• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಮುಟ್ಟಿ ಆರೋಗ್ಯಕ್ಕಾಗಿ ಅಯ್ಯಪ್ಪನ ಮೊರೆ ಹೋದ ಮೋಹನ್ ಲಾಲ್! ಉಷಾ ಪೂಜೆಯಲ್ಲಿ ಭಾಗಿ…

Tulunadu News Posted On March 27, 2025
0


0
Shares
  • Share On Facebook
  • Tweet It

ಕೇರಳ ಸಿನೆಮಾ ರಂಗದಲ್ಲಿ ಮೋಹನಲಾಲ್ ಹಾಗೂ ಮಮುಟ್ಟಿ ಎರಡು ಬಹುದೊಡ್ಡ ಹೆಸರುಗಳು. ಇವರಿಬ್ಬರು ಆತ್ಮೀಯರೂ ಹೌದು. ಸ್ಟಾರ್ ಫ್ಯಾನ್ ವಾರ್ ಏನೇ ಇರಲಿ, ಇವರಿಬ್ಬರ ನಂಟಿಗೆ ಯಾವುದೂ ಇಲ್ಲಿಯ ತನಕ ಅಡ್ಡಿ ಬಂದಿಲ್ಲ. ಇತ್ತೀಚೆಗೆ ಮಮುಟ್ಟಿ 73 ವರ್ಷ ದಾಟಿದರೂ ಇನ್ನೂ ಕೂಡ ನಾಯಕನಟನಾಗಿ ನಟಿಸುತ್ತಾ, ಫೈಟ್ ಸೀನ್ ಗಳಲ್ಲಿ ಭಾಗವಹಿಸುತ್ತಾ ಕಲಾವಿದರ ಪಾಲಿಗೆ ಸೋಜಿಗವೇ ಆಗಿದ್ದಾರೆ. ಅವರ ಸಿನೆಮಾಗಳಿಗೆ ಇವತ್ತಿಗೂ ಕೇರಳದಲ್ಲಿ ಬಹುದೊಡ್ಡ ಬೇಡಿಕೆ ಇದೆ.

ಇಂತಹ ಹೊತ್ತಿನಲ್ಲಿ ಮಮುಟ್ಟಿಯವರಿಗೆ ಕ್ಯಾನ್ಸರ್ ಎನ್ನುವ ಕಾಯಿಲೆ ತಗುಲಿದೆ ಎಂದು ಗುಸುಗುಸು ಸುದ್ದಿ ಹಬ್ಬಿತ್ತು. ಅದನ್ನು ಅವರ ಆಪ್ತವರ್ಗ ಅಲ್ಲಗಳೆಯುತ್ತಾ ಬಂದಿದೆ. ರಮ್ಜಾನ್ ತಿಂಗಳಾಗಿರುವುದರಿಂದ ಆ ಮತದ ಅನುಯಾಯಿ ಮಮುಟ್ಟಿ ಈ ಮಾಸದಲ್ಲಿ ಹೆಚ್ಚಾಗಿ ಹೊರಗೆ ಕಾಣಿಸಲ್ಲ, ಅಷ್ಟೇ ಎಂದು ಅವರ ಆತ್ಮೀಯ ಬಳಗ ಹೇಳುತ್ತಾ ಬರುತ್ತಿದೆ.

ಈ ನಡುವೆ ಮೋಹನ್ ಲಾಲ್ ಅವರು ಶಬರಿಮಲೆಯಲ್ಲಿ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಮಮುಟ್ಟಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಉಷಾ ಪೂಜೆ ಸಲ್ಲಿಸಿದ್ದು, ಅದರಿಂದ ಮಮುಟ್ಟಿ ಆರೋಗ್ಯದ ಬಗ್ಗೆ ಇರುವ ಸಂದೇಹಗಳಿಗೆ ರೆಕ್ಕೆಪುಕ್ಕ ಬಂದಿದೆ. ದೇಗುಲದ ರಸೀದಿಯಲ್ಲಿ ಮೊಹಮ್ಮದ್ ಕುಟ್ಟಿ ಎಂದು ಬರೆಸಿರುವ ವಿಷಯ ಬಹಿರಂಗವಾಗಿದೆ. ಇದರೊಂದಿಗೆ ಜನ್ಮ ನಕ್ಷತ್ರ ವಿಶಾಖ ಎಂದು ಉಲ್ಲೇಖಿಸಲಾಗಿದೆ.

ಇಷ್ಟೇ ವಿಷಯ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಕೆಲವರಿಗೆ ಇದನ್ನು ವಿವಾದ ಮಾಡುವ ಹಂಬಲ. ಪತ್ರಕರ್ತ ಅಬ್ದುಲ್ಲಾ ಎನ್ನುವವರು ಇದರಲ್ಲಿ ಮತ ಧರ್ಮವನ್ನು ಹುಡುಕಿ ದೊಡ್ಡ ಸುದ್ದಿ ಮಾಡಿದ್ದಾರೆ. ಮಮುಟ್ಟಿಯವರಿಗೆ ತಮ್ಮ ಪರವಾಗಿ ಹಿಂದೂ ದೇವಾಲಯದಲ್ಲಿ ಪೂಜೆ ಆಗುತ್ತಿರುವ ಬಗ್ಗೆ ಮೊದಲೇ ಗೊತ್ತಿದ್ದರೆ ಕ್ಷಮೆಯಾಚಿಸಬೆಕು ಎಂದು ಹೇಳಿದ್ದಾರೆ.

ಇನ್ನು ಮುಂದುವರೆಸಿ ಮಮುಟ್ಟಿಗೆ ತಿಳಿಯದೇ ಮೋಹನ್ ಲಾಲ್ ಪೂಜೆ ಮಾಡಿಸಿದ್ದರೆ ತಪ್ಪಿಲ್ಲ. ಮೋಹನ್ ಲಾಲ್ ಅಯ್ಯಪ್ಪನ ಭಕ್ತಿಯಿಂದ ಮಾಡಿಸಿರಬಹುದು. ಆದರೆ ಮಮುಟ್ಟಿಗೆ ತಿಳಿಸಿ ಪೂಜೆ ಮಾಡಿದ್ದರೆ ಅದು ಇಸ್ಲಾಂವಿಗೆ ವಿರೋಧ ಎಂದಿದ್ದಾರೆ. ಅದರೊಂದಿಗೆ ಅಲ್ಲಾಹುವಿಗೆ ಹೊರತುಪಡಿಸಿ ಇತರರಿಗೆ ಏನನ್ನೂ ಅರ್ಪಿಸಬಾರದು. ಇದು ಇಸ್ಲಾಂ ನಿಯಮದ ಉಲ್ಲಂಘನೆ ಎಂದಿದ್ದಾರೆ. ಆದರೆ ಅಬ್ದುಲ್ಲಾ ಹೇಳಿಕೆಯನ್ನು ಮುಸ್ಲಿಮರೇ ವಿರೋಧಿಸಿದ್ದಾರೆ. ತಮ್ಮ ನೆಚ್ಚಿನ ನಟ ಹೇಗಾದರೂ ಗುಣಮುಖರಾದರೆ ಸಾಕು. ಇದರಲ್ಲಿ ತಪ್ಪು ಹುಡುಕಬಾರದು. ಎಲ್ಲಾ ಮತ ಧರ್ಮ ಒಂದೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search