• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!

Tulunadu News Posted On July 14, 2025
0


0
Shares
  • Share On Facebook
  • Tweet It

ಮ್ಯಾರಥಾನ್ ಎನ್ನುವುದು ಹೇಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗಂಟೆಗಟ್ಟಲೆ ನಿರಂತರವಾಗಿ ಓಡುವುದು ಎಂದರೆ ಅದರಷ್ಟು ಕಠಿಣ ಸವಾಲು ಬೇರೆ ಇದೆಯಾ? ಅದರಲ್ಲಿಯೂ ಹಿಮ ಪರ್ವತ, ಅಸಾಧ್ಯ ಬಿಸಿಲು, ಕಠಿಣವಾದ ಹಾದಿಗಳು ಹೀಗೆ ಪ್ರತಿ ಹೆಜ್ಜೆಯನ್ನು ಕೂಡ ಯಶಸ್ವಿಯಾಗಿ ಇಟ್ಟು ಗುರಿ ಮುಟ್ಟುವುದಿದೆಯಲ್ಲಾ ಅದು ಸುಲಭಸಾಧ್ಯ ಅಲ್ಲ. ಭಾರತದ ಸ್ಟಾರ್ ಅಲ್ಟ್ರಾ ಮ್ಯಾರಥಾನ್ ಓಟಗಾರ್ತಿ, ಕರ್ನಾಟಕದ ಅಶ್ವಿನಿ ಗಣಪತಿ ಭಟ್ ಜಪಾನಿನಲ್ಲಿ ನಡೆದ ಏಷ್ಯಾದಲ್ಲಿಯೇ ಅತ್ಯಂತ ಕ್ಲಿಷ್ಟಕರ ಓಟಗಳಲ್ಲಿ ಒಂದೆನಿಸಿರುವ ಡೀಪ್ ಜಪಾನ್ ಅಲ್ಟ್ರಾ ಟ್ರೇಲ್ ರೇಸ್ ನಲ್ಲಿ 10 ನೇ ಸ್ಥಾನ ಪಡೆಯುವ ಉತ್ತಮ ಸಾಧನೆ ಮಾಡಿದ್ದಾರೆ. ಇನ್ನು ಜಪಾನಿನವರ ಹೊರತಾಗಿ ಈ ಸ್ಪರ್ಧೆ ಮುಗಿಸಿದವರಲ್ಲಿ ಅಶ್ವಿನಿ ಮಾತ್ರ ಒಬ್ಬರು.

ಏಕೆಂದರೆ ಜಪಾನಿನ ಹಿಮದಿಂದ ಕೂಡಿದ ಪರ್ವತಗಳು, ಅಲ್ಲಿ ನಿರಂತರವಾಗಿ 45 ಗಂಟೆ 42 ನಿಮಿಷಗಳ ತನಕ ಓಡುವುದೆಂದರೆ ಅದು ಸುಲಭದ ಮಾತಲ್ಲ. ನಿದ್ದೆ ಇಲ್ಲದೇ ಬಹುತೇಕ ಎರಡು ಸಂಪೂರ್ಣ ದಿನ 173 ಕಿಮೀ ದೂರ ಓಡಿ ಅಶ್ವಿನಿ ಈ ಸ್ಪರ್ಧೇ ಪೂರೈಸಿದ್ದಾರೆ.
ಈ ಸ್ಪರ್ಧೇಯಲ್ಲಿ ಆರಂಭದಲ್ಲಿ 135 ಓಟಗಾರರು ಇದ್ದರೂ ಅಂತಿಮವಾಗಿ ಓಟ ಪೂರ್ತಿಗೊಳಿಸಿದ್ದು 62 ಮಂದಿ ಮಾತ್ರ. ಉಳಿದ 73 ಆಟಗಾರರು ಓಟವನ್ನು ಮುಗಿಸಲಾರದೇ ಹಿಂದೆ ಸರಿದುಬಿಟ್ಟಿದ್ದರು.

ಈ ಕಠಿಣ ಪಥ ಹೇಗಿತ್ತು ಎಂದರೆ ಓಟದ ಪಥದಲ್ಲಿ ಹಲವೆಡೆ ಹಗ್ಗ ಹಿಡಿದು ಮೇಲೆ ಹತ್ತಬೇಕಿತ್ತು. ಬಹುತೇಕ ಹಾದಿಯೂ ಕಿರಿದಾಗಿತ್ತು. ಹೀಗಾಗಿ ಓಟ ಇಲ್ಲಿ ಕಷ್ಟಕರ ಮಾತ್ರವಲ್ಲ, ಅಪಾಯಕಾರಿಯೂ ಆಗಿತ್ತು. 33 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೂಡ ಓಡಬೇಕಾಗಿತ್ತು. ಅದು ಓಟಗಾರರನ್ನು ಹೈರಾಣಾಗಿಸಿತ್ತು. ಇದೆಲ್ಲವನ್ನು ದಾಟಿ ಅಶ್ವಿನಿ ಭಟ್ ಅವರು ತಮ್ಮ ಸಾಧನೆ ಮೆರೆದಿದ್ದಾರೆ.

ಇನ್ನು ಅಶ್ವಿನಿ ಅವರಿಗೆ ಮ್ಯಾರಥಾನ್ ಓಟದ ಸಾಕಷ್ಟು ಅನುಭವ ಇರುವುದರಿಂದ ಅವರು ಅಂತಿಮ ಹತ್ತರಲ್ಲಿ ಸ್ಥಾನ ಪಡೆಯುವಂತಾಯಿತು. ಇನ್ನು ಓಡುವಾಗ ಅವರೊಂದಿಗೆ ಸ್ವಯಂ ರಕ್ಷಣೆಗಾಗಿ ಕೆಲ ಪರಿಕರಗಳನ್ನು ಇಟ್ಟುಕೊಳ್ಳಬೇಕಾಗಿತ್ತು. ಅದರ ತೂಕವೇ ಅಂದಾಜು ಆರು ಕೆಜಿ ಇತ್ತು. ಅಶ್ವಿನಿ ಅವರು ಶಾಕಾಹಾರಿಯಾಗಿರುವುದರಿಂದ ತಮ್ಮ ಆಹಾರದ ಜೊತೆಗೆ ನೀರನ್ನು ಕೂಡ ಹೊತ್ತುಕೊಂಡು ಸಾಗಿದ್ದರು. ಒಟ್ಟು ಅಂದಾಜು 8 ಕೆಜಿಯಷ್ಟು ತೂಕದ ಬ್ಯಾಕ್ ಪ್ಯಾಕ್ ಹೊತ್ತು ಅಶ್ವಿನಿ ಓಡಿದರು.
ಕಳೆದ ಬಾರಿ ಬೆಂಗಳೂರಿನ ಹೊರವಲಯದಲ್ಲಿ ನಡೆದ ಬ್ಯಾಕ್ ಯಾರ್ಡ್ ಅಲ್ಟ್ರಾ ಸ್ಪರ್ಧೆಯಲ್ಲಿ 28 ಗಂಟೆಯಲ್ಲಿ 187.8 ಕಿ.ಮೀ ಓಡಿ ವಿಜೇತರಾಗಿದ್ದರು.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search