ಹೆಂಡತಿಯ ಮುಖ ನೋಡಲು ಕೂಡ ಅವಕಾಶ ಸಿಕ್ಕಿರಲಿಲ್ಲ. ಮುಂಬೈ ಅಲ್ಲಿ ಇಲ್ಲಿ ಎಂದು ವಿವಿಧ ಹೋಟೇಲುಗಳಲ್ಲಿ ಮೇಯುತ್ತಾ ಕುಳಿತಿದ್ದರು. ಬಹುಶ: ಆಗ ಇವರಲ್ಲಿ ಹಲವರು ಬೇಲಿ ಹಾರಿರಬಹುದಾ? ಆ ಸಂಶಯ ಈಗ ಜನರನ್ನು ಕಾಣುತ್ತಿದೆ. ಒಬ್ಬ ಪ್ರಾಪ್ತ ವಯಸ್ಕ ಓರ್ವ ಪ್ರಾಪ್ತ ವಯಸ್ಸಿನ ಯುವತಿಯ ಜೊತೆ ಪಲ್ಲಂಗದಲ್ಲಿ ಎಂಜಾಯ್ ಮಾಡಿರುವುದು ಕಾನೂನಾತ್ಮಕವಾಗಿ ಯಾವ ತೀರ್ಪೆ ಬರಲಿ, ಆದರೆ ನಮ್ಮ ದೇಶದಲ್ಲಿ ನೈತಿಕವಾಗಿ ಅದನ್ನು ಒಪ್ಪುವಂತಹ ಸಂಪ್ರದಾಯ ಇಲ್ಲ. ಆದ್ದರಿಂದ ಆಯಾ ಹೋಟೇಲುಗಳಲ್ಲಿ ಹೀಗೆ ವಿಡಿಯೋ ಇಟ್ಟು ನಮ್ಮನ್ನು ಮಂಗ ಮಾಡಿರಬಹುದಾ ಎಂದು ಬಂಡಾಯ ಹುಲಿಗಳಿಗೆ ಬೇಟೆಯಾಡಿದ ನೆನಪು ಕಾಡುತ್ತಿರಬಹುದು. ಆದರೆ ಇವರು ಹೇಳುವ ಪ್ರಕಾರ ನಮ್ಮ ಮುಖವನ್ನು ಬಳಸಿ ಅನೈತಿಕವಾಗಿ ಚಿತ್ರಿಸಿ ಹೆಸರು ಹಾಳು ಮಾಡಿಬಿಡುವ ಸಾಧ್ಯತೆ ಇದೆ. ಅದಕ್ಕಾಗಿ ಕೋರ್ಟಿನ ಮೊರೆ ಹೋಗಿದ್ದೇವೆ ಎನ್ನುತ್ತಿದ್ದಾರೆ. ಒಂದು ವೇಳೆ ಇವರು ಅಪ್ಪಟ ಪರಿಶುದ್ಧರಾಗಿದ್ದರೆ ಯಾವ ವ್ಯಕ್ತಿ ಏನು ಮಾಡಿದರೂ ಹೆದರುವುದಿಲ್ಲ, ಯಾಕೆಂದರೆ ನಾನು ಅಂತಹ ಯಾವ ಅನೈತಿಕ ಕೆಲಸ ಮಾಡಿಲ್ಲ ಎಂದು ಧೈರ್ಯದಿಂದ ಇರಬಹುದಲ್ಲ. ಒಂದು ವೇಳೆ ಇವರ ಡೂಪ್ಲಿಕೇಟ್ ಮಾಡಿ ಸಿಡಿ ಮಾಡಿದಿದ್ದರೆ ಅದನ್ನು ಫ್ಲಾರೆನ್ಸಿಕ್ ಲ್ಯಾಬ್ ಸಹಿತ ಉನ್ನತ ತಂತ್ರಜ್ಞಾನದಿಂದ ಪರಿಶೀಲಿಸಿ ಸುಳ್ಳು ಎಂದು ಇದ್ದರೆ ಇವರ ಚರಿಸ್ಮಾ ಇನ್ನಷ್ಟು ಜಾಸ್ತಿಯಾಗುವುದಿಲ್ಲವೆ? ಈಗ ಏನಾಗಿದೆ ಎಂದರೆ ಬಿಜೆಪಿಯ ಹೈಕಮಾಂಡಿಗೆ ಒಂದಿಷ್ಟು ಮುಜುಗರವಾಗಿರುವುದು ನಿಜ. ಅದು ಕೇಂದ್ರ ಸಚಿವ ಸದಾನಂದ ಗೌಡರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಒಂದು ವೇಳೆ ಇವರ ಘನಂಧಾರಿ ವಿಡಿಯೋ ಇದ್ದದ್ದೇ ಆದರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಲೀಕ್ ಆಗಲು ಶುರುವಾದರೆ ನಂತರ ಅದನ್ನು ಹಿಡಿಯುವುದು ಕಷ್ಟ. ಈಗ ಜನರಿಗೆ ಎಲ್ಲವೂ ಟಿವಿಯಲ್ಲಿಯೇ ಬರಬೇಕು, ಅಲ್ಲಿಯೇ ನೋಡಬೇಕು ಎಂದೆನಿಲ್ಲ. ಸರಿಯಾಗಿ ನೋಡಿದರೆ ಟಿವಿಯಲ್ಲಿ ಬರುವ 10%. ಉಳಿದ 90% ಅದೇ ಸಂಪೂರ್ಣ ವಿಡಿಯೋ ಪಡ್ಡೆಗಳ ಮೊಬೈಲಿನಲ್ಲಿ ಇರುತ್ತದೆ. ಇಂತಹುದೆಲ್ಲಾ ವೈರಲ್ ಆದರೆ ಖಂಡಿತವಾಗಿಯೂ ವೈಯಕ್ತಿಕವಾಗಿ ಸಚಿವರುಗಳಿಗೆ ಮತ್ತು ಒಟ್ಟು ರಾಜ್ಯದ ಬಿಜೆಪಿ ಸರಕಾರಕ್ಕೆ ಮುಜುಗರವಾಗಲಿದೆ. ಅವರನ್ನು ಸಮರ್ಥಿಸುವುದಾ, ಬಿಡುವುದಾ ಎನ್ನುವ ಪ್ರಶ್ನೆ ಮುಖ್ಯಮಂತ್ರಿಗಳ ಮುಂದೆ ಬರಲಿದೆ. ಅಷ್ಟಕ್ಕೂ ಈಗ ಜಾರಕಿಹೊಳಿಯನ್ನು ಸಮರ್ಥಿಸುತ್ತಿರುವ ರೇಣುಕಾಚಾರ್ಯ ಕೂಡ ಹಿಂದೆ ಒಮ್ಮೆ ಇಂತಹುದೇ “ಕಿಸ್” ಪ್ರಕರಣದಲ್ಲಿ ಸಿಲುಕಿದವರೇ. ಅಂತವರು ಸಮರ್ಥಿಸಿದರೆ ಅದರಿಂದ ಬಿಜೆಪಿಯ ಇಮೇಜಿಗೆ ಇನ್ನಷ್ಟು ಡ್ಯಾಮೇಜು ಉಂಟಾಗಲಿದೆ. ಉತ್ತಮ ನಡತೆಯ ಸುರೇಶ್ ಕುಮಾರ್ ಅವರಂತಹ ಸಚಿವರು ಇಂತವರನ್ನು ಸಮರ್ಥಿಸಲು ಹೋಗುವುದೇ ಇಲ್ಲ. ಹೀಗೆ ಮುಂದಿನ ಮೂರು ತಿಂಗಳಿಗೊಮ್ಮೆ ಒಬ್ಬೊಬ್ಬರದ್ದೇ ಸಿಡಿ ಬಂದರೆ ಚುನಾವಣೆಯ ಹೊತ್ತಿನಲ್ಲಿ ಸಂಶಯವೇ ಬೇಡಾ. ರಾಜ್ಯ ಸರಕಾರ ಬೆತ್ತಲಾಗಿ ಹೋಗುತ್ತದೆ. ಯಡ್ಡಿಯವರಿಗೆ ಇದು ಸಿಎಂ ಆಗಿ ಕಟ್ಟಕಡೆಯ ಚುನಾವಣೆ. ಅವರು ತಮ್ಮ ರಾಜಕೀಯ ಬದುಕಿನ ಕೊನೆಯ ಇನ್ನಿಂಗ್ಸಿನಲ್ಲಿ ಇರುವುದರಿಂದ ಸಿಎಂ ಆಗಿ ಕೆಳಗಿಳಿಯಲಿದ್ದಾರೆ. ಹೇಗಾದರೂ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದು ತಮ್ಮ ಸಿಎಂ ಆಗುವ ಮಹತ್ವಾಕಾಂಕ್ಷೆಯನ್ನು ತಣಿಸಿ ಎಲ್ಲಿಯಾದರೂ ರಾಜ್ಯಪಾಲರಾಗಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಉಳಿಯುವುದು ಮುಂದಿನ ಬಾರಿ ಅಧಿಕಾರಕ್ಕೆ ತರಬೇಕಾದವರ ಸವಾಲುಗಳು. ಅಧಿಕಾರಕ್ಕಾಗಿ ಸಿಕ್ಕಿದವರನ್ನು ಬಸ್ ಹತ್ತಿಸಿದರೆ ಹೀಗೆ ಆಗುವುದು!!
0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search