• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ತಮಿಳುನಾಡನ್ನು ಫಾಲೋ ಮಾಡಿತಾ ಸರಕಾರ!

Hanumantha Kamath Posted On October 20, 2023
0


0
Shares
  • Share On Facebook
  • Tweet It

ರಾಸಾಯನಿಕ ಇಲ್ಲದ ಕುಂಕುಮ, ಹಳದಿಯ ಸ್ಟಾಲ್ ವಿಧಾನಸೌಧದ ಹೊರಗೆ ಸಿದ್ದು ಹಾಕಲಿ!

ನೇರವಾಗಿ ರಾಜ್ಯ ಸರಕಾರದಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಪೂಜೆ, ಪುನಸ್ಕಾರ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದರೆ ಎಲ್ಲಿಯಾದರೂ ಹಿಂದೂಗಳು ಬೇಜಾರು ಮಾಡಬಹುದು ಎಂದು ಸಣ್ಣ ಹೆದರಿಕೆ ಇದ್ದಂತೆ ಕಾಣುತ್ತದೆ. ಹಾಗಂತ ಮುಸ್ಲಿಮರನ್ನು ಖುಷಿಪಡಿಸದೇ ಇರಲು ಆಗುತ್ತಾ? ವಿಧಾನಸೌಧ, ವಿಕಾಸ ಸೌಧ, ಸರಕಾರದ ಬಹುಮಹಡಿ ಕಟ್ಟಡಗಳಲ್ಲಿ ನಾಡಿದ್ದು ಆಯುಧಪೂಜೆಗೆ ಢೂಂ ಢಾಂ ಎಂದು ಸಂಭ್ರಮ ನಡೆದರೆ ಅದನ್ನು ನೋಡಿದ ಮುಸ್ಲಿಮರು ಎಲ್ಲಿಯಾದರೂ ಬೇಸರಗೊಳ್ಳುತ್ತಾರೋ ಎಂದು ರಾಜ್ಯ ಸರಕಾರಕ್ಕೆ ಅನಿಸಿದೆ. ಆದ್ದರಿಂದ ರಾಸಾಯನಿಕಯುಕ್ತ ಅರಿಶಿನ – ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಬಳಸುವಂತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಯುಧಪೂಜೆಯ ಗೌಜಿ ಲಿಮಿಟಿನಲ್ಲಿ ಇರಲಿ ಎಂದು ಹೇಳಲಾಗಿದೆ. ಯಾಕೆಂದರೆ ನಾವು ಕುಂಕುಮ, ಅರಿಶಿನ ಖರೀದಿ ಮಾಡಲು ಅಂಗಡಿಗೆ ಹೋದಾಗ ಅದರಲ್ಲಿ ರಾಸಾಯನಿಕ ಹಾಕಿ ತಯಾರಿಸಲಾಗಿದೆಯೋ ಇಲ್ಲವೋ ಎಂದು ಗೊತ್ತಾಗಲು ಸಾಧ್ಯವಿಲ್ಲ. ಹಾಗಂತ ನಾವು ಅಂಗಡಿಯಿಂದ ಕಾಲು ಕೆಜಿ ಕುಂಕುಮ ಮತ್ತು ಹಳದಿ ತೆಗೆದುಕೊಂಡು ಅಲ್ಲಿ ಸಿದ್ರಾಮಯ್ಯನವರ ಮನೆಗೆ ಹೋಗಿ ಅವರಿಗೆ ತೋರಿಸಿ ಅವರು ಲ್ಯಾಬಿನವರಿಗೆ ಫೋನ್ ಮಾಡಿ ಒಬ್ಬರು ಕುಂಕುಮ ಮತ್ತು ಹಳದಿ ತೆಗೆದುಕೊಂಡು ಬರುತ್ತಾರೆ. ಅದನ್ನು ಚೆಕ್ ಮಾಡಿ ರಾಸಾಯನಿಕ ಇದೆಯೋ ಎಂದು ಹೇಳಿ ಎಂದು ಹೇಳಿದರೆ ನಾವು ಲ್ಯಾಬಿಗೆ ಹೋಗಿ ಅಲ್ಲಿ ಕೊಟ್ಟು ಕಾದು ಕುಳಿತುಕೊಂಡು ಬರಲು ಆಗುತ್ತಾ? ಇಲ್ಲವಲ್ಲ,

ಶುದ್ಧ ಕುಂಕುಮ, ಹಳದಿ ಪ್ರಚಾರ ಮಾಡಿದ ಸಿದ್ದುಗೆ ಧನ್ಯವಾದ!

ಆದ್ದರಿಂದ ಒಂದೋ ನಾವು ಈ ರವಿಶಂಕರ್ ಗುರೂಜಿಯವರ ಸಿರಿ ಅಥವಾ ಪತಂಜಲಿ ಅಥವಾ ಸನಾತನ ಸಂಸ್ಥೆಯವರ ಹಳದಿ, ಕುಂಕುಮವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಸ್ವಲ್ಪ ರೇಟ್ ಜಾಸ್ತಿ. ಆದರೆ ರಾಸಾಯನಿಕ ಇರುವುದಿಲ್ಲ. ಆದರೆ ಎಲ್ಲಾ ಅಂಗಡಿಯಲ್ಲಿ ಸಿಗುತ್ತಾ, ಇಲ್ವಾ ಎಂದು ನೋಡಬೇಕು. ಅಂತಹ ಅಂಗಡಿಯನ್ನು ಹುಡುಕಿ ಹೋಗಬೇಕು. ಹುಡುಕಿ ಹೋದ ನಂತರ ಅಲ್ಲಿ ಹಣ ಸ್ವಲ್ಪ ಹೆಚ್ಚಾದರೂ ತೆಗೆದುಕೊಂಡು ಬರಬೇಕಾಗುತ್ತದೆ. ಯಾರಿಗೆ ಅದು ಆಗಲಿಲ್ಲವೋ ಅವರು ಕುಂಕುಮ, ಹಳದಿ ಇಲ್ಲದೇ ಆಯುಧ ಪೂಜೆ ಮಾಡಬೇಕಾಗುತ್ತದೆ. ಇನ್ನು ಕೆಲವರು ರಾಸಾಯನಿಕ ಇದೆಯೋ, ಇಲ್ವೋ ಎಂದು ಹೆದರಿಯೇ ಹಳದಿ, ಕುಂಕುಮ ಖರೀದಿಸುವುದಿಲ್ಲ. ಇನ್ನು ಕೆಲವರು ನಮ್ಮಿಂದ ನೆಲದ ಮೇಲೆ ಕಲೆ ಉಳಿದರೆ ಏನು ಮಾಡುವುದು ಎಂದು ಯೋಚಿಸಿಯೇ ಆಯುಧ ಪೂಜೆ ಡ್ರಾಪ್ ಮಾಡುತ್ತಾರೆ. ಒಟ್ಟಿನಲ್ಲಿ ಹಿಂದೂಗಳನ್ನು ಹೆದರಿಕೆಯಲ್ಲಿಯೇ ಇಟ್ಟು ಸಿಂಪಲ್ಲಾಗಿ ಆಯುಧ ಪೂಜೆ ನಡೆದುಹೋಗಲಿದೆ.

ತಮಿಳುನಾಡನ್ನು ಫಾಲೋ ಮಾಡಿತಾ ಸರಕಾರ!

ಇಷ್ಟೆಲ್ಲಾ ಕಂಡೀಷನ್ ಹಾಕುವ ಬದಲು ಸಿದ್ಧರಾಮಯ್ಯನವರು ರಾಸಾಯನಿಕ ಇರುವ ಕುಂಕುಮ, ಹಳದಿ ಮಾರುವ ಅಂಗಡಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡಬಹುದಲ್ಲ. ಎಲ್ಲಕ್ಕಿಂತ ಬೆಸ್ಟ್ ಎಂದರೆ ವಿಧಾನಸೌಧದದಲ್ಲಿಯೇ ಒಂದು ಕೌಂಟರ್ ಇಟ್ಟು ವಿಧಾನಸೌಧ, ವಿಕಾಸ ಸೌಧ ಹಾಗೂ ಇಲಾಖೆಗಳ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆಗೆ ಬೇಕಾದ ಹಳದಿ, ಕುಂಕುಮ ಇಲ್ಲಿಯೇ ಖರೀದಿಸಿ ಎಂದು ಹೇಳಬಹುದಲ್ಲ. ಅದು ಬಿಟ್ಟು ಸನಾತನ ಧರ್ಮವನ್ನೇ ನಾಶ ಮಾಡ್ತೀನಿ ಎಂದು ಹೇಳುವ ಉದಯನಿಧಿ ಸ್ಟಾಲಿನ್ ಅವರ ರಾಜ್ಯದಲ್ಲಿ ಅಲ್ಲಿನ ಸರಕಾರ ಜಾರಿಗೆ ತಂದ ನಿಯಮವನ್ನು ಇಲ್ಲಿಗೆ ತರುವಂತಹ ಅಗತ್ಯ ಏನಿತ್ತು? ಹಾಗಂತ ರಾಜ್ಯ ಸರಕಾರ ಇದಕ್ಕೆ ಕೊಡುವ ಸಬೂಬು ಏನೆಂದರೆ ರಾಸಾಯನಿಕ ಇರುವ ಕುಂಕುಮ, ಹಳದಿ ಬಳಸಿ ರಂಗೋಲಿ ಹಾಕಿದರೆ, ಕುಂಬಳಕಯಿ ಒಡೆದರೆ ಅದರ ಕಲೆ ನೆಲದ ಮೇಲೆ ಉಳಿಯುತ್ತೆ. ವಿಧಾನಸೌಧದಲ್ಲಿ ಅದರ ಹಿಂದಿನ ಪರಂಪರೆಯನ್ನು ಉಳಿಸಬೇಕು ಎನ್ನುತ್ತಾರೆ. ಆದರೆ ಇದೇ ಸಚಿವರು ತಮ್ಮ ಕಚೇರಿಯ ಒಳಗೆ ವಾಸ್ತು ಸರಿ ಮಾಡಿಸಲು ಗೋಡೆ ಒಡೆಯುವುದು, ನೆಲದ ಟೈಲ್ಸ್ ಬದಲಾಯಿಸುವುದು ಎಲ್ಲಾ ಮಾಡುತ್ತಾರೆ? ಆಗ ಏನೂ ಆಗಲ್ವಾ?

0
Shares
  • Share On Facebook
  • Tweet It




Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Hanumantha Kamath January 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search