• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

Tulunadu News Posted On July 12, 2025
0


0
Shares
  • Share On Facebook
  • Tweet It

ಆಕೆ ರಷ್ಯಾ ಮೂಲದ ಮಹಿಳೆ. ಭಾರತೀಯ ಸನಾತನ ಧರ್ಮದಿಂದ ವಿಪರೀತವಾಗಿ ಸೆಳೆತಗೊಳಗಾಗಿದ್ದಳು. ಇತ್ತೀಚೆಗೆ ರಷ್ಯಾದಿಂದ ಗೋವಾಕ್ಕೆ ಬಂದಿಳಿದಿದ್ದಳು. ಅಲ್ಲಿಂದ ವಿದೇಶಿಗರ ನೆಚ್ಚಿನ ಆಧ್ಯಾತ್ಮಿಕ ಕೇಂದ್ರ ಗೋಕರ್ಣಕ್ಕೆ ಬಂದಿದ್ದಳು. ಗೋಕರ್ಣ ಪೇಟೆಯಿಂದ ದಟ್ಟಾರಣ್ಯದ ಕಡೆಗೆ ಹೆಜ್ಜೆ ಹಾಕಿದ್ದಳು. ಆಕೆಯ ಜೊತೆಗೆ ಇದ್ದದ್ದು ಇಬ್ಬರು ಪುಟ್ಟ ಮಕ್ಕಳು. ಹೀಗೆ ದಟ್ಟ ಕಾಡಿನ ಒಳಗೆ ನಡೆದು ಹೋದವಳಿಗೆ ಸಿಕ್ಕಿತ್ತು ಒಂದು ಗುಹೆ. ಅದರೊಳಗೆ ಮೂವರು ಹೋಗಿ ಕುಳಿತುಬಿಟ್ಟರು. ನಿಧಾನವಾಗಿ ಕತ್ತಲು ಆವರಿಸಿತು. ಗುಹೆಯ ಬಾಗಿಲಿಗೆ ಅಡ್ಡಲಾಗಿ ಬಟ್ಟೆಯನ್ನು ಕಟ್ಟಿಕೊಂಡು ಒಳಗೆ ಮೂವರು ದಿನ ಕಳೆಯಲಾರಂಭಿಸಿದರು.

ಅಷ್ಟಕ್ಕೂ ರಷ್ಯಾದಿಂದ ಆಧ್ಯಾತ್ಮವನ್ನು ಅರಸಿ ಗೋಕರ್ಣದ ದಟ್ಟ ಕಾಡಿನ ಕತ್ತಲಗುಹೆಯಲ್ಲಿ ಇದ್ದವಳ ಹೆಸರು ಮೋಹಿ. ವಯಸ್ಸು 40 ವರ್ಷ. ಅವಳ ಪುಟ್ಟ ಮಕ್ಕಳಲ್ಲಿ ಒಬ್ಬಳು ಪ್ರೆಯಾ, ಆರು ವರ್ಷ, ಇನ್ನೊಬ್ಬಳು ಅಮಾ ನಾಲ್ಕೇ ವರ್ಷ. ಆಕೆಯ ಬಳಿ ಇದ್ದದ್ದು ಬಿಸಿನೆಸ್ ವೀಸಾ. ಆ ದಟ್ಟವಾದ ಅರಣ್ಯದ ಹೆಸರು ರಾಮತೀರ್ಥ. ಗುಹೆಯ ಒಳಗೆ ಪೂಜೆ ಮತ್ತು ಧ್ಯಾನ ಮಾಡುತ್ತಾ ದಿನ ಕಳೆಯುತ್ತಿದ್ದ ಮೂವರಿಗೆ ಮುಂದೊಂದು ದಿನ ತಮ್ಮನ್ನು ಪೊಲೀಸರು ಕರೆದುಕೊಂಡು ಹೋಗುತ್ತಾರೆ ಎಂಬ ಅನುಮಾನ ಇದ್ದಿರಲಿಕ್ಕಿಲ್ಲ. ಬಹುಶ: ಮಳೆಗಾಲದ ಈ ರಣಮಳೆಯಲ್ಲಿ ಗೋಕರ್ಣದ ಗುಡ್ಡವೊಂದು ಕುಸಿಯದೇ ಹೋಗಿದ್ದರೆ ಪೊಲೀಸರು ಕೂಡ ಸದ್ಯ ಅತ್ತ ಬರುವ ಸಾಧ್ಯತೆ ಇರುತ್ತಿರಲಿಲ್ಲವೇನೋ. ಆದರೆ ಗುಡ್ಡ ಕುಸಿತವಾಗಿದ್ದ ಕಾರಣ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ನೋಡಿ ಅತ್ತ ಬಂದಿದ್ದಾರೆ. ನಂತರ ಆಕೆಯ ಮನವೊಲಿಸಿ ಆಕೆಯ ಇಚ್ಚೆಯಂತೆ ಬಂಕಿಕೊಡ್ಲದ ಎಜಿಓ ಶಂಕರ್ ಪ್ರಸಾದ್ ಫೌಂಡೇಶನ್ ಗೆ ಸಂಬಂಧಿಸಿದ ಯೋಗರತ್ನ ಸರಸ್ವತಿ ಮಹಿಳಾ ಸ್ವಾಮೀಜಿ ಅವರ ಆಶ್ರಮಕ್ಕೆ ಕರೆತಂದಿದ್ದಾರೆ.

ಈ ವೇಳೆ ಈಕೆಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಹಿಂದೂ ಹಿಂದೂ ಧರ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು ಎಂದು ಪೊಲೀಸರಿಗೆ ತಿಳಿದುಬಂದಿದೆ. ಹೀಗಾಗಿ ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಿನಲ್ಲಿಯೇ ಬದುಕುತ್ತಿದ್ದಳು ಎನ್ನಲಾಗಿದೆ. ಎಸ್ ಪಿ ಎಂ ನಾರಾಯಣ್ ಅವರ ಸಲಹೆಯಂತೆ ಆಕೆ ಹಾಗೂ ಆಕೆಯ ಮಕ್ಕಳನ್ನು ಪೊಲೀಸರ ರಕ್ಷಣೆಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ರಷ್ಯಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಬಳಿಕ ಆಕೆಯ ದೇಶಕ್ಕೆ ಪುನ: ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ ಪಿ ಎಂ ನಾರಾಯಣ್ ಅವರು ಮಾಹಿತಿ ನೀಡಿದ್ದಾರೆ.

0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • 3
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search