• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮತಾಂಧರು ಕಾಲೇಜು ಹುಡುಕುತ್ತಿದ್ದಾರೆ, ಪ್ರಾಂಶುಪಾಲರು ಜೈಲು ತೋರಿಸಲಿ!

Hanumantha Kamath Posted On June 3, 2022


  • Share On Facebook
  • Tweet It

ತಾಳ್ಮೆಗೂ ಒಂದು ಮಿತಿ ಇರುತ್ತದೆ. ನೀವು ಒಂದೇ ತಪ್ಪನ್ನು ಪದೇ ಪದೇ ಮಾಡುತ್ತಿದ್ದರೆ ನಂತರ ಅದಕ್ಕೆ ಕ್ಷಮೆ ಇರುವುದಿಲ್ಲ. ಮತಾಂಧ ಸಂಘಟನೆಗಳು ಕೆಲವು ಬಡ ಮುಸ್ಲಿಂ ಹೆಣ್ಣುಮಕ್ಕಳನ್ನು ಬಳಸಿ ಆಡುತ್ತಿರುವ ಹಿಜಾಬ್ ಅಂಕಣಕ್ಕೆ ಒಂದು ಅಂತ್ಯ ಅವರೇ ಹಾಡದಿದ್ದರೆ ಇದರ ಪರಿಣಾಮ ವ್ಯತಿರಿಕ್ತವಾಗುವುದರಲ್ಲಿ ಸಂಶಯವೇ ಇಲ್ಲ. ಕಳೆದ ವಾರ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯದ ಕಾಲೇಜಾಯಿತು. ಈಗ ಉಪ್ಪಿನಂಗಡಿಯಲ್ಲಿ ಮತ್ತೆ ಆರಂಭಿಸಿದ್ದಾರೆ. ಅನೇಕರಿಗೆ ಗೊತ್ತಿರುವಂತೆ ಈ ಪ್ರಕರಣ ಈಗ ಸರಕಾರ ಮತ್ತು ವಿದ್ಯಾರ್ಥಿನಿಯರ ನಡುವಿನ ಸಂಗತಿಯಾಗಿ ಉಳಿದಿಲ್ಲ. ಇದು ಈಗ ನ್ಯಾಯಾಲಯ ಮತ್ತು ವಿದ್ಯಾರ್ಥಿನಿಯರ ನಡುವಿನ ಕೇಸ್ ಆಗಿದೆ. ಯಾವಾಗ ಕರ್ನಾಟಕ ಉಚ್ಚನ್ಯಾಯಾಲಯ ತರಗತಿಯೊಳಗೆ ಯಾವುದೇ ಧಾರ್ಮಿಕ ವಸ್ತ್ರವನ್ನು ಧರಿಸಿ ಪಾಠ ಆಲಿಸಲು ಅವಕಾಶವಿಲ್ಲ ಎನ್ನುವ ಸರಕಾರದ ನಿರ್ಧಾರವನ್ನು ಪಾಲಿಸಬೇಕು ಎಂದು ಹೇಳಿತೋ ಅದರ ನಂತರ ಇವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ. ಅದರ ಅರ್ಥ ಇವರು ಗೆದ್ದಿದ್ದಾರೆ ಎಂದಲ್ಲ. ಹಾಗಿರುವಾಗ ನಾವು ತರಗತಿಯೊಳಗೆ ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇವೆ ಎಂದು ಹಟ ಮಾಡಿದರೆ ಅದು ನೇರವಾಗಿ ನ್ಯಾಯಾಲಯದ ಉಲ್ಲಂಘನೆ ಆಗುತ್ತದೆ. ಒಬ್ಬ ವ್ಯಕ್ತಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎನ್ನುವುದನ್ನು ಒಂದೋ ಆ ವಿದ್ಯಾರ್ಥಿನಿಯರು ಅರಿತುಕೊಳ್ಳಬೇಕು ಅಥವಾ ಅವರ ಮನೆಯವರು ತಿಳಿಹೇಳಬೇಕು. ಆದರೆ ನೀವು ಆತಂಕ ಪಡಬೇಡಿ. ಎಲ್ಲವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಅವರ ಬೆಂಬಲಕ್ಕೆ ನಿಂತಿರುವವರು ಹೇಳಿದ ಕೂಡಲೇ ಏನಾಗುತ್ತದೆ. ನಮಗೆ ಏನು ಆಗುವುದಿಲ್ಲ, ಏನು ಆದರೂ “ಅವರು” ನೋಡಿಕೊಳ್ಳುತ್ತಾರೆ ಎನ್ನುವ ಧೈರ್ಯ ಆ ನಿಯಮ ಉಲ್ಲಂಘಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬಂದಿರುತ್ತದೆ. ಹೆಚ್ಚೆಂದರೆ ಏನಾಗುತ್ತದೆ ಎನ್ನುವ ಭಂಡ ಧೈರ್ಯ ಆ ವಿದ್ಯಾರ್ಥಿನಿಯರಲ್ಲಿ ಈಗಾಗಲೇ ಮೂಡಿದೆ. ಜಾಸ್ತಿ ಎಂದರೆ ಪ್ರಾಂಶುಪಾಲರು ಪೊಲೀಸರಿಗೆ ದೂರು ಕೊಡುತ್ತಾರೆ. ಆಗ ಪೊಲೀಸರು ಹೆಚ್ಚೆಂದರೆ ಎಫ್ ಐಆರ್ ದಾಖಲಿಸಬಹುದು. ಅದರ ನಂತರ ಆ ಸಂಘಟನೆಗಳು ನಮ್ಮನ್ನು ಗ್ಯಾರಂಟಿ ಬಿಡಿಸಲು ಬರುತ್ತಾರೆ ಎನ್ನುವ ಭರವಸೆ ಇವರಿಗೆ ಇದೆ. ಅದಕ್ಕೆ ಸರಿಯಾಗಿ ಆ ಮೂಲಭೂತವಾದಿ ಸಂಘಟನೆಗಳು ಕೂಡ ಈ ವಿದ್ಯಾರ್ಥಿನಿಯರನ್ನು ಸರಕಾರ ಬಂಧಿಸಲಿ ಎಂದು ನಿರೀಕ್ಷೆ ಮಾಡುತ್ತಿವೆ. ಬಂಧನ ಆದರೆ ಏನಾಗುತ್ತದೆ ಎಂದರೆ ಅದೇ ಇಶ್ಯೂ ಆಗುತ್ತದೆ. ಅದನ್ನೇ ಇಟ್ಟು ಸರಕಾರವನ್ನು ಹಣಿಯಬಹುದು. ವಿದ್ಯಾರ್ಥಿನಿಯರನ್ನು ಬಂಧಿಸಿದ ಸರಕಾರ ಎಂದು ಬೊಬ್ಬೆ ಹೊಡೆಯಬಹುದು. ಆಗ ಜನರಿಗೆ ಸರಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಏನೇ ಇರಲಿ, ಹೆಣ್ಣುಮಕ್ಕಳನ್ನು ಬಂಧಿಸಬಾರದಿತ್ತು ಎನ್ನುವ ಮನಸ್ಥಿತಿ ಜನರಲ್ಲಿ ಬಂದರೆ ಅದು ಸರಕಾರಕ್ಕೆ ಮೈನಸ್.

ಅದೇ ರಣತಂತ್ರವನ್ನು ಮೊನ್ನೆ ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐ ಮಾಡಿದೆ. ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದೆ. ಅಲ್ಲಿ ಗೂಂಡಾಗಿರಿ ಮಾಡುವ ಯೋಜನೆ ಇತ್ತು ಎನ್ನುವುದು ಗೃಹ ಸಚಿವರ ಹೇಳಿಕೆ. ಆದ್ದರಿಂದ ಎನ್ ಎಸ್ ಯುಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅದನ್ನೇ ನೆಪ ಇಟ್ಟು ವಿದ್ಯಾರ್ಥಿಗಳನ್ನು ಬಂಧಿಸುವುದಾ ಎನ್ನುವ ಘೋಷಣೆಯನ್ನು ಕೂಗಲಾಗಿದೆ. ಇಲ್ಲಿಯೂ ಅದೇ ಆಗುತ್ತೆ. ಹೆಣ್ಣುಮಕ್ಕಳು ಎಂದರೆ ಇನ್ನೂ ಸಿಂಪಥಿ ಜಾಸ್ತಿ. ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು ಸುಲಭ. ಅದಕ್ಕಾಗಿ ಮೂಲಭೂತ ಸಂಘಟನೆಗಳು ಕಾಲೇಜನ್ನು ಹುಡುಕುತ್ತಿವೆ. ಅದಕ್ಕೆ ಸರಿಯಾಗಿ ಅವರಿಗೆ ಸಿಕ್ಕಿದ್ದು ಉಪ್ಪಿನಂಗಡಿ. ಗ್ರಾಮೀಣ ಪ್ರದೇಶ. ಆದರೆ ಯಾವಾಗ ಪತ್ರಕರ್ತರು ಆ ಘಟನೆಯನ್ನು ಚಿತ್ರೀಕರಿಸಲು ಕಾಲೇಜಿಗೆ ಹೋಗಿ ಪ್ರಾಂಶುಪಾಲರ ಅಭಿಪ್ರಾಯ ಕೇಳಿ ಹೊರಗೆ ಬಂದರೋ ಇದು ನಮಗೆ ಉಲ್ಟಾ ಹೊಡೆಯುತ್ತದೆ ಎಂದು ಮತಾಂಧರಿಗೆ ಅನಿಸಿದೆ. ಪತ್ರಕರ್ತರನ್ನು ಅಡ್ಡಗಟ್ಟಿ ದೌರ್ಜನ್ಯ ಮಾಡಲಾಗಿದೆ. ಅವರ ಕ್ಯಾಮೆರಾ ಕಸಿಯಲಾಗಿದೆ. ವಿಡಿಯೋ ಡಿಲೀಟ್ ಮಾಡಲಾಗಿದೆ. ಇದೇನು ಸಣ್ಣ ಘಟನೆಯಲ್ಲ. ಯಾಕೆಂದರೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಉಪ್ಪಿನಂಗಡಿ ಆಗಿರದೇ ಅಪಘಾನಿಸ್ತಾನದಲ್ಲಿ ಆಗಿದ್ದರೆ ಆಗ ಅದು ಸಹಜ ಎನ್ನಬಹುದು. ಹಾಗಾದರೆ ಈ ಮತಾಂಧತೆ ನಮ್ಮ ಜಿಲ್ಲೆಯ ಬಾಗಿಲಿನ ಒಳಗೆ ಬಂತು ಎನ್ನುವುದೇ ಆತಂಕಕಾರಿ ವಿಷಯ.

ಹಾಗಾದರೆ ಕಾಲೇಜಿನ ಪ್ರಾಂಶುಪಾಲರು ಏನು ಮಾಡಬೇಕು ಎಂದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಮನಸ್ಸು ಮಾಡಿ ಪೊಲೀಸರಿಗೆ ದೂರು ಕೊಡಬೇಕು. ಬೇಕಾದರೆ ಸರಕಾರವೇ ಸುತ್ತೋಲೆ ಹೊರಡಿಸಿ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಕಾಲೇಜಿನಲ್ಲಿ ಶಾಂತಿ ಕದಡುವವರ ವಿರುದ್ಧ ಪ್ರಾಂಶುಪಾಲರು ಮುಲಾಜು ತೋರಿಸಲೇಬಾರದು ಎಂದು ಹೇಳಿಬಿಡಲಿ. ಇಲ್ಲದಿದ್ದರೆ ಇದು ಮತ್ತೆ ಸೆಕೆಂಡ್ ರೌಂಡ್ ವೈರಲ್ ಫಿವರ್ ನಂತೆ ಎಲ್ಲಾ ಕಡೆ ಹರಡುತ್ತದೆ. ಇನ್ನು ಪತ್ರಕರ್ತರ ವಿರುದ್ಧ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಸೆಕ್ಷನ್ ಹಾಕಿ ಒಳಗೆ ಕುಳ್ಳಿರಿಸಬೇಕು. ಇತ್ತೀಚೆಗೆ ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಸಮಾವೇಶ ಮುಗಿಸಿ ಬರುತ್ತಿದ್ದ ಮತಾಂಧರು ಪೊಲೀಸರಿಗೆ ವ್ಯಂಗ್ಯ ಮಾಡಿ ಸಿಕ್ಕಿಬಿದ್ದಿರುವ ಪ್ರಕರಣದಲ್ಲಿಯೂ ಹಾಗೆ. ಸೊಂಟ ಮುರಿಯದಿದ್ದರೆ ಎಚ್ಚರಿಕೆಯ ಸಂದೇಶ ಹೋಗುವುದಿಲ್ಲ. ಇಲ್ಲಿಯೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ದಮನ ಮಾಡಲು ಹೊರಟವರ ಬಗ್ಗೆ ಕನಿಕರ ತೋರಿಸಿದರೆ ಇದು ಮುಂದಿನ ಅಪಾಯಕ್ಕೆ ಗ್ರೀನ್ ಸಿಗ್ನಲ್ ತೋರಿಸಿದಂತೆ!

  • Share On Facebook
  • Tweet It


- Advertisement -


Trending Now
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Hanumantha Kamath May 23, 2025
ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
Hanumantha Kamath May 23, 2025
Leave A Reply

  • Recent Posts

    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
  • Popular Posts

    • 1
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 2
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 3
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 4
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 5
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search