• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಭೇಟಿ ಕೊಟ್ಟ ಆಂಧ್ರಪ್ರದೇಶದ ವೀರಭದ್ರ ದೇವಸ್ಥಾನಕ್ಕೆ ರಾಮಾಯಣ ಕನೆಕ್ಷನ್!

Tulunadu News Posted On January 17, 2024
0


0
Shares
  • Share On Facebook
  • Tweet It

ಭಾರತದಲ್ಲಿರುವ ವಿವಿಧ ರಾಜ್ಯಗಳಲ್ಲಿ ಶ್ರೀರಾಮನ ಹೆಜ್ಜೆಗಳ ಗುರುತುಗಳು ಇರುವುದನ್ನು ನಾವು ವಿವಿಧ ಮೂಲಗಳಿಂದ ಕೇಳಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೂ ಭಗವಂತ ರಾಮನಿಗೂ ಪೌರಾಣಿಕ ಲಿಂಕ್ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ಅದರ ವಿಶಿಷ್ಟತೆ ಜಗತ್ತಿಗೆ ಗೊತ್ತಾಗಿದೆ.

ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯು ರಾವಣನನ್ನು ಬೆನ್ನಟ್ಟಿದ್ದ ಕಥೆ ನಾವು ಕೇಳಿದ್ದೇವೆ. ಬಳಿಕ ರಾವಣನ ವಿರುದ್ಧ ಪ್ರಬಲ ಹೋರಾಟ ಮಾಡಿ ಆತನ ದಾಳಿಯಿಂದ ನೆಲಕ್ಕೆ ಬಿದ್ದು ಜಟಾಯು ಸಾಯುವ ಸ್ಥಿತಿಯಲ್ಲಿತ್ತು. ಆದರೆ ಶ್ರೀರಾಮ ಸೀತಾದೇವಿಯನ್ನು ಹುಡುಕಿ ಆ ದಾರಿಯಲ್ಲಿ ಬರುವುದನ್ನು ಕಾದು ರಾವಣ ಅಪಹರಿಸಿದ ವಿಚಾರವನ್ನು ಶ್ರೀರಾಮನಿಗೆ ತಿಳಿಸಿ ಬಳಿಕ ಇಹಲೋಕ ತ್ಯಜಿಸಿತ್ತು. ನಂತರ ರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ್ದ ಎಂಬ ಪ್ರತೀತಿ ಇದೆ.
ಮೋದಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಇದರ ವಿಶೇಷತೆಯನ್ನು ಕಂಡು ಕೆಲವರು ಜಟಾಯುವಿನ ಸ್ವಾಮಿನಿಷ್ಟೆಯನ್ನು ಕೊಂಡಾಡಿದ್ದಾರೆ. ತನ್ನ ಶಕ್ತಿ ಸಾಮರ್ತ್ಯವನ್ನು ಪಣಕ್ಕಿಟ್ಟು ಸೀತೆಯನ್ನು ಉಳಿಸಲು ಹೋರಾಡಿದ ಜಟಾಯುವಿನ ತ್ಯಾಗ ನಿಜಕ್ಕೂ ಅಜರಾಮರವಾಗಿದೆ. ಇಲ್ಲಿ ಸೀತಾಮಾತೆಯನ್ನು ಸ್ತ್ರೀಶಕ್ತಿ ಎಂದು ನಾವು ಪರಿಗಣಿಸಿದರೆ ಜಟಾಯುವಿನ ಶೌರ್ಯ ಮತ್ತು ಬಲಿದಾನವನ್ನು ನಮ್ಮಲ್ಲಿ ಆವಾಹನೆ ಮಾಡಿ ಇಂದಿನ ಕಾಲದಲ್ಲಿ ಮಾಡಬೇಕಾದ ಕಾರ್ಯ ಹಲವಿದೆ ಎನ್ನುವುದು ಜಟಾಯುವಿನ ಅಧ್ಯಾಯದಿಂದ ಕಲಿಯಬೇಕಾದ ಸಂಗತಿಗಳಾಗಿವೆ. ಆಂಧ್ರಪ್ರದೇಶ, ಕೇರಳ ಪ್ರವಾಸದಲ್ಲಿರುವ ಮೋದಿಯವರು ಕೇರಳದ ಗುರುವಾಯನಕೆರೆ ಮತ್ತು ತ್ರಿಪ್ರಯಾರ್ನ ಶ್ರೀ ರಾಮಸ್ವಾಮಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search