• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಟ್ನಾದಲ್ಲಿ ಹೂತು ಹೋಗಿದ್ದ ಐದು ಶತಮಾನದ ಹಿಂದಿನ ಶಿವ ದೇವಾಲಯ ಪತ್ತೆ!

Tulunadu News Posted On January 6, 2025
0


0
Shares
  • Share On Facebook
  • Tweet It

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮತ್ತೊಂದು ಪವಾಡ ಸಂಭವಿಸಿದೆ. ಪಟ್ನಾದ ವಾರ್ಡ್ ನಂಬರ್ 54 ರಲ್ಲಿ ಐನೂರು ವರ್ಷ ಹಳೆಯದಾಗಿರುವ ಶಿವಾಲಯ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಕೌತುಕಕ್ಕೆ ಕಾರಣವಾಗಿದೆ. ಶಿವಾಲಯ ಪತ್ತೆಯಾಗಿರುವ ಜಾಗ ತ್ಯಾಜ್ಯ ಶೇಖರಣಾ ಪ್ರದೇಶವಾಗಿದ್ದ ಕಾರಣ ಇಲ್ಲಿಯ ತನಕ ಯಾರಿಗೂ ಈ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ. ಅಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದ್ದ ಕಾರಣ ಆ ಸ್ಥಳದ ಕೆಳಗಿನ ಪ್ರದೇಶದಲ್ಲಿ ಹೀಗೊಂದು ದೇವಾಲಯ ಇರುವ ಸಾಧ್ಯತೆಯ ಬಗ್ಗೆ ಯಾರಿಗೂ ಸಣ್ಣ ಅನುಮಾನವೂ ಬಂದಿರಲಿಲ್ಲ. ಈಗ ಶಿವಾಲಯ ಪತ್ತೆಯಾಗಿರುವ ಪ್ರದೇಶ ಪ್ರಾಚೀನ ಕಾಲದಲ್ಲಿ ಸಂತರ ಪರಂಪರೆಯ ಮಠದ ಅಧೀನದಲ್ಲಿತ್ತು ಎನ್ನುವ ಈಗ ವಿಷಯ ತಿಳಿದುಬಂದಿದೆ. ಇದರಿಂದ ಆ ಪ್ರದೇಶಕ್ಕೆ ಈಗ ಮತ್ತೆ ದೈವಿಕಲೆ ಬಂದಂತೆ ಆಗಿದೆ.

ಈ ವಿಷಯ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದು ಅವರು ಅಲ್ಲಿ ಬರುವಷ್ಟರಲ್ಲಿ ನಾಗರಿಕರು ಆ ಸ್ಥಳವನ್ನು ಇನ್ನಷ್ಟು ಅಗೆದು ದೇವಾಲಯ ಸರಿಯಾಗಿ ಕಾಣುವ ಹಾಗೆ ವ್ಯವಸ್ಥೆ ಮಾಡಿದ್ದರು. ಅಲ್ಲಿ ಸುತ್ತಮುತ್ತಲಿದ್ದ ತ್ಯಾಜ್ಯಗಳನ್ನು ಅಲ್ಲಿಂದ ಬೇರೆಡೆ ಸಾಗಿಸಿ, ಅಲ್ಲಿನ ಪರಿಸರವನ್ನು ಸ್ವಚ್ಚ ಮಾಡಿ ಅಲ್ಲಿ ದೇವಾಲಯಕ್ಕೆ ಪೂಜೆ ಕೂಡ ಮಾಡಲಾಗಿದೆ. ಆ ಶಿವಾಲಯದಲ್ಲಿ ಒಂದು ಶಿವಲಿಂಗ ಮತ್ತು ಒಂದು ಜೋಡಿ ಪಾದದ ಗುರುತುಗಳು ಕೂಡ ಕಂಡುಬಂದಿದೆ.

ಸ್ಥಳೀಯರ ಪ್ರಕಾರ ದೇವಾಲಯವನ್ನು ಯಾವುದೋ ಅಪರೂಪದ ಲೋಹದಿಂದ ತಯಾರಿಸಲಾಗಿದ್ದು, ದೇವಾಲಯದ ಒಳಗೆ ಸೋರಿಕೆ ಕೂಡ ಕಂಡು ಬಂದಿದ್ದು, ಅದನ್ನು ಭಕ್ತರು ಸ್ವಚ್ಚಗೊಳಿಸಿದ್ದರು.
ದೇವಾಲಯ ನುಣುಪಾದ ಕರಿಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಅದರ ರಚನೆಯೇ ಅದ್ಭುತವಾಗಿ ಕಾಣುತ್ತಿದೆ. ಭಕ್ತರು ಈ ಪ್ರದೇಶವನ್ನು ಶುದ್ಧೀಕರಿಸಿ, ದೇವಾಲಯವನ್ನು ಅಲಂಕಾರ ಮಾಡುತ್ತಿದ್ದಂತೆ ಜನರ ಘೋಷವಾಕ್ಯ, ಭಜನೆ, ಸಡಗರದಿಂದ ಇಡೀ ಪ್ರದೇಶ ದೈವಿಕವಾಗಿ ಮಾರ್ಪಟ್ಟಿತ್ತು.

ಆದಿತ್ಯವಾರ ಆ ಪ್ರದೇಶದಲ್ಲಿ ಒಂದು ರೀತಿಯಲ್ಲಿ ಭೂಕಂಪನದಂತಹ ವಾತಾವರಣ ನಿರ್ಮಾಣವಾಗಿತ್ತು. ಭೂಮಿ ಯಾಕೆ ಆ ಪ್ರದೇಶದಲ್ಲಿ ಕಂಪಿಸುತ್ತಿದೆ ಎಂದು ಜನರು ಅಲ್ಲಿ ಹತ್ತಿರ ಸಮೀಪಿಸಿ ನೋಡುತ್ತಿದ್ದರು. ಯಾವುದೋ ವಸ್ತು ಭೂಮಿಯ ಅಡಿಯಿಂದ ಅಲ್ಲಾಡಿದಂತೆ ಭಾಸವಾಗಿತ್ತು. ಆದ್ದರಿಂದ ತಕ್ಷಣ ಈ ಬಗ್ಗೆ ಏನಾದರೂ ಮಾಡಬೇಕೆಂದು ಎಂದು ನಿರ್ಧರಿಸಿದ ಜನ ಕಂಪಿಸಿದ ಜಾಗದಲ್ಲಿ ಅಗೆಯಲು ಶುರು ಮಾಡಿದರು. ನಂತರ ನಡೆದದ್ದು ಇತಿಹಾಸ.!

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search