• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

Tulunadu News Posted On September 23, 2025
0


0
Shares
  • Share On Facebook
  • Tweet It

ಸುಹಾನಾ ಸೈಯದ್. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. . ಸರಿಗಮಪದ ಎಂಬ ಸಂಗೀತ ರಿಯಾಲಿಟಿ ಶೋದಿಂದ ಬೆಳಕಿಗೆ ಬಂದು ಮುಸ್ಲಿಂ ಆಗಿದ್ದರೂ ಹಿಂದೂ ದೇವರ ಹಾಡನ್ನು ಹಾಡುವ ಮೂಲಕ ಒಂದಿಷ್ಟು ವಿವಾದದ ಕೇಂದ್ರ ಬಿಂದು ಆಗಿದ್ದಳು. ಎಂಟು ವರ್ಷಗಳ ಹಿಂದೆ ಅವಳು ಹಾಡಿರುವ ರಾಮನ ಭಕ್ತಿ ಹಾಡು ಬಹಳ ಫೇಮಸ್ ಆಗಿ, ಸಾಕಷ್ಟು ವೈರಲ್ ಆಗಿ, ಒಬ್ಬ ಮುಸ್ಲಿಂ ಮತದವರಾಗಿ ಹೀಗೆ ಹಾಡುವುದು ಎಷ್ಟು ಸರಿ ಎಂದು ಆಕೆಯ ಮತದವರಿಂದಲೇ ಟೀಕೆಗೆ ಗುರಿಯಾಗಿದ್ದಳು.

ಅವಳಿಗೆ ಆಗ ಬಂದಿರುವ ವಿರೋಧ ಎಷ್ಟರಮಟ್ಟಿಗೆ ಇತ್ತು ಎಂದರೆ ಬೇರೆಯವರಾದರೆ ಈ ಸಂಗೀತವೂ ಬೇಡಾ, ವಿರೋಧವೂ ಬೇಡಾ ಎಂದು ತೆಪ್ಪಗೆ ಇರುತ್ತಿದ್ದರೋ ಎನೋ. ಆದರೆ ಆಕೆ ಅದನ್ನು ಒಂದು ಸವಾಲಾಗಿ ಸ್ವೀಕರಿಸಿದಳು. ಸಂಗೀತದಲ್ಲಿಯೇ ಸಾಧನೆ ಮಾಡಿದಳು. ಯಕ್ಷಗಾನ ಕ್ಷೇತ್ರದಲ್ಲಿಯೂ ಕೈ ಆಡಿಸಿದಳು. ತನ್ನದೇ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಳು. ಹೀಗೆ ನಡೆಯುವಾಗಲೇ ಸುಹಾನಾ ಸೈಯದ್ ಸಂಗೀತದ ಬದುಕಿನಲ್ಲಿ ಪ್ರೇಮದ ತಂತಿ ಮೀಟಿದೆ. ಅವಳ ಸರಿಗಮಪದನಿಸ ಸಂಗೀತ ಜರ್ನಿಯಲ್ಲಿ ಹೊಸ ಸ್ವರಕ್ಕೆ ಕಾರಣನಾದ ಯುವಕನ ಹೆಸರು ಏನು ಗೊತ್ತಾ?

ನಿತಿನ್ ಶಿವಾಂಶ್. ಆತನಿಗೂ ಸಂಗೀತದ ಬಗ್ಗೆ ಒಲವಿದೆ. ರಂಗಭೂಮಿಯ ಹಿನ್ನಲೆಯ ನಿತಿನ್ ಶಿವಾಂಶ್ ಅವರೊಂದಿಗೆ ಹದಿನಾರು ವರ್ಷಗಳಿಂದ ಸುಹಾನ್ ಅವರಿಗೂ ಸ್ನೇಹವಿದ್ದು, ಶಾಲಾ ದಿನಗಳಲ್ಲಿಯೇ ಪರಿಚಯವಿತ್ತು ಎಂದು ಸ್ವತ: ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಈಗ ಪ್ರೀತಿಯಾಗಿ ಮೂಡಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಸುಹಾನಾ ಹಾಗೂ ನಿತಿನ್ ಬಯಸಿದ್ದು, ಆದಷ್ಟು ಶೀಘ್ರದಲ್ಲಿ ಇವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ಭವಿಷ್ಯಕ್ಕೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಸಲ್ಲಿಸಿದ್ದು, ಸುಹಾನಾ ಅವರು ಅಭಿಮಾನಿಗಳಿಗೂ ತಮ್ಮನ್ನು ಹರಸುವಂತೆ ವಿನಂತಿಸಿದ್ದಾರೆ.

ಸುಹಾನ್ ಸೈಯದ್ ಹಾಗೂ ನಿತಿನ್ ಶಿವಾಂಶ್ ಪರಸ್ಪರ ಬೇರೆ ಬೇರೆ ಧರ್ಮದವರಾಗಿದ್ದರೂ, ಇಬ್ಬರೂ ಕಲಾಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಈಗ ವೈವಾಹಿಕ ಬದುಕಿಗೆ ಕಾಲಿಡಲು ತೀರ್ಮಾನಿಸುವ ಮೂಲಕ ಹೊಸ ಬದುಕನ್ನು ಆರಂಭಿಸಲು ತೀರ್ಮಾನಿಸಿದ್ದಾರೆ. ಇವರ ತರಹ ಅನೇಕರು ಹೀಗೆ ಪ್ರೀತಿಗೆ ಸಿಲುಕಿ ಮದುವೆಯಾಗಿ ಉತ್ತಮ ಬಾಳನ್ನು ಜೀವಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಇಂತಹ ಮದುವೆಗಳಿಗೆ ಕೆಲವರ ವಿರೋಧವೂ ಇರುತ್ತದೆ. ಇವರ ಬದುಕಿನಲ್ಲಿ ಏನೂ ಅಡ್ಡಿ ಬರದೇ, ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ನಾವು ಹಾರೈಸೋಣ, ಅಲ್ಲವೇ?

0
Shares
  • Share On Facebook
  • Tweet It




Trending Now
ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
Tulunadu News December 15, 2025
ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
Tulunadu News December 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
  • Popular Posts

    • 1
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 2
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • 3
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!

  • Privacy Policy
  • Contact
© Tulunadu Infomedia.

Press enter/return to begin your search