• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇವಿಎಂ ಬೇಡಾ ಎಂದವರಿಗೆ ಸುಪ್ರೀಂಕೋರ್ಟ್ ಇವತ್ತು ಹೇಳಿದ್ದು ಏನು?

Tulunadu News Posted On April 16, 2024


  • Share On Facebook
  • Tweet It

ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು ನಮ್ಮ ದೇಶ ಪೇಪರ್ ಬ್ಯಾಲೆಟ್ ಮತದಾನ ಪದ್ಧತಿಗೆ ಹಿಂದಿರುಗಬೇಕು ಎಂದು ವಾದ ಮಂಡಿಸಿದರು. ಇವಿಎಂಗಳಲ್ಲಿ ಚಲಾವಣೆಯ ಮತಗಳನ್ನು ವಿವಿಪ್ಯಾಟ್ ಸ್ಲಿಪ್ ಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬ್ಯಾಲೆಟ್ ಪೇಪರ್ ಮತದಾನ ಪದ್ಧತಿಯಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿತು.

ವಿವಿ ಪ್ಯಾಟ್ ವಿನ್ಯಾಸವನ್ನು ಬದಲಿಸಬೇಕಾಗಿದ್ದು, ಪಾರದರ್ಶಕ ಗಾಜನ್ನು ಹೊಂದಿರಬೇಕು. ಆದರೆ ಅದು ಈಗ ಅಪಾರದರ್ಶಕ ಗಾಜನ್ನು ಹೊಂದಿದ್ದು, ಒಳಗಡೆ ಬೆಳಕು ಆನ್ ಆದರೆ ಮಾತ್ರ ನಮಗೆ ವಿವಿಪ್ಯಾಟ್ ಸ್ಲಿಪ್ ಕಾಣುತ್ತದೆ ಎಂದ ಪ್ರಶಾಂತ್ ಭೂಷಣ ಅವರು ಇದೇ ವೇಳೆ ಜರ್ಮನಿಯ ಉದಾಹರಣೆಯನ್ನು ನೀಡಿದರು. ಈ ವೇಳೆ ನ್ಯಾಯಮೂರ್ತಿ ದೀಪಶಂಕರ್ ದತ್ತಾ ಜರ್ಮನಿಯ ಜನಸಂಖ್ಯೆ ಎಷ್ಟು ಎಂದು ಕೇಳಿದರು. ಆಗ ಪ್ರಶಾಂತ್ ಭೂಷಣ್ ಜರ್ಮನಿಯಲ್ಲಿ ಸುಮಾರು 6 ಕೋಟಿ ಮತದಾರರು ಮಾತ್ರ ಇದ್ದು, ಭಾರತದಲ್ಲಿ 50 ರಿಂದ 60 ಕೋಟಿ ಮತದಾರರಿದ್ದಾರೆ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ” ಭಾರತದಲ್ಲಿ 97 ಕೋಟಿ ಮತದಾರರು ನೋಂದಣಿಯಾಗಿದ್ದಾರೆ. ಬ್ಯಾಲೆಟ್ ಪೇಪರ್ ಗಳು ಇದ್ದಾಗ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ” ಎಂದರು. ಅದರೊಂದಿಗೆ ಭಾರತದ ಚುನಾವಣೆಯನ್ನು ವಿದೇಶಗಳಲ್ಲಿನ ಮತದಾನದೊಂದಿಗೆ ಹೋಲಿಸಬೇಡಿ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ಅರ್ಜಿದಾರ ವಕೀಲರಿಗೆ ಹೇಳಿದರು. ನನ್ನ ತವರು ರಾಜ್ಯ ಪಶ್ಚಿಮ ಬಂಗಾಳದ ಜನಸಂಖ್ಯೆಯು ಜರ್ಮನಿಗಿಂತ ಹೆಚ್ಚಾಗಿದೆ. ನಾವು ಯಾರನ್ನಾದರೂ ಒಬ್ಬರನ್ನು ನಂಬಬೇಕು. ಈ ರೀತಿಯ ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸಬೇಡಿ” ಎಂದು ತಿಳಿಸಿದರು.

  • Share On Facebook
  • Tweet It


- Advertisement -


Trending Now
ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ
Tulunadu News May 19, 2025
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
Leave A Reply

  • Recent Posts

    • ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ
    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
  • Popular Posts

    • 1
      ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search