• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಿರುತೆರೆ ರಾಮನ ವಿರುದ್ಧ ಅಭ್ಯರ್ಥಿ ಬದಲಾಯಿಸಿದ ಸಮಾಜವಾದಿ ಪಾರ್ಟಿ!

Tulunadu News Posted On April 3, 2024


  • Share On Facebook
  • Tweet It

ಅಭ್ಯರ್ಥಿ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗುವ ನಡುವಿನ ಅವಧಿಯಲ್ಲಿ ಅನೇಕ ಕಡೆ ಅಭ್ಯರ್ಥಿಯನ್ನು ಪಕ್ಷ ಬದಲಾಯಿಸಿದ ಇತಿಹಾಸ ಇದೆ. ಹೆಸರು ಘೋಷಣೆ ಆದ ಕೂಡಲೇ ಅಭ್ಯರ್ಥಿ ಫಿಕ್ಸ್ ಎಂದಲ್ಲ. ಬಿ – ಫಾರಂ ಕೈಗೆ ಸಿಗದೇ ತನಗೆ ಟಿಕೆಟ್ ಸಿಕ್ಕಿಬಿಟ್ಟಿದೆ, ತಾನು ಅಭ್ಯರ್ಥಿ ಆಗಿಬಿಟ್ಟೆ ಎಂದು ಅಭ್ಯರ್ಥಿ ಗ್ಯಾರಂಟಿಯಾಗಿ ಪ್ರತಿ ಬಾರಿ ಅಂದುಕೊಳ್ಳಬೇಕಾಗಿಲ್ಲ. ಕೆಲವೊಮ್ಮೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿ ನಂತರ ಎದುರಾಳಿ ಪಕ್ಷದ ಅಭ್ಯರ್ಥಿಯ ವರ್ಚಸ್ಸು ನೋಡಿ ತಮ್ಮ ಅಭ್ಯರ್ಥಿಯನ್ನು ಬದಲಾಯಿಸಿದ್ದೂ ಇದೆ. ಅಂತಹುದೇ ಘಟನೆ ಈಗ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

ಮೀರತ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿಯಿಂದ ಅದೇ ಜಿಲ್ಲೆಯ ಸರ್ದಾನ ವಿಧಾನಸಭಾ ಕ್ಷೇತ್ರದ ಶಾಸಕ ಅತುಲ್ ಪ್ರಧಾನ್ ಅವರನ್ನು ಲೋಕಸಭಾ ಕಣಕ್ಕೆ ಇಳಿಸಲು ಸಮಾಜವಾದಿ ಪಾರ್ಟಿ ಚಿಂತಿಸಿದೆ. ಇದಕ್ಕಿಂತ ಮೊದಲು ಮಾಜಿ ಎಡಿಜಿ ಭಾನು ಪ್ರತಾಪ್ ಸಿಂಗ್ ಅವರನ್ನು ಮೀರತ್ ಅಭ್ಯರ್ಥಿ ಎಂದು ಎಸ್ ಪಿಯಿಂದ ಘೋಷಿಸಲಾಗಿತ್ತು. ಆದರೆ ಮೀರತ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅರುಣ್ ಗೋವಿಲ್ ಅವರಿಗೆ ಸಿಗುತ್ತಿರುವ ಸ್ಪಂದನೆ ಮತ್ತು ಕಿರುತೆರೆ ರಾಮನ ಜನಪ್ರಿಯತೆಯನ್ನು ನೋಡಿ ಕಂಗಾಲಾಗಿರುವ ಅಖಿಲೇಶ್ ಸಿಂಗ್ ಯಾದವ್ ಮೀರತ್ ಅಭ್ಯರ್ಥಿಯನ್ನು ಬದಲಾಯಿಸಿದ್ದಾರೆ.

ಹೊಸ ಅಭ್ಯರ್ಥಿ ಅತುಲ್ ಪ್ರಧಾನ ಬಹಳ ವರ್ಷಗಳಿಂದ ಸಮಾಜವಾದಿ ಪಾರ್ಟಿಯಲ್ಲಿದ್ದು, ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರೂ ಆಗಿರುವುದರಿಂದ ಜನ ಸಂಪರ್ಕವೂ ಚೆನ್ನಾಗಿದೆ. ಇನ್ನು ಭಾನು ಪ್ರತಾಪ್ ಸಿಂಗ್ ಅವರಿಗೆ ಜನಸಂಪರ್ಕ ಇಲ್ಲದಿರುವುದರಿಂದ ಅವರನ್ನು ನಿಲ್ಲಿಸಿದರೆ ಡೆಪಾಸಿಟ್ ಕೂಡ ಕಷ್ಟ ಎನ್ನುವುದು ಸಮಾಜವಾದಿ ಪಾರ್ಟಿಗೆ ಗೊತ್ತಾಗಿದೆ. ಆದ್ದರಿಂದ ಕಿರುತೆರೆ ರಾಮನ ಪ್ರಭಾವದ ಎದುರು ನಮ್ಮ ಅಭ್ಯರ್ಥಿ ಮಂಕಾಗಬಾರದು ಎನ್ನುವ ಕಾರಣಕ್ಕೆ ಅಭ್ಯರ್ಥಿ ಬದಲಾವಣೆ ಆಗಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search