• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಲಂಚ ಕೇಳುವವನು ಅವನ ವಂಶದ ಕೊನೆಯ ಸರಕಾರಿ ಉದ್ಯೋಗಿಯಾಗಲಿದ್ದಾನೆ – ಸಿಎಂ ಯೋಗಿ ಆದಿತ್ಯನಾಥ್

Tulunadu News Posted On March 22, 2025
0


0
Shares
  • Share On Facebook
  • Tweet It

ಉತ್ತರ ಪ್ರದೇಶದಲ್ಲಿ ಬಂಡವಾಳ ಹೂಡುವವರು ಯಾವುದೇ ಕಿರಿಕಿರಿ ಇಲ್ಲದೇ ಆರಾಮವಾಗಿ ಮುಂದುವರೆಯಬಹುದು. ಸಿಂಗಲ್ ವೀಂಡೋ ಸಿಸ್ಟಮ್ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಕೊಡಲಾಗುವುದು. ಅದರೊಂದಿಗೆ ಯುವಕರಿಗೆ ಸಾಲವನ್ನು ನೀಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಈ ಎಲ್ಲಾ ವಿಷಯದಲ್ಲಿ ನಿಮ್ಮಿಂದ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ದೂರು ನೀಡಿ. ಅಂತಹ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಅಂತವರ ವಂಶದಲ್ಲಿಯೇ ಯಾರಿಗೂ ಸರಕಾರಿ ಉದ್ಯೋಗ ಸಿಗದ ಹಾಗೆ ನೋಡುವ ಜವಾಬ್ದಾರಿ ನಮ್ಮದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಭ್ರಷ್ಟಾಚಾರ ಎನ್ನುವುದು ಯಾವುದೇ ವ್ಯವಸ್ಥೆ ಸಮರ್ಪಕವಾಗಿ ನಡೆದು ರಾಜ್ಯ, ದೇಶ ಅಭಿವೃದ್ಧಿಗೊಳ್ಳಲು ಇರುವ ಬಹುದೊಡ್ಡ ಅಡಚಣೆ. ಅದನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಅದಕ್ಕೆ ನಮ್ಮ ಸರಕಾರ ಬದ್ಧ ಎಂದು ಸಿಎಂ ಹೇಳಿದರು. ಉತ್ತರ ಪ್ರದೇಶ ರಾಜ್ಯದ ಹಿಂದಿನ ಕೆಟ್ಟ ಇಮೇಜ್ ಕಳಚಿ ಈಗಿನ ಸರಕಾರದಿಂದ ಸಂಪೂರ್ಣ ಇಮೇಜ್ ಬದಲಾವಣೆ ಆಗುತ್ತಿದ್ದು, ಇದು ಪ್ರಸ್ತುತ ದೇಶದ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ರಾಜ್ಯವಾಗಿದೆ ಎಂದು ಹೇಳಿದ ಯೋಗಿ ಗೊಂಡಾದಲ್ಲಿ ಮುಖ್ಯಮಂತ್ರಿ ಯುವ ಉದ್ಯಮಿ ವಿಕಾಸ ಅಭಿಯಾನದ ಅಡಿಯಲ್ಲಿ ಆ ಜಿಲ್ಲೆಯ ದೇವಿಪಟ್ಟಣ ವಿಭಾಗದ 1423 ಯುವ ಉದ್ಯಮಿಗಳಿಗೆ 55 ಕೋಟಿ ರೂ ಸಾಲ ವಿತರಿಸಿದರು.

ಒಂದು ಜಿಲ್ಲೆ, ಒಂದು ಉತ್ಪನ್ನ ಅಥವಾ ವಿಶ್ವಕರ್ಮ ಶ್ರಮ ಸಮ್ಮಾನ್ ಯೋಜನೆಯಂತಹ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಯುವಕರಿಗೆ ಕರೆ ನೀಡುತ್ತೇನೆ. ತಾಳ್ಮೆಯಿಂದ ಅದರ ಕಡೆ ಕೆಲಸ ಮಾಡಿ. ಸರಕಾರದ ಏಕಗವಾಕ್ಷಿ ಮತ್ತು ನಿವೇಶ್ ಸಾರಥಿ ಅವರಿಗೆ ಸಹಾಯ ಮಾಡುತ್ತದೆ. ಸಾಲ ಮಂಜೂರು ಮಾಡುವ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ, ದೂರು ದಾಖಲಿಸಿ. ಸಾಲ ಪಡೆಯುವ ಹೆಸರಿನಲ್ಲಿ ಯಾವುದೇ ವಂಚನೆಯನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದರು.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search