• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಿರುತೆರೆ ರಾಮನ ವಿರುದ್ಧ ಅಭ್ಯರ್ಥಿ ಬದಲಾಯಿಸಿದ ಸಮಾಜವಾದಿ ಪಾರ್ಟಿ!

Tulunadu News Posted On April 3, 2024
0


0
Shares
  • Share On Facebook
  • Tweet It

ಅಭ್ಯರ್ಥಿ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗುವ ನಡುವಿನ ಅವಧಿಯಲ್ಲಿ ಅನೇಕ ಕಡೆ ಅಭ್ಯರ್ಥಿಯನ್ನು ಪಕ್ಷ ಬದಲಾಯಿಸಿದ ಇತಿಹಾಸ ಇದೆ. ಹೆಸರು ಘೋಷಣೆ ಆದ ಕೂಡಲೇ ಅಭ್ಯರ್ಥಿ ಫಿಕ್ಸ್ ಎಂದಲ್ಲ. ಬಿ – ಫಾರಂ ಕೈಗೆ ಸಿಗದೇ ತನಗೆ ಟಿಕೆಟ್ ಸಿಕ್ಕಿಬಿಟ್ಟಿದೆ, ತಾನು ಅಭ್ಯರ್ಥಿ ಆಗಿಬಿಟ್ಟೆ ಎಂದು ಅಭ್ಯರ್ಥಿ ಗ್ಯಾರಂಟಿಯಾಗಿ ಪ್ರತಿ ಬಾರಿ ಅಂದುಕೊಳ್ಳಬೇಕಾಗಿಲ್ಲ. ಕೆಲವೊಮ್ಮೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿ ನಂತರ ಎದುರಾಳಿ ಪಕ್ಷದ ಅಭ್ಯರ್ಥಿಯ ವರ್ಚಸ್ಸು ನೋಡಿ ತಮ್ಮ ಅಭ್ಯರ್ಥಿಯನ್ನು ಬದಲಾಯಿಸಿದ್ದೂ ಇದೆ. ಅಂತಹುದೇ ಘಟನೆ ಈಗ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

ಮೀರತ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿಯಿಂದ ಅದೇ ಜಿಲ್ಲೆಯ ಸರ್ದಾನ ವಿಧಾನಸಭಾ ಕ್ಷೇತ್ರದ ಶಾಸಕ ಅತುಲ್ ಪ್ರಧಾನ್ ಅವರನ್ನು ಲೋಕಸಭಾ ಕಣಕ್ಕೆ ಇಳಿಸಲು ಸಮಾಜವಾದಿ ಪಾರ್ಟಿ ಚಿಂತಿಸಿದೆ. ಇದಕ್ಕಿಂತ ಮೊದಲು ಮಾಜಿ ಎಡಿಜಿ ಭಾನು ಪ್ರತಾಪ್ ಸಿಂಗ್ ಅವರನ್ನು ಮೀರತ್ ಅಭ್ಯರ್ಥಿ ಎಂದು ಎಸ್ ಪಿಯಿಂದ ಘೋಷಿಸಲಾಗಿತ್ತು. ಆದರೆ ಮೀರತ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅರುಣ್ ಗೋವಿಲ್ ಅವರಿಗೆ ಸಿಗುತ್ತಿರುವ ಸ್ಪಂದನೆ ಮತ್ತು ಕಿರುತೆರೆ ರಾಮನ ಜನಪ್ರಿಯತೆಯನ್ನು ನೋಡಿ ಕಂಗಾಲಾಗಿರುವ ಅಖಿಲೇಶ್ ಸಿಂಗ್ ಯಾದವ್ ಮೀರತ್ ಅಭ್ಯರ್ಥಿಯನ್ನು ಬದಲಾಯಿಸಿದ್ದಾರೆ.

ಹೊಸ ಅಭ್ಯರ್ಥಿ ಅತುಲ್ ಪ್ರಧಾನ ಬಹಳ ವರ್ಷಗಳಿಂದ ಸಮಾಜವಾದಿ ಪಾರ್ಟಿಯಲ್ಲಿದ್ದು, ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರೂ ಆಗಿರುವುದರಿಂದ ಜನ ಸಂಪರ್ಕವೂ ಚೆನ್ನಾಗಿದೆ. ಇನ್ನು ಭಾನು ಪ್ರತಾಪ್ ಸಿಂಗ್ ಅವರಿಗೆ ಜನಸಂಪರ್ಕ ಇಲ್ಲದಿರುವುದರಿಂದ ಅವರನ್ನು ನಿಲ್ಲಿಸಿದರೆ ಡೆಪಾಸಿಟ್ ಕೂಡ ಕಷ್ಟ ಎನ್ನುವುದು ಸಮಾಜವಾದಿ ಪಾರ್ಟಿಗೆ ಗೊತ್ತಾಗಿದೆ. ಆದ್ದರಿಂದ ಕಿರುತೆರೆ ರಾಮನ ಪ್ರಭಾವದ ಎದುರು ನಮ್ಮ ಅಭ್ಯರ್ಥಿ ಮಂಕಾಗಬಾರದು ಎನ್ನುವ ಕಾರಣಕ್ಕೆ ಅಭ್ಯರ್ಥಿ ಬದಲಾವಣೆ ಆಗಿದೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search