• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!

Tulunadu News Posted On July 14, 2025
0


0
Shares
  • Share On Facebook
  • Tweet It

ಕಾಂತಾರಾ ಮೂಲಕ ದೇಶ, ವಿದೇಶದಲ್ಲಿ ತುಳುಮಣ್ಣಿನ ಸಂಸ್ಕೃತಿ, ನಂಬಿಕೆ, ಸಂಪ್ರದಾಯವನ್ನು ಪಸರಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಈಗಾಗಲೇ ಬಾಲಿವುಡ್ ನಿರ್ದೇಶಕರಿಂದ ದೊಡ್ಡ ದೊಡ್ಡ ಆಫರ್ ಗಳು ಬರುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಆ ಸಾಲಿಗೆ ಈಗ ಲಗಾನ್, ಜೋಧಾ ಅಕ್ಬರ್ ನಂತಹ ದೊಡ್ಡ ಸ್ಟಾರ್ ಗಳ ಸಿನೆಮಾ ನಿರ್ದೇಶಿಸಿರುವ ಅಶುತೋಷ್ ಗೌವಾರೀಕರ್ ಕೂಡ ಸೇರಿದ್ದಾರೆ. ಸಾಮಾನ್ಯವಾಗಿ ಇತಿಹಾಸದ ಅವಿಸ್ಮರಣೀಯ ಕಥೆಗಳನ್ನೇ ಬೆಳ್ಳಿತೆರೆಗೆ ಅಳವಡಿಸುವಲ್ಲಿ ಅಶುತೋಷ್ ಸಿದ್ಧಹಸ್ತರು. ಅವರು ವಿಜಯನಗರದ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜೀವನಚರಿತ್ರೆಯನ್ನು ಇಟ್ಟುಕೊಂಡು ಕಥೆ ಸಿದ್ಧಪಡಿಸಿದ್ದಾರೆ. ಅವರ ತಂಡ ಈಗಾಗಲೇ ಈ ಬಗ್ಗೆ ಸಂಶೋಧನೆ ನಡೆಸಿ ಚಿತ್ರಕಥೆಯನ್ನು ರಚಿಸುತ್ತಾ ಇದೆ.

ಓರ್ವ ಚಕ್ರವರ್ತಿಯನ್ನು ತೆರೆಯ ಮೇಲೆ ಹೇಗೆ ತೋರಿಸಬೇಕು ಎನ್ನುವ ಸಂಪೂರ್ಣ ಕಲ್ಪನೆ ಅಶುತೋಷ್ ಅವರಿಗೆ ಇರುವುದರಿಂದ ಈ ಸಿನೆಮಾದ ಒಟ್ಟು ಬಜೆಟ್ ಕೂಡ ದೊಡ್ಡದಾಗಿಯೇ ಇರಲಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ, ವಜ್ರಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವಾಗಲೇ ಆ ಅವಧಿಯ ಶ್ರೀಮಂತಿಕೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಹಾಗಿರುವಾಗ ಚಕ್ರವರ್ತಿಯ ಆಸ್ಥಾನ ಹೇಗಿರಬೇಡಾ. ಆತನ ಮಂತ್ರಿಮಂಡಲ ಹೇಗಿರಬೇಡಾ, ಸೈನ್ಯ ಹೇಗಿರಬೇಡಾ. 16 ನೇ ಶತಮಾನದಲ್ಲಿ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತವನ್ನು ಅಕ್ಷರಶ: ಆಳಿದ್ದ ಶ್ರೀ ಕೃಷ್ಣ ದೇವರಾಯನ ವ್ಯಕ್ತಿತ್ವವನ್ನು ಸಿನೆಮಾವಾಗಿ ತರುವುದೇ ದೊಡ್ಡ ಸಾಹಸ.

ಈ ಸಿನೆಮಾವನ್ನು ವಿಷ್ಣುವರ್ಧನ್ ಇಂದೂರಿ ನಿರ್ಮಿಸಲಿದ್ದಾರೆ. ಅವರು ಈ ಮೊದಲು ತಲೈವಿ ಹಾಗೂ ಕಪಿಲ್ ದೇವ್ ಜೀವನ ಚರಿತ್ರೆ 83 ನಿರ್ಮಿಸಿದ್ದಾರೆ. ಈ ಸಿನೆಮಾದಲ್ಲಿ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದ ಖ್ಯಾತನಾಮರು ನಟಿಸಲಿದ್ದಾರೆ. ಎರಡು ವರ್ಷಗಳಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಕೊನೆಗೂ ಸಿನೆಮಾ ಸೆಟ್ಟೇರಲು ಸಜ್ಜಾಗಿದೆ. ಕಾಂತಾರ ಪಾರ್ಟ್ 1 ನಂತರ, ಜೈ ಹನುಮಾನ್, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಶ್ರೀ ಕೃಷ್ಣ ದೇವರಾಯದಲ್ಲಿ ನಟಿಸುವ ಮೂಲಕ ರಿಷಬ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ತಮ್ಮ ಚರಿಶ್ಮಾ ಮುಂದುವರೆಸಲಿದ್ದಾರೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search