• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಇಚ್ಚಾಶಕ್ತಿ, ದೂರದೃಷ್ಟಿ ಮತ್ತು ಸೇವಾ ಕಾರ್ಯ ಎಂಬ ಮೂರು ಬಿಟ್ಟ ಪಾಲಿಕೆ!

Hanumantha Kamath Posted On October 23, 2023
0


0
Shares
  • Share On Facebook
  • Tweet It

ಒಂದು ಸಂಭ್ರಮ ಎಂದರೆ ಅದರ ಜೊತೆ ಆ ಸಂಭ್ರಮ ನಡೆಯುತ್ತಿರುವ ಪ್ರದೇಶದ ಆಡಳಿತ ನಡೆಸುವವರಿಗೂ ಒಂದು ಜವಾಬ್ದಾರಿ ಎಂದು ಇರುತ್ತದೆ. ಮೇಯರ್ ಅಥವಾ ಕಮೀಷನರ್ ಸ್ಥಾನಕ್ಕೆ ಗೌರವ ಹೆಚ್ಚಾಗುವುದು ಅದರಕ್ಕಿರುವ ಜವಾಬ್ದಾರಿಯನ್ನು ಅವರು ನಿರ್ವಹಿಸಿದಾಗ ಮಾತ್ರ. ನಾವು ಹೆಮ್ಮೆಯಿಂದ ಮಂಗಳೂರು ದಸರಾ ಎಂದು ಹೇಳುತ್ತೇವೆ. ಅದಕ್ಕಾಗಿ ಪಾಲಿಕೆ ಕಡೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದಕ್ಕಾಗಿ ಪ್ರಚಾರ ನೀಡಲಾಗುತ್ತದೆ. ಅಧಿಕಾರದಲ್ಲಿರುವ ಪಕ್ಷ ಅಷ್ಟಕ್ಕೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಎದೆಯುಬ್ಬಿಸಿ ನಡೆದರೆ ಸಾಕಾ? ಮೇಲೆ ಬಲ್ಬ್ ಗಳು ಉರಿದು ಕೆಳಗೆ ಕಸ ರಾಶಿ ಬಿದ್ದರೆ ಅದನ್ನು ನೋಡಬೇಕಾಗಿರುವುದು ಪಾಲಿಕೆ ಜವಾಬ್ದಾರಿ ಅಲ್ಲವೇ?

ಕಸ ತೆಗೆಯುವವರು ಗತಿ ಇಲ್ಲವೇ?

ಈಗ ಮಂಗಳೂರು ನಗರದ ಮುಖ್ಯಭಾಗವನ್ನೇ ತೆಗೆದುಕೊಳ್ಳಿ. ಒಂದು ಕಡೆ ಕುದ್ರೋಳಿ ದೇವಸ್ಥಾನದಲ್ಲಿ ಮಹೋತ್ಸವ. ಇನ್ನೊಂದೆಡೆ ರಥಬೀದಿಯ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಆಚಾರ್ಯ ಮಠದ ಎದುರು ಶಾರದಾ ದೇವಿಯ ಅದ್ದೂರಿ ಉತ್ಸವ. ಇತ್ತ ಕಟ್ಟೆಮಾರ್ ಶಾರದೆಗೆ 50 ರ ಸಂಭ್ರಮ, ಈ ಕಡೆ ವಿ.ಟಿ.ರಸ್ತೆಗೆ ಬಂದರೆ ಕೃಷ್ಣ ಮಂದಿರದ ಶಾರದೆಗೆ 25 ರ ಸಡಗರ. ಅಲ್ಲಲ್ಲಿ ಶಾರದಾ ದೇವಿಯನ್ನು ಪೂಜಿಸಿ ಸಂಭ್ರಮಿಸುವ ಕಾಲಘಟ್ಟದಲ್ಲಿ ಆಯಾ ವಾರ್ಡಿನ ಕಾರ್ಪೋರೇಟರ್ ಗಳಿಗೆ ಒಂದು ಜವಾಬ್ದಾರಿ ಎನ್ನುವುದು ಬೇಡವೇ? ಈ ಎಲ್ಲಾ ಶಾರದಾ ಮಾತೆಯ ದರ್ಶನಕ್ಕೆ ಜಿಲ್ಲೆ, ರಾಜ್ಯ, ರಾಷ್ಟ್ರದಿಂದಲೂ ಜನರು ಬರುತ್ತಾರೆ. ಈ ಸಂದರ್ಭದಲ್ಲಿ ಜಾತ್ರೆ, ಉತ್ಸವ ಎಂದು ಸಂಭ್ರಮದಲ್ಲಿ ಕಸದ ರಾಶಿ ಸಹಜವಾಗಿ ಈ ರಸ್ತೆಗಳಲ್ಲಿ ಕಾಣುತ್ತದೆ. ಆಗ ಆಯಾ ವಾರ್ಡಿನಲ್ಲಿ ಪಾಲಿಕೆ ಸದಸ್ಯರು ಏನು ಮಾಡಬೇಕು. ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರಿಗೆ ಹೇಳಿ ನಿತ್ಯ ಬೆಳಿಗ್ಗೆ, ಸಂಜೆ ಕಸ ತೆಗೆಸುವಂತಹ ವ್ಯವಸ್ಥೆ ಮಾಡಬೇಕು. ಆಗಿದೆಯಾ? ಇಲ್ಲ. ಆಗಿದ್ದರೆ ಇದೇ ಜಾಗೃತ ಅಂಕಣದಲ್ಲಿ ಮೇಯರ್, ಪಾಲಿಕೆ ಸದಸ್ಯರನ್ನು ಹೊಗಳುತ್ತಿದ್ದೆ. ಆದರೆ ಹಾಗೇ ಆಗುತ್ತಿಲ್ಲವಲ್ಲ. ಹಾಗಾದರೆ ಪಾಲಿಕೆಯಲ್ಲಿ ಆಡಳಿತ ಎನ್ನುವುದು ಇದೆಯಾ ಅಥವಾ ಮಲಗಿದೆಯಾ ಎನ್ನುವುದನ್ನು ಅವರೇ ಹೇಳಬೇಕು.

ಫ್ಲೆಕ್ಸ್ ಹಾಕಿ ಹೈಕೋರ್ಟ್ ಆದೇಶ ಉಲ್ಲಂಘನೆ…

ಎರಡನೇಯದಾಗಿ ಕರ್ನಾಟಕದ ಹೈಕೋರ್ಟ್ ರಾಜ್ಯದಲ್ಲಿ ಫ್ಲೆಕ್ಸ್ ಇದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನೀವು ಪಾಲಿಕೆಗೆ ಹಣ ಕಟ್ಟಿದರೂ ಫೆಕ್ಸ್ ಹಾಕಲು ಪಾಲಿಕೆ ಅನುಮತಿ ನೀಡುವಂತಿಲ್ಲ. ಆದರೆ ಒಮ್ಮೆ ಮಂಗಳೂರು ನಗರದೊಳಗೆ ಸುತ್ತಾಡಿ ಬನ್ನಿ. ಫೆಕ್ಸ್ ಗಳ ಅಬ್ಬರ ಕಾಣಿಸುತ್ತದೆ. ಎಲ್ಲಿಯ ತನಕ ಫುಟ್ ಪಾತ್ ಮೇಲೆಯೂ ನಿಲ್ಲಿಸಿದ್ದಾರೆ. ಮೊದಲೇ ರಸ್ತೆಯಲ್ಲಿ ಕಾಲಿಡಲಾಗದಷ್ಟು ವಾಹನಗಳು ನವರಾತ್ರಿಯ ದಿನಗಳಂದು ಓಡಾಡ್ತಾ ಇರುತ್ತವೆ. ಜನರು ಫುಟ್ ಪಾತ್ ಮೇಲೆ ಹೋಗೋಣ ಎಂದರೆ ಅಲ್ಲಿ ಈ ಫ್ಲೆಕ್ಸ್ ಉಪಟಳ. ಹಾಗಾದ್ರೆ ಪಾಲಿಕೆ ನೇರವಾಗಿ ಹೈಕೋರ್ಟ್ ಆದೇಶವನ್ನು ಕ್ಯಾರೇ ಮಾಡುತ್ತಿಲ್ಲವೇ? ಫ್ಲೆಕ್ಸ್ ಹಾಕುವವರ ಮತ್ತು ಪಾಲಿಕೆಯ ಕಂದಾಯ ವಿಭಾಗದವರ ಅಪವಿತ್ರ ಮೈತ್ರಿಯ ಎದುರು ಪಾಲಿಕೆ ಆಡಳಿತ ಮಂಡಿಯೂರಿದೆಯಾ?

ಪೇಂಟಾ ಅಥವಾ ವಾಟರ್ ಕಲ್ಲಾರಾ ಡಿವೈಡರ್ ಗಳಿಗೆ!

ಇನ್ನು ಇವತ್ತಿನ ಅಂಕಣದ ಮೂರನೇ ವಿಷಯ. ಕುದ್ರೋಳಿ ಶಾರದಾ ಮಾತೆಯ ಶೋಭಾಯಾತ್ರೆ ಸಾಗುವ ದಾರಿಯಲ್ಲಿರುವ ಡಿವೈಡರ್ ಗಳಿಗೆ ನವರಾತ್ರಿಯ ಸಮಯದಲ್ಲಿ ಪೇಂಟ್ ಹೊಡೆಯಲಾಗಿದೆ. ಅದು ಪೇಂಟಾ ಅಥವಾ ವಾಟರ್ ಕಲ್ಲರಾ ಎಂದು ಗುತ್ತಿಗೆದಾರರೇ ಹೇಳಬೇಕು. ಪೇಟಿಂಗ್ ಗಾಗಿ ಪಾಲಿಕೆ ನಮ್ಮ ನಿಮ್ಮ ತೆರಿಗೆಯ ಹಣದಿಂದ ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ. ಹಾಗಿರುವಾಗ ಪೇಟಿಂಗ್ ಮಾಡಬೇಕೆ ವಿನ: ಕಾಟಾಚಾರದ ಕೆಲಸ ಮಾಡಬಾರದು. ಒಟ್ಟಿನಲ್ಲಿ ಈ ಮೂರು ವಿಷಯಗಳು ಈ ನವರಾತ್ರಿಯಲ್ಲಿ ಪಾಲಿಕೆಯ ಮುಂದೆ ಇಟ್ಟಿದ್ದೇನೆ. ಮಲಗಿರುವವರನ್ನು ಎಬ್ಬಿಸಬಹುದು. ಆದರೆ ಇಚ್ಚಾಶಕ್ತಿ, ದೂರದೃಷ್ಟಿ ಮತ್ತು ಸೇವಾ ಕಾರ್ಯವನ್ನು ಮರೆತು ಮಲಗಿದವರನ್ನು ಎಬ್ಬಿಸುವುದೇ ವೇಸ್ಟ್, ಮಲಗಲಿಬಿಡಿ!

0
Shares
  • Share On Facebook
  • Tweet It




Trending Now
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Hanumantha Kamath January 1, 2026
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
  • Popular Posts

    • 1
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 2
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search