• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮುಚ್ಚಿಹಾಕಿದ್ದ ಇತಿಹಾಸದ ಅಧ್ಯಾಯ `ರಜಾಕರ್´

Tulunadu News Posted On March 18, 2024
0


0
Shares
  • Share On Facebook
  • Tweet It

ಇತ್ತೀಚಿಗೆ ನಮ್ಮ ದೇಶದ ಸಿನಿಮಾರಂಗದಲ್ಲಿ ಇತಿಹಾಸ ಆಧಾರಿತ ಕಥೆಯನ್ನು ದೃಶ್ಯಕಾವ್ಯವನ್ನಾಗಿಸಿ ಪ್ರೇಕ್ಷಕರಿಗೆ ನೈಜ ಇತಿಹಾಸವನ್ನು ಹೇಳುವ ಪ್ರಯತ್ನ ನಡೆಯುತ್ತಲೇ ಬಂದಿದೆ. ವಿವೇಕ್ ಅಗ್ನಿಹೋತ್ರಿ ಯವರ `ದಿ ಕಾಶ್ಮೀರ್ ಫೈಲ್ಸ್’ ನಂತಹ ಸಿನಿಮಾ ಈ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ ಅಂದರು ತಪ್ಪಾಗದು.ಕೆಲವೊಂದು ರಾಜಕೀಯ ಹಿತಾಸಕ್ತಿಗಳ ಷಡ್ಯಂತ್ರದ ಭಾಗವಾಗಿ ಈ ದೇಶದ ನೈಜ ಇತಿಹಾಸ ತೆರೆಯ ಮರೆಯಲ್ಲೇ ಅಡಕವಾಗಿತ್ತು ಆದರೆ ಈಗ ಸಿನಿಮಾದ ಮುಖಂತರ ಅದೆಲ್ಲ ಹೊರ ಬರುತ್ತಿದೆ.

ಇದಕ್ಕೆ ಪೂರಕವಾಗಿ ಯಾಟ ಸತ್ಯನಾರಾಯಣ ಅವರ ನಿರ್ದೇಶನದಲ್ಲಿ ಮೂಡಿಬಂದ `ರಜಾಕರ್´ ಎಂಬ ಸಿನಿಮಾ ಬೆಳ್ಳಿಪರದೆಗೆ ಬಂದಪ್ಪಳಿಸಿದೆ.

ಮಾರ್ಚ್ 15 ರಂದು ಬಿಡುಗಡೆಯಾದ ಈ ಸಿನಿಮಾಕ್ಕೆ ಎಲ್ಲೆಡೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಅಷ್ಟಕ್ಕೂ ಈ ಸಿನಿಮಾ ಈಗ ಸದ್ದು ಮಾಡಲು ಮುಖ್ಯ ಕಾರಣ ಇದು ನೈಜ ಇತಿಹಾಸ ಆಧಾರಿತ ಸಿನಿಮಾ, ಹೈದೆರಾಬಾದ್ ಕರ್ನಾಟಕ ಭಾಗದಲ್ಲಿ 1947 ರ ನಂತರ ನಡೆದ ಸಾಮೂಹಿಕ ಹಿಂದೂ ನರಮೇಧದ ಕಥೆ.

ಹೌದು ಹೈದರಾಬಾದ್ ನಲ್ಲಿ 1947 ರ ನಂತರ ಅಂದರೆ ಈ ದೇಶಕ್ಕೆ ಸ್ವಾತಂತ್ರ ದೊರಕಿದ ನಂತರ ಒಂದು ದೊಡ್ಡ ನರಮೇಧ ನಡೆದಿತ್ತು ಆದರೆ ಅದು ಇತಿಹಾಸದ ಪರದೆಯಡಿಯಲ್ಲಿ ಮರೆಯಾಗಿತ್ತು ಆದರೆ ಅದು ಈಗ `ರಜಾಕರ್´ ಸಿನಿಮಾದ ಮೂಲಕ ಬೆಳಕಿಗೆ ಬಂದಿದೆ.
ಹೈದೆರಾಬಾದ್ ಕರ್ನಾಟಕ ಭಾಗವು ರಜಾಕರ ಆಡಳಿತದಲ್ಲಿದ್ದಾಗ ಅಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಕತೆಯ ಜೊತೆಗೆ ಸ್ವಾತಂತ್ರ್ಯದ ನಂತರ ಅಲ್ಲಿನ ರಜಾಕರು (ಮುಸ್ಲಿಮ್ ಆಡಳಿತಗಾರರು) ಹೇಗೆ ಆ ಪ್ರದೇಶವನ್ನು ತಮ್ಮ ತೆಕ್ಕೆಯಲ್ಲೇ ಇಡಲು ಷಡ್ಯಂತ್ರ ಮಾಡಿದರು ಮತ್ತು ಹಿಂದೂಗಳ ಮೇಲೆ ಹೇಗೆಲ್ಲ ದೌರ್ಜನ್ಯ ಮಾಡಿದರು ಎಂಬ ಚಿತ್ರಣವನ್ನು ಈ ದೃಶ್ಯಕಾವ್ಯ ಬಿಚ್ಚಿಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೈದೆರಾಬಾದ್ ಕರ್ನಾಟಕವನ್ನು ಭಾರತಕ್ಕೆ ಹೇಗೆ ಸೇರಿಸಲಾಯಿತು,ಈ ದೇಶದ ಮೊದಲ ಗೃಹ ಸಚಿವರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಜಾಕರ ತೆಕ್ಕೆಯಲ್ಲಿದ್ದ ಹೈದೆರಾಬಾದ್ ಕರ್ನಾಟಕವನ್ನು ಹೇಗೆ ಶಾಂತವನ್ನಗಿಸಿದರು ಎಂಬ ಕಥೆಯನ್ನು ಈ ಸಿನೆಮಾ ಹೇಳುತ್ತದೆ.

 

https://youtu.be/QRtlHmID7n4?si=wSMhRIQfCOz415Tc

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search