• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಡುಗೆ-ಆಹಾರ

2006 ರ ಮುಂಬೈ ಸರಣಿ ರೈಲು ಸ್ಫೋಟದ ಎಲ್ಲಾ 12 ಆರೋಪಿಗಳು ದೋಷಮುಕ್ತ!

Tulunadu News Posted On July 21, 2025
0


0
Shares
  • Share On Facebook
  • Tweet It

2006 ರ ಜುಲೈ 11 ರಂದು ಮುಂಬೈನಲ್ಲಿ ಸಂಜೆ 6.30 ರ ಸುಮಾರಿಗೆ ಸ್ಥಳೀಯ ರೈಲುಗಳ ಪ್ರಥಮ ದರ್ಜೆ ಬೋಗಿಗಳಲ್ಲಿ ಒಂದರ ನಂತರ ಒಂದರಂತೆ ಏಳು ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ 189 ಪ್ರಯಾಣಿಕರು ಸಾವನ್ನು ಅಪ್ಪಿದರೆ 824 ನಾಗರಿಕರು ಗಾಯಗೊಂಡಿದ್ದರು. ಈ ಘಟನೆ ನಡೆದ 19 ವರ್ಷಗಳ ನಂತರ ಮುಂಬೈ ಹೈಕೋರ್ಟ್ ಅಂತಿಮ ಆದೇಶ ಬಂದಿದೆ. ಆವತ್ತು ನಡೆದ ಎಲ್ಲಾ ಸ್ಫೋಟಗಳು ಮುಂಬೈನ ಪಶ್ಚಿಮ ರೈಲ್ವೆ ವ್ಯಾಪ್ತಿಯ ಖಾರ್, ಬಾಂದ್ರಾ, ಜೋಗೇಶ್ವರಿ, ಮಾಹಿಮ್, ಬೋರಿವಲಿ, ಮಾತುಂಗಾ ಮತ್ತು ಮೀರಾ – ಭಾಯಂದರ್ ರೈಲು ನಿಲ್ದಾಣಗಳ ಬಳಿ ಸಂಭವಿಸಿದ್ದವು. ರೈಲುಗಳಲ್ಲಿ ಇಡಲಾದ ಬಾಂಬ್ ಗಳನ್ನು ಆರ್ ಡಿಎಕ್ಸ್, ಅಮೋನಿಯಂ ನೈಟ್ರೇಟ್, ತೈಲ ಹಾಗೂ ಮೊಳೆಗಳಿಂದ ತಯಾರಿಸಲಾಗಿತ್ತು. ಅದನ್ನು ಏಳು ಪ್ರೆಶರ್ ಕುಕ್ಕರ್ ಗಳಲ್ಲಿ ಇರಿಸಲಾಗಿತ್ತು ಮತ್ತು ಟೈಮರ್ ಬಳಸಿ ಸ್ಫೋಟಿಸಲಾಗಿತ್ತು.

ಮಾರ್ಚ್ 2006 ರಲ್ಲಿ ಲಷ್ಕರ್ ಎ ತೈಬಾದ ಅಜಮ್ ಚೀಮಾ ಬಹಾವಲ್ಪುರದಲ್ಲಿರುವ ತನ್ನ ಮನೆಯಲ್ಲಿ ಸಿಮಿ ಮತ್ತು ಲಷ್ಕರ್ ನ ಎರಡು ಬಣಗಳ ಪ್ರಮುಖರೊಂದಿಗೆ ಈ ಸ್ಫೋಟಗಳಿಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಮೇ 2006 ರಲ್ಲಿ 50 ಯುವಕರನ್ನು ಬಹಾವಲ್ಪುರದಲ್ಲಿರುವ ತರಬೇತಿ ಶಿಬಿರಕ್ಕೆ ಕಳುಹಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಅವರಿಗೆ ಬಾಂಬ್ ತಯಾರಿಸುವುದು ಮತ್ತು ಬಂದೂಕುಗಳನ್ನು ಉಪಯೋಗಿಸುವ ತರಬೇತಿ ನೀಡಲಾಗಿತ್ತು.

ಈಗ ಈ 2006 ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದ ಎಲ್ಲಾ 12 ಅರೋಪಿಗಳನ್ನು ಸೋಮವಾರ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಶನ್ ಅಂದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳು ಅಪರಾಧ ಮಾಡಿದ್ದಾರೆ ಎಂದು ನಂಬುವುದು ಕಷ್ಟ. ಆದ್ದರಿಂದ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಅವರು ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ, ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ತಿಳಿಸಿದೆ.
ಆರೋಪಿಗಳು: ಕಮಲ್ ಅಹ್ಮದ್ ಅನ್ಸಾರಿ (37 ವರ್ಷ) 2021 ರಲ್ಲಿ ಕೋವಿಡ್ ನಿಂದ ಸಾವು
ತನ್ವೀರ್ ಅಹಮದ್ ಅನ್ಸಾರಿ (37)
ಮೊಹಮ್ಮದ್ ಫೈಝಲ್ ಶೇಖ್ (36)
ಎಹ್ತೇಶಾಮ್ ಸಿದ್ದಿಕಿ (30)
ಮೊಹಮ್ಮದ್ ಮಜೀದ್ ಶಫಿ (32)
ಶೇಖ್ ಆಲಂ ಶೇಖ್ (41)
ಮೊಹಮ್ಮದ್ ಸಾಜಿದ್ ಅನ್ಸಾರಿ (34)
ಮಝಮ್ಮಿಲ್ ಶೇಖ್ (27)
ಸೊಹೆಲ್ ಮೆಹಮೂದ್ ಶೇಖ್ (43)
ಜಮೀರ್ ಅಹಮದ್ ಶೇಖ್ (30)
ಅಸಿಫ್ ಖಾನ್ (38)
ನಾವೆದ್ ಹುಸೇನ್ ಖಾನ್ (30

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Tulunadu News September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Tulunadu News September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search