• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಳಪೆ ಪೇಂಟ್, ಕೈ ತುಂಬಾ ಬಿಲ್!

Tulunadu News Posted On December 19, 2023
0


0
Shares
  • Share On Facebook
  • Tweet It

ಲಾಭ ಇಲ್ಲ, ಆದ್ದರಿಂದ ಆಸಕ್ತಿ ಇಲ್ಲ!

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮನಪಾ ಸದಸ್ಯರು ತಮ್ಮ ವಾರ್ಡಿನಲ್ಲಿ ಆಗಬೇಕಾದ “ಲಾಭದಾಯಕ” ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಮಾಡುವಲ್ಲಿ ಆಸಕ್ತಿ ತೋರಿಸಿದರೆ ಸಾಕಾಗುವುದಿಲ್ಲ. ಎಲ್ಲದರಲ್ಲಿಯೂ ಅವರಿಗೆ ಒಂದೇ ತೆರನಾದ ಉಮ್ಮೇದು ಕೂಡ ಬೇಕಾಗುತ್ತದೆ. ಉದಾಹರಣೆಗೆ ಹಂಪ್ಸ್ ಗಳಿಗೆ ಬಣ್ಣ ಬಳಿಯುವುದು ಒಂದು. ಹಂಪ್ಸ್ ಗಳಿಗೆ ಬಣ್ಣ ಬಳಿಯುವುದು ಎಂದರೆ ಅದೇನೂ ದೊಡ್ಡ ಹಣಕಾಸಿನ ಕಾಮಗಾರಿಯಲ್ಲ. ಹಾಗಂತ ನಿರ್ಲಕ್ಷ್ಯ ಮಾಡಿದರೆ ಅದರಿಂದ ಆಗುವ ಅಪಾಯ ಸಣ್ಣದಲ್ಲ. ವಾಹನ ಸವಾರರು ಝೀಬ್ರಾ ಕ್ರಾಸ್ ಬಣ್ಣ ಬಳಿಯದ ಹಂಪ್ ಗಳನ್ನು ಕತ್ತಲಲ್ಲಿ ಗುರುತಿಸಲಾಗದೇ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ಇದೆ. ರಸ್ತೆ ಮೇಲೆ ಬಿದ್ದು ತರಚಿದ ಗಾಯಕ್ಕೆ ಒಳಗಾಗಿ ನರಳಿದ್ದು ಇದೆ. ಪ್ರಾಣಕ್ಕೆ ಸಂಚಕಾರ ತಂದದ್ದು ಇದೆ. ಹಂಪ್ಸ್ ಗಳಿಗೆ ಬಣ್ಣ ಬಳಿಯುವುದು ಎಂದರೆ ನಿರ್ಲಕ್ಷ್ಯ ಮಾಡುವ ಕಾರ್ಪೋರೇಟರ್ ಗಳ ಸ್ವಭಾವದ ಬಗ್ಗೆ ಈ ಗುತ್ತಿಗೆಯನ್ನು ಪಡೆದುಕೊಂಡವರಿಗೆ ಗೊತ್ತೆ ಇದೆ. ಆದ್ದರಿಂದ ಗುತ್ತಿಗೆದಾರರು ಅವರಿಗೆ ಸಿಕ್ಕಿದ ಕೆಲಸ ಏರಿಯಾದಲ್ಲಿ ಕಳಪೆ ಕೆಲಸ ಮಾಡಿ ಅದರ ಫೋಟೋ ಮಾತ್ರ ಚೆಂದವಾಗಿ ತೆಗೆದು ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಬಿಲ್ ಪಾಸ್ ಮಾಡಿಸಿಕೊಳ್ಳುತ್ತಾರೆ. ಅವರು ಹೊಡೆದ ಬಣ್ಣ ಅದು ಎಷ್ಟು ದಿನ ಬರುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತು.

ಕಳಪೆ ಪೇಂಟ್, ಕೈ ತುಂಬಾ ಬಿಲ್!

ಇನ್ನು ಹಂಪ್ ನಿರ್ಮಿಸುವುದು ಮತ್ತು ಅದಕ್ಕೆ ಇಷ್ಟೇ ದಿನಗಳ ಒಳಗೆ ಪೆಂಟ್ ಹೊಡೆಯಬೇಕೆಂಬ ನಿರ್ಭಂದ ಕೂಡ ಇದೆ. ಇವತ್ತು ಹಂಪ್ ನಿರ್ಮಿಸಿದರೆ ಅದಕ್ಕೆ ನಾಳೆ ಪೆಂಟ್ ಹೊಡೆಯಬಹುದು. ಆದರೆ ಹೊಸ ಹಂಪ್ ನಿರ್ಮಿಸಲ್ಪಟ್ಟರೆ ಅದಕ್ಕೂ ಗುತ್ತಿಗೆದಾರರು ಪೇಂಟ್ ಹೊಡೆಯುವುದಿಲ್ಲ. ಅದೇ ರೀತಿ ಹಳೆ ಹಂಪ್ಸಿಗೆ ಹೇಗೂ ಇವರು ಕ್ಯಾರೇ ಎನ್ನುವುದಿಲ್ಲ. ಒಂದು ವೇಳೆ ಇವರು ಪೆಂಟ್ ಹೊಡೆದರೂ ಅದು ವಾರದಲ್ಲಿ ಅಳಸಿ ಹೋಗುತ್ತದೆ. ಯಾಕೆಂದರೆ ಹಂಪ್ಸಿಗೆ ಇವರು ಬಳಿಯುವ ಪೇಂಟ್ ನಿಜಕ್ಕೂ ಹೊಡೆಯುವಂತದ್ದೇ ಇಲ್ಲ. ಇವರು ಬಳಸುವ ಕಳಪೆ ವಸ್ತು ಹಂಪ್ಸಿಗೆ ಹೊಡೆಯುವಂತದ್ದೇ ಅಲ್ಲ. ಹಂಪ್ಸಿಗೆ ಹೊಡೆಯುವ ಬಣ್ಣಕ್ಕೆ ಥರ್ಮೋಪ್ಲಾಸ್ಟಿಕ್ ರಿಪ್ಲೆಕ್ಟಿವ್ ಪೇಂಟ್ ಎಂದು ಕರೆಯುತ್ತಾರೆ. ಇದನ್ನು ಬಳಿಯುವುದರಿಂದ ಬಹಳಷ್ಟು ಉಪಯೋಗವಿದೆ. ಇದು ರಸ್ತೆ ಸುರಕ್ಷತಾ ನಿಯಮಗಳ ಅಡಿಯಲ್ಲಿಯೂ ಬರುತ್ತದೆ. ಇದನ್ನು ಹಂಪ್ಸ್ ಗಳಿಗೆ ಬಳಸುವುದರಿಂದ ವಾಹನ ಸವಾರರು ರಾತ್ರಿ ಸಮಯದಲ್ಲಿಯೂ ಅನತಿ ದೂರದಿಂದ ಹಂಪ್ಸ್ ಗಳನ್ನು ಗುರುತಿಸಬಲ್ಲರು. ಇದು ಬಹಳ ಕಾಲದ ತನಕ ಬಾಳಿಕೆ ಕೂಡ ಬರುತ್ತದೆ. ಆದರೆ ಇದನ್ನು ಬಳಿಯುವ ಬಗ್ಗೆ ಪಾಲಿಕೆಯಲ್ಲಿ ಗುತ್ತಿಗೆದಾರರು ಮುಂದಾಗುವುದೇ ಇಲ್ಲ. ಅವರದ್ದೇನಿದ್ದರೂ ಕಳಪೆ ಪೇಂಟ್, ಕೈ ತುಂಬಾ ಬಿಲ್.

ಅರ್ಧ ಕೆಲಸ, ಫುಲ್ ಬಿಲ್!

ಇನ್ನು ಕುದ್ರೋಳಿಯ ನವರಾತ್ರಿಯ ಅಂಗವಾಗಿ ಮಂಗಳೂರು ದಸರಾವನ್ನು ಚೆಂದಗಾಣಿಸಬೇಕೆಂಬ ಕಾರಣಕ್ಕೆ ಶೋಭಾಯಾತ್ರೆ ಹೋಗುವ ದಾರಿಯಲ್ಲಿ ಡಿವೈಡರ್ ಹಾಗೂ ಫೂಟ್ ಪಾತ್ ಸೈಡಿನಲ್ಲಿ ಪೇಂಟ್ ಹೊಡೆಯಬೇಕೆಂಬ ಯೋಜನೆ ಹಾಕಲಾಗಿತ್ತು. ಅದಕ್ಕಾಗಿ ಗುತ್ತಿಗೆಯನ್ನು ಕೂಡ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಮಣ್ಣಗುಡ್ಡೆ ಗುರ್ಜಿಯಿಂದ ರಾಷ್ಟ್ರಕವಿ ಗೋವಿಂದ ಪೈ ವೃತ್ತದ ತನಕ ಮಾತ್ರ ಕೆಲಸ ನಿರ್ವಹಿಸಿದ್ದಾರೆ. ಹಾಗಾದರೆ ಅಷ್ಟೇ ಏರಿಯಾದಲ್ಲಿ ಶೋಭಾಯಾತ್ರೆ ಸಾಗುವುದಾ, ಇದ್ಯಾವುದನ್ನು ಯಾರೂ ನೋಡುವುದಿಲ್ವಾ? ಆಯಾ ವಾರ್ಡಿನ ಕಾರ್ಪೋರೇಟರ್ ಗಳಾದರೂ ಇದನ್ನು ನೋಡಬೇಕಲ್ಲ. ಅವರಿಗೆ ತಮ್ಮ ವಾರ್ಡ್ ಚೆಂದವಾಗಿ ಕಾಣುವುದು ಬೇಕಿಲ್ವಾ

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search