• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಾಗನ ಕಲ್ಲುಗಳ ಪವರ್ ಗೊತ್ತಾಗಿದೆ, ತಪ್ಪು ಮಾಡಿದವರು ಒಪ್ಪಿಕೊಂಡಿದ್ದಾರೆ!!

Hanumantha Kamath Posted On November 28, 2021
0


0
Shares
  • Share On Facebook
  • Tweet It

ಬಹುಶ: ಎಷ್ಟು ಕಠಿಣ ಶಬ್ದಗಳನ್ನು ಬಳಸಿ ಅಂತವರನ್ನು ಬೈಯಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಆದರೂ ಸಭ್ಯರೂ ಕೂಡ ಈ ಸಾಮಾಜಿಕ ಜಾಲತಾಣಗಳನ್ನು ಓದುತ್ತಾರೆ ಎನ್ನುವ ಕಾರಣಕ್ಕೆ ಮನಸ್ಸಿನಲ್ಲಿಯೇ ಕೋಪ ನುಂಗಿ ಅಂತವರನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದು ಬಿಡುವ ಪರಂಪರೆ ನಮ್ಮದು. ಹೌದು. ಕೊನೆಗೂ ನಮ್ಮ ಪವಿತ್ರ ನಾಗನ ಕಲ್ಲುಗಳನ್ನು ಎತ್ತಿ ಬಿಸಾಡಿದ್ದ ಪಾಪಿಗಳನ್ನು ಕಂಬಿಗಳ ಹಿಂದೆ ಪೊಲೀಸರು ನಿಲ್ಲಿಸಿದ್ದಾರೆ. ಅದರಲ್ಲಿ ಇಬ್ಬರು ಮುಸ್ಲಿಮರು. ಅವರು ಒಬ್ಬ ಕ್ರೈಸ್ತ ಧರ್ಮಿಯನ ಜೊತೆ ಡೀಲ್ ಮಾಡಿ ಡ್ರಗ್ಸ್ ಜಾಲದ ಸಿಲುಕಿದ್ದ ಹಿಂದೂಗಳನ್ನು ಬಳಸಿ ಈ ಪಾಪ ಕೃತ್ಯಗಳನ್ನು ನಡೆಸಿದ್ದರು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದರು. ಇವರನ್ನು ಬಂಧಿಸಲೇಬೇಕು ಎಂದು ಹಿಂದೂಪರ ಸಂಘಟನೆಗಳು ಪೊಲೀಸರ ಮೇಲೆ ಪ್ರತಿಭಟನೆ ಮೂಲಕ ಒತ್ತಡ ಹಾಕಿದ್ದವು. ಜನಪ್ರತಿನಿಧಿಗಳು ಕೂಡ ಸಾಕಷ್ಟು ಶ್ರಮ ವಹಿಸಿ ಪೊಲೀಸರ ಜೊತೆ ಕಾಲಕಾಲಕ್ಕೆ ಫಾಲೋ ಅಪ್ ಮಾಡಿ ಈ ತನಿಖೆ ಶೀಘ್ರ ದಡ ಸೇರುವಂತೆ ನೋಡಿಕೊಂಡಿದ್ದಾರೆ. ಪಾಪಿಗಳು ಕಂಬಿಗಳ ಹಿಂದೆ ಹೋಗಲು ಕಾರಣೀಕರೃ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಸಂಘಟನೆಗಳಿಗೆ, ರಾಜಕಾರಣಿಗಳಿಗೆ ಎಲ್ಲರಿಗೂ ಅಭಿನಂದನೆಗಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ನಡೆಯುತ್ತಿದ್ದವು. ಇದು ಪೊಲೀಸರಿಗೆ ಸವಾಲಾಗಿತ್ತು. ಪೊಲೀಸರ ಕಳ್ಳರ ಹಿಂದೆ ಬಿದ್ದಿದ್ದರು. ಇಂತಹ ಸಮಯದಲ್ಲಿ ಆಗುತ್ತಿರುವ ನಿರಂತರ ಕಳ್ಳತನದಿಂದ ಪೊಲೀಸರ ಚಿತ್ತ ಬೇರೆಡೆ ಹೋಗುವಂತೆ ಮಾಡಲು ಆರೋಪಿಗಳು ಈ ನಾಗನ ಕಲ್ಲುಗಳನ್ನು ಹಾಳು ಮಾಡುವ, ಎಲ್ಲೆಲ್ಲಿಗೂ ತೆಗೆದುಕೊಂಡು ಹೋಗಿ ಹಾಕುವ ಸಂಚು ಮಾಡಿದ್ದರು. ನಾಗನ ಕಲ್ಲುಗಳನ್ನು ಧ್ವಂಸ ಮಾಡುವುದು ಸುಲಭ ಎಂದು ಇವರು ಯಾಕೆ ಅಂದುಕೊಂಡಿದ್ದರು ಎಂದರೆ ಇದಕ್ಕೆ ಯಾವುದೇ ಗುಡಿ, ಗೋಪುರ ಕಟ್ಟುವ ಪ್ರಕ್ರಿಯೆ ನಮ್ಮಲ್ಲಿ ಕಡಿಮೆ. ಹೆಚ್ಚಾಗಿ ನಾಗನ ಕಲ್ಲುಗಳು ಇರುವ ಜಾಗ ಎಲ್ಲಿಯಾದರೂ ದೂರದಿಂದಲೇ ಕಾಣುವಂತೆ ಇರುತ್ತದೆ. ಅಲ್ಲಿ ರಾತ್ರಿ ಹೊತ್ತಿನಲ್ಲಿ ಯಾರೂ ಹೋಗುವುದಿಲ್ಲವಾದ್ದರಿಂದ ಅದಕ್ಕೆ ದೊಡ್ಡ ದೊಡ್ಡ ಲೈಟುಗಳನ್ನು ಹಾಕುವ ವ್ಯವಸ್ಥೆ ಕೂಡ ನಮ್ಮಲ್ಲಿ ಇಲ್ಲ. ಇನ್ನು ನಾಗಬನಕ್ಕೆ ಬೀಗ ಹಾಕುವುದು ಅಪರೂಪ. ಅಲ್ಲಿ ಕದಿಯುವಂತದ್ದು ಏನೂ ಇರುವುದಿಲ್ಲವಾದ್ದರಿಂದ ಅದಕ್ಕೆ ಸಿಸಿಟಿವಿ ವ್ಯವಸ್ಥೆ ಕೂಡ ಇರುವುದನ್ನು ನಾನು ನೋಡಿಲ್ಲ. ಇನ್ನು ಹೆಚ್ಚಿನ ನಾಗಬನಗಳು ಒಂದಿಷ್ಟು ಅಜ್ಞಾತ ಸ್ಥಳಗಳಲ್ಲಿ ಇರುತ್ತದೆ. ಆದ್ದರಿಂದ ಅದನ್ನು ಹಾಳು ಮಾಡುವುದು ಸುಲಭ. ಅದನ್ನು ಹಾಳು ಮಾಡುವುದು ಮತ್ತು ಇದರಿಂದ ಉಂಟಾಗುವ ಅಹಿತಕರ ಘಟನೆಗಳನ್ನು ದೂರದಲ್ಲಿ ಕುಳಿತು ಮಜಾ ನೋಡುವುದು ಇವರ ಪ್ಲಾನ್ ಆಗಿತ್ತು. ಆದರೆ ಒಂದಂತೂ ನಿಜ. ನಾಗನ ಕಲ್ಲುಗಳು ಎಷ್ಟೇ ಅಜ್ಞಾತ ಸ್ಥಳದಲ್ಲಿ ಇರಲಿ, ಸುರಕ್ಷತೆ, ಕಾವಲು ಅಷ್ಟೇನೂ ಇಲ್ಲದಿರಲಿ, ನಾಗನ ಕಲ್ಲುಗಳಿಗೆ ತಮ್ಮದೇ ಆಗಿರುವ ಪವರ್ ಇದೆ. ಅದನ್ನು ಕೆಟ್ಟ ಮನಸ್ಸಿನಿಂದ ಅಲ್ಲಾಡಿಸುವುದು ಕೂಡ ಅಷ್ಟು ಸುಲಭವಲ್ಲ. ನಾಗನ ಕಲ್ಲುಗಳನ್ನು ನಾಶ ಮಾಡಲು ಹೊರಟವನಿಗೆ ಬುದ್ಧಿ ಇರುತ್ತೋ ಇಲ್ವೋ, ಆದರೆ ಗುಂಡಿಗೆ ಮಾತ್ರ ಯಾವಾಗ ಬೇಕಾದರೂ ನಿಂತು ಹೋಗುವ ಸಾಧ್ಯತೆ ಇದೆ. ಆತ ಹೆಚ್ಚು ಕಾಲ ಬದುಕುತ್ತಾನೆ ಎಂದು ಹೇಳಲು ಆಗುವುದಿಲ್ಲ. ಅದನ್ನು ಈ ಕೃತ್ಯ ಮಾಡಿದ ಆರೋಪಿಗಳು ಕೂಡ ಒಪ್ಪಿಕೊಂಡಿದ್ದಾರೆ. ಮೊದಲನೇಯದಾಗಿ ಬಂಧಿತರಾದ ಎಂಟು ಜನ ಆರೋಪಿಗಳಲ್ಲಿ ಒಬ್ಬ ಈ ಕೃತ್ಯ ಮಾಡಿದ ನಂತರ ರಿಕ್ಷಾ ಚಾಲನೆ ಮಾಡುವಾಗ ರಿಕ್ಷಾ ಪಲ್ಟಿ ಆಗಿ ಅಪಘಾತವಾಗಿದೆ. ಇನ್ನು ಒಬ್ಬನಿಗೆ ನಿದ್ರೆಯಲ್ಲಿ ಕೂಡ ನಾಗದೇವರು ಬಂದು ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾನೆ. ಇನ್ನು ಒಬ್ಬನಿಗೆ ಆ ನಾಗದೇವರ ಕಲ್ಲುಗಳನ್ನು ಎತ್ತುವಾಗ ಕೈಕಾಲುಗಳಿಗೆ ನಡುಕ ಉಂಟಾಗಿ ಅಲ್ಲಿಯೇ ಬಿಸಾಡಿ ಓಡಿ ಹೋಗಿದ್ದೆ ಎಂದು ಕೂಡ ಹೇಳಿದ್ದಾನೆ. ಒಟ್ಟಿನಲ್ಲಿ ನಾಗದೇವರ ಕಲ್ಲುಗಳನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎಂದು ಎಲ್ಲಾ ಆರೋಪಿಗಳಿಗೆ ಗೊತ್ತಾಗಿದೆ. ಅದನ್ನು ಅವರು ಪೊಲೀಸರ ಮುಂದೆ ಹೇಳಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.

ಇಲ್ಲಿ ವಿಷಯ ಏನೆಂದರೆ ಒಂದು ಧರ್ಮದ ಆರಾಧ್ಯ ದೇವರ ವಿಗ್ರಹ ಅಥವಾ ಕಲ್ಲುಗಳನ್ನು ಭಂಜಿಸಬೇಕು ಎಂದು ಯಾವ ಧರ್ಮದವರಾದರೂ ಯಾಕೆ ಅಂದುಕೊಳ್ಳಬೇಕು. ಬೇರೆಯವರಿಗೆ ಅದು ಕೇವಲ ಕಲ್ಲು ಆಗಿರಬಹುದು. ಆದರೆ ನಮಗೆ ಅದು ಪೂಜನೀಯ ವಿಷಯ. ಇನ್ನು ನಾಸ್ತಿಕರಿಗೆ ಅಥವಾ ಡ್ರಗ್ಸ್ ಜಾಲಕ್ಕೆ ಬಲಿಯಾದವರಿಗೆ ಅಥವಾ ಅನ್ಯಕೋಮಿನವರಿಗೆ ಅದು ಕೇವಲ ಕಲ್ಲಾಗಿರಬಹುದು. ಆದರೆ ಅದರಲ್ಲಿ ಶಕ್ತಿ ಇದೆ ಎಂದು ನಮಗೆ ಮಾತ್ರ ಗೊತ್ತು. ಒಂದು ಕಲ್ಲಿಗೆ ಶಕ್ತಿ ಭರಿಸುವಂತಹ ಕೆಲಸ ಹಿಂದೂ ಧರ್ಮದಲ್ಲಿ ಆಗುತ್ತದೆ. ಅದಕ್ಕೆ ಅನೇಕ ವಿಧಿವಿಧಾನಗಳಿವೆ. ಅದರಲ್ಲಿಯೂ ದೈವ, ದೇವರನ್ನು ನಂಬುವ, ಆರಾಧಿಸುವ ಈ ನೆಲದಲ್ಲಿ ನಾಗನಕಲ್ಲುಗಳಿಗೆ ವಿಶೇಷ ಪ್ರಾಶಸ್ತ್ಯ ಇದೆ. ಇಡೀ ಭಾರತದಲ್ಲಿ ನಾಗನ ಕಲ್ಲುಗಳನ್ನು ಪೂಜಿಸುವ ಸಂಸ್ಕೃತಿ ಇರುವುದು ಕರಾವಳಿಯ ಅವಿಭಜಿತ ಜಿಲ್ಲೆಗಳಲ್ಲಿ ಮಾತ್ರ. ಇಂತಹ ನೆಲದಲ್ಲಿಯೇ ಕೆಲವರು ಯಾರದ್ದೋ ಕುಮ್ಮಿಕ್ಕಿನಿಂದ ಹೀಗೆ ಮಾಡುತ್ತಾರೆ, ಪುಡಿಗಾಸಿಗೆ ಇಂತಹ ಸಂಚು ಹೂಡುತ್ತಾರೆ ಎಂದರೆ ಅಂತವರನ್ನು ದೇವರೇ ನೋಡಿಕೊಳ್ಳುತ್ತಾರೆ ಎನ್ನುವುದು ಇಲ್ಲಿ ಚಾಲ್ತಿಯಲ್ಲಿರುವ ನಂಬಿಕೆ. ಅದು ನಿಜವಾಗುತ್ತದೆ ಕೂಡ. ಹೀಗೆ ನಾಗನ ಕಲ್ಲುಗಳ ಜೊತೆ ಆಡಿದ ದುರುಳರ ಮುಂದಿನ ಜೀವನ ದುಸ್ತರವಾಗಲಿದೆ. ಬೇಕಿದ್ದರೆ ನೋಡಿ!

0
Shares
  • Share On Facebook
  • Tweet It




Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Hanumantha Kamath January 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search