• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊಲ್ಕೊತ್ತಾ “ಹತ್ಯಾಚಾರ” ಆರೋಪಿ ಬಳಸುತ್ತಿದ್ದ ಬೈಕ್ ಪೊಲೀಸ್ ಕಮೀಷನರದ್ದು!

Tulunadu News Posted On August 27, 2024
0


0
Shares
  • Share On Facebook
  • Tweet It

ಕೊಲ್ಕೊತ್ತಾದಲ್ಲಿ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಧಾನ ಆರೋಪಿ ಸಂಜಯ್ ರಾಯ್ ನಿತ್ಯ ಬಳಸುತ್ತಿದ್ದ ಬೈಕ್ ಯಾರದ್ದು ಗೊತ್ತೆ? ಕೊಲ್ಕೊತ್ತಾ ಪೊಲೀಸ್ ಕಮೀಷನರ್ ಅವರದ್ದು. ಆರೋಪಿ ಸಂಜಯ್ ರಾವ್ ಇದೇ ಬೈಕ್ ಅನ್ನು ಚಲಾಯಿಸಿ ಉತ್ತರ ಕೊಲ್ಕೊತ್ತಾದಲ್ಲಿರುವ ರೆಡ್ ಲೈಟ್ ಏರಿಯಾಗೆ ಈ ಪ್ರಕರಣ ನಡೆದ ದಿನ ಹೋಗಿ ಬಂದಿದ್ದ ಎನ್ನುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. 2014 ರಲ್ಲಿ ಆ ಬೈಕ್ ನೋಂದಾವಣೆಯಾಗಿದೆ. ಆ ಬೈಕಿನ ಮೇಲೆ ‘ಪೊಲೀಸ್’ ಎಂದು ಬರೆಯಲಾಗಿದೆ.

ಸಂಜಯ್ ರಾಯ್ ಕೊಲ್ಕೊತ್ತಾ ಪೊಲೀಸರ ಬಳಿ ನಾಗರಿಕ ಸೇವೆಯಲ್ಲಿ ಇದ್ದಾನೆ. ಅವನ ಬಳಿ ಪೊಲೀಸ್ ಕಮೀಷನರ್ ಅವರ ಬೈಕ್ ಹೇಗೆ ಬಂತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಅಧಿಕಾರಿಗಳು ” ಪೊಲೀಸ್ ಇಲಾಖೆಯಲ್ಲಿ ನೊಂದಾವಣೆಯಾಗಿರುವ ಎಲ್ಲಾ ವಾಹನಗಳು ಕಮೀಷನರ್ ಅವರ ಹುದ್ದೆಯ ಹೆಸರಿನಲ್ಲಿಯೇ ನೊಂದಾವಣೆಯಾಗಿ ನಂತರ ಅದನ್ನು ಯಾರು ಕರ್ತವ್ಯದಲ್ಲಿ ಬಳಸುತ್ತಾರೋ ಅವರಿಗೆ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆಯ ಬೈಕ್ ಆರೋಪಿಯ ಬಳಿಯಲ್ಲಿ ಇತ್ತು. ಇಲ್ಲಿ ಸಂಜಯ್ ರಾಯ್ ನಾಗರಿಕ ಪೊಲೀಸ್ ಆಗಿ ಕೆಲಸ ಮಾಡುವ ನೆಪದಲ್ಲಿ ಆ ಹುದ್ದೆಯನ್ನು ತನ್ನ ಕುಕೃತ್ಯಗಳಿಗೆ ಗುರಾಣಿಯಂತೆ ಬಳಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಸಂಜಯ್ ರಾಯ್ ಈ ಬೈಕ್ ಅನ್ನು ತನ್ನ ವೈಯಕ್ತಿಕ ತೆವಳಿಗೆ ಬಳಸಿದ ಸಾಧ್ಯತೆ ಇದ್ದಂತೆ ಕಾಣುತ್ತದೆ. ಯಾಕೆಂದರೆ ಪೊಲೀಸ್ ಇಲಾಖೆಯ ವಾಹನವನ್ನು ಉಪಯೋಗಿಸುತ್ತಿದ್ದ ಎಂದರೆ ಅವನನ್ನು ಯಾರೂ ತಡೆಯುವಂತಿರಲಿಲ್ಲ. ಆದ್ದರಿಂದ ಅವನಿಗೆ ಒಂದು ರೀತಿಯಲ್ಲಿ ಏನೂ ಕೆಲಸ ಮಾಡಲು ಕೂಡ ಒಂದು ಪರ್ಮಿಟ್ ಸಿಕ್ಕಿದ್ದಂತೆ ಆಗುತ್ತಿತ್ತಾ ಎನ್ನುವುದನ್ನು ಸಿಬಿಐ ತನಿಖೆಯ ಮೂಲಕವೂ ಪತ್ತೆಹಚ್ಚಲಿದೆ.

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search