• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪಾಲಿಕೆಯ ಸದಸ್ಯರ ಬಾಯಿಗೆ ದೊಡ್ಡ ಲಡ್ಡು ಬಿದ್ದಿದೆ!!

Hanumantha Kamath Posted On June 2, 2022
0


0
Shares
  • Share On Facebook
  • Tweet It

ಈ ಸಲ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರ ನಸೀಬನ್ನು ಬ್ರಹ್ಮ ಪುರುಸೊತ್ತಲ್ಲಿ ಕೂತು ಬರೆದಿದ್ದಾರೆ ಎಂದೇ ಅನಿಸುತ್ತದೆ. ಇಲ್ಲದಿದ್ದರೆ ಈ ಬಾರಿ ಸದಸ್ಯರು ಬಯಸಿದ್ದಕ್ಕಿಂತ ಹೆಚ್ಚು ಲಾಡು ಬಾಯಿಗೆ ಬಂದು ಬೀಳುವ ಸಾಧ್ಯತೆ ಇರಲಿಲ್ಲ. ಅದು ಹೇಗೆ ಎನ್ನುವುದೇ ಈ ಅಂಕಣದ ಕುತೂಹಲಕಾರಿ ಸಂಗತಿ. ಪ್ರತಿ ವಾರ್ಡುಗಳಲ್ಲಿ ವಾರ್ಡು ಸಮಿತಿಯವರು ತಮ್ಮ ನಿಜವಾದ ಕರ್ತವ್ಯವನ್ನು ತೋರಿಸಲು ಇದು ಸಕಾಲ. ಮಳೆಗಾಲದಲ್ಲಿ ಪಾಲಿಕೆಯ 60 ವಾರ್ಡುಗಳಲ್ಲಿ ಸ್ಪೆಶಲ್ ಗ್ಯಾಂಗ್ ಎಂದು ತಯಾರಾಗುತ್ತದೆ. ಒಂದೊಂದು ಗ್ಯಾಂಗಿಗೂ ತಿಂಗಳಿಗೆ 1 ಲಕ್ಷ 27 ಸಾವಿರ ಖರ್ಚಾಗುತ್ತದೆ. ಅದು ಮೂರು ತಿಂಗಳಿಗೆ ಎಷ್ಟಾಗುತ್ತದೆ ಮತ್ತು ಅದು ಅರವತ್ತು ವಾರ್ಡುಗಳಿಗೆ ಎಷ್ಟಾಗುತ್ತದೆ ಎನ್ನುವುದನ್ನು ನೀವೇ ಲೆಕ್ಕ ಹಾಕಿ. ಈ ಸ್ಪೆಶಲ್ ಗ್ಯಾಂಗ್ ಕೆಲಸ ಏನೆಂದರೆ ಮಳೆಗಾಲದಲ್ಲಿ ಕೃತಕ ನೆರೆ, ಚರಂಡಿ ತುಂಬಿ ಹರಿಯುವಾಗ ಕೆಲಸ, ರಸ್ತೆಗೆ ಮರ ಅಥವಾ ಕೊಂಬೆ ಬಿದ್ದರೆ ತೆಗೆದು ಪಕ್ಕಕ್ಕೆ ಹಾಕುವುದು ಮಾಡುವುದೇ ಆಗಿರುತ್ತದೆ. ಸರಿಯಾಗಿ ನೋಡಿದರೆ ಆಂಟೋನಿ ವೇಸ್ಟ್ ನವರು ಮಾಡಬೇಕಾದ ಒಂದು ಮೀಟರ್ ಅಗಲದ ಚರಂಡಿ ಹೂಳು ತೆಗೆಯುವುದನ್ನು ಅವರು ಮಾಡದೇ ಇರುವುದರಿಂದ ಚರಂಡಿ ತುಂಬಿ ಹರಿಯುತ್ತದೆ. ಕೃತಕ ನೆರೆ ಬರಲು ಅಲ್ಲಲ್ಲಿ ರಾಜಕಾಲುವೆಯ ಹೂಳನ್ನು ತೆಗೆಯದೇ ಇರುವುದು ಆಗಿರುತ್ತದೆ. ಇದೆಲ್ಲ ಪಾಲಿಕೆ ಮೊದಲೇ ಮಾಡಿದರೆ ಸಮಸ್ಯೆ ಒಂದಷ್ಟರ ಮಟ್ಟಿಗೆ ಆಗುವುದಿಲ್ಲ. ಇನ್ನು ಅರಣ್ಯ ಇಲಾಖೆಯವರು ಮರ ತುಂಡಾಗಿ ಬಿದ್ದರೆ, ಕೊಂಬೆ ಬಿದ್ದರೆ ತೆಗೆದುಕೊಂಡು ಹೋಗುತ್ತಾರೆ. ಆದರೂ ಕೋಟಿ ಖರ್ಚು ಮಾಡಿ ಎರಡು ತಿಂಗಳಿಗೆ ಸ್ಪೆಶಲ್ ಗ್ಯಾಂಗ್ ಪ್ರತಿ ವಾರ್ಡಿಗೆಮೀಸಲಾಗಿರುತ್ತದೆ. ಈ ಹಣ ಎಲ್ಲಿಗೆ ಹೋಗುತ್ತದೆ. ಇದನ್ನು ಪಾಲಿಕೆಯ ಸದಸ್ಯರು, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು ಹಂಚಿ ತಿನ್ನುವುದನ್ನು ನಾನು ಅನೇಕ ಸಲ ಇದೇ ಅಂಕಣದಲ್ಲಿ ಬರೆದಿದ್ದೇನೆ. ಟಿವಿಗಳಲ್ಲಿ ನೇರಪ್ರಸಾರದಲ್ಲಿ ಮಾತನಾಡಿದ್ದೇನೆ. ನನ್ನ ನಿಷ್ಟುರ ಮಾತು ಕೇಳಿ ಕೆಲವು ಸದಸ್ಯರು ಬಿಸಿ ಎಣ್ಣೆ ಬಾಯಿಗೆ ಸುರಿದಂತೆ ಒದ್ದಾಡಿದ್ದಾರೆ. ಯಾರ್ಯಾರಿಗೋ ದೂರು ಕೊಟ್ಟು ಅತ್ತಿದ್ದಾರೆ. ಹನುಮಂತ್ ಕಾಮತ್ ನಮಗೆ ತಿನ್ನಲು ಬಿಡುವುದಿಲ್ಲ ಎಂದು ಎಲ್ಲೆಲ್ಲಿಯೋ ಗೋಳು ತೋಡಿಕೊಂಡು ತಮ್ಮದೇ ಮರ್ಯಾದೆಯನ್ನು ತಾವೇ ಕಳೆದುಕೊಂಡಿದ್ದಾರೆ. ಆದರೂ ಜನರ ತೆರಿಗೆಯ ಹಣ ಪೋಲಾಗಬಾರದು ಎನ್ನುವ ಕಾರಣಕ್ಕೆ ನಾನು ಈ ಬಗ್ಗೆ ಪಾಲಿಕೆಯ ಕಮೀಷನರ್, ಮೇಯರ್ ಬಳಿ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಲೇ ಇದ್ದೆ. ಈ ಬಾರಿ ಕಮೀಷನರ್ ಅಕ್ಷಯ್ ಶ್ರೀಧರ್ ಕಠಿಣ ನಿರ್ಧಾರವನ್ನು ಕೂಡ ಕೈಗೊಂಡಿದ್ದರು. ಯಾವಾಗ ಈ ಬಾರಿ ಮೃಷ್ಣಾನ್ನ ಸಿಗದೇ ಗಂಜಿಯೇ ಗತಿ ಎಂದುಕೊಂಡ ಕಾರ್ಪೋರೇಟರ್ಸ್ ಪಕ್ಷಭೇದ ಮರೆತು ಎಲ್ಲರೂ ಮೇಯರ್ ಮೇಲೆ ಒತ್ತಡ ಹಾಕಿದ್ದಾರೆ. ಇವರ ಅದೃಷ್ಟ ಎಂಬಂತೆ ಮೇ ಕೊನೆಯಾರ್ಧದಲ್ಲಿ 3-4 ದಿನ ಮಂಗಳೂರಿನಲ್ಲಿ ಉತ್ತಮ ಮಳೆ ಕೂಡ ಬಿದ್ದಿದೆ. ಅಲ್ಲಲ್ಲಿ ನೀರು ಕೂಡ ನಿಂತಿದೆ. ಇದನ್ನೇ ಹಿಡಿದು ಕಾರ್ಪೋರೇಟರ್ಸ್ ಕಮೀಷನರ್ ಅವರನ್ನು ಹೆದರಿಸಿದ್ದಾರೆ. ಮಂಗಳೂರಿನಲ್ಲಿ ಮಳೆಗಾಲದ ಸ್ಯಾಂಪಲ್ ಇದು, ಮುಂದಿನ ದಿನಗಳಲ್ಲಿ ಇದಕ್ಕಿಂತ ಜೋರು ಮಳೆ ಬರಲಿದೆ ಎಂದು ಆತಂಕ ತೋಡಿದ್ದಾರೆ. ಯಾವಾಗ ಇವರ ಭವಿಷ್ಯ ನಿಜವಾದರೆ ಜನ ತಮಗೆ ಬೈಯಬಹುದು ಎಂದು ಅಂದುಕೊಂಡ ಆಯುಕ್ತರು ಎರಡು ತಿಂಗಳು ನೀಡುವ ಸ್ಪೆಶಲ್ ಗ್ಯಾಂಗನ್ನು ಮೂರು ತಿಂಗಳಿಗೆ ವಿಸ್ತರಿಸಿದ್ದಾರೆ. ಇದರಿಂದ ಇನ್ನಷ್ಟು ಲಕ್ಷ ರೂಪಾಯಿಗಳು ನೀರಿನಂತೆ ಪೋಲಾಗಲಿದೆ. ಇದರಿಂದ ಏನಾಗುತ್ತದೆ? ಜನರು ಮಳೆಗಾಲದಲ್ಲಿ ಎದುರಿಸುವ ಸಮಸ್ಯೆ ಪರಿಹಾರವಾಗುತ್ತದಾ? ಇಲ್ಲ, ಆದರೆ ಪ್ರತಿ ಪಾಲಿಕೆಯ ಸದಸ್ಯ ಅಥವಾ ಸದಸ್ಯೆಯ ಪರ್ಸ್ ಭಾರವಾಗುತ್ತದೆ. ಸ್ಪೆಶಲ್ ಗ್ಯಾಂಗು ಬೇಕೆ ಬೇಕು ಎಂದು ಹಟ ಹಿಡಿಯುವ ಇದೇ ಸದಸ್ಯರು ತಮ್ಮ ವಾರ್ಡಿನ ಒಂದು ಮೀಟರ್ ಅಗಲದ ತೋಡುಗಳನ್ನು ಕ್ಲೀನ್ ಮಾಡಿಸಲು ಯಾವಾಗಲಾದರೂ ಮೇಯರ್ ಅಥವಾ ಕಮೀಷನರ್ ಮೇಲೆ ಒತ್ತಡ ಹಾಕಿದ್ದಾರಾ? ಒಂದಾದರೂ ಲಿಖಿತ ದೂರು ಕೊಟ್ಟಿದ್ದಾರಾ? ಇಲ್ಲ, ಇವರು ಅದನ್ನು ಮಾಡಲ್ಲ. ಏನಿದ್ದರೂ ಊಟ ಮಾಡಲು ದೊಡ್ಡ ಎಲೆಯೇ ಬೇಕು.
 ಎರಡು ವಾರ್ಡಿಗೆ ಒಂದು ಗಾಡಿ ಸಹಿತ ಅನೇಕ ನಿರ್ಭಂದನೆಗಳು ಈ ಸ್ಪೆಶಲ್ ಗ್ಯಾಂಗಿನ ಸ್ಪೆಶಲ್ ಪ್ಯಾಕೇಜಿನಲ್ಲಿ ಇವೆ. ಆದರೆ ಯಾವುದೂ ಅನುಷ್ಟಾನವಾಗುವುದಿಲ್ಲ ಎನ್ನುವುದು ಪಾಲಿಕೆಯ ಕಂಬಗಳಿಗೂ ಗೊತ್ತಿದೆ. ಆದರೆ ಗೊತ್ತಿಲ್ಲದಿರುವುದು ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅತ್ಯಂತ ಹಿರಿಯ ಸದಸ್ಯರೂ, ಮೇಯರ್ ಕೂಡ ಆಗಿರುವ ಪ್ರೇಮಾನಂದ ಶೆಟ್ಟಿಯವರಿಗೆ ಮಾತ್ರ. ಅವರು ಎರಡೂವರೆ ದಶಕಗಳಿಗೂ ಹೆಚ್ಚಿನ ಅವಧಿಯಿಂದ ಮಂಗಳೂರು ನಗರವನ್ನು ಪಾಲಿಕೆಯ ಕಿಟಕಿಯಿಂದ ನೋಡುತ್ತಿದ್ದಾರೆ. ಯಾವುದಕ್ಕೆ ಹಣ ಪೋಲಾಗುತ್ತದೆ ಎನ್ನುವುದು ಅವರ ಅಂಗೈ ಮೇಲಿನ ಗೆರೆಯಷ್ಟೇ ಸ್ಪಷ್ಟ. ಅವರು ಸ್ವಲ್ಪ ಹೊತ್ತು ಕೂತು ಆಲೋಚನೆ ಮಾಡಿದರೂ ಸಾಕು, ತಾವು ಮಾಡುತ್ತಿರುವುದು ಸರಿಯಾ ಎನ್ನುವುದು ಅವರಿಗೆ ಗೊತ್ತಾಗುತ್ತದೆ. ಸದಸ್ಯರು ಇರುವುದು ಸೇವೆ ಮಾಡಲಿಕ್ಕೆ ಎನ್ನುವುದನ್ನು ಯಾರೂ ನಂಬುವುದಿಲ್ಲವಾದರೂ ಮಳೆಯ ಹೆಸರಿನಲ್ಲಿ ಪಾಲಿಕೆಯ ಹಣ ಲೂಟಿ ಆಗುತ್ತಿರುವುದನ್ನು ತಡೆಯುವುದು ತಮಗೆ ಸಿಕ್ಕಿರುವ ಹೆಚ್ಚಿರುವ ಅವಧಿಯ ಖಡಕ್ ನಿರ್ಣಯ ಎನ್ನುವಂತೆ ಪ್ರೇಮಾನಂದ ಶೆಟ್ಟಿಯವರು ತೆಗೆದುಕೊಳ್ಳಬಹುದಿತ್ತು. ಇರಲಿ, ಅವರಿಗೂ ಅದ್ಯಾವ ಒತ್ತಡ ಇದೆಯೋ. ಆದರೆ ಈ ವಾರ್ಡ್ ಸಮಿತಿ ಎನ್ನುವುದು ರಚನೆಯಾಗಿದೆಯಲ್ಲ, ಅವರು ಈ ಸ್ಪೆಶಲ್ ಗ್ಯಾಂಗುಗಳ ಬಗ್ಗೆ ಒಂದು ನಿಗಾ ಇಟ್ಟರೆ ಬಹಳ ಉತ್ತಮ. ಕೇವಲ ವಾರ್ಡು ಕಮಿಟಿ ಸದಸ್ಯ ಎಂದು ಹೆಮ್ಮೆ ಪಡುವುದಕ್ಕಿಂತ ಅದರಲ್ಲಿ ಇರುವುದಕ್ಕೆ ಏನಾದರೂ ಸಾರ್ಥಕ ಕೆಲಸ ಕೂಡ ಮಾಡಬೇಕಲ್ಲ!!
0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search