• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಹುಲ್ ಜೀವನದಲ್ಲಿ ಒಂದೇ ದಿನ ಎರಡು ಖುಷಿ!

Tulunadu News Posted On March 25, 2025
0


0
Shares
  • Share On Facebook
  • Tweet It

ಕೆ.ಎಲ್. ರಾಹುಲ್ ಯಾರಿಗೆ ಗೊತ್ತಿಲ್ಲ, ಹೇಳಿ. ಮಾರ್ಚ್ 24, ಅವರ ಬಾಳಿನಲ್ಲಿ ತುಂಬಾ ಸಂತೋಷ ನೀಡಿದ ದಿನ. ಯಾಕೆಂದರೆ ಅವರು ಮತ್ತು ಅವರ ಪತ್ನಿ ಅಥಿಯಾ ಅವರು ಸೇರಿ ಅವರ ಕುಟುಂಬಕ್ಕೆ ಹೊಸ ಪುಟ್ಟ ಅತಿಥಿಯನ್ನು ಸ್ವಾಗತಿಸಿದ ದಿನ. ಹೌದು, ಖ್ಯಾತ ಚಿತ್ರನಟ ಸುನೀಲ್ ಶೆಟ್ಟಿ ತಾತನಾದ ದಿನ. ರಾಹುಲ್ ಹಾಗೂ ಅಥಿಯಾ ಬದುಕಿನಲ್ಲಿ ಅಪ್ಪ, ಅಮ್ಮಾನಾಗಿ ಪ್ರಮೋಶನ್ ಪಡೆದ ದಿನ. ಒಬ್ಬ ತಂದೆಗೆ ಮಗಳು ಸಿಕ್ಕಿದ ಖುಷಿಯ ಜೊತೆ ಅಂದು ಇನ್ನೊಂದು ಖುಷಿ ಕೂಡ ಅವರ ಬಾಳಿನಲ್ಲಿ ಬಂದಿದೆ. ಅದು ಅವರ ಈ ಬಾರಿಯ ತಂಡ ಡೆಲ್ಲಿ ಕ್ಯಾಪಿಟಲ್ಸ್ ಬಹುತೇಕ ಸೋಲಿನ ದವಡೆಯಿಂದ ಪಾರಾಗಿ ಗೆದ್ದು ಬೀಗಿರುವುದು.

ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 209 ರನ್ ಗಳನ್ನು ಬಾರಿಸಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ ಕ್ರೀಸಿಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರಿಸ್ಥಿತಿ ಹೇಗಿತ್ತು ಎಂದರೆ ದಾಂಡಿಗರು ಒಬ್ಬೊಬ್ಬರಾಗಿ ಪೆವಿಲಿಯನ್ ಕಡೆ ಮುಖ ಮಾಡಿದ್ದರು. ಮೊದಲ ಐದು ವಿಕೆಟುಗಳು ಕೇವಲ 65 ರನ್ನಿಗೆ ಉರುಳುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಸೋಲನ್ನು ಎಲ್ಲರೂ ಬರೆದಾಗಿತ್ತು. ಬಹುತೇಕ ಮನೆಗಳ ಟಿವಿ ಕೂಡ ಆಫ್ ಆಗಿ ಫಲಿತಾಂಶ ಇಷ್ಟೇ ಎಂದು ಕೂಡ ಷರಾ ಹೇಳಲಾಗಿತ್ತು. ಆದರೆ ನಂತರ ನಡೆದದ್ದೇ ಪವಾಡ. ಮರುದಿನ ಬೆಳಿಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಫಲಿತಾಂಶ ನೋಡಿದವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಡೆಲ್ಲಿ ಗೆದ್ದು ಬೀಗಿತ್ತು.

ಅದು ಹೇಗೆ?

ವಿಶಾಖಪಟ್ಣಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಪತ್ಭಾಂದವರಂತೆ ಆಡಿದ ಇಬ್ಬರನ್ನು ಇಡೀ ತಂಡ ಮತ್ತು ಆಡಳಿತ ಯಾವತ್ತೂ ಮರೆಯಬಾರದು. ಒಬ್ಬರು ಅಶುತೋಷ್ ಶರ್ಮಾ ಹಾಗೂ ಇನ್ನೊಬ್ಬರು ವಿಫ್ರಾಜ್ ನಿಗಂ. ಅಶುತೋಷ್ ಶರ್ಮಾ ಅವರು 31 ಎಸೆತಗಳಲ್ಲಿ 66 ರನ್ ಹೊಡೆದು ಸ್ಟಾರ್ ಫಿನಿಶರ್ ಎಂದು ಖ್ಯಾತಿಗಳಿಸಿದರೆ, ಚೊಚ್ಚಲ ಪಂದ್ಯವಾಡಿದ ವಿಫ್ರಾಜ್ ನಿಗಂ ಅವರು 15 ಎಸೆತಗಳಲ್ಲಿ 39 ಹೊಡೆದು ತಂಡವನ್ನು ಸೋಲಿನ ಪ್ರಪಾತದಿಂದ ಮೇಲೆತ್ತಿದ್ದರು. ಮೊದಲ 10 ಎಸೆತಗಳಲ್ಲಿಯೇ ಮೂರು ಬಹುಮುಖ್ಯ ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 210 ಎನ್ನುವ ಬೃಹತ್ ಸಾಗರವನ್ನು ಈಜಿ ಮೂರು ಎಸೆತಗಳಿರುವಾಗಲೇ ಗೆಲ್ಲುವ ಮೂಲಕ ಕೆ.ಎಲ್. ರಾಹುಲ್ ಅವರಿಗೆ ಡಬಲ್ ಖುಷಿ ಕೊಟ್ಟಿದೆ. ಮಗುವಿನ ಜನನವನ್ನು ಎದುರು ಕಾಣಲು ರಾಹುಲ್ ಈ ಪಂದ್ಯವನ್ನು ಆಡಿರಲಿಲ್ಲ.

0
Shares
  • Share On Facebook
  • Tweet It




Trending Now
ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
Tulunadu News February 19, 2026
ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
Tulunadu News February 18, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
  • Popular Posts

    • 1
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • 2
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search