• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ವಿವಿಯ ಸಿಸಿ ಕ್ಯಾಮೆರಾ ಯೋಜನೆಯ ಅಸಲಿ ಗುಟ್ಟೇನು?

TNN Correspondent Posted On August 16, 2017
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಯೋಜನೆ ಹಾಕಲಾಯಿತು. ಒಟ್ಟು ಯೋಜನೆ ಎಷ್ಟು ಕೋಟಿಯದ್ದು ಗೊತ್ತಾ? ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಯದ್ದು. ಅಷ್ಟಕ್ಕೂ ಏಕಾಏಕಿ ಸಿಸಿ ಕ್ಯಾಮೆರಾ ಅಳವಡಿಸಲು ಹೋದರೆ ಸಂಶಯ ಬರುತ್ತದೆಯಲ್ಲ, ಅದಕ್ಕೆ ಮಂಗಳೂರು ವಿವಿ ಕುಲಪತಿ ಭೈರಪ್ಪನವರು ಮತ್ತು ಅವರ ಟೀಮ್ ಒಂದು ಪ್ಲಾನ್ ಮಾಡುತ್ತದೆ. ಆ ಪ್ರಕಾರ ವಿವಿಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇದೆ ಎಂದು ಸುದ್ದಿ ಹರಡಿಸಲಾಗುತ್ತದೆ. ಈ ಕ್ಯಾಮೆರಾದ ಘಟನೆ ಆಗದಿದ್ದರೆ ಸಿಸಿ ಕ್ಯಾಮೆರಾ ಇಡುವ ಇವರ ಯೋಜನೆಯ ಬಗ್ಗೆ ಎಲ್ಲರಿಗೂ ಸಂಶಯ ಬರುತ್ತಿತ್ತು. ಆದರೆ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾದ ಕೇಸ್ ಆದ ನಂತರ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಬೇಕೆ ಬೇಕು ಎನ್ನುವ ಪ್ರತಿಭಟನೆ, ಚರ್ಚೆ ಆದಾಗ ಇವರಿಗೆಲ್ಲ ತಮ್ಮ ಪ್ಲಾನ್ ಯಶಸ್ವಿಯಾದ ಖುಷಿಯಾಯಿತು. ಆ ಪ್ರಕರಣದ ಆರೋಪಿಯನ್ನಾಗಿ ಒಬ್ಬ ಯುವಕನನ್ನು ಫಿಕ್ಸ್ ಮಾಡಲಾಯಿತು. ಆತನನ್ನು ಬಂಧಿಸಿದಾಗೆ ಮಾಡಿ ತಕ್ಷಣ ಜಾಮೀನು ಕೂಡ ಕೊಡಿಸಲಾಯಿತು. ಆರೋಪಿಗೆ ಜಾಮೀನು ಕೊಡುವಾಗ ವಿವಿ ಕಡೆಯಿಂದ ಆಬ್ಜೆಕ್ಷನ್ ಹಾಕದ ಹಾಗೆ ಭೈರಪ್ಪ ಅಂಡ್ ಟೀಮ್ ನೋಡಿಕೊಂಡಿತು. ಅದಕ್ಕಾದ ಖರ್ಚನ್ನು ಇವರೇ ನೋಡಿಕೊಂಡರು. ಹಾಗೆ ಒಂದು ದೊಡ್ಡ ನಾಟಕ ಸೃಷ್ಟಿಸಿ ತಮ್ಮ ಸಿಸಿ ಕ್ಯಾಮೆರಾದ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡರು. ನಾಲ್ಕು ಕೋಟಿಯ ಯೋಜನೆ, ಟೆಂಡರ್ ಇಲ್ಲದೇ ಅನುಷ್ಟಾನಗೊಂಡಿತು. ಅದರಿಂದ ಇವರ ಜೇಬು ತುಂಬಿತು ಎಂದು ಮತ್ತೆ ಹೇಳುವ ಅಗತ್ಯ ಇದೆಯಾ?

ನಂತರ ನಡೆದದ್ದು ಸೋಲಾರ್ ಹಗರಣ. ಇದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಕಡಿಮೆ ಬಿಡ್ ಅನ್ನು ಬಿಟ್ಟು ಹೆಚ್ಚು ಬಿಡ್ ಗೆ ಗುತ್ತಿಗೆ ನೀಡಲಾಗಿತ್ತು. ಇದರ ಹಿಂದೆ ಲಂಚ ಕೆಲಸ ಮಾಡಿದೆ ಎಂದು ಒಬ್ಬ ಕುರುಡ ಕೂಡ ಹೇಳಬಲ್ಲ. ವಿವಿಗೆ ಹಣ ಉಳಿಸುವ ಮನಸ್ಸು ಇದ್ದರೆ ಯಾಕೆ ಹೆಚ್ಚು ಬಿಡ್ ಮಾಡಿದವರಿಗೆ ಗುತ್ತಿಗೆ ಕೊಡುವ ಕೆಲಸ ಮಾಡಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಹೊರಗೆ ಬರಲ್ವಾ? ಭೈರಪ್ಪ ಮತ್ತು ಟೀಮ್ ನ ಮತ್ತೊಂದು ಭ್ರಷ್ಟಾಚಾರ ಎಂದರೆ ಗುತ್ತಿಗೆ ಆಧಾರಿತ ನೌಕರರ ಸಂಬಳಕ್ಕೆ ಕೈ ಹಾಕುವುದು. ಮಂಗಳೂರು ವಿವಿಯಲ್ಲಿ ಸುಮಾರು 700 ರಷ್ಟು ಗುತ್ತಿಗೆ ಆಧಾರಿತ ನೌಕರರಿದ್ದಾರೆ. ಅದರಲ್ಲಿ ಸೆಕ್ಯೂರಿಟಿ, ಪಿಯೋನ್, ಎಟೆಂಡರ್ ಎಲ್ಲ ಬರುತ್ತಾರೆ. 700 ಜನರಲ್ಲಿ ಹಲವರ ಸಂಬಳ 20 ರಿಂದ 23 ಸಾವಿರದ ತನಕ ಇದೆ. ಆದರೆ ನಿಜವಾಗಿ ಅವರ ಕೈಗೆ ಸಿಗುವುದು ಎಷ್ಟು ಗೊತ್ತಾ? ಏಳರಿಂದ ಎಂಟು ಸಾವಿರ ಸಂಬಳ ಮಾತ್ರ. ಉಳಿದ ಹಣ ಎಲ್ಲಿಗೆ ಹೋಗುತ್ತದೆ. ಅದಕ್ಕೆ ಕುಲಪತಿ ಭೈರಪ್ಪ ಅವರು ಏನು ಹೇಳುತ್ತಾರೆ?

ಮಂಗಳೂರು ವಿವಿಯಲ್ಲಿ ಪರ್ಚೇಸ್ ಕಮಿಟಿ ಎನ್ನುವುದು ಇದೆ. ಮಂಗಳೂರು ವಿವಿಯಲ್ಲಿ ನಡೆಯುವ ಎಲ್ಲಾ ಭ್ರಷ್ಟಾಚಾರಗಳಿಗೂ ಇದು ಒಂದು ರೀತಿಯಲ್ಲಿ ದೊಡ್ಡಪ್ಪ ಇದ್ದ ಹಾಗೆ. ವಿವಿಗೆ ಪ್ರತಿ ವಸ್ತುವನ್ನು ಖರೀದಿ ಮಾಡುವಾಗ ಬಿಲ್ ಲಕ್ಷಾಂತರ ರೂಪಾಯಿಯಿಂದ ಕೋಟ್ಯಾಂತರ ರೂಪಾಯಿಗಳ ತನಕ ಹೋಗುತ್ತದೆ. ಪೀಠೋಪಕರಣಗಳಿರಬಹುದು, ಕಂಪ್ಯೂಟರ್ ಗಳಿರಬಹುದು, ಎಲೆಕ್ಟ್ರೀಕಲ್ ವಸ್ತುಗಳು ಇರಬಹುದು. ಇದನ್ನೆಲ್ಲಾ ಖರೀದಿ ಮಾಡುವಾಗ ಖರೀದಿಗೆ ಒಂದಕ್ಕೆ ಎರಡು ಪಟ್ಟು ಹಣವನ್ನು ಇಲ್ಲಿ ವಿನಿಯೋಗಿಸಲಾಗಿದೆ. ಕಡಿಮೆ ಹಣಕ್ಕೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸುವ ಅವಕಾಶ ಇರುವಾಗ ಮನಸ್ಸಿಗೆ ಬಂದಂತೆ ಹಣ ಕೊಟ್ಟು ವಸ್ತುಗಳ ಖರೀದಿ ನಡೆದಿದೆ. ಈ ಪರ್ಚೇಸ್ ಕಮಿಟಿಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಆಗ ಹೊರಗೆ ಬರುವ ಭ್ರಷ್ಟಾಚಾರವನ್ನು ಕಂಡರೆ ರಾಜಕಾರಣಿಗಳೇ ದಂಗಾಗಬಹುದು.

ವಿಷಯ ಇಷ್ಟೇ ಇಲ್ಲ. ಎಲ್ಲವನ್ನು ಒಮ್ಮೆಲ್ಲೆ ಎಲ್ಲಾ ಹೇಳಿದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಯಾಕೆಂದರೆ ಒಂದೊಂದು ಭ್ರಷ್ಟಾಚಾರವೂ ಒಂದೊಂದು ಅಧ್ಯಾಯ. ಭೈರಪ್ಪ ಹಾಗೂ ಟೀಮ್ ಮಾಡಿರುವ ಹಗರಣಗಳನ್ನು ಬಯಲಿಗೆಳೆದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನವರು ಪ್ರತಿಭಟನೆಗೆ ಹೊರಟ ಕೂಡಲೇ ಅದರ ವಾಸನೆ ವಿವಿ ಸಿಂಡಿಕೇಟ್ ನಲ್ಲಿರುವ ಒಬ್ಬರಿಗೆ ತಕ್ಷಣ ಗೊತ್ತಾಗುತ್ತದೆ. ಅವರು ತಕ್ಷಣ ಫೀಲ್ಡಿಗೆ ಇಳಿದು ಬಿಡುತ್ತಾರೆ. ಪ್ರತಿಭಟನೆಯನ್ನು ಮಾಡಲು ಹೊರಟವರಿಗೆ ಆಚಾರ್ಯರಂತೆ ಭೋದನೆ ಮಾಡಲು ಶುರುಮಾಡುತ್ತಾರೆ. ಸಂಘಟನೆಯನ್ನು “ಹರಿ”ಯುವ ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಅವರು ಭೈರಪ್ಪನವರಿಗೆ ನಿಕಟರಾಗಿದ್ದಾರೆ. ಅದನ್ನು ಕೂಡ ಮುಂದಿನ ಅಧ್ಯಾಯದಲ್ಲಿ ತಿಳಿಸುತ್ತೇವೆ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search