• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಉತ್ತಮ ಗೋಮಾಂಸ ಹೇಳಿಕೆಯ ಜಾಡು ಹಿಡಿದು ಹೊರಟಾಗ…!!

Tulunadu News Posted On March 27, 2021
0


0
Shares
  • Share On Facebook
  • Tweet It

ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಗೋಹತ್ಯಾ ನಿಷೇಧದ ಬಗ್ಗೆ ಉಸಿರೆತ್ತದೆ ಮೌನವಾಗಿ ಗೋಹತ್ಯೆಗೆ ಭರಪೂರ ಅವಕಾಶ ಕೊಡುವ ರಾಜ್ಯ ಕೇರಳ. ಅಲ್ಲಿ ಚುನಾವಣೆ ಎಂದರೆ ಗೋ ವಿಷಯ ಚರ್ಚೆಗೆ ಬಂದೇ ಬರುತ್ತದೆ. ಈಗ ಚುನಾವಣೆ ಇರುವುದರಿಂದ ಒಂದು ಪೋಸ್ಟರ್ ಕೇರಳದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಶ್ರೀಪ್ರಕಾಶ್ ಎನ್ನುವ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ತಾನು ಗೆದ್ದರೆ ತಮ್ಮ ಕ್ಷೇತ್ರದ ನಾಗರಿಕರಿಗೆ ಉತ್ತಮ ದರ್ಜೆಯ ಗೋಮಾಂಸ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅದೇ ಈಗ ಆಶ್ಚರ್ಯವಾಗುತ್ತಿರುವುದು. ಯಾಕೆಂದರೆ ಹೇಳಿರುವುದು ಬಿಜೆಪಿ ಅಭ್ಯರ್ಥಿ. ಆ ಪೋಸ್ಟರ್ ಬೇರೆ ಪಕ್ಷದ್ದು ಆಗಿದ್ದರೆ ಅದರಲ್ಲಿ ವಿಶೇಷ ಏನೂ ಇರಲಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಹಾಗೆ ಹೇಳಿದರಲ್ಲ ಎಂದು ಇಡೀ ಪೋಸ್ಟರ್ ಅನ್ನು ಎರಡ್ಮೂರು ಸಲ ಮೇಲಿನಿಂದ ಕೆಳಗೆ ನೋಡಿದಾಗ ಗ್ಯಾರಂಟಿಯಾಗುತ್ತದೆ. ಬಿಜೆಪಿ ಕರ್ನಾಟಕದಲ್ಲಿ ಒಂದು ಸ್ಟ್ಯಾಂಡ್ ಕೇರಳದಲ್ಲಿ ಬೇರೆಯದ್ದೇ ಸ್ಟ್ಯಾಂಡ್ ತೆಗೆದುಕೊಂಡಿದೆ ಎಂದು ಯಾರಿಗಾದರೂ ಅನಿಸದೇ ಇರದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಚಿಕ್ಕಪುಟ್ಟ ನಾಯಕರಿಂದ ಹಿಡಿದು ರಾಜ್ಯಾಧ್ಯಕ್ಷರ ತನಕ ಪ್ರತಿಯೊಬ್ಬರು ಪಕ್ಕದ ಕೇರಳಕ್ಕೆ ಹೋಗಿ ಅಲ್ಲಿ ಪಕ್ಷದ ಪರವಾಗಿ ಮತಪ್ರಚಾರ ಮಾಡುತ್ತಲೇ ಇದ್ದಾರೆ. ಹಾಗಿರುವಾಗ ಅವರದ್ದೇ ಮೊಬೈಲಿಗೆ ಇಂತಹ ಒಂದು ಪೋಸ್ಟರ್ ಬಂದರೆ ಅವರಿಗೆ ಎಷ್ಟು ಬೇಸರವಾಗಬೇಡಾ. ಆದ್ದರಿಂದ ವಿರೋಧ ಪಕ್ಷಗಳು ಶ್ರೀಪ್ರಕಾಶ್ ಅವರ ಹೇಳಿಕೆಯನ್ನು ಹಿಡಿದೇ ಬಿಜೆಪಿ ಮತದಾರರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
 ಇದನ್ನೇ ಹಿಡಿದು ಬೇರೆ ಪಕ್ಷಗಳು ಬಿಜೆಪಿ ನಾಯಕರು ಎದುರಿಗೆ ಗೋವನ್ನು ಪ್ರೀತಿಸುವ ನಾಟಕ ಮಾಡಿ ಹಿಂದಿನಿಂದ ಗೋಮಾಂಸದ ಮಾರ್ಕೆಟಿಂಗ್ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಅಪಪ್ರಚಾರದ ಹಿಂದೆ ಬೇರೆಯದ್ದೇ ಕಥೆ ಇದೆ. ಅಸಲಿಗೆ ಅದು ಶ್ರೀಪ್ರಕಾಶ್ ಅವರು ನಾಡಿದ್ದು ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಕೊಟ್ಟ ಹೇಳಿಕೆ ಅಲ್ಲ. ಅದು ಭರ್ತಿ ನಾಲ್ಕು ವರ್ಷಗಳ ಹಿಂದಿನ ಅವರ ಭರವಸೆ. ಆಗ ಮಲ್ಲಪುರಂ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಂಡರೂ, ಮಾಜಿ ಕೇಂದ್ರ ಸಚಿವರೂ ಆಗಿದ್ದ ಇ-ಅಹ್ಮದ್ ನಿಧನರಾದ ನಿಮಿತ್ತ ಅಲ್ಲಿ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಶ್ರೀಪ್ರಕಾಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಮಲ್ಲಪುರಂ ಹೇಗೆ ಎಂದರೆ ಅದು 65% ಮುಸ್ಲಿಮ್ ಮತದಾರರು ಇರುವ ಪ್ರದೇಶ. 5% ಕ್ರಿಶ್ಚಿಯನ್ ಮತದಾರರು ಇರುವ ಮತಕ್ಷೇತ್ರ. ಆ ನಿಟ್ಟಿನಲ್ಲಿ ಅಲ್ಲಿ ಬಿಜೆಪಿ ಗೆಲ್ಲಬೇಕಾದರೆ ಮುಸ್ಲಿಮರ ಮತಗಳು ನಿರ್ಣಾಯಕ. ಇದನ್ನು ಅರಿತ ಬಿಜೆಪಿ ಅಭ್ಯರ್ಥಿ ಗೋಮಾಂಸದ ವಿಷಯವನ್ನು ಎತ್ತಿದ್ದಾರೆ. ಆವತ್ತು ಅವರಿಗೆ ಆ ಕ್ಷೇತ್ರದಲ್ಲಿ ಗೆಲ್ಲಲು ಉತ್ತಮ ಗೋಮಾಂಸ ಪೂರೈಸುವ ಭರವಸೆ ನೀಡಲೇಬೇಕಿತ್ತಾ, ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಆ ಭರವಸೆ ಅವರು ಕೊಟ್ಟಿದ್ದು ಮಾತ್ರ ನಿಜ. ಆವತ್ತಿನ ಹೇಳಿಕೆ ಇವತ್ತು ವೈರಲ್ ಆಗುತ್ತಿದೆ. ಅದು ಇವತ್ತಿನ ಹೇಳಿಕೆ ಇರಲಿ, ನಾಲ್ಕು ವರ್ಷ ಅಂದರೆ 2017 ರ ಎಪ್ರಿಲ್ ನಲ್ಲಿ ಲೋಕಸಭಾ ಉಪಚುನಾವಣೆಗೆ ಕೊಟ್ಟ ಹೇಳಿಕೆ ಅದೇನೆ ಇರಲಿ, ಬಿಜೆಪಿ ಅಭ್ಯರ್ಥಿಗಳು ಕೇವಲ ಗೆಲ್ಲುವುದಕ್ಕಾಗಿ ಇಂತಹ ಹೇಳಿಕೆಯನ್ನು ಕೊಡುವುದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ. ಅದು ಈ ಚುನಾವಣೆಯ ಭರವಸೆ ಅಲ್ಲ ಎಂದು ಬಿಜೆಪಿ ಸಮರ್ಥಿಸಬಹುದು. ಆದರೆ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಅಭ್ಯರ್ಥಿ ಕೊಟ್ಟಿದ್ದ ಹೇಳಿಕೆ ಹೌದು ತಾನೆ? ಆದರೆ ಯಾವಾಗ ಬೇಕಾದರೂ ಕೊಟ್ಟಿರಲಿ, ಬಿಜೆಪಿ ಅಭ್ಯರ್ಥಿ ಹಾಗೆ ಹೇಳುವುದು ಸರಿಯಲ್ಲ. ಕೇರಳದಲ್ಲಿ ಯುಡಿಎಫ್ ಹಾಗೂ ಎಲ್ ಡಿಎಫ್ ಎರಡರ ಜೊತೆಗೂ ಹೋರಾಡಬೇಕಾದ ಬಿಜೆಪಿ ಕೇವಲ ತನ್ನ ಸಿದ್ಧಾಂತದಿಂದಲೇ ಗೆಲ್ಲಬೇಕೆ ವಿನ: ತನ್ನದಲ್ಲದ ಸಿದ್ಧಾಂತದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸುಖವಿಲ್ಲ. ಹಾಗಂತ ಗೋಮಾಂಸದ ವಿಷಯದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಸಿದ್ಧಾಂತವನ್ನು ಅಲ್ಲಿನ ನಾಗರಿಕರ ಮೇಲೆ ಹೇರಲು ಹೋಗಿಲ್ಲ. ಹಾಗಂತ ಬಿಜೆಪಿ ಸಿದ್ಧಾಂತದಿಂದ ದೂರ ಹೋಗಬಾರದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ವಿಷಯದಲ್ಲಿ ಗಲಾಟೆ ಆಗಿ ವಾರವೀಡಿ ಮಂಗಳೂರು ಬಂದ್ ಆದದ್ದನ್ನು ನಾವು ಅನುಭವಿಸಿದ್ದೇವೆ. ಅಮಾಯಕರ ಮೇಲೆ ಹಲ್ಲೆ, ಕೊಲೆಯತ್ನ ಮತ್ತು ಭಜರಂಗದಳದ ಮುಖಂಡರ ಹತ್ಯೆ ಕೂಡ ಇದೇ ವಿಷಯದಲ್ಲಿ ಆಗಿದೆ. ಆಗಿರುವಾಗ ನಮ್ಮದೇ ಪಕ್ಕದ ರಾಜ್ಯದಲ್ಲಿ ಇದೇ ವಿಷಯದಲ್ಲಿ ಯಾಕೆ ಬಿಜೆಪಿ ಸಾಫ್ಟ್ ಆಗಬೇಕು. ನಾನು ಹೇಳುವುದಾದರೆ ಹೀಗೆ ತಮ್ಮ ಗೆಲುವಿಗಾಗಿ ಪಕ್ಷದ ಸಿದ್ಧಾಂತವನ್ನು ಮೂಲೆಗೆ ಎಸೆಯುವವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರಿಗೆ ಬಿಜೆಪಿಯವರೇ ಮತ ಹಾಕಬಾರದು.!!
0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Tulunadu News January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search