• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

Tulunadu News Posted On July 16, 2025
0


0
Shares
  • Share On Facebook
  • Tweet It

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದ ಹೆಣ್ಣಿನ ಶೋಷಣೆಯೊಂದು ಆಕೆಗೆ ಯಾರು ರಕ್ಷಕರು, ಯಾರು ಭಕ್ಷಕರು ಎನ್ನುವುದೇ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯುವಂತೆ ಮಾಡಿದೆ. ಆಕೆ ಮದುವೆಯಾಗಿ ಗಂಡನೊಡನೆ ಸುಖ ಸಂಸಾರ ಮಾಡುವ ಕನಸು ಇಟ್ಟುಕೊಂಡಿದ್ದಳು. ಗಂಡನೇನೋ ಸುಖ ಕೊಟ್ಟ. ಆದರೆ ಅದರೊಂದಿಗೆ ವಿಡಿಯೋ ಕೂಡ ಮಾಡಿದ. ಗಂಡನಲ್ವ ಎಂದು ಆಕೆ ಸುಮ್ಮನಿದ್ದದೇ ಅವಳಿಗೆ ಮುಳುವಾಯಿತು. ನಾನು ಗಿರಾಕಿಗಳನ್ನು ಕರೆದುಕೊಂಡು ಬರುತ್ತೇನೆ. ಅವರಿಗೂ ಸುಖ ಕೊಡು, ನನಗೆ ಹಣ ಸಿಗುತ್ತದೆ ಎಂದು ಗಂಡ ವರಾತ ತೆಗೆದ. ನಿತ್ಯ ಅವಳ ಬಳಿ ಕಾಮಾಂಧರು ಬರುತ್ತಿದ್ದರು. ಗಂಡನ ಈ ವ್ಯಾಪಾರದಿಂದ ಇವಳ ಜೀವನ ಸಂಕಷ್ಟವಾಯಿತು. ಕೊನೆಗೆ ಹೇಗೋ ಏನೋ ಈ ಕಥೆ ನಿಲ್ಲಲೇಬೇಕು ಎಂದುಕೊಂಡವಳಿಗೆ ಪೊಲೀಸ್ ಪೇದೆಯೊಬ್ಬ ಸಿಕ್ಕಿದ್ದಾನೆ. ಅವನಿಗೆ ಎಲ್ಲಾ ಕಥೆ ಹೇಳಿದ್ದಾಳೆ.

ಅವನು ಅವಳ ಮನೆಗೆ ಬಂದಿದ್ದಾನೆ. ಅಲ್ಲಿ ಗಂಡನಿಗೆ ಜೋರು ಮಾಡಿ ಅವಳ ಜೊತೆಗಿನ ಖಾಸಗಿ ವಿಡಿಯೋಗಳನ್ನು ತಾನು ನೋಡಿದ್ದಾನೆ. ನಂತರ ಗಂಡನಿಗೆ ಬೈದು ಅದನ್ನು ಡಿಲೀಟ್ ಮಾಡಿದ್ದಾನೆ. ಇನ್ನು ಹೀಗೆ ಮಾಡಿದರೆ ಎಚ್ಚರಿಕೆ ಎಂದು ಥೇಟ್ ಸಿಂಗಂ ಸ್ಟೈಲಿನಲ್ಲಿ ಆವಾಜ್ ಹಾಕಿ ಹೋಗಿದ್ದಾನೆ.
ಆದರೆ ಕೆಲವು ದಿನಗಳ ಬಳಿ ಈ ಪೇದೆ ಚಂದ್ರ ನಾಯಕನಿಗೆ ಆ ಯುವತಿಯ ಮೇಲೆ ಆಸೆಯಾಗಿದೆ.

ಹೇಗೂ ತಾನು ಅವಳನ್ನು ಸಂಕಷ್ಟದಿಂದ ಪಾರು ಮಾಡಿದವನಲ್ವಾ? ಹಾಗಿದ್ದ ಮೇಲೆ ಅವಳು ತನಗೆ ಉಪಕಾರ ಮಾಡಬೇಕು ಎಂದು ಅವಳು ಒಬ್ಬಳೇ ಇದ್ದಾಗ ಮನೆಗೆ ನುಗ್ಗಿ ಅವಳನ್ನು ಉಂಡಿದ್ದಾನೆ. ಈ ವಿಷಯ ಅವಳ ಗಂಡನಿಗೆ ಗೊತ್ತಾದಾಗ ಒಂದಿಷ್ಟು ಚಿಲ್ಲರೆ ಹಣ ಕೊಟ್ಟು ಹೋಗಿದ್ದಾನೆ. ಪೊಲೀಸ್ ಕಾನ್ಸಸ್ಟೇಬಲ್ ತನ್ನ ಹೆಂಡತಿಯ ಜೊತೆ ಮಲಗಿದ ಮೇಲೆ ಅವನು ಇನ್ನು ನನಗೆ ಬುದ್ಧಿವಾದ ಏನು ಹೇಳಿಯಾನು ಎಂದು ಗಂಡ ಮತ್ತೆ ಹೆಂಡತಿಯನ್ನು ಮುಂದಿಟ್ಟು ವ್ಯಾಪಾರ ಶುರು ಮಾಡಿದ್ದಾನೆ. ಇದರಿಂದ ಅವಳಿಗೆ ಬೆಂಕಿಯಿಂದ ಬಾಣಲೆಗೆ ಹಾರಿ ಅಲ್ಲಿ ಒದ್ದಾಡಿ ಅಲ್ಲಿಂದ ಪ್ರಪಾತಕ್ಕೆ ದೂಡಿದಂತೆ ಆಗಿದೆ. ಕೊನೆಗೆ ಅವಳು ಯಾರಿಂದಲೋ ಮಾಹಿತಿ ಪಡೆದುಕೊಂಡು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ.

ಈ ಇಡೀ ಪ್ರಕರಣವನ್ನು ಕೇಳಿದರೆ ಅವಳ ಜೀವನ ಅದೆಷ್ಟು ದುಸ್ವಪ್ನದಿಂದ ಕೂಡಿರಬೇಡಾ ಎಂದು ಅನಿಸದೇ ಇರುವುದಿಲ್ಲ. ಗಂಡ ಭಕ್ಷಕ, ಪೊಲೀಸ್ ಎಂಬ ರಕ್ಷಕನೂ ಗಂಡನಿಗೆ ಗಿರಾಕಿ ಆದ ಕಥೆಯೇ ತುಂಬಾ ನೋವಿನಿಂದ ಕೂಡಿರುವಂತದ್ದು. ಆಕೆಯ ಗಂಡ ಹಾಗೂ ಆ ಪೊಲೀಸ್ ಕಾನ್ಸಸ್ಟೇಬಲ್ ಇಬ್ಬರಿಗೂ ಸೂಕ್ತ ಶಿಕ್ಷೆಯಾಗಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಆಶಯ.

0
Shares
  • Share On Facebook
  • Tweet It




Trending Now
ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
Tulunadu News August 19, 2025
ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
Tulunadu News August 19, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!
    • ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್
    • ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!
    • ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
  • Popular Posts

    • 1
      ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • 2
      ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!

  • Privacy Policy
  • Contact
© Tulunadu Infomedia.

Press enter/return to begin your search