• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪತ್ನಿಗೆ ಜೀವನಾಂಶ ಒತ್ತಡ: ಉದ್ಯಮಿ ಆತ್ಮಹತ್ಯೆಗೆ ಶರಣು!

Tulunadu News Posted On January 1, 2025
0


0
Shares
  • Share On Facebook
  • Tweet It

ಬೆಂಗಳೂರಿನ ಐಟಿ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ದೆಹಲಿಯ ಉದ್ಯಮಿಯವರು ಅದೇ ಹಾದಿ ಹಿಡಿದಿದ್ದು, ಎರಡು ಸಾವಿನ ಪ್ರಕರಣಗಳಲ್ಲಿಯೂ ಅನೇಕ ಸ್ವಾಮ್ಯತೆ ಕಂಡುಬಂದಿದೆ. 40 ವರ್ಷದ ದೆಹಲಿಯ ಕಲ್ಯಾಣ್ ವಿಹಾರದ ನಿವಾಸಿ ಪುನೀತ್ ಖುರಾನಾ ಆತ್ಮಹತ್ಯೆಗೆ ಶರಣಾಗಿರುವ ರೀತಿ ಮಾತ್ರ ನಿಜಕ್ಕೂ ವಿಚ್ಚೇದನ ಮತ್ತು ಜೀವನಾಂಶದ ವಿಷಯದಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಸೃಷ್ಟಿಸಿದೆ. ಇವರ ಕೌಟುಂಬಿಕ ಮಿತ್ರ ಜತಿನ್ ಖನ್ನಾ ಅವರು ಈ ಬಗ್ಗೆ ಮಾಹಿತಿ ನೀಡಿ ಯಾವ ರೀತಿಯಲ್ಲಿ ಪುನೀತ್ ಖುರಾನಾ ಅಂತ್ಯಕ್ಕೆ ಕಾರಣಗಳ ಬಗ್ಗೆ ಹೇಳಿದ್ದಾರೆ. ಆ ಏಳು ಅಂಶಗಳು ನಿಜಕ್ಕೂ ಚಿಂತನೆಗೆ ಒಳಗಾಗುವಂತಹ ವಿಷಯಗಳು.

1. ಅಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆಯ ಮುನ್ನ ಒಂದೂವರೆ ಗಂಟೆಯ ವಿಡಿಯೋ ಮಾಡಿದಂತೆ ಇಲ್ಲಿ ಪುನೀತ್ ಖುರಾನಾ ಕೂಡ 55 ನಿಮಿಷದ ವಿಡಿಯೋ ಮಾಡಿದ್ದಾರೆ. ಆದರೆ ಇಲ್ಲಿ ಈ ವಿಡಿಯೋ ಪಬ್ಲಿಕ್ ಆಗುವ ಮೊದಲೇ ಪೊಲೀಸರ ವಶದಲ್ಲಿದ್ದು, ಅವರು ಅದನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

2. ವೈವಾಹಿಕ ಜೀವನ ಸರಿ ಹೋಗದ ಹಿನ್ನಲೆಯಲ್ಲಿ ಖುರಾನಾ ಮತ್ತು ಅವರ ಪತ್ನಿ ವಿಚ್ಚೇದನದ ಮೊರೆ ಹೋಗಿದ್ದು, ಅದರ ಕಾನೂನಾತ್ಮಕ ಪ್ರಕ್ರಿಯೆಗಳು ಕಳೆದ ಸೆಪ್ಟೆಂಬರ್ ನಿಂದ ಆರಂಭವಾಗಿದ್ದವು. ಈ ಅವಧಿಯಲ್ಲಿ ಇವರ ಪತ್ನಿಯ ಜೀವನಾಂಶದ ಬೇಡಿಕೆಗಳು ದಿನ ಹೋದಂತೆಲ್ಲಾ ಹೆಚ್ಚಾಗುತ್ತಾ ಇದ್ದವು. ಇದರಿಂದ ಪುನೀತ್ ಇನ್ನಷ್ಟು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು.

3. ಪುನೀತ್, ಆಹಾರ ಪೂರೈಕೆ ಮಾಡುವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, 2016 ರಲ್ಲಿ ಇವರದ್ದು ವಿವಾಹ ನಡೆದಿತ್ತು. ಪ್ರೀತಿಸಿ ಮದುವೆಯಾದ ಯುವತಿಯನ್ನು ವ್ಯವಹಾರಿಕ ಪಾಲುದಾರರಾಗಿ ಕೂಡ ಮಾಡಿದ್ದರು. ಆಕೆ ವಿಚ್ಚೇದನದ ಪ್ರಕ್ರಿಯೆ ನಡೆಯುವಾಗ ಹೆಚ್ಚೆಚ್ಚು ಪಾಲು ವ್ಯವಹಾರದ ಲಾಭದಲ್ಲಿಯೂ ಬೇಡಿಕೆ ಇಡುತ್ತಿದ್ದಳು. ಅದು ಇನ್ನಷ್ಟು ಚಿಂತೆಗೆ ಪುನೀತ್ ಅವರನ್ನು ಒಳಪಡಿಸಿತ್ತು.

4. ಇತ್ತ ಪುನೀತ್ ಖುರಾನಾ ಮತ್ತು ಅವರ ಪತ್ನಿಯ ವಿಚ್ಚೇದನದ ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಅತ್ತ ಆಕೆಯ ಸಹೋದರಿ ಕೂಡ ತನ್ನ ಗಂಡನಿಗೆ ವಿಚ್ಚೇದನ ಕೊಡಲು ತಯಾರಾಗಿದ್ದು, ಅದು ಕೂಡ ಚಾಲ್ತಿಯಲ್ಲಿತ್ತು. ಆಕೆಯ ಸಹೋದರಿಗೆ ವಿಚ್ಚೇದನದಿಂದ ಗಂಡನ ಆಸ್ತಿಯ ಪಾಲೊಂದು ಅನಾಯಾಸವಾಗಿ ಸಿಗಲಿದ್ದು, ತನಗೂ ಆಕೆ ದೊಡ್ಡ ಆಸ್ತಿಯೊಂದು ದೊರಕಬೇಕೆಂದು ಖುರಾನಾ ಪತ್ನಿಯ ಮನದಿಚ್ಚೆಯಾಗಿತ್ತು.

5. ಸದ್ಯ ಪೊಲೀಸರು ಪುನೀತ್ ಹೆತ್ತವರಿಂದ ಮತ್ತು ಪತ್ನಿಯಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ಯಾರ ವಿರುದ್ಧವೂ ಇಲ್ಲಿಯ ತನಕ ಪ್ರಕರಣ ದಾಖಲಿಸಿಲ್ಲ.

6. ಕುತ್ತಿಗೆಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಸಾಯುವ ಮೊದಲು ಯಾವುದೇ ಸಂಘರ್ಷ ನಡೆದಿರುವ ಕುರುಹುಗಳಿಲ್ಲ. ಆದ್ದರಿಂದ ಇದು ಅವರ ಸ್ವನಿರ್ಧಾರದಂತೆ ಕಂಡುಬಂದಿದೆ.

7. ಸಾಯುವ ಮುನ್ನ ಕೊನೆಯ ಬಾರಿ ಪತ್ನಿಯೊಂದಿಗೆ ಮಾತನಾಡಿದ ಆಡಿಯೋ ಒಂದು ಈಗ ಹೊರಪ್ರಪಂಚಕ್ಕೆ ಈ ಘಟನೆಯ ಅಗಾಧತೆಯನ್ನು ವಿವರಿಸಿದೆ.

ಈ ನಡುವೆ ಖುರಾನಾ ಸಂಬಂಧಿಕರು ಈ ಸಾವಿಗೆ ಆತನ ಪತ್ನಿ ಮತ್ತು ಆಕೆಯ ಪೋಷಕರನ್ನು ಹೊಣೆಗಾರರನ್ನಾಗಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಬಿಷಮ್ ಸಿಂಗ್ ” ಮೃತರ ತಂದೆ ತ್ರಿಲೋಕ್ ನಾಥ್ ಅವರು ಮಗನ ಮೊಬೈಲ್ ಫೋನ್ ಮತ್ತು ಸಂಬಂಧಿತ ವಸ್ತುಗಳನ್ನು ಪೊಲೀಸರಿಗೆ ನೀಡಿದ್ದಾರೆ. ಅದೀಗ ಪೊಲೀಸ್ ವಶದಲ್ಲಿದೆ. ಪೋಸ್ಟ್ ಮಾರ್ಟ್ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಡಿಸೆಂಬರ್ 31 ರಂದು 4.18 ರ ಸುಮಾರಿಗೆ ಸಾವು ಸಂಭವಿಸಿರಬಹುದು. ಮಾಹಿತಿ ಬಂದ ತಕ್ಷಣ  ಪೊಲೀಸ್ ತಂಡ ಅಲ್ಲಿ ಧಾವಿಸಿದೆ, ಆದರೆ ಅಷ್ಟೋತ್ತಿಗಾಗಲೇ ಮೃತದೇಹವನ್ನು ಬೆಡ್ ಮೇಲೆ ಮಲಗಿಸಲಾಗಿತ್ತು. ಕುತ್ತಿಗೆಯಲ್ಲಿ ನೇಣು ಬಿಗಿದ ಗುರುತು ಇತ್ತು”
ಈ ಬಗ್ಗೆ ಖುರಾನಾ ತಂದೆ ಮಾತನಾಡಿ ” ಸೊಸೆ ನಿತ್ಯ ಎನ್ನುವಂತೆ ಮಗನಿಗೆ ಮಾನಸಿಕವಾಗಿ ಒತ್ತಡ ಹಾಕುತ್ತಿದ್ದಳು. ಆರ್ಥಿಕವಾಗಿ ಮತ್ತು ಆಸ್ತಿಯ ವಿಷಯದಲ್ಲಿ ಅವಳ ಒತ್ತಡದ ಕಾರಣದಿಂದ ಮಗ ಸಾವಿಗೆ ಶರಣಾಗಿದ್ದಾನೆ.” ಖುರಾನಾ ಸಹೋದರಿ ಕೂಡ ಅತ್ತಿಗೆಯ ಮನೆಯವರ ಕಿರುಕುಳ ಮತ್ತು ಅತ್ತಿಗೆಯ ಕಿರಿಕಿರಿಯಿಂದ ಅಣ್ಣ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Tulunadu News July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search