• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆಂಟೋನಿಗೆ ಒಂದು ನೋಟಿಸ್ ಕೊಡಲಾಗದಷ್ಟು ವೀಕ್ ಆಯಿತೆ ಪಾಲಿಕೆಯ ಬಿಜೆಪಿ ಆಡಳಿತ!!

Hanumantha Kamath Posted On September 10, 2021
0


0
Shares
  • Share On Facebook
  • Tweet It

ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರದ್ದು ಗುತ್ತಿಗೆ ಅವಧಿ ಇದೇ ಜನವರಿಗೆ ಕೊನೆಯಾಗುತ್ತಿದೆ. ತಿಂಗಳಿಗೆ ಎರಡು ಕೋಟಿ ರೂಪಾಯಿಗಿಂತ ಹೆಚ್ಚಿನ ಬಿಲ್ ಅವರಿಗೆ ಸಂದಾಯವಾಗುತ್ತಿರುವುದಕ್ಕೂ ಅವರು ಮಾಡುವ ಕೆಲಸಕ್ಕೂ ಹೋಲಿಕೆ ಇಲ್ಲವೇ ಇಲ್ಲ. ಆದ್ದರಿಂದ ನಮ್ಮ ಜನರ ತೆರಿಗೆಯ ಹಣ ಪುಕ್ಕಟೆ ವೇಸ್ಟ್ ಆಗಬಾರದು ಎಂದಾದರೆ ಅವರಿಗೆ ಕೊಡದೇ ಇರುವುದೇ ಬೆಸ್ಟ್ ಎನ್ನುವುದು ಅವರಿಂದ ಫಲಾನುಭವಿಗಳಾಗಿರುವವರ ಬಿಟ್ಟು ಬೇರೆ ಹೆಚ್ಚಿನವರ ಅಭಿಪ್ರಾಯ ಆಗಿದೆ. ಆದ್ದರಿಂದ ಮುಂದಿನ ಅವಧಿಗೆ ಗುತ್ತಿಗೆ ವಿಸ್ತರಣೆ ಆಗುವುದಿಲ್ಲ ಎಂದು ಗೊತ್ತಿರುವುದರಿಂದ ಅವರು ಕೂಡ ಈಗಲೇ ನಿರ್ಲಕ್ಷ್ಯ ಮಾಡಲು ಶುರು ಮಾಡಿ ಆಗಿದೆ. ಅದಕ್ಕೆ ಸರಿಯಾಗಿ ಒಂದು ತಿಂಗಳಿನಿಂದ ಎಲ್ಲಿ ಕೂಡ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹಣೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಅನೇಕ ಮನೆಗಳಲ್ಲಿ ನಾಗರಿಕರು ತಮ್ಮ ಮನೆಗಳ ಹೊರಗೆ ಇಡುತ್ತಿರುವ ಕಸ ತ್ಯಾಜ್ಯಗಳು ಹಾಗೆ ಅಲ್ಲಿಯೇ ಬಾಕಿ ಆಗಿ ಹೋಗುತ್ತಿವೆ. ಇನ್ನು ವಾರದಲ್ಲಿ ಆರು ದಿನ ಹಸಿ ತ್ಯಾಜ್ಯ ಸಂಗ್ರಹಣೆ ಮತ್ತು ಒಂದು ದಿನ ಒಣತ್ಯಾಜ್ಯ ಸಂಗ್ರಹಣೆಯ ನಿಯಮವನ್ನು ರೂಪಿಸಲಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಆದ್ದರಿಂದ ಅನೇಕ ವಾಣಿಜ್ಯ ವ್ಯವಹಾರ ಇರುವ ಕಡೆ ಆಂಟೋನಿ ವೇಸ್ಟಿನವರು ವಾರದಲ್ಲಿ ಒಂದು ದಿನ ಮಾತ್ರ ಸಂಗ್ರಹ ಮಾಡಲು ಬರುತ್ತಿದ್ದಾರೆ. ಇದರಿಂದ ವಾಣಿಜ್ಯ ವ್ಯಾಪಾರ ಮಾಡುವವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಮತ್ತು ಅದರಿಂದ ನಾಗರಿಕರಿಗೆ ಕೂಡ ಕಿರಿಕಿರಿಯಾಗುತ್ತಿದೆ. ಹೇಗೆಂದರೆ ಒಂದು ಬೃಹತ್ ಪುಸ್ತಕದಂಗಡಿ ಇದೆ ಎಂದು ಇಟ್ಟುಕೊಳ್ಳಿ. ಅವರ ಮಳಿಗೆಯಲ್ಲಿ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಒಣತ್ಯಾಜ್ಯ ಉತ್ಪಾದನೆಯಾಗುತ್ತದೆ. ಅವರು ಅದನ್ನು ಎಷ್ಟು ಎಂದು ವಾರವೀಡಿ ಒಟ್ಟು ಮಾಡಿ ಇಡುವುದು. ಅವರು ವಾರಕ್ಕೊಂದು ದಿನ ಕೊಡಲು ತೆಗೆದಿಟ್ಟರೆ ಅದಕ್ಕಾಗಿಯೇ ಒಂದು ಗೋಡೌನ್ ಇಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅವರು ಅದನ್ನು ಎಲ್ಲಿಯಾದರೂ ಒಂದು ಕಡೆ ವಿಲೇವಾರಿ ಮಾಡಲು ಹೋಗುತ್ತಾರೆ. ಅದರಿಂದ ಒಣ ತ್ಯಾಜ್ಯ ಎಲ್ಲೆಲ್ಲಿಯೋ ಡಂಪ್ ಆಗುತ್ತಿದೆ. ಇಂತಹುದೇ ಸಮಸ್ಯೆಯನ್ನು ಅನೇಕ ಮಳಿಗೆಯವರು ಅನುಭವಿಸುತ್ತಿದ್ದಾರೆ. ಬೇಕಾದರೆ ಬೇಕರಿಗಳನ್ನೇ ತೆಗೆದುಕೊಳ್ಳಿ. ಅಲ್ಲಿ ನಿತ್ಯ ಒಣ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದರೆ ಈ ಆಂಟೋನಿ ವೇಸ್ಟ್ ನವರು ವಾರದಲ್ಲಿ ಒಂದು ದಿನ ತೆಗೆದುಕೊಂಡು ಹೋಗುತ್ತಾರೆ. ಉಳಿದ ದಿನ ಆ ತ್ಯಾಜ್ಯ ಎಲ್ಲೆಲ್ಲಿಯೋ ಬಿದ್ದಿರುತ್ತದೆ. ಅಂತಹ ಕೆಲವು ಫೋಟೋಗಳನ್ನು ಇವತ್ತು ಈ ಜಾಗೃತ ಅಂಕಣದಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ವಾಣಿಜ್ಯ ವ್ಯವಹಾರ ಇರುವ, ಒಣ ತ್ಯಾಜ್ಯ ಯಥೇಚ್ಚವಾಗಿ ಉತ್ಪಾದನೆಯಾಗುವ ಕೇಂದ್ರಗಳಲ್ಲಿ ಆಂಟೋನಿ ವೇಸ್ಟ್ ನವರಿಗೆ ತ್ಯಾಜ್ಯ ಸಂಗ್ರಹಣೆ ನಿತ್ಯ ಮಾಡಬೇಕೆಂದು ಅನಿಸುವುದಿಲ್ಲವೇ? ಪಾಲಿಕೆಯ ವ್ಯಾಪ್ತಿಯಲ್ಲಿರುವ ಮನೆಗಳು, ಅಂಗಡಿಗಳನ್ನು ಎಲ್ಲಾ ಸೇರಿಸಿ ತ್ಯಾಜ್ಯ ಸಂಗ್ರಹಣೆ ಮತ್ತು ಇವರು ಮಾಡಬೇಕಾದ ಬೇರೆ ಬೇರೆ ಕ್ಲೀನಿಂಗ್ ಕೆಲಸಗಳನ್ನು ಸೇರಿಸಿ ಇವರಿಗೆ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಎಂದು ಕೊಡಲಾಗುತ್ತಿದೆ. ಹೀಗಿರುವಾಗ ಇವರು ಅದನ್ನು ಮಾಡದಿದ್ದರೆ ಅವರಿಗೆ ಅಷ್ಟು ಹಣ ಕೊಡುವ ಅವಶ್ಯಕತೆಯಾದರೂ ಏನಿದೆ? ಹಾಗಾದರೆ ಇದನ್ನು ಯಾರು, ಯಾಕೆ ಪ್ರಶ್ನಿಸುವುದಿಲ್ಲ. ಐದು ಬಾರಿ ಗೆದ್ದಿರುವ ಪ್ರೇಮಾನಂದ ಶೆಟ್ಟಿಯವರು ಈಗ ಮೇಯರ್, ಮೂರ್ನಾಕು ಬಾರಿ ಗೆದ್ದಿರುವ ಭಾರತೀಯ ಜನತಾ ಪಾರ್ಟಿಯ ಸದಸ್ಯರು ಈಗ ಆಡಳಿತ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಬಿಡಿ, ಅಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಕಾರ್ಪೋರೇಟರ್ ಗಳು ಇದ್ದಾರೆ. ಅವರು ಅಧಿಕಾರದಲ್ಲಿ ಇರುವಾಗ ಈ ತ್ಯಾಜ್ಯ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ಆಗಿದೆ ಎಂದೇ ಇಟ್ಟುಕೊಳ್ಳೋಣ. ಆದರೆ ಈಗ ಬಿಜೆಪಿ ಆಡಳಿತ ಬಂದಿದೆಯಲ್ಲ, ನೀವು ಏನು ಮಾಡುತ್ತಿದ್ದೀರಿ. ಪ್ರಥಮ ಬಾರಿ ಗೆದ್ದಿರುವ ಕಾರ್ಪೋರೇಟರ್ ನಿಂದ ಹಿಡಿದು ಐದು ಬಾರಿ ಗೆದ್ದಿರುವವರ ತನಕ ಯಾರು ಈ ಬಗ್ಗೆ ಧ್ವನಿ ಎತ್ತಿದ್ದೀರಿ? ಎಷ್ಟು ಬಾರಿ ಮನಪಾ ಸದಸ್ಯರು ತಮ್ಮ ವಾರ್ಡಿನಲ್ಲಿ ಆಂಟೋನಿ ವೇಸ್ಟಿನವರು ಕಸ ಸಂಗ್ರಹ ಮಾಡದೇ ಹೋಗುತ್ತಿದ್ದಾರೆ ಎಂದು ಪಾಲಿಕೆಯ ಆಯುಕ್ತರಿಗೆ ಲಿಖಿತವಾಗಿ ಪತ್ರ ಬರೆದಿದ್ದಿರಿ. ಯಾಕೆ ಬರೆಯಲ್ಲ, ಯಾಕೆ ಧ್ವನಿ ಎತ್ತಲ್ಲ. ಯಾಕೆ ಆಂಟೋನಿಯವರ ವಿರುದ್ಧ ಮಾತನಾಡುವ ನೈತಿಕತೆ ಇಲ್ವಾ? ಅವರು ನೀಡಿರುವ ಎಂಜಿಲು ಪ್ರಸಾದ ರುಚಿಯಾಗಿ ಹೋಗಿದೆಯಾ? ಅವರು ಗುತ್ತಿಗೆ ಅವಧಿ ಮುಗಿಸುವುದು ನಿಮಗೆ ಸೂತಕದ ದಿನಗಳಾಗಲಿವೆಯಾ? ಆಂಟೋನಿ ವೇಸ್ಟ್ ನವರಿಗೆ ಯಾಕೆ ನೋಟಿಸ್ ಕೊಟ್ಟು ಕೆಲಸ ಮಾಡಿ ಎಂದು ಎಚ್ಚರಿಕೆ ಕೊಡುವ ಕೆಲಸ ಆಗುತ್ತಿಲ್ಲ. ಇಷ್ಟು ದೊಡ್ಡ ಅವ್ಯವಸ್ಥೆ ಆಗುತ್ತಿದ್ದರೂ ಒಂದು ನೋಟಿಸ್ ಕೊಡಲಾಗದಷ್ಟು ವೀಕ್ ಆಯಿತೆ ಪಾಲಿಕೆಯ ಬಿಜೆಪಿ ಆಡಳಿತ.
ಇನ್ನು ಕೆಲವು ಕಡೆ ನಾಗರಿಕರು ಕಸ ಸಂಗ್ರಹಣೆ ಯಾರು ಬರದೇ ಇರುವುದರಿಂದ ಹಿಂದೆ ತಾವು ಹಾಕುತ್ತಿದ್ದ ನಿರ್ದಿಷ್ಟಜಾಗದಲ್ಲಿ ಮತ್ತೆ ಕಸ ಹಾಕಲು ಶುರು ಮಾಡಿದ್ದಾರೆ. ಒಬ್ಬರು ಹಾಕುವುದನ್ನು ನೋಡಿದ ಇನ್ನೊಬ್ಬರು ಕಸ ಬಿಸಾಡಿ, ಅಲ್ಲಿ ಮತ್ತೊಬ್ಬರು ಕಸ ಬಿಸಾಡಿ ಹೀಗೆ ಜನರು ಮೇಲಿನಿಂದ ಮೇಲೆ ಕಸ ಬಿಸಾಡಿ ಅಲ್ಲಿ ಕಸದ ಕೊಂಪೆ ಆಗುತ್ತಿದೆ. ಕೇಳಿದರೆ ಮೇಯರ್ ಹಾಗೂ ಕೆಲವು ಕಾರ್ಪೋರೇಟರ್ ಗಳು ನಾವು ಅಲ್ಲಿ ಬೋರ್ಡ್ ಹಾಕುತ್ತೇವೆ, ಸೆಲ್ಫಿ ಪಾಯಿಂಟ್ ಮಾಡುತ್ತೇವೆ ಎಂದು ಹೇಳುತ್ತಾರೆ. ಕೆಲವು ಕಾರ್ಪೋರೇಟರ್ಸ್ ಬುದ್ಧಿವಂತಿಕೆ ಬಳಸಿ ಅಂತಹ ಜಾಗವನ್ನು ಸ್ವಚ್ಚ ಮಾಡಿ ಅಲ್ಲಿ ಸೆಲ್ಫಿ ಪಾಯಿಂಟ್ ಎಂದು ಜಾಗವನ್ನು ಸುಂದರೀಕರಣಗೊಳಿಸಿದ್ದಾರೆ. ಹಾಗೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಕಸ ಸಂಗ್ರಹ ಮಾಡುತ್ತಿರುವ ಆಂಟೋನಿ ವೇಸ್ಟಿನವರ ನಿರ್ಲಕ್ಷ್ಯದಿಂದ ಕಸದ ಕೊಂಪೆಗಳಾಗುತ್ತಿರುವ ಸ್ಥಳಗಳು ನಿಮಗೆ ಕಾಣಿಸುತ್ತಿವೆ. ಅಲ್ಲಿ ಸೆಲ್ಫಿ ಪಾಯಿಂಟ್ ಮಾಡಬೇಕು ಎಂದು ಅನಿಸುತ್ತದೆ. ಆದರೆ ಈ ಆಂಟೋನಿ ವಿರುದ್ಧ ಮಾತನಾಡಬೇಕು ಎಂದು ಅನಿಸಲ್ವ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ!
0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search