• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಡಿಕೆಶಿ ವಿದೇಶಕ್ಕೆ ಹೋದ ಬೆನ್ನಲ್ಲೇ ಜಾರಕಿಹೊಳಿ ಮನೆ ಫುಲ್ ಆಕ್ಟೀವ್ ಆಗಿದ್ದೇಕೆ?

Tulunadu News Posted On January 3, 2025
0


0
Shares
  • Share On Facebook
  • Tweet It

ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಬದಲಾವಣೆ ಆಗುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಸಿದ್ಧರಾಮಯ್ಯ ಬಣ ಫುಲ್ ಆಕ್ಟೀವ್ ಮೂಡ್ ಗೆ ಬಂದಿದೆ. ಈ ಬಾರಿ ಯಾರು ಅಧ್ಯಕ್ಷರಾಗುತ್ತಾರೋ ಅವರೇ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸುವ ಅವಕಾಶವನ್ನು ಪಡೆಯುತ್ತಾರೆ. ಇನ್ನು ಮೂರು ಕಾಲು ತಿಂಗಳ ಬಳಿ ವಿಧಾನಸಭಾ ಚುನಾವಣೆಗಳು ರಾಜ್ಯದಲ್ಲಿ ನಡೆಯಲಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಅವಧಿ ಮೂರು ವರ್ಷಗಳು. ಆದ್ದರಿಂದ ಏನೇ ಆದರೂ ಚುನಾವಣೆಗೆ ಮೂರು ತಿಂಗಳು ಇರುವಾಗ ಅಧ್ಯಕ್ಷರ ಬದಲಾವಣೆ ಆಗುವುದಿಲ್ಲ. ಇನ್ನು ಈ ಬಾರಿ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸುವಾಗಲೇ ಕೆಲವು ದಿನಗಳು ಕಳೆದು ಹೋಗಲಿವೆ. ಆದ್ದರಿಂದ ಇದು ರಾಜ್ಯ ಕಾಂಗ್ರೆಸ್ಸಿನ ಮಟ್ಟಿಗೆ ಬಹಳ ಪ್ರಾಮುಖ್ಯವಾದ ಘಟ್ಟ. ಯಾರ ಬಣದವರು ಅಧ್ಯಕ್ಷರಾಗುತ್ತಾರೋ ಅದರ ಮೇಲೆ ಅವರ ಬಣದವರ ಕೈ ಮೇಲಾಗುತ್ತದೆ. ಅಧಿಕಾರದಲ್ಲಿ ಸಚಿವರಾಗಿ ಇರುವುದು ಎಷ್ಟೇ ಮುಖ್ಯವೋ ಅಷ್ಟೇ ಮುಖ್ಯ ಅಧ್ಯಕ್ಷರು ಕೂಡ ತಮ್ಮದೇ ಬಣದವರು ಆಗಿರುವಂತದ್ದು. ಆದ್ದರಿಂದ ಹೊಸ ಅಧ್ಯಕ್ಷರ ನೇಮಕಕ್ಕೆ ದಿನಗಣನೆ ಆರಂಭವಾದಂತೆ ಸಿದ್ಧರಾಮಯ್ಯ ಬಣದಲ್ಲಿಯೂ ಕಾರ್ಯಚಟುವಟಿಕೆಗಳು ಗರಿಗೆದರಿವೆ.

ಸಿದ್ದು ಬಣದ ಪ್ರಮುಖ ಸೇನಾಧಿಪತಿ ಎಂದೇ ಬಿಂಬಿತರಾಗಿರುವ, ಡಿಕೆಶಿಯವರ ಪಾರಂಪರಿಕ ಹಿತಶತ್ರುಗಳ ಗುಂಪಿನ ಅಧಿನಾಯಕರಾಗಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿದ್ದು ಬಣದ ಏಳು ಸಚಿವರು ಮತ್ತು 35 ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಈ ಸಭೆ ನಡೆಯುವಾಗ ಡಿಕೆ ಶಿವಕುಮಾರ್ ಹೊಸ ವರ್ಷಾಚರಣೆಯ ನಿಮಿತ್ತ ವಿದೇಶ ಪ್ರವಾಸದಲ್ಲಿರುವುದು ಕೂಡ ವಿಶೇಷ. ಈ ಸಭೆಗೆ ಸಿಎಂ ಸಿದ್ಧರಾಮಯ್ಯನವರು ಕೂಡ ಆಗಮಿಸಿದ್ದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಹೊಸ ಅಧ್ಯಕ್ಷರೊಂದಿಗೆ ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ರಚನೆಯ ಬಗ್ಗೆ ಈ ಸಭೆಯಲ್ಲಿ ಚಿಂತನೆಯಾಗಿದೆ. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮೊದಲೇ ಉತ್ತರ ಸಿದ್ಧಪಡಿಸಿಕೊಂಡಂತೆ ಇದ್ದ ಈ ಸಭೆಯ ಮುಖಂಡರು ಇದು ಹೊಸ ವರ್ಷಾಚರಣೆಗೆ ನಡೆಸಿದ ಸಭೆಯೇ ಹೊರತು ಬೇರೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಕೆಲವು ತಿಂಗಳುಗಳ ಮೊದಲಿನ ತನಕ ಯಾರೂ ಅಷ್ಟೊಂದು ಉತ್ಸಾಹ ತೋರಿಸುತ್ತಿರಲಿಲ್ಲ. ಆದರೆ ಈಗ ಅಚಾನಕ್ ಆಗಿ ಕಾಂಗ್ರೆಸ್ ಅಧ್ಯಕ್ಷರಾಗಲು ಹಲವರಲ್ಲಿ ಉಮ್ಮೇದು ಕಾಣಿಸಲಾರಂಭಿಸಿದೆ. ಇನ್ನು ಪಕ್ಷ ಅಧಿಕಾರದಲ್ಲಿರುವುದರಿಂದ ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯ ಸಾಧಿಸುವ, ಎಲ್ಲಾ ಹಗರಣಗಳಿಗೆ ಸಮರ್ಥ ಉತ್ತರ ನೀಡಬಲ್ಲ ಮತ್ತು ವಿಪಕ್ಷಗಳ ಪಟ್ಟಿಗೆ ಹೊಸ ವರಸೆ ಹಾಕಬಲ್ಲ ವ್ಯಕ್ತಿಯ ಅವಶ್ಯಕತೆ ಈ ಬಾರಿ ಪಕ್ಷಕ್ಕೆ ಇದೆ.

ಇನ್ನು ಜಾತ್ಯಾತೀತ ಜನತಾದಳದಲ್ಲಿಯೂ ನಿಖಿಲ್ ಕುಮಾರಸ್ವಾಮಿಯವರಿಗೆ ಅವರ ಪಕ್ಷದ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಲು ದೇವೆಗೌಡರ ಕುಟುಂಬ ತೀರ್ಮಾನಿಸಿದ್ದು, ಕಾಂಗ್ರೆಸ್ಸಿನಲ್ಲಿಯೂ ಯುವ ಮತ್ತು ಅನುಭವಿ ಎರಡೂ ಸಮ್ಮಿಳಿತವಾಗಿರುವ ಅಧ್ಯಕ್ಷರ ಅಗತ್ಯ ಇದೆ. ಇನ್ನು ಹೊಸ ಅಧ್ಯಕ್ಷರು ಎರಡೂ ಬಣದವರಿಗೂ ಒಪ್ಪತಕ್ಕವರಾಗಿರಬೇಕು. ಅಂತವರು ಇದ್ದಾರಾ ಎಂದು ಹುಡುಕುವುದೇ ಒಂದು ಸವಾಲು. ಅದರೊಂದಿಗೆ ಜಾತಿ ಲೆಕ್ಕಾಚಾರ ಕೂಡ ಮಹತ್ವದ್ದಾಗಿರುತ್ತದೆ. ಯಾಕೆಂದರೆ ಸಿಎಂ ಕುರುಬ ಸಮುದಾಯಕ್ಕೆ ಸೇರಿದ ಕಾರಣ ರಾಜ್ಯದ ಇನ್ನೊಂದು ಪ್ರಬಲ ಸಮುದಾಯದವರಿಗೆ ರಾಜ್ಯಧ್ಯಕ್ಷ ಸ್ಥಾನ ನೀಡುವ ಅಗತ್ಯ ಇದೆ.

ಇನ್ನು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರಾಗಿರುವುದರಿಂದ ಅವರನ್ನು ಎದುರಿಸಲು ಅಷ್ಟೇ ಸಮರ್ತರಾಗಿರುವ ವ್ಯಕ್ತಿಯ ಅವಶ್ಯಕತೆ ಇದೆ. ಅದನ್ನೆಲ್ಲಾ ಅಳೆದು ತೂಗಿ ರಾಜ್ಯ ಕಾಂಗ್ರೆಸ್ಸಿಗೆ ಹೊಸ ಸಾರಥಿಯನ್ನು ರಾಷ್ಟ್ರೀಯ ಕಾಂಗ್ರೆಸ್ ನೇಮಿಸುತ್ತದೆಯಾ ಎನ್ನುವುದಕ್ಕೆ ಸಂಕ್ರಾತಿಯ ನಂತರ ಉತ್ತರ ಸಿಗುತ್ತದೆ.

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search