• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಟ್ನಾದಲ್ಲಿ ಹೂತು ಹೋಗಿದ್ದ ಐದು ಶತಮಾನದ ಹಿಂದಿನ ಶಿವ ದೇವಾಲಯ ಪತ್ತೆ!

Tulunadu News Posted On January 6, 2025
0


0
Shares
  • Share On Facebook
  • Tweet It

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮತ್ತೊಂದು ಪವಾಡ ಸಂಭವಿಸಿದೆ. ಪಟ್ನಾದ ವಾರ್ಡ್ ನಂಬರ್ 54 ರಲ್ಲಿ ಐನೂರು ವರ್ಷ ಹಳೆಯದಾಗಿರುವ ಶಿವಾಲಯ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಕೌತುಕಕ್ಕೆ ಕಾರಣವಾಗಿದೆ. ಶಿವಾಲಯ ಪತ್ತೆಯಾಗಿರುವ ಜಾಗ ತ್ಯಾಜ್ಯ ಶೇಖರಣಾ ಪ್ರದೇಶವಾಗಿದ್ದ ಕಾರಣ ಇಲ್ಲಿಯ ತನಕ ಯಾರಿಗೂ ಈ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ. ಅಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದ್ದ ಕಾರಣ ಆ ಸ್ಥಳದ ಕೆಳಗಿನ ಪ್ರದೇಶದಲ್ಲಿ ಹೀಗೊಂದು ದೇವಾಲಯ ಇರುವ ಸಾಧ್ಯತೆಯ ಬಗ್ಗೆ ಯಾರಿಗೂ ಸಣ್ಣ ಅನುಮಾನವೂ ಬಂದಿರಲಿಲ್ಲ. ಈಗ ಶಿವಾಲಯ ಪತ್ತೆಯಾಗಿರುವ ಪ್ರದೇಶ ಪ್ರಾಚೀನ ಕಾಲದಲ್ಲಿ ಸಂತರ ಪರಂಪರೆಯ ಮಠದ ಅಧೀನದಲ್ಲಿತ್ತು ಎನ್ನುವ ಈಗ ವಿಷಯ ತಿಳಿದುಬಂದಿದೆ. ಇದರಿಂದ ಆ ಪ್ರದೇಶಕ್ಕೆ ಈಗ ಮತ್ತೆ ದೈವಿಕಲೆ ಬಂದಂತೆ ಆಗಿದೆ.

ಈ ವಿಷಯ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದು ಅವರು ಅಲ್ಲಿ ಬರುವಷ್ಟರಲ್ಲಿ ನಾಗರಿಕರು ಆ ಸ್ಥಳವನ್ನು ಇನ್ನಷ್ಟು ಅಗೆದು ದೇವಾಲಯ ಸರಿಯಾಗಿ ಕಾಣುವ ಹಾಗೆ ವ್ಯವಸ್ಥೆ ಮಾಡಿದ್ದರು. ಅಲ್ಲಿ ಸುತ್ತಮುತ್ತಲಿದ್ದ ತ್ಯಾಜ್ಯಗಳನ್ನು ಅಲ್ಲಿಂದ ಬೇರೆಡೆ ಸಾಗಿಸಿ, ಅಲ್ಲಿನ ಪರಿಸರವನ್ನು ಸ್ವಚ್ಚ ಮಾಡಿ ಅಲ್ಲಿ ದೇವಾಲಯಕ್ಕೆ ಪೂಜೆ ಕೂಡ ಮಾಡಲಾಗಿದೆ. ಆ ಶಿವಾಲಯದಲ್ಲಿ ಒಂದು ಶಿವಲಿಂಗ ಮತ್ತು ಒಂದು ಜೋಡಿ ಪಾದದ ಗುರುತುಗಳು ಕೂಡ ಕಂಡುಬಂದಿದೆ.

ಸ್ಥಳೀಯರ ಪ್ರಕಾರ ದೇವಾಲಯವನ್ನು ಯಾವುದೋ ಅಪರೂಪದ ಲೋಹದಿಂದ ತಯಾರಿಸಲಾಗಿದ್ದು, ದೇವಾಲಯದ ಒಳಗೆ ಸೋರಿಕೆ ಕೂಡ ಕಂಡು ಬಂದಿದ್ದು, ಅದನ್ನು ಭಕ್ತರು ಸ್ವಚ್ಚಗೊಳಿಸಿದ್ದರು.
ದೇವಾಲಯ ನುಣುಪಾದ ಕರಿಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಅದರ ರಚನೆಯೇ ಅದ್ಭುತವಾಗಿ ಕಾಣುತ್ತಿದೆ. ಭಕ್ತರು ಈ ಪ್ರದೇಶವನ್ನು ಶುದ್ಧೀಕರಿಸಿ, ದೇವಾಲಯವನ್ನು ಅಲಂಕಾರ ಮಾಡುತ್ತಿದ್ದಂತೆ ಜನರ ಘೋಷವಾಕ್ಯ, ಭಜನೆ, ಸಡಗರದಿಂದ ಇಡೀ ಪ್ರದೇಶ ದೈವಿಕವಾಗಿ ಮಾರ್ಪಟ್ಟಿತ್ತು.

ಆದಿತ್ಯವಾರ ಆ ಪ್ರದೇಶದಲ್ಲಿ ಒಂದು ರೀತಿಯಲ್ಲಿ ಭೂಕಂಪನದಂತಹ ವಾತಾವರಣ ನಿರ್ಮಾಣವಾಗಿತ್ತು. ಭೂಮಿ ಯಾಕೆ ಆ ಪ್ರದೇಶದಲ್ಲಿ ಕಂಪಿಸುತ್ತಿದೆ ಎಂದು ಜನರು ಅಲ್ಲಿ ಹತ್ತಿರ ಸಮೀಪಿಸಿ ನೋಡುತ್ತಿದ್ದರು. ಯಾವುದೋ ವಸ್ತು ಭೂಮಿಯ ಅಡಿಯಿಂದ ಅಲ್ಲಾಡಿದಂತೆ ಭಾಸವಾಗಿತ್ತು. ಆದ್ದರಿಂದ ತಕ್ಷಣ ಈ ಬಗ್ಗೆ ಏನಾದರೂ ಮಾಡಬೇಕೆಂದು ಎಂದು ನಿರ್ಧರಿಸಿದ ಜನ ಕಂಪಿಸಿದ ಜಾಗದಲ್ಲಿ ಅಗೆಯಲು ಶುರು ಮಾಡಿದರು. ನಂತರ ನಡೆದದ್ದು ಇತಿಹಾಸ.!

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search