• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

Tulunadu News Posted On September 23, 2025
0


0
Shares
  • Share On Facebook
  • Tweet It

ಸುಹಾನಾ ಸೈಯದ್. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. . ಸರಿಗಮಪದ ಎಂಬ ಸಂಗೀತ ರಿಯಾಲಿಟಿ ಶೋದಿಂದ ಬೆಳಕಿಗೆ ಬಂದು ಮುಸ್ಲಿಂ ಆಗಿದ್ದರೂ ಹಿಂದೂ ದೇವರ ಹಾಡನ್ನು ಹಾಡುವ ಮೂಲಕ ಒಂದಿಷ್ಟು ವಿವಾದದ ಕೇಂದ್ರ ಬಿಂದು ಆಗಿದ್ದಳು. ಎಂಟು ವರ್ಷಗಳ ಹಿಂದೆ ಅವಳು ಹಾಡಿರುವ ರಾಮನ ಭಕ್ತಿ ಹಾಡು ಬಹಳ ಫೇಮಸ್ ಆಗಿ, ಸಾಕಷ್ಟು ವೈರಲ್ ಆಗಿ, ಒಬ್ಬ ಮುಸ್ಲಿಂ ಮತದವರಾಗಿ ಹೀಗೆ ಹಾಡುವುದು ಎಷ್ಟು ಸರಿ ಎಂದು ಆಕೆಯ ಮತದವರಿಂದಲೇ ಟೀಕೆಗೆ ಗುರಿಯಾಗಿದ್ದಳು.

ಅವಳಿಗೆ ಆಗ ಬಂದಿರುವ ವಿರೋಧ ಎಷ್ಟರಮಟ್ಟಿಗೆ ಇತ್ತು ಎಂದರೆ ಬೇರೆಯವರಾದರೆ ಈ ಸಂಗೀತವೂ ಬೇಡಾ, ವಿರೋಧವೂ ಬೇಡಾ ಎಂದು ತೆಪ್ಪಗೆ ಇರುತ್ತಿದ್ದರೋ ಎನೋ. ಆದರೆ ಆಕೆ ಅದನ್ನು ಒಂದು ಸವಾಲಾಗಿ ಸ್ವೀಕರಿಸಿದಳು. ಸಂಗೀತದಲ್ಲಿಯೇ ಸಾಧನೆ ಮಾಡಿದಳು. ಯಕ್ಷಗಾನ ಕ್ಷೇತ್ರದಲ್ಲಿಯೂ ಕೈ ಆಡಿಸಿದಳು. ತನ್ನದೇ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಳು. ಹೀಗೆ ನಡೆಯುವಾಗಲೇ ಸುಹಾನಾ ಸೈಯದ್ ಸಂಗೀತದ ಬದುಕಿನಲ್ಲಿ ಪ್ರೇಮದ ತಂತಿ ಮೀಟಿದೆ. ಅವಳ ಸರಿಗಮಪದನಿಸ ಸಂಗೀತ ಜರ್ನಿಯಲ್ಲಿ ಹೊಸ ಸ್ವರಕ್ಕೆ ಕಾರಣನಾದ ಯುವಕನ ಹೆಸರು ಏನು ಗೊತ್ತಾ?

ನಿತಿನ್ ಶಿವಾಂಶ್. ಆತನಿಗೂ ಸಂಗೀತದ ಬಗ್ಗೆ ಒಲವಿದೆ. ರಂಗಭೂಮಿಯ ಹಿನ್ನಲೆಯ ನಿತಿನ್ ಶಿವಾಂಶ್ ಅವರೊಂದಿಗೆ ಹದಿನಾರು ವರ್ಷಗಳಿಂದ ಸುಹಾನ್ ಅವರಿಗೂ ಸ್ನೇಹವಿದ್ದು, ಶಾಲಾ ದಿನಗಳಲ್ಲಿಯೇ ಪರಿಚಯವಿತ್ತು ಎಂದು ಸ್ವತ: ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಈಗ ಪ್ರೀತಿಯಾಗಿ ಮೂಡಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಸುಹಾನಾ ಹಾಗೂ ನಿತಿನ್ ಬಯಸಿದ್ದು, ಆದಷ್ಟು ಶೀಘ್ರದಲ್ಲಿ ಇವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ಭವಿಷ್ಯಕ್ಕೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಸಲ್ಲಿಸಿದ್ದು, ಸುಹಾನಾ ಅವರು ಅಭಿಮಾನಿಗಳಿಗೂ ತಮ್ಮನ್ನು ಹರಸುವಂತೆ ವಿನಂತಿಸಿದ್ದಾರೆ.

ಸುಹಾನ್ ಸೈಯದ್ ಹಾಗೂ ನಿತಿನ್ ಶಿವಾಂಶ್ ಪರಸ್ಪರ ಬೇರೆ ಬೇರೆ ಧರ್ಮದವರಾಗಿದ್ದರೂ, ಇಬ್ಬರೂ ಕಲಾಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಈಗ ವೈವಾಹಿಕ ಬದುಕಿಗೆ ಕಾಲಿಡಲು ತೀರ್ಮಾನಿಸುವ ಮೂಲಕ ಹೊಸ ಬದುಕನ್ನು ಆರಂಭಿಸಲು ತೀರ್ಮಾನಿಸಿದ್ದಾರೆ. ಇವರ ತರಹ ಅನೇಕರು ಹೀಗೆ ಪ್ರೀತಿಗೆ ಸಿಲುಕಿ ಮದುವೆಯಾಗಿ ಉತ್ತಮ ಬಾಳನ್ನು ಜೀವಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಇಂತಹ ಮದುವೆಗಳಿಗೆ ಕೆಲವರ ವಿರೋಧವೂ ಇರುತ್ತದೆ. ಇವರ ಬದುಕಿನಲ್ಲಿ ಏನೂ ಅಡ್ಡಿ ಬರದೇ, ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ನಾವು ಹಾರೈಸೋಣ, ಅಲ್ಲವೇ?

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search