• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನಕಲಿ ಐಡಿ ನೀಡಿದವ ಹಿಂದೂ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಸೆರೆ!

Tulunadu News Posted On September 19, 2025
0


0
Shares
  • Share On Facebook
  • Tweet It

ಇದು ಅವರಿಬ್ಬರು ಸೇರಿ ಮಾಡಿದಂತಹ ಪ್ಲಾನೋ ಅಥವಾ ಅವಳಿಗೆ ತಾನು ಹಿಂದೂ ಎಂದು ಆತನೇ ನಂಬಿಸಿದ್ದನೋ, ಅದಿನ್ನು ವಿಚಾರಣೆ ನಡೆಯಬೇಕಿದೆ. ಆದರೆ ತಾನು ಹಿಂದೂ ಅಲ್ಲ ಎನ್ನುವುದು ಅವನಿಗೆ ಚೆನ್ನಾಗಿ ಗೊತ್ತಿತ್ತಲ್ಲ, ಅದು ಅವಳಿಗೆ ಗೊತ್ತಿಲ್ಲದೇ ಆತ ಮೋಸ ಮಾಡಿದ್ರೆ ಇದು ನಂಬಿಕೆ ದ್ರೋಹ ಆಗಲಿದೆ. ಆತನ ಹೆಸರು ಅಬ್ದುಲ್ ಸಮದ್. ವಯಸ್ಸು 42 ವರ್ಷ. ಅವನ ಮೂಲ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನುರ್ ಊರಿನ ಮಾಗುಂಡಿ. ಈತ ಹಾಗೂ 38 ವರ್ಷ ಪ್ರಾಯದ ಹಿಂದೂ ಯುವತಿ ಶೃಂಗೇರಿಗೆ ಬಂದಿದ್ದಾರೆ. ಅಲ್ಲಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದಾರೆ.

ರೂಂ ಬುಕ್ ಮಾಡುವಾಗ ಎಲ್ಲರಿಗೂ ಗೊತ್ತಿರುವಂತೆ ಹೋಟೇಲಿನವರು ಐಡಿ ಕೇಳುತ್ತಾರೆ. ಹಾಗೆ ಇವನ ಬಳಿ ಐಡಿ ಕೇಳಿದ್ದಾರೆ. ಇವನು ಸಹ ಮೊದಲೇ ಐಡಿ ತೆಗೆದುಕೊಂಡು ಬಂದಿದ್ದ. ಅದರ ಪ್ರಕಾರ ಐಡಿ ನೀಡಿದ್ದಾನೆ. ಅದರಂತೆ ತನ್ನ ಜೊತೆ ಇದ್ದ ಯುವತಿಯನ್ನು ಪತ್ನಿ ಎಂದು ಹೇಳಿ ಇಬ್ಬರೂ ಲಾಡ್ಜ್ ರೂಂ ಸೇರಿಕೊಂಡಿದ್ದಾರೆ. ಇವನ ಹಾವಭಾವ, ಮುಖಚಹರೆ ಎಲ್ಲಾ ನೋಡಿದ ಹೋಟೇಲು ಸಿಬ್ಬಂದಿಗೆ ಇವನು ಹಿಂದೂ ಅಲ್ಲ ಎನ್ನುವುದು ಗೊತ್ತಾಗಿದೆ. ಅವರು ಸ್ಥಳೀಯರ ಸಹಕಾರ ಪಡೆದು ಶೃಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಆ ವ್ಯಕ್ತಿ ನೀಡಿದ ಐಡಿ ಪರಿಶೀಲಿಸಿದ್ದಾರೆ. ಅದರಲ್ಲಿ ರಮೇಶ್ ಎಂದು ಬರೆದಿತ್ತು. ನಂತರ ಇಬ್ಬರನ್ನು ಕರೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಉಳಿದ ತನಿಖೆ ಈಗ ನಡೆಯುತ್ತಿದೆ.

ಈ ಮೊದಲು ಕೂಡ ಲಾಡ್ಜ್ ಗಳಲ್ಲಿ ರೂಂ ಪಡೆಯುವಾಗ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರನ್ನು ಪ್ರೇಮದ ಬಲೆಯಲ್ಲಿ ಬೀಳಿಸುವಾಗ ಮುಸ್ಲಿಂ ಯುವಕರು ತಾವು ಹಿಂದೂ ಯುವಕರ ಹೆಸರನ್ನು ನೀಡಿ ಹಿಂದೂ ಎಂದು ಬಿಂಬಿಸಿ ಮೋಸ ಮಾಡಿದ ಘಟನೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿಯೂ ಹಾಗೆ ಆಗಿದೆಯಾ, ಇಲ್ವಾ ಎನ್ನುವುದು ತಿಳಿಯಬೇಕಿದೆ. ಒಂದು ವೇಳೆ ಆ ವ್ಯಕ್ತಿ ಸಮದ್, ಹಿಂದೂ ಅಲ್ಲ, ಮುಸ್ಲಿಂ ಎಂದು ಹಿಂದೂ ಯುವತಿಗೆ ಗೊತ್ತಿದ್ದು, ಆತನೊಂದಿಗೆ ಸರಸ ಸಲ್ಲಾಪ ನಡೆಸಲು ರೂಂ ಬುಕ್ ಮಾಡಿದರೆ ಅದಕ್ಕೆ ಕಾನೂನಿನಲ್ಲಿ ಶಿಕ್ಷೆ ಇರುವುದಿಲ್ಲ. ಏಕೆಂದರೆ ಕಾನೂನು ಯುವತಿಯ ಒಪ್ಪಿಗೆ ಮತ್ತು ವಯಸ್ಸನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಒಂದು ವೇಳೆ ಆ ಯುವತಿ ಪ್ರಾಪ್ತ ವಯಸ್ಸಿನವಳಾಗಿದ್ದು, ಅವಳ ಸ್ವಇಚ್ಚೆಯಿಂದಲೇ ಎದುರಿನ ಯುವಕ ತನ್ನ ಧರ್ಮದವನು ಅಲ್ಲ ಎಂದು ಗೊತ್ತಿದ್ದೂ ಅವನೊಂದಿಗೆ ಹೋದರೆ ಅಲ್ಲಿ ನೈತಿಕತೆಯ ವಿಷಯ ಬರುತ್ತದೆ ವಿನ: ಕಾನೂನು ಸಂಬಂಧ ಅದು ಶಿಕ್ಷೆಯ ಪರಿಮಿತಿಯಲ್ಲಿ ಬರುವುದಿಲ್ಲ.

0
Shares
  • Share On Facebook
  • Tweet It




Trending Now
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Tulunadu News January 1, 2026
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
  • Popular Posts

    • 1
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 2
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search