• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹಿಂದೂಗಳಲ್ಲಿಯೇ ಭಯ ಹುಟ್ಟಿಸುತ್ತಾ ಬಿಜೆಪಿಯನ್ನು ದಡ ಸೇರಿಸಿಬಿಟ್ಟ ಓವೈಸಿ!!

Hanumantha Kamath Posted On March 17, 2022
0


0
Shares
  • Share On Facebook
  • Tweet It

ಉತ್ತರ ಪ್ರದೇಶದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿರಬಹುದು. ಆದರೆ ಎಲ್ಲೆಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆಯೋ ಅಲ್ಲೆಲ್ಲ ಬಿಜೆಪಿ ಸೋತಿದೆ. ಮುಸ್ಲಿಮರ ಸಂಖ್ಯೆ ಹಿಂದೂಗಳ ಸಂಖ್ಯೆಯ ಸಮಬಲ ಇದ್ದ ಕ್ಷೇತ್ರಗಳಲ್ಲಿಯೂ ಬಿಜೆಪಿ ಆರಾಮವಾಗಿ ಸೋಲುತ್ತದೆ. ಅದನ್ನು ನೋಡಲು ನೀವು ಯುಪಿ ತನಕ ಹೋಗಬೇಕಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಅಥವಾ ಈಗಿನ ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ತೆಗೆದುಕೊಂಡರೂ ಸಾಕು. ಅಲ್ಲಿ ಕೂಡ ಹಿಂದೂ, ಮುಸ್ಲಿಮರ ಜನಸಂಖ್ಯೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಒಂದು ಮುಷ್ಟಿ ಹಿಂದೂಗಳ ಸಂಖ್ಯೆ ಹೆಚ್ಚಿರಬಹುದು. ಆದರೂ ಅದು ಬಿಜೆಪಿಗೆ ಇಲ್ಲಿಯ ತನಕ ಒಂದು ಬಾರಿ ಬಿಟ್ಟು ಪ್ರತಿ ಬಾರಿ ಕಾಂಗ್ರೆಸ್ಸಿಗೆ ವಿಜಯವನ್ನು ತಂದುಕೊಟ್ಟಿದೆ. ಅದು ಹೇಗೆ? ಸಿಂಪಲ್, ಹಿಂದೂಗಳ ಮತಗಳು ಡಿವೈಡ್ ಆಗುತ್ತವೆ. ಮುಸ್ಲಿಮರ ವೋಟುಗಳು ಸಾರಾಸಗಟಾಗಿ ಕಾಂಗ್ರೆಸ್ಸಿಗೆ ಅಥವಾ ಬಿಜೆಪಿ ವಿರೋಧಿ ಪಕ್ಷಕ್ಕೆ ಬೀಳುತ್ತದೆ. ಹಿಂದೂಗಳಲ್ಲಿ ಒಗ್ಗಟ್ಟಿಲ್ಲ. ಅವರು ತಮ್ಮ ಮದುವೆಗೋ, ಉಪನಯನಕ್ಕೋ, ಸತ್ಯನಾರಾಯಣ ಪೂಜೆಗೋ, ಮಗುವಿನ ಹುಟ್ಟಿದ ಹಬ್ಬ, ಗೃಹಪ್ರವೇಶಕ್ಕೆ ಬರುತ್ತಾರೆ ಎನ್ನುವ ಕಾರಣಕ್ಕೆ ಯುಟಿ ಖಾದರ್ ಅವರಿಗೆ ವೋಟ್ ಹಾಕುತ್ತಾರೆ. ಅದೇ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಮುಸ್ಲಿಮರ ಮನೆಯ ಮುಸುರೆ ತೊಳೆದರೂ ಅವರು ಬಿಜೆಪಿಗೆ ವೋಟ್ ಹಾಕಲ್ಲ. ಆ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಸ್ಟ್ಯಾಂಡ್ ಪಕ್ಕಾ. ಅಲ್ಲಿ ಕಾಂಪ್ರೋಮೈಸ್ ಇಲ್ಲ. ಅದೇ ಗುರಿ ಇಟ್ಟು ಬೆರಳೆಣಿಕೆಯ ಸೀಟುಗಳನ್ನು ಹೊಡೆದುಬಿಡೋಣ ಎಂದು ಓವೈಸಿ ಎನ್ನುವ ಪಕ್ಕಾ ಬ್ಯಾರಿ ಉತ್ತರ ಪ್ರದೇಶದಲ್ಲಿ ಝಂಡಾ ಉರಿಬಿಟ್ಟಿದ್ದ. ಅಲ್ಲಿ ಹೋದವನು ಹೇಳಿದ್ದು ಒಂದೇ ಮಾತು- ಇನ್ನು ಸ್ವಲ್ಪ ಕಾಲದ ನಂತರ ಯೋಗಿ ತಮ್ಮ ಮಠಕ್ಕೆ ಹಿಂತಿರುಗುತ್ತಾರೆ, ಮೋದಿ ಹಿಮಾಲಯಕ್ಕೆ ತಪಸ್ಸಿಗೆ ಹೋಗುತ್ತಾರೆ. ಮತ್ತೆ ಹಿಂದೂಗಳಿಗೆ ಯಾರಿದ್ದಾರೆ. ಅವನಿಗೆ ಗ್ಯಾರಂಟಿ ಇತ್ತು. ಮುಸ್ಲಿಮರು ತಮಗೆ ಮತ ಹಾಕುತ್ತಾರೆ. ಯಾಕೆಂದರೆ ತಾನು ಅವರ ರಕ್ಷಕ, ಒಂದಿಷ್ಟು ಹಿಂದೂಗಳ ಮತಗಳು ಕೂಡ ಬಿದ್ದರೆ ಏನಾದರೂ ಆಗಬಹುದು ಎನ್ನುವ ಲೆಕ್ಕಾಚಾರ ಅವನಿಗೆ ಇತ್ತು. ಇದು ಬಹಳ ಡೇಂಜರಸ್ ಟ್ರೆಂಡ್. ಓವೈಸಿ ಎಷ್ಟೇ ಪ್ರಚಾರ ಮಾಡಿದರೂ ಆತನ ಪಕ್ಷಕ್ಕೆ ಒಂದೇ ಒಂದು ಸೀಟು ಗೆಲ್ಲಲಾಗಲಿಲ್ಲ. ಹಾಗಂತ ಅವನು ಗೆಲ್ಲುತ್ತಿರುವ ಹೈದ್ರಾಬಾದ್ ಲೋಕಸಭಾ ಕ್ಷೇತ್ರ ಓವೈಸಿ ಪಾಲಿಗೆ ಸೇಫ್ ಬೆಟ್. ಯಾಕೆಂದರೆ ಅಲ್ಲಿ ಸ್ಪರ್ಧಿಸುವ ಯಾವುದೇ ಪಾರ್ಟಿಗಿಂತ ಅಲ್ಲಿನ ಮುಸ್ಲಿಮರು ತಮ್ಮ ಧರ್ಮದ ಮೇಲೆ ಆಧಾರಿತವಾಗಿರುವ ಪಕ್ಷವನ್ನು ನಂಬುತ್ತಾರೆ. ಅದರಿಂದ ಓವೈಸಿ ಗೆಲ್ಲುತ್ತಾ ಹೋಗುತ್ತಾನೆ. ಆದರೆ ಹಿಂದೂಗಳಲ್ಲಿ ಹಾಗಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಜನಿವಾರ, ಧೋತಿ, ಪಂಚೆ, ಶಾಲು ಧರಿಸಿ ದೇವಸ್ಥಾನಗಳಿಗೆ ಎಡತಾಗುವ ರಾಹುಲ್ ಮತ್ತು ಹಣೆಗೆ ಮೂರು ನಾಮ ಅಡ್ಡ ಹಾಕಿ ಸೀರೆ ಉಟ್ಟು ಬರುವ ಪ್ರಿಯಾಂಕಾ ಕೆಲವರಿಗೆ ಸಾಕ್ಷಾತ್ ದೇವರಂತೆ ಕಾಣಿಸುತ್ತಾರೆ. ಈ ಸಲ ಯುಪಿಯಲ್ಲಿ ಒಂದೆರಡು ಸೀಟುಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿರಬಹುದು. ಆದರೆ ಅವರು ಚುನಾವಣೆಯಲ್ಲಿ ಇಂತಹ ನಾಟಕಗಳನ್ನು ಮಾಡುವುದರಿಂದ ಅವರನ್ನು ನಂಬುವವರು ಇದ್ದಾರೆ. ಒಂದು ವೇಳೆ ಅವರ ಮೇಲೆ ವಿಶ್ವಾಸ ಕಳೆದುಹೋಗಿದ್ದರೆ ಪ್ರಾದೇಶಿಕ ಪಕ್ಷಗಳಿಗೆ ವೋಟ್ ಹಾಕುವವರು ಇದ್ದಾರೆ. ಇದರಿಂದ ಹಿಂದೂಗಳ ವೋಟ್ ಹರಿದು ಹಂಚಿಹೋಗುತ್ತದೆ.

ಆದರೆ ಈ ಹೊತ್ತಿನಲ್ಲಿ ಓವೈಸಿ ಯಶಸ್ವಿಯಾಗದೇ ಇರಬಹುದು. ಆದರೆ ಆತ ಒಂದಷ್ಟರ ಮಟ್ಟಿಗೆ ಸ್ಪರ್ಧಿಸಿದ್ದ ಕಾರಣ ಬಿಜೆಪಿಗೆ ಕನಿಷ್ಟ 65-70 ಸೀಟುಗಳಲ್ಲಿ ಲಾಭ ಮಾಡಿಕೊಟ್ಟಿದ್ದಾನೆ. 7 ಸೀಟುಗಳಲ್ಲಿ ಬಿಜೆಪಿ 200 ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದಿದೆ. ಇನ್ನು 23 ಸೀಟುಗಳಲ್ಲಿ 500 ಗಿಂತಲೂ ಕಡಿಮೆ ಮತ, 49 ಸೀಟುಗಳಲ್ಲಿ ಸಾವಿರಕ್ಕಿಂತಲೂ ಕಡಿಮೆ ಮತ, ಇನ್ನು 86 ಸೀಟುಗಳಲ್ಲಿ 2000 ಗಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದಿದೆ. ಇಲ್ಲೆಲ್ಲ ಬಿಜೆಪಿ ಎದುರು ಸೋತದ್ದು ಸಮಾಜವಾದಿ ಪಕ್ಷ. ಬಿಜೆಪಿಯನ್ನು ದಡ ಸೇರಿಸಿದ್ದು ಓವೈಸಿ. ಆದ್ದರಿಂದ ಇಂತವರು ಇರಬೇಕು ಎನ್ನುವ ಬಿಜೆಪಿ ರಾಜಕೀಯ ಪಂಡಿತರು ಇದ್ದಾರೆ. ಹಾಗಾದರೆ ಯೋಗಿ ಕಳೆದ ಬಾರಿಗಿಂತ ಈ ಬಾರಿ 50 ರಷ್ಟು ಕಡಿಮೆ ಸೀಟುಗಳನ್ನು ಪಡೆದಿದ್ದಾರಲ್ಲ ಹೇಗೆ ಎಂದು ನೋಡಿದರೆ ಪಕ್ಕಾ ಮುಸ್ಲಿಂ ಕ್ಷೇತ್ರಗಳಲ್ಲಿ ಸಮಾಜವಾದಿ ಓವೈಸಿಯನ್ನು ನುಸುಳಲು ಬಿಟ್ಟಿಲ್ಲ. ಎಲ್ಲಿ ನಮ್ಮ ಮತದಿಂದ ಸಮಾಜವಾದಿ ಪಾರ್ಟಿ ಸೋತು ಬಿಜೆಪಿ ಗೆಲ್ಲುತ್ತದೆ ಎಂದು ಅಂದಾಜು ಇರುವ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳ ಜನ ತಪ್ಪಿಯೂ ಓವೈಸಿಗೆ ಮತ ನೀಡಿಲ್ಲ. ಹಾಗಂತ ಓವೈಸಿಯಿಂದಲೇ ಇದೆಲ್ಲ ಬಿಜೆಪಿಗೆ ಸುಲಭವಾಯಿತು ಎಂದಲ್ಲ. ಎಷ್ಟೋ ಕಡೆ ಬಿಜೆಪಿ ಕೂಡ ಇಷ್ಟೇ ಸಣ್ಣ ಅಂತರದಿಂದ ಹಲವಾರು ಕಡೆ ಸೋತಿದೆ. ಅಲ್ಲಿ ಮತದಾರರು ತಮ್ಮ ಮತವನ್ನು ಬಿಜೆಪಿ, ಬಹುಜನಸಮಾಜ ಪಾರ್ಟಿ, ಕಾಂಗ್ರೆಸ್, ಸಮಾಜವಾದಿ ಪಕ್ಷದ ನಡುವೆ ಹಂಚಿಹಾಕಿದ್ದು. ಆದರೆ ಮುಸ್ಲಿಮರು ಎಲ್ಲಿಯೂ ಆಚೆ ಈಚೆ ನೋಡದೆ ಅಲ್ಲಿ ಎಸ್ ಪಿಗೆ ಮತಗಳನ್ನು ಕ್ಲೀನಾಗಿ ಧಾರೆ ಎರೆದಿದ್ದು ಕೂಡ ಇದೆ. ಮುಸ್ಲಿಮರು ಯಾವತ್ತೂ ತಮಗೆ ವಿರೋಧವಾಗಿರುವ ಬಿಜೆಪಿಯ ವಿರುದ್ಧ ಯಾವ ಪಕ್ಷ ನಿಂತಿದೆಯೋ ಅದಕ್ಕೆ ಮತ ನೀಡುತ್ತಾರೆ. ಆದರೆ ಹಿಂದುಗಳು ತಮ್ಮ ಜಾತಿಯವನಾ ಎಂದು ನೋಡುತ್ತಾರೆ ಮತ್ತು ಮತ ಚಲಾಯಿಸುತ್ತಾರೆ!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search