• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರಿನಲ್ಲಿ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಮಹಾದೇವಿ!

TNN Correspondent Posted On August 21, 2017
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ ಮಹಾದೇವಿ!
ಜಾತಿ ಬಗ್ಗೆ ಮಾತಾಡುವ ನಮ್ಮ ರಾಜಕಾರಣಿಗಳು ಗಡಿ ಪ್ರದೇಶದಲ್ಲಿ ಐದು ನಿಮಿಷ ಇದ್ದು ಬನ್ನಿ ಎಂದು ಗುಡುಗಿದ  ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಈ ದೇಶದ ಜನಪ್ರತಿನಿಧಿಗಳ ಬಗ್ಗೆ ಇರುವ ಕೋಪವನ್ನು ಹೊರ ಹಾಕಿದರು.
ಮಂಗಳೂರಿನ ಪುರಭವನದಲ್ಲಿ ನಡೆದ ಅಮರ್ ಜವಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾದೇವಿ ಈ ದೇಶದಲ್ಲಿರುವ ರಾಜಕಾರಣಿಗಳು ಜಾತಿ ಜಾತಿ ಎಂದು ಹೇಳುವ ಬದಲು ಗಡಿಯಲ್ಲಿ ಐದು ನಿಮಿಷ ಇದ್ದು ಬಂದರೆ ಸೈನಿಕರ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ಅವರ ಮೇಲಿನ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.  ಸಿಯಾಚಿನ್‌ನ ಹಿಮಪಾತದಲ್ಲಿ ಸಿಲುಕಿ ಬದುಕುಳಿದು ಬಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವೀರ ಯೋದ ಹನುಮಂತಪ್ಪ ಕೊಪ್ಪದ್ ರವರ ಪತ್ನಿ ಮಹಾದೇವಿ ಮಾತಾನಾಡುತ್ತಾ ರಾಜಕಾರಣಿಗಳ ಬಗ್ಗೆ ಸಾಕಷ್ಟು ಬೇಸರವನ್ನು ಕಾರ್ಯಕ್ರಮಕ್ಕೆ ಬಂದ್ದಿದ್ದ ಮಂಗಳೂರಿನ ಜನತೆಯ ಮುಂದೆ ತೋಡಿಕೊಂಡರು.
 ಶಿಸ್ತಿನ ಸಿಪಾಯಿ ಮೇಯರ್ ಕವಿತಾ ಸನಿಲ್ ಕಣ್ಣೀರು!
ದಕ್ಷಿಣ ಕನ್ನಡ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಹುತಾತ್ಮ ಯೋದರ ಬಗ್ಗೆ ಮಾತನಾಡುತ್ತಾ ಬಾವುಕರಾದರು. ಶಿಸ್ತಿನ ಸಿಪಾಯಿ ಮೇಯರ್ ಕವಿತಾ ಸನಿಲ್ ಮಾತನಾಡುತ್ತಾ ಸೈನಿಕರ ಕೊಡುಗೆ ಈ ದೇಶಕ್ಕೆ ಅಪಾರ ಎಂದು ಬಾವುಕರಾದ ಕ್ಷಣ ಪುರಭವನ ದಲ್ಲಿದ್ದವರನ್ನು ಕೂಡ ದುಃಖ ತೃಪ್ತರಾಗಿಸಿತು.
 ದಕ್ಷಿಣ ಕನ್ನಡ ಜಿಲ್ಲೆಯ ಹುತಾತ್ಮಯೋಧರಿಗೆ ನಮನ.
ಟೀಮ್ ಬ್ಲ್ಯಾಕ್ ಅಂಡ್ ವೈಟ್ ಆಯೋಜಿಸಿದ್ದ ಅಮರ್ ಜವಾನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನೆರೆದಿದ್ದವರ ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ಹುತಾತ್ಮ ಯೋಧರ ಕುಟುಂಬಕ್ಕೆ ಗೌರವವನ್ನು ಸೂಚಿಸಲಾಯಿತು. ಭಾರತೀಯ ಸೇನೆಯಲ್ಲಿ ಸೇವೆಯಲ್ಲಿ ಇದ್ದಾಗ ವೀರ ಮರಣವನ್ನಪ್ಪಿದ ಹುತಾತ್ಮರಾದ ಲ್ಯಾನ್ಸ್ ನಾಯಕ್ ವಿಶ್ವಾಂಬರ್ ಎಚ್ ಪಿ, ಹವಲ್ದಾರ್ ಪರಮೇಶ್ವರ್ ಕೆ, ಹವಲ್ದಾರ್ ಗಿರೀಶ್ ಕುಮಾರ್, ಸುಭೇದಾರ್ ಕೆ ಏಕನಾಥ್ ಶೆಟ್ಟಿ ಮತ್ತು ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಕುಟುಂಬಸ್ಥರನ್ನ ಸನ್ಮಾನಿಸುವುದರ ಮೂಲಕ ಗೌರವಿಸಲಾಯಿತು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವೇದವ್ಯಾಸ್ ಕಾಮತ್, ಮೇಯರ್ ಕವಿತಾ ಸನಿಲ್, ಹರಿಕೃಷ್ಣ ಪುನರೂರು, ಡಾ. ಆಶಾ ಜ್ಯೋತಿ ರೈ, ಲೈಯನ್ ರೊನಾಲ್ಡ್ ಗೋಮ್ಸ್, ಕಾರ್ನೆಲ್ ಶರತ್ ಭಂಡಾರಿ, ಪ್ರೊಫೆಸರ್ ವಿನಿತಾ ರೈ, ಸೈಮನ್ ಲೋಬೊ, ಮದನ್, ಲೈಯನ್ ಚಂದ್ರಹಾಸ್ ಶೆಟ್ಟಿ, ಅರೆಹೊಳೆ ಸದಾಶಿವ ರಾವ್, ಸಿ ಎ ಶಾಂತಾರಾಮ ಶೆಟ್ಟಿ, ರೌಫ್ ಪುತ್ತಿಗೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ವರದರಾಜ್ ಪೈ, ಸ್ವರ್ಣ ಸುಂದರ್, ಡಾ. ಅಣ್ಣಯ್ಯ ಕುಲಾಲ್, ರೊನಾಲ್ಡ್ ಪಾಯಸ್, ಪ್ರಕಾಶ್ ರಾವ್, ಎಮ್ ಜಿ ಹೆಗ್ಡೆ ಮತ್ತು ಹಲವಾರು ಗಣ್ಯರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 ನಂದಗೋಕುಲ ತಂಡದ ಕಲಾವಿದರು ಪ್ರದರ್ಶಿಸಿದ ದೇಶ ಪ್ರೇಮ ಸಾರುವ ನೃತ್ಯ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹಾಡಿನ ಮೂಲಕ ಮೈಮ್ ರಾಮ್‌ದಾಸ್ ರವರ ತಂಡ ದೇಶ ಭಕ್ತಿಯ ಕಂಪನ್ನು ಪಸರಿಸಿದರು. ಕುದ್ರೋಳಿ ಗಣೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಅಭಿಷೇಕ್ ಶೆಟ್ಟಿ ವಂದಿಸಿದರು. ಟೀಮ್ ಬ್ಲ್ಯಾಕ್ ಅಂಡ್ ವೈಟ್ನ ಕಿರಣ್ ದೊಂಡೋಲೆ , ಪ್ರೀತಮ್ ಉಪಸ್ಥಿತರಿದ್ದರು.
0
Shares
  • Share On Facebook
  • Tweet It




Trending Now
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
  • Popular Posts

    • 1
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 2
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search