• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!

Tulunadu News Posted On July 8, 2025
0


0
Shares
  • Share On Facebook
  • Tweet It

ಅಲ್ಲಿ ಗರ್ಭೀಣಿಯೊಬ್ಬಳಿಗೆ ತುರ್ತಾಗಿ ಹೆರಿಗೆ ಮಾಡಿಸಬೇಕಿತ್ತು. ಅಲ್ಲಿ ಇದ್ದದ್ದು ಆಕೆಯ ಹೇರ್ ಪಿನ್ ಹಾಗೂ ಪುಟ್ಟ ಚಾಕು ಮಾತ್ರ. ಅದು ರೈಲ್ವೆ ನಿಲ್ದಾಣವೊಂದರ ಫ್ಲಾಟ್ ಫಾರಂ. ಅಷ್ಟೇ ವಸ್ತುಗಳನ್ನು ಇಟ್ಟುಕೊಂಡು ಅದೇ ಜಾಗದಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ವೈದ್ಯರ ಹೆಸರು ಮೇಜರ್ ಡಾ. ರೋಹಿತ್ ಬಚವಾಲಾ. ಅವರ ವಯಸ್ಸು ಕೇವಲ 31 ವರ್ಷ.

ಉತ್ತರ ಕೇಂದ್ರಿಯ ಜಾನ್ಸಿ ಡಿವಿಜನ್ ಪಬ್ಲಿಕ್ ರಿಲೇಶನ್ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಅವರ ಪ್ರಕಾರ, ಗರ್ಭೀಣಿಯೊಬ್ಬರು ಪನವೆಲ್- ಗೋರಖಪುರ ಎಕ್ಸಪ್ರೆಸ್ ನಲ್ಲಿ ಪ್ರಯಾಣಿಸುವಾಗ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಜಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಯಿತು.

ಅಸಾಧ್ಯ ಹೊಟ್ಟೆನೋವಿನಿಂದ ನರಳುತ್ತಿದ್ದ ಆಕೆಯ ಬಳಿ ಮಹಿಳಾ ಟಿಸಿ ಹಾಗೂ ಯೋಧರೊಬ್ಬರು ಧಾವಿಸಿದ್ದಾರೆ. ಮೇಜರ್ ಡಾ. ರೋಹಿತ್ ಬಚವಾಲಾ, ಸೇನೆಯಲ್ಲಿ ವೈದ್ಯಾಧಿಕಾರಿಯಾಗಿದ್ದು, ತಮ್ಮ ರೈಲಿಗಾಗಿ ಕಾಯುತ್ತಾ ಕುಳಿತಿದ್ದರು. ರೈಲ್ವೆ ಉದ್ಯೋಗಿಯೊಬ್ಬರು ವೀಲ್ ಚೇರ್ ದೂಡುತ್ತಾ ಧಾವಂತದಿಂದ ಓಡುವುದನ್ನು ನೋಡಿದ ಅವರು ಆಕೆಯನ್ನು ಹಿಂಬಾಲಿಸಿದ್ದರು. ತಕ್ಷಣ ಸೂಕ್ಷ್ಮತೆಯ ಅರಿವಾಗುತ್ತಲೇ ಅವರು ರೈಲ್ವೆ ಸಿಬ್ಬಂದಿಗಳ ಸಹಕಾರದಿಂದ ಅಲ್ಲಿಯೇ ಹೆರಿಗೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ಅಲ್ಲಿ ಆಪರೇಶನ್ ಥಿಯೇಟರ್ ನಲ್ಲಿ ಇರುವ ಯಾವುದೇ ಸಲಕರಣೆಗಳು ಇಲ್ಲದಿದ್ದರೂ ಇದ್ದದ್ದರಲ್ಲಿಯೇ ಏನಾದರೂ ಮಾಡುವ ನಿರ್ಧಾರ ಮಾಡಿದೆ ಎಂದು ಮೇಜರ್ ಬಚವಾಲಾ ಹೇಳಿದ್ದಾರೆ.

ಅಲ್ಲಿ ಹೇರ್ ಪಿನ್ ಹಾಗೂ ನನ್ನ ಬಳಿ ಪಾಕೆಟ್ ಚಾಕು ಇದ್ದ ಕಾರಣ ಮಗುವಿನ ಸುರಕ್ಷತೆಯನ್ನು ಮನಗಂಡು ಕೂಡಲೇ ಕಾರ್ಯಪ್ರವೃತ್ತರಾದೆವು. ಮಗು ಹಾಗೂ ತಾಯಿ ಇಬ್ಬರ ಆರೋಗ್ಯವೂ ಪ್ರಮುಖವಾಗಿತ್ತು. ಅಲ್ಲಿ ಪ್ರತಿ ಸೆಕೆಂಡ್ ಕೂಡ ಮುಖ್ಯವಾಗಿತ್ತು ಎಂದು ಮೇಜರ್ ಹೇಳಿದ್ದಾರೆ.
ಗರ್ಭೀಣಿ ವಿಪರೀತ ನೋವಿನಿಂದ ನಡೆಯಲಾಗದೇ ಲಿಫ್ಟ್ ಬಳಿ ಕುಸಿದು ಬಿದ್ದರು. ” ನಾನು ಒಂದು ಕ್ಷಣವೂ ಯೋಚಿಸಲು ಹೋಗಲಿಲ್ಲ. ಯಾಕೆಂದರೆ ಯೋಚಿಸಿ ಕೂರುವ ಸಮಯವೂ ಅದಾಗಿರಲಿಲ್ಲ. ಅದೇ ಪ್ರದೇಶವನ್ನು ಬಟ್ಟೆಯಿಂದ ಸುತ್ತುವರೆದು ಮೇಕ್ ಶಿಫ್ಟ್ ಆಪರೇಶನ್ ಥಿಯೇಟರ್ ಮಾಡಿಕೊಂಡೆವು, ಸ್ವಚ್ಚತೆ ಕೂಡ ಮುಖ್ಯವಾಗಿತ್ತು. ದೇವರ ದಯೆಯಿಂದ ನಾನು ಅಲ್ಲಿಯೇ ಇದ್ದ ಕಾರಣ ಇದೆಲ್ಲವೂ ಸಾಧ್ಯವಾಯಿತು” ಎಂದು ಅವರು ಹೇಳಿದರು.

ಹೆರಿಗೆ ನಂತರ ತಾಯಿ-ಮಗು ಇಬ್ಬರನ್ನು ಆಂಬ್ಯುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ. ಹೆರಿಗೆ ಮಾಡಿದ ಬಳಿಕ ಮೇಜರ್ ಬಚವಾಲಾ ತಾವು ತೆರಳಬೇಕಿದ್ದ ಹೈದ್ರಾಬಾದ್ ರೈಲನ್ನು ಏರಿದ್ದಾರೆ. ” ಒಬ್ಬ ವೈದ್ಯನಾಗಿ ನಾವು ಎಲ್ಲಾ ಸಂದರ್ಭಗಳಲ್ಲಿ ಸರ್ವಸನ್ನದ್ಧರಾಗಿ ಇರಬೇಕಾಗುತ್ತದೆ. ಪ್ರಯಾಣದ ಅವಧಿಯಲ್ಲಿಯೂ ಯಾವುದೇ ಸವಾಲು ನಮ್ಮ ಮುಂದೆ ಬರಬಹುದು. ಎರಡು ಜೀವಗಳನ್ನು ಉಳಿಸಲು ಸಾಧ್ಯವಾಗಿರುವುದಕ್ಕೆ ದೇವರ ಅನುಗ್ರಹವೇ ಕಾರಣ” ಎಂದು ಅವರು ಭಗವಂತನಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search